Ad Widget

ಕನಸು

ಮೋಸವ ಮಾಡಿದ ಜನರು, ಸುಳ್ಳನು ಹೇಳಿದ ಜನರು…
ಕಷ್ಟದ ಕೂಪಕೆ ನನ್ನ ನೂಕಿದರು…
ನನ್ನವರೇ ನನ್ನನ್ನು ನೂಕಿದರು…
ನನ್ನವರು ಯಾರೆಂದು ನಾ ಅರಿಯುವ ಮುನ್ನ ಕಷ್ಟದ ಕೂಪದಲ್ಲಿ ಸಿಲುಕಿದೆನು…
ನಾನು ಕಷ್ಟದ ಕೂಪದಲ್ಲಿ ಸಿಲುಕಿದೆನು…

. . . . . . . . .

ಕನಸು ಕಾಣೋ ಕಣ್ಣು ನನ್ನದು ಕತ್ತಲಾಗಿ ಹೋಯಿತು…
ನಾ ಕಂಡ ಕನಸುಗಳೆಲ್ಲಾ ನನಸಾಗದೆ ಉಳಿಯಿತು…
ನನ್ನ ಬದುಕ ಹಾದಿಯಲ್ಲಿ ಕಷ್ಟಗಳೇ ತುಂಬಿತು…
ಕಷ್ಟದಿಂದ ಬೆಂದ ಮನಸ್ಸು ಕಲ್ಲಾಗಿ ಹೋಯಿತು…
ನಾನು ಯಾರು ಎಂಬ ನಿಜವು ನನಗೆ ತಿಳಿಯದಾಯಿತು…

. . . . . . .

ಕಷ್ಟದಿಂದ ನನ್ನ ಬದುಕು ಕತ್ತಲಾಗಿ ಹೋಯಿತು…
ಆ ಕತ್ತಲ ನಡುವೆ ನನಗೆ ಬೆಳಕೊಂದು ಕಂಡಿತು….
ಆ ಬೆಳಕ ನಡುವೆ ನನ್ನ ಕನಸುಗಳು ಕಂಡವು…
ಕುಂದಿಹೋದ ಬದುಕಲೊಂದು ವಿಶ್ವಾಸ ಮೂಡಿತು…
ಕನಸುಗಳ ನನಸಾಗಿಸುವ ವಿಶ್ವಾಸ ಮೂಡಿತು…

ಕಷ್ಟದಿಂದ ಮೇಲೆದ್ದು ಕನಸ ಅರಸಿ ಹೊರಟೆನು…
ಅವರಿವರ ಮಾತಿಗೆಂದು ಯೋಚಿಸದೇ ನಡೆದೆನು…
ಗುರಿಯ ಕಡೆಗೆ ಮಾತ್ರ ನನ್ನ ಲಕ್ಷ್ಯವ ಇಟ್ಟೆನು…
ಹಿಂದೆ-ಮುಂದೆ ಯೋಚಿಸದೇ ಗುರಿಯ ಕಡೆಗೆ ನಡೆದೆನು…
ಕಷ್ಚ-ನಷ್ಟ, ತ್ಯಾಗದಿಂದ ನನ್ನ ಗುರಿಯ ತಲುಪಿದೆನು…

✍ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading