- Wednesday
- May 15th, 2024
ಮರಕತ ದೇವಸ್ಥಾನಕ್ಕೆ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರ ಜನ್ಮ ದಿನದ ಅಂಗವಾಗಿ ದೇವರ ದರ್ಶನ ಪಡೆದು ನದಿಯಲ್ಲಿರುವ ದೇವರ ಮೀನಿಗೆ ಆಹಾರವನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮುಳಿಯ ಕೇಶವ ಭಟ್, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ನಡುಗಲ್ಲು, ಚಾಮಯ್ಯ ಚೆಮ್ನೂರು....
ಜಾಲ್ಸೂರು ಗ್ರಾಮದ ಬೈತಡ್ಕ ಕಾಜಿಮಡ್ಕ ದಿ. ನಾರಾಯಣ ಗೌಡರ ಪುತ್ರ ತೀರ್ಥಪ್ರಸಾದ್ ರ ವಿವಾಹ ನಿಶ್ಚಿತಾರ್ಥವು ಮಡಪ್ಪಾಡಿ ಗ್ರಾಮದ ಬಲ್ಕಜೆ ಪಾರೆಪ್ಪಾಡಿ ನೀಲಪ್ಪ ಗೌಡರ ಪುತ್ರಿ ಶ್ರುತಿಯೊಂದಿಗೆ ನ.10 ರಂದು ವಧುವಿನ ಮನೆಯಲ್ಲಿ ನಡೆಯಿತು.
ಅಮರಮುಡ್ನೂರು ಗ್ರಾಮದ ಕಟ್ಟದಮಜಲು ಶ್ರೀಮತಿ ವಸಂತಿ ಮತ್ತು ಶ್ರೀ ಹರಿಶ್ಚಂದ್ರ ಗೌಡರ ಪುತ್ರಿ ಗಾಯತ್ರಿಯವರ ವಿವಾಹವು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕೇಂಕನಾಜೆ ದಿ|ರಾಮಣ್ಣ ಗೌಡರ ಪುತ್ರ ಸತೀಶ್ ಕುಮಾರ್ ರೊಂದಿಗೆ ನ.11ರಂದು ಕುಕ್ಕುಜಡ್ಕ ಸಹಕಾರಿ ಸಂಘದ 'ಅಮರ ಸಹಕಾರ ಸೌಧ' ಸಭಾಭವನದಲ್ಲಿ ನಡೆಯಿತು.
ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ ಪುತ್ತೂರು ಇದರ ವತಿಯಿಂದ ನ.10 ರಂದು ಪೂರ್ವಾಹ್ನ 10:30 ಕ್ಕೆ ಶ್ರೀ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹಾಗೂ ಅಪರಾಹ್ನ 02:30 ಕ್ಕೆ ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದ ಸಭಾಂಗಣದಲ್ಲಿ ಒಪ್ಪಂದ ಆಧಾರಿತ ಜೇನು ಕೃಷಿ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಮೂಲಚಂದ್ರ ಆರ್ಯಾಪು, ರಾಮ್ ಪ್ರತೀಕ್...
ದೇವಚಳ್ಳ ಗ್ರಾಮದ ದೇವದಲ್ಲಿ ಮೊಸಳೆ ಪತ್ತೆಯಾಗಿದ್ದು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಸೆರೆಹಿಡಿದ ಘಟನೆ ನ.10 ರಂದು ನಡೆದಿದೆ. ದೇವ ಬಾಲಕೃಷ್ಣ ಗೌಡರ ತೋಟದ ಕೆರೆಯಲ್ಲಿ ನ.10 ರಂದು ಬೆಳಿಗ್ಗೆ ಪತ್ತೆಯಾದ ಮೊಸಳೆಯನ್ನು ಅರಣ್ಯ ಇಲಾಖೆಯವರು ತಡರಾತ್ರಿಯವರೆಗೆ ಕಾರ್ಯಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಕಾರ್ಯಚರಣೆಯಲ್ಲಿ ಸುಳ್ಯ ವಲಯಾರಣ್ಯಾಧಿಕಾರಿ ಗಿರೀಶ್, ಉಪವಲಯಾರಣ್ಯಾಧಿಕಾರಿ ರವೀಂದ್ರ , ಅರಣ್ಯ ರಕ್ಷಕ...