Ad Widget

ಮರ್ಕಂಜ: ತೇರ್ಥಮಜಲು ಮೈದಾನದಲ್ಲಿ ಚೈತನ್ಯ ಗೆಳೆಯರ ಬಳಗದ ವತಿಯಿಂದ ‘ಚೈತನ್ಯ ಟ್ರೋಪಿ’ ಕ್ರಿಕೆಟ್ ಪಂದ್ಯಾಟ

ಡಿ. 25 ಶನಿವಾರ ಹಾಗೂ ಡಿ. 26 ಆದಿತ್ಯವಾರದಂದು ತೇರ್ಥಮಜಲು ಮೈದಾನದಲ್ಲಿ ಚೈತನ್ಯ ಗೆಳೆಯರ ಬಳಗದ ವತಿಯಿಂದ, clienteleRCM ಪ್ರಾಯೋಜಕತ್ವದ/ಅರ್ಪಿಸಿದ ಲೀಗ್ ಮಾದರಿಯ 12 ತಂಡಗಳ “ಚೈತನ್ಯ ಟ್ರೋಪಿ” ಕ್ರಿಕೆಟ್ ಪಂದ್ಯಾಟ ನಡೆಯಿತು. ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಸಭಾಧ್ಯಕ್ಷರಾಗಿ ಗೋವಿಂದ ಅಳವುಪಾರೆ, ಅಧ್ಯಕ್ಷರಾಗಿ ಕಿರಣ್ ಕುಮಾರ್ ಕರಂಗಲಡ್ಕ ಹಾಗೂ ಅತಿಥಿಗಳಾಗಿ ಬಾಲಕೃಷ್ಣ ಕಂಜಿಪಿಲಿ, ಆನಂದ ಬಾಣೂರು, ದಿನೇಶ್ ಬೊಮ್ಮಾರು, ಮಹೇಶ್ ಎಂ.ಆರ್, ಮನೋಹರ್ ರೈ ಉಪಸ್ಥಿತರಿದ್ದರು.


ಡಿ.26 ಆದಿತ್ಯವಾರದಂದು ನಡೆದ ಸಮಾರೋಪ ಸಮಾರಂಭದಲ್ಲಿ ಗೋವಿಂದ ಅಳವು ಪಾರೆ, ಹರೀಶ್ ಕಂಜಿಪಿಲಿ, ನವೀನ್ ದೊಡ್ಡಿಹಿತ್ಲು, ಶಶಿಕಾಂತ್ ಗುಳಿಗಮೂಲೆ, ಪ್ರವೀಣ್ ಮುಂಡೋಡಿ ಭಾಗವಹಿಸಿ ಬಹುಮಾನ ವಿತರಿಸಿದರು.
ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ‘ಯಂಗ್ ಫ್ರೆಂಡ್ಸ್ ಬೂಡು’. ‘CFC ಶೆಟ್ಟಿಮಜಲು’ ರನ್ನರ್ಸ್ ಆಗಿ ಹೊರಹೊಮ್ಮಿದವು. ವೀರಕೇಸರಿ ಮಿತ್ರ ಬಳಗ ಮರ್ಕಂಜ ಹಾಗೂ ಆರೆಂಜ್ ಬಾಯ್ಸ್ ಅಂಗಡಿಮಜಲು ತಂಡಗಳು ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಬಹುಮಾನವನ್ನು ಪಡೆದವು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!