Ad Widget

ವಿವಾಹ ನಿಶ್ಚಿತಾರ್ಥ: ರಮೇಶ-ಹರ್ಷಿತಾ

ಪೆರುವಾಜೆ ಗ್ರಾಮದ ಮಠತ್ತಡ್ಕ ಚಂದ್ರಶೇಖರ ನಾಯ್ಕರ ಸುಪುತ್ರ ರಮೇಶ.ಎಂ ರವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಮಂಜಲ್ತಡ್ಕ ಸುಂದರ ನಾಯ್ಕರ ಸುಪುತ್ರಿ ಹರ್ಷಿತಾರೊಂದಿಗೆ ನ.07ರಂದು ಮಂಜಲ್ತಡ್ಕ ವಧುವಿನ ಮನೆಯಲ್ಲಿ ನಡೆಯಿತು.

ಲತಾ – ಯತೀಶ್ ವಿವಾಹ ನಿಶ್ಚಿತಾರ್ಥ

ಅಮರಮೂಡ್ನೂರು ಗ್ರಾಮದ ದೊಡ್ಡಿಹಿತ್ಲು-ಹಲ್ತಡ್ಕ ಕುಶಾಲಪ್ಪ ಗೌಡರ ಪುತ್ರಿ ಲತಾ ಅವರ ವಿವಾಹ ನಿಶ್ಚಿತಾರ್ಥವು ಕಡಬ ತಾ| ಪುಣ್ಚಪ್ಪಾಡಿ ಗ್ರಾಮದ ಪೂವ ಮನೆ ದಿ| ಸುಬ್ಬಣ್ಣ ಗೌಡರ ಪುತ್ರ ಯತೀಶ ರೊಂದಿಗೆ ನ.7 ರಂದು ವಧುವಿನ ಮನೆಯಲ್ಲಿ ನಡೆಯಿತು.
Ad Widget

ಜೇಸಿಐ ಪಂಜ ಪಂಚಶ್ರೀ ಉಪಾಧ್ಯಕ್ಷ ಜೇಸಿ ಎಚ್.ಜಿ.ಎಫ್ ಪ್ರವೀಣ್ ಕಾಯರ ಅವರಿಗೆ ಸಾಧನಾಶ್ರೀ ಪ್ರಶಸ್ತಿ

ಜೇಸಿಐ ಕುಂದಾಪುರ ಸಿಟಿಯ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಪಂಜದಲ್ಲಿ ಸೂರ್ಯ ಕನ್ಸಲ್ಟೆನ್ಸಿ ಮತ್ತು ಕನ್ಸ್ಟ್ರಕ್ಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕ್ಲಪ್ತ ಸಮಯದಲ್ಲಿ ನಗುಮೊಗದ ಪ್ರಾಮಾಣಿಕ ಸೇವೆ ನೀಡುತ್ತ ಸರಳ ಸಜ್ಜನಿಕೆಯಿಂದ ತಮ್ಮ ಪರಿಸರದ ಹಲವಾರು ಗ್ರಾಹಕರ ಮನೆ ಮತ್ತು ಮನೆಗಳಲ್ಲಿ ಸಂತಸದ ಹೊನಲಾಗಿರುವ ಜೇಸಿಐ ಪಂಜ ಪಂಚಶ್ರೀ ಉಪಾಧ್ಯಕ್ಷ...

ಜೇಸಿ ಗಂಗಾಧರ ಪಿ ಎಸ್ ರವರಿಗೆ ವಲಯ ಸಾಧನಾಶ್ರೀ ಪ್ರಶಸ್ತಿ

ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ನ.07 ಆದಿತ್ಯವಾರ ಕುಂದಾಪುರದಲ್ಲಿ ಜರುಗಿದ ಜೇಸಿಐ ವಲಯ15 ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಸುಳ್ಯ ಗಾಂಧಿನಗರದ ಅಂಬಿಕಾ ಪ್ರಿಂಟಿಂಗ್ ಪ್ರೆಸ್ ಮಾಲಕರಾದ ಜೇಸಿ ಪಿ ಎಸ್ ಗಂಗಾಧರರವರಿಗೆ ತನ್ನ ವ್ಯವಹಾರ ವಿಭಾಗದ ಸಾಧನೆಗಾಗಿ ಜೇಸಿಐ ವಲಯಾಧ್ಯಕ್ಷರಾದ ಜೇಸಿಐ ಪಿಡಿಪಿ ಸೌಜನ್ಯ ಹೆಗ್ಡೆ 'ಸಾಧನಾಶ್ರೀ' ಪ್ರಶಸ್ತಿ ಪ್ರದಾನ ಮಾಡಿ...

ಜೆಸಿ ಮನಮೋಹನ್ ಬಳ್ಳಡ್ಕರವರಿಗೆ ಸಾಧನಾಶ್ರೀ ಪ್ರಶಸ್ತಿ

ಜೆಸಿಐ ಕುಂದಾಪುರ ಸಿಟಿ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಜೆಸಿಐ ಸುಳ್ಯ ಸಿಟಿಯ ಸ್ಥಾಪಕ ಜೆಸೀ ಮನಮೋಹನ್ ಬಳ್ಳಡ್ಕ ಅವರಿಗೆ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಸುಳ್ಯ ಸಿಟಿಯ ಘಟಕಾಧ್ಯಕ್ಷ ಜೆಸೀ ಚಂದ್ರಶೇಖರ್ ಕನಕಮಜಲು, ಕಾರ್ಯದರ್ಶಿ ಜೆಸೀ ಅಶ್ವಥ್ ಅಡ್ಕಾರ್, ಉಪಾಧ್ಯಕ್ಷರುಗಳಾದ ಜೇಸೀ ಬಶೀರ್ ಯು ಪಿ, ಜೆಸೀ ಸಾಯಿ...

ಪೈಲಾರು : ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ದೀಪಾವಳಿ ಆಚರಿಸಿದ ಟ್ರಸ್ಟ್ ಫಂಡ್

ಅಮರ ಮುಡ್ನೂರು ಗ್ರಾಮದ ಪೈಲಾರ್ ನಿವಾಸಿ ದಿನೇಶ್ ಆಚಾರಿ ಕುಟುಂಬ ಅನಾರೋಗ್ಯದಿಂದ ಸಂಕಷ್ಟದಲ್ಲಿದ್ದು ಅವರಿಗೆ ಸಹಾಯ ಹಸ್ತ ಚಾಚುವ ಮೂಲಕ ಟ್ರಸ್ಟ್ ಫಂಡ್ ದೀಪಾವಳಿ ಆಚರಿಸಿದೆ. ದುಡಿದು ತನ್ನ ಕಾಲಮೇಲೆ ನಿಂತು ಜೀವನ ಸಾಗಿಸುತ್ತಿದ್ದ ದಿನೇಶ್ ಆಚಾರಿಯವರು ಕೆಲ ಸಮಯದಿಂದ ಪಾರ್ಶ್ವವಾಯು ನಿಂದ ಬಳಲುತ್ತಿದ್ದಾರೆ. ಪತ್ನಿ ಮೀನಾಕ್ಷಿ ಅವರು ಕೂಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮಗ...

ಹರಿಹರಪಲ್ಲತ್ತಡ್ಕ : ಕರೆಂಟ್ ಕಂಬ ದುರಸ್ತಿ ವೇಳೆ ಏರ್ ಫೈಬರ್ ಕೇಬಲ್ ತುಂಡಾಗಿ ಜನ ಪರದಾಟ

ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿಯಲ್ಲಿ ನ.06 ರಂದು ಬೆಳಿಗ್ಗೆ ಮರ ಬಿದ್ದು 2 ಕರೆಂಟ್ ಕಂಬ ತುಂಡಾಗಿದ್ದು, ಇದರ ದುರಸ್ತಿ ವೇಳೆ ಏರ್ ಫೈಬರ್ ಕೇಬಲ್ ಅನ್ನು ತುಂಡು ಮಾಡಿದ್ದಾರೆ ಎಂಬ ಆರೋಪ ಊರವರಿಂದ ಕೇಳಿ ಬರುತ್ತಿದ್ದು, ಇದರಿಂದ ಕರಂಗಲ್ಲು, ಮಳ್ಳುಬಾಗಿಲು, ಕಜ್ಜೋಡಿ ಸೇರಿದಂತೆ ಹಲವು ಭಾಗಗಳ ಸುಮಾರು 60 ಫೋನ್ ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು...

ಕುಲ್ಕುಂದ : ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಬಲೀಂದ್ರ ಪೂಜೆ ಹಾಗೂ ಗೋ ಪೂಜೆ

ಕುಲ್ಕುಂದದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನ.05 ರಂದು ಬಲೀಂದ್ರ ಪೂಜೆ ಹಾಗೂ ಗೋ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ಅರ್ಚಕರಾದ ವೇದಮೂರ್ತಿ ಆಮಣ್ಣಾಯರು, ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ, ಪೂರ್ವಾದ್ಯಕ್ಷರಾದ ಚಂದ್ರಹಾಸ ಭಟ್, ದೈವಸ್ಥಾನದ ಅರ್ಚಕರಾದ ಚಂದ್ರ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗೋ ಪೂಜೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.05 ರಂದು ಗೋ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶೋಭಾ ಗಿರಿಧರ್, ಶ್ರೀವತ್ಸ, ವನಜಾ ಭಟ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಭಜರಂಗದಳದ ಲಕ್ಷ್ಮೀಶ ಇಜ್ಜಿನಡ್ಕ ಮುಂತಾದವರು...
error: Content is protected !!