Ad Widget

ಮುಳ್ಳುಬಾಗಿಲು ಮತ್ತು ಕರಂಗಲ್ಲು ಪರಿಸರದಲ್ಲಿ ಚಿರತೆ ಹಾವಳಿ- ಚಿರತೆ ಹಿಡಿಯಲು ಗ್ರಾಮಸ್ಥರ ಆಗ್ರಹ

ಕೊಲ್ಲಮೊಗ್ರ ಗ್ರಾಮದ ಮುಳ್ಳುಬಾಗಿಲು ಮತ್ತು ದೇವಚಳ್ಳ ಗ್ರಾಮದ ಕರಂಗಲ್ಲು ಆಸುಪಾಸಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ.
ಫೆ.4 ರಂದು ರಾತ್ರಿ ವೆಂಕಟ್ರಮಣ ಮಾವಾಜಿ ಎಂಬುವವರ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಒಂದು ತಿಂಗಳ ಹಿಂದೆ ಆನಂದ ಮುಳ್ಳುಬಾಗಿಲು ಎಂಬುವವರ ಎರಡು ನಾಯಿ ಹಾಗೂ ಜಗದೀಶ್ ಕಿಲಾರ್ ಕಜೆ ಯವರ ಒಂದು ನಾಯಿಯನ್ನು ಹೊತ್ತೊಯ್ದಿದೆ ಎಂದು ತಿಳಿದುಬಂದಿದೆ. ಹಾಗಾಗಿ ಮುಳ್ಳುಬಾಗಿಲು ಹಾಗೂ ಕರಂಗಲ್ಲು ಭಾಗದ ಗ್ರಾಮಸ್ಥರು ಹಾಗೂ ಚಿರತೆ ಉಪಟಳದಿಂದ ಭಯಗೊಂಡಿದ್ದು ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯನ್ನು ಆಗ್ರಹಿಸುತ್ತಿದ್ದಾರೆ.

✍ವರದಿ:-ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!