Ad Widget

ಸಚಿವ ಎಸ್. ಅಂಗಾರರವರಿಂದ ಹೊಸಮಜಲು – ಶೇಣಿ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿಪೂಜೆ

ಅಮರಪಡ್ನೂರು ಗ್ರಾಮದ ಶೇಣಿ ಹೊಸಮಜಲು ರಸ್ತೆ ಕಾಂಕ್ರೀಟಿಕರಣದ ಸಲುವಾಗಿ ಫೆ.7 ರಂದು ಗುದ್ದಲಿ ಪೂಜೆಯು ನೆರವೇರಿತು. ಮೀನುಗಾರಿಕಾ ಮತ್ತು ಬಂದರು ಸಚಿವರಾದ ಎಸ್. ಅಂಗಾರ ರವರು ಗುದ್ದಲಿಪೂಜೆಯನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು, ಪಂ.ಸದಸ್ಯರಾದ ಸೀತಾ ಹೆಚ್., ರತಿನ್ ಚೂಂತಾರು, ಮಾಜಿ ಗ್ರಾಂ.ಪಂ.ಸದಸ್ಯ ನಾರಾಯಣ ಆಚಾರ್ಯ ಶೇಣಿ, ಧರ್ಮಪಾಲ ಶೇಣಿ, ವಿವೇಕ್ ರೈ ಶೇಣಿ, ದೀಕ್ಷಿತ್ ಪೋನಡ್ಕ , ಸೃಜನ್ ಶೇಣಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿ.ಪಂ ಹಾಗೂ ತಾ.ಪಂ. ನಿಂದ ರೂ.20 ಲಕ್ಷ ಅನುದಾನದಲ್ಲಿ ಸುಮಾರು 400 ಮೀಟರ್ ಉದ್ದದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!