Ad Widget

ಹರಿಹರ ಪಲ್ಲತ್ತಡ್ಕ : ಲ್ಯಾಂಡ್ ಲೈನ್ ಕೇಬಲ್ ಕಳವು


ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳಿಯರ ಆಗ್ರಹ

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ ಎಂಬಲ್ಲಿ ಬಿ.ಎಸ್.ಎನ್.ಎಲ್ ಲ್ಯಾಂಡ್ ಲೈನ್ ಕೇಬಲ್ ಕಳವಾಗಿದ್ದು, ಮುಳ್ಳುಬಾಗಿಲು ಕಡೆಗೆ ಹೋಗುವ ರಸ್ತೆ ಪಕ್ಕದ ಬರೆಯಲ್ಲಿ ಅಳವಡಿಸಲಾಗಿದ್ದ ಡೆಡ್ ಲೈನ್ ಕೇಬಲ್ ಅನ್ನು ಎಳೆದು ಕತ್ತರಿಸಿ ಕಳವುಗೈಯಲಾಗಿದೆ ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ಈ ಹಿಂದೆಯೂ ಎರಡು ಮೂರು ಬಾರಿ ಕೇಬಲ್ ಕಳವಾಗಿತ್ತು.
ಮುಳ್ಳುಬಾಗಿಲು ಎಂಬಲ್ಲಿ ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣಗೊಳ್ಳುತ್ತಿದ್ದು, ಟವರ್ ನಿರ್ಮಾಣಕ್ಕೆ ಬೇಕಾದ ಮೆಟೀರಿಯಲ್ ಗಳನ್ನು ತಂದು ಹಾಕಲಾಗಿದ್ದು, ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಆ ಮೆಟೀರಿಯಲ್ ಗಳನ್ನೂ ಕೂಡ ಕಳವುಗೈಯುವ ಸಾಧ್ಯತೆ ಇದ್ದು, ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಟವರ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೆ ಟವರ್ ನಿರ್ಮಾಣದ ಸ್ಥಳದಲ್ಲಿ ತಾತ್ಕಾಲಿಕವಾಗಿ ಸಿ.ಸಿ ಕ್ಯಾಮೆರಾ ಅಳವಡಿಕೆ ಮಾಡಬೇಕೆಂದು ಸ್ಥಳಿಯರು ಆಗ್ರಹಿಸುತ್ತಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!