Ad Widget

ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡೋತ್ಸವ

ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು, ಹಿರಿಯ ವಿದ್ಯಾರ್ಥಿ ಸಂಘ, ಊರ ವಿದ್ಯಾಭಿಮಾನಿಗಳ ಸಹಭಾಗಿತ್ವದಲ್ಲಿ ದಿನಾಂಕ 19/11/2023ರಂದು ಕ್ರೀಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕ್ರೀಡೋತ್ಸವದ ಧ್ವಜಾರೋಹಣವನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇಲ್ಲಿನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಮಾವಿನಕಟ್ಟೆ ನಡೆಸಿಕೊಟ್ಟರು. ನಂತರ ಸಭಾ ಕಾರ್ಯಕ್ರಮ ನಡೆಯಿತು....

“ಅಮರ ಸುಳ್ಯ ಸುದ್ದಿ” ದೀಪಾವಳಿ ವಿಶೇಷಾಂಕಕ್ಕೆ ಮಕ್ಕಳ ಫೋಟೋ ಸ್ಪರ್ಧೆ ಹಾಗೂ ಲೇಖನಗಳಿಗೆ ಆಹ್ವಾನ

ಸುಳ್ಯದ ಅಮರ ಸುಳ್ಯ ಸುದ್ದಿ ವಾರಪತ್ರಿಕೆ 6 ನೇ ಬಾರಿಗೆ ದೀಪಾವಳಿ ವಿಶೇಷಾಂಕ ಹೊರ ತರಲು ತಯಾರಿ ಆರಂಭಗೊಂಡಿದೆ. ಮುದ್ದು ಮಕ್ಕಳ ಫೋಟೋ ಸ್ಪರ್ಧೆ , ವಿವಿಧ ಅಂಕಣಗಳು, ಕಥೆ,ಕವನ ಗಳಿಗೆ ಆಹ್ವಾನ ನೀಡಲಾಗಿದೆ. ಆಸಕ್ತ ಬರಹಗಾರರು ಕಥೆ, ಕವನ ಲೇಖನಗಳನ್ನು ಅಕ್ಟೋಬರ್ 15 ರ ಒಳಗೆ ಕಳಿಸಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9449387044ಕಳುಹಿಸಬೇಕಾದ ವಿಳಾಸ...
Ad Widget

ಪ್ರಥಮ ವರ್ಷದ ಐವರ್ನಾಡು ಗೌಡ ಕುಟುಂಬ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿಡುಬೆ ಪೂಜಾರಿಮನೆ ತಂಡ ಪ್ರಥಮ

ಪ್ರಥಮ ವರ್ಷದ ಐವರ್ನಾಡು ಗೌಡ ಕುಟುಂಬ ಕ್ರಿಕೆಟ್ ಪಂದ್ಯಾವಳಿಯು ಇಂದು ನಡೆದಿದ್ದು, ಪಂದ್ಯಾವಳಿಯ ಪ್ರಥಮ ಸ್ಥಾನವನ್ನು ನಿಡುಬೆ ಪೂಜಾರಿಮನೆ ತಂಡವು ಪಡೆದುಕೊಂಡಿದೆ.

ಗ್ರಾಮಸ್ಥರು ಅಳವಡಿಸಿದ 9 ಬ್ಯಾನರ್ ನದಿಗೆ ಕಿತ್ತೆಸೆದ ಕಿಡಿಗೇಡಿಗಳು – ದೈವದ ಮೊರೆ ಹೋಗಲು ನಿರ್ಧಾರ

ಎಲಿಮಲೆ ಅರಂತೋಡು ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದರೂ ಆಡಳಿತ ಗಮನಹರಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆಯ 26 ಕಡೆಗಳಲ್ಲಿ ಹಾಕಿದ್ದ ಬ್ಯಾನರ್ ಹಾಕಿದ್ದರು. ಮುಖ್ಯಮಂತ್ರಿಗಳು ಬರುವ ಹಿಂದಿನ ರಾತ್ರಿ 9 ಕಡೆ ಹಾಕಿದ್ದ ಬ್ಯಾನರ್ ಕಳವು ಗೈಯಲ್ಪಟ್ಟಿತ್ತು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಬ್ಯಾನರ್ ಕಳುವುಗೈದ ಕಿಡಿಗೇಡಿಗಳ ವಿರುದ್ಧ ದೈವದ ಮೊರೆ ಹೋಗುತ್ತೇವೆ...

ರಾಜ್ಯಮಟ್ಟದ ಜಾವೆಲಿನ್ ಎಸೆತದಲ್ಲಿ ಇಂಜಿನಿಯರ್ ಮಣಿಕಂಠನ್ ಪ್ರಥಮ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮೇ.30 ರಿಂದ ಜೂ.1 ರ ವರೆಗೆ ಜರುಗಿದ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ಮಣಿಕಂಠನ್ ರವರು ಪ್ರಥಮ ಸ್ಥಾನ...

ಮುಕ್ಕೂರು : ಯುವಸೇನೆ ಟ್ರೋಫಿ, ಸಾಧಕರಿಗೆ ಸಮ್ಮಾನ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ : ಸಂಸದ ನಳಿನ್ ಮುಕ್ಕೂರು : ಹತ್ತಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಯುವಸೇನೆ ತಂಡ ಕ್ರಿಕೆಟ್ ಕೂಟ ಆಯೋಜನೆಯ ಮೂಲಕ ಮಾಡಿರುವುದು ಉತ್ತಮ ಪ್ರಯತ್ನ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಯುವಸೇನೆ ಮುಕ್ಕೂರು, ಜ್ಯೋತಿ ಯುವಕ ಮಂಡಲ ಮುಕ್ಕೂರು-...

ಮುಕ್ಕೂರು: ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಕ್ಕೂರು ಶಾಲಾ ವಠಾರದಲ್ಲಿ ಕ್ರಿಕೆಟ್ ಪಂದ್ಯಕೂಟ ಮತ್ತು ದೇವದಾಸ್ ಕಾಪಿಕಾಡ್ ಮತ್ತು ಭೋಜರಾಜ್ ವಾಮಂಜೂರ್ ಅಭಿನಯಿಸಿರುವ "ಕೊಡೆ ಬುಡ್ಪಾಲೆ" ತುಳು ಹಾಸ್ಯಮಯ ನಾಟಕ ಕಾರ್ಯಕ್ರಮವು ಮಾ.27ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಇಂದು(ಮಾ.13) ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಆಮಂತ್ರಣ ಪತ್ರಿಕೆಯನ್ನು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಕುಂಡಡ್ಕ ಕೊರಗಜ್ಜ ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಪೆರುವೋಡಿ ದೇವಸ್ಥಾನದಲ್ಲಿ...

ಕಳಂಜ: ಅಟ್ಯಾಕರ್ಸ್ ಕ್ಲಬ್ ವಾಲಿಬಾಲ್ ಪಂದ್ಯಾಟ – ಪ್ರಥಮ ವಿ.ಎಸ್.ಸಿ.ಕಳಂಜ, ದ್ವಿತೀಯ ಪ್ರಶಾಂತ್ ಟೈಗರ್ಸ್

ಕಳಂಜದ ವಿಷ್ಣುನಗರದಲ್ಲಿ ಅಟ್ಯಾಕರ್ಸ್ ವಾಲಿಬಾಲ್ ಕ್ಲಬ್ ಕಳಂಜ ವತಿಯಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಫೆ.26ರಂದು ನಡೆಯಿತು. ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ ದೀಪ ಪ್ರಜ್ವಲನೆಗೈದು ಪಂದ್ಯಾಟಕ್ಕೆ ಶುಭಹಾರೈಸಿದರು. ಪಂದ್ಯಾಟವನ್ನು ವಿನಯಚಂದ್ರ ಪೈ ಬಾಚೋಡಿ ವಿದ್ಯುಕ್ತವಾಗಿ ಉದ್ಘಾಟನೆಗೈದರು. ಅಬ್ದುಲ್ ಜಮಾಲ್ ಕಳಂಜ ವಾಲಿಬಾಲ್...

ಮರ್ಕಂಜ: ತೇರ್ಥಮಜಲು ಮೈದಾನದಲ್ಲಿ ಚೈತನ್ಯ ಗೆಳೆಯರ ಬಳಗದ ವತಿಯಿಂದ ‘ಚೈತನ್ಯ ಟ್ರೋಪಿ’ ಕ್ರಿಕೆಟ್ ಪಂದ್ಯಾಟ

ಡಿ. 25 ಶನಿವಾರ ಹಾಗೂ ಡಿ. 26 ಆದಿತ್ಯವಾರದಂದು ತೇರ್ಥಮಜಲು ಮೈದಾನದಲ್ಲಿ ಚೈತನ್ಯ ಗೆಳೆಯರ ಬಳಗದ ವತಿಯಿಂದ, clienteleRCM ಪ್ರಾಯೋಜಕತ್ವದ/ಅರ್ಪಿಸಿದ ಲೀಗ್ ಮಾದರಿಯ 12 ತಂಡಗಳ "ಚೈತನ್ಯ ಟ್ರೋಪಿ" ಕ್ರಿಕೆಟ್ ಪಂದ್ಯಾಟ ನಡೆಯಿತು. ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಸಭಾಧ್ಯಕ್ಷರಾಗಿ ಗೋವಿಂದ ಅಳವುಪಾರೆ, ಅಧ್ಯಕ್ಷರಾಗಿ ಕಿರಣ್ ಕುಮಾರ್ ಕರಂಗಲಡ್ಕ ಹಾಗೂ ಅತಿಥಿಗಳಾಗಿ ಬಾಲಕೃಷ್ಣ ಕಂಜಿಪಿಲಿ, ಆನಂದ ಬಾಣೂರು,...

ಸುಳ್ಯದ 8 ಮಂದಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಡಿ.11 ಮತ್ತು 12ರಂದು ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ರಿ.) ಇದರ ವತಿಯಿಂದ 40ನೇ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದಲ್ಲಿ ಸುಳ್ಯ ತಾಲೂಕನ್ನು 8 ಜನ ಕ್ರೀಡಾಪಟುಗಳು ಪ್ರತಿನಿಧಿಸಿದ್ದು ಎಲ್ಲಾ 8 ಮಂದಿ ಕ್ರೀಡಾಪಟುಗಳು ಪದಕಗಳನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತುಕಾರಾಮ ಏನೆಕಲ್ಲು 100ಮೀ. ಮತ್ತು 200ಮೀ. ಓಟದಲ್ಲಿ...
Loading posts...

All posts loaded

No more posts

error: Content is protected !!