Ad Widget

ಕಡಬ : ಮತ್ತೆ ಪತ್ತೆಯಾದ ಚಿರತೆ – ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಫೆ.11 ರಾತ್ರಿ ಪತ್ತೆಯಾದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.

ರಾತ್ರಿ ವೇಳೆ ತೋಟಕ್ಕೆ ಹೋಗಿದ್ದ ವೇಳೆ ಹೇರ ನಿವಾಸಿ ಶೇಖರ್ ಮತ್ತು ಸೌಮ್ಯ ದಂಪತಿಗಳಿಗೆ ದಾಳಿ ಮಾಡಿದ್ದ ಈ ಚಿರತೆ ಸದ್ಯ ಅರಣ್ಯ ಇಲಾಖೆಯವರ ಕೈಗೆ ಸಿಕ್ಕಿಬಿದ್ದಿದ್ದು ಆಪರೇಷನ್ ಚೀತಾ ಯಶಸ್ವಿಯಾಗಿದೆ.

*ಕೈಕಂಬ ವಿಫಲವಾಗಿದ್ದ ಕಾರ್ಯಾಚರಣೆ*


ಫೆ. 3 ರಂದು ಕಡಬ ತಾಲೂಕಿನ ಕೈಕಂಬ ನಿವಾಸಿ ರೇಗಪ್ಪ ರವರ ನಾಯಿಯನ್ನು ಅಟ್ಟಿಸಿಕೊಂಡು ಬಂದು ಶೌಚಾಲಯಸ ಒಳಗೆ ಬಂದಿಯಾದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಬೋನಿಗೆ ಬಿದ್ದಿರುವ ಚಿರತೆ ಕೈಕಂಬದಲ್ಲಿ ಪತ್ತೆಯಾದ ಚಿರತೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಾರಿ ಇಲಾಖೆ ನಡೆಸಿದ ಯಶಸ್ವಿ ಕಾರ್ಯಾಚರಣೆ ಜನರ ಪ್ರಶಂಶೆಗೆ ಪಾತ್ರವಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!