ಸುಳ್ಯ ತಾಲೂಕು ಮಾಜಿ ಸೈನಿಕರ ಸಂಘದಿಂದ 72 ನೇ ಗಣರಾಜ್ಯೋತ್ಸವದ ಅಂಗವಾಗಿ ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೂಕ ನೋಡಲು ಸಹಾಯಕವಾಗುವ ಯಂತ್ರ ಖರೀದಿಸಲು ಸಹಾಯಧನ ನೀಡಲಾಯಿತು. ಸಂಘದ ವತಿಯಿಂದ ರೂ 5000 ಚೆಕ್ ಅನ್ನು ಹಿರಿಯ ಆರೋಗ್ಯಾಧಿಕಾರಿ ಡಾ.ಹಿಮಕರ ರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರ ಸಂಘದ ದೇರಣ್ಣ ಗೌಡ, ಕಾರ್ಯದರ್ಶಿ ಮೋನಪ್ಪ ಅಡ್ಕಬಳೆ, ಕೋಶಾಧಿಕಾರಿ ಜಗದೀಶ್ ಕೆ.ಪಿ., ಸದಸ್ಯರಾದ ಸೀತಾರಾಮ ಎನ್.ಜಿ., ಪ್ರವೀಣ್ ಕುಮಾರ್, ವೀರಪ್ಪ ಗೌಡ, ನರಸಿಂಹ ಭಟ್, ಕೃಷ್ಣಪ್ಪ, ತಿರುಮಲೇಶ್ವರ ಎಸ್, ಹರೀಶ್ ಪಿ, ಚಂದ್ರಶೇಖರ, ಪದ್ಮನಾಭ ಎಸ್, ದುಗ್ಗಪ್ಪ ಕೆ ಹಾಗೂ ಆಸ್ಪತ್ರೆಯ ಡಾ.ಸೌಮ್ಯ, ಡಾ. ರಜನಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Sunday
- May 19th, 2024