- Saturday
- April 19th, 2025

ಕಡಬ ತಾಲೂಕಿನ ಕೈಕಂಬಕ್ಕೆ ಶಾಸಕರಾದ ಎಸ್. ಅಂಗಾರರವರು ಚುನಾವಣಾ ವೀಕ್ಷಣೆಗಾಗಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮುರಳೀಧರ ಎರ್ಮಾಯಿಲ್, ಜಯಪ್ರಕಾಶ್ ಎರ್ಮಾಯಿಲ್, ಪುರುಷೋತ್ತಮ ಎರ್ಮಾಯಿಲ್, ವಾಡ್ಯಪ್ಪ ಗೌಡ ಎರ್ಮಾಯಿಲ್, ಹರೀಶ್ ಚೆರು, ಯಶೋಧರ ಬಳ್ಳಡ್ಕ, ದಾಮೋದರ ಪಲ್ಲಿಗದ್ದೆ, ಮೋಹನ್ ಪಲ್ಲಿಗದ್ದೆ, ಭವ್ಯಶ್ರೀ ಕುಕ್ಕಾಜೆ, ಶಾರದ ಲಕ್ಷ್ಮಣ ಆಚಾರ್ಯ, ಪುರುಷೋತ್ತಮ ಪಲ್ಲಿಗದ್ದೆ, ಶಾರದ ಕುಕ್ಕಾಜೆ ಹಾಗೂ...

ಮಡಪ್ಪಾಡಿ ಗ್ರಾಮ ಪಂಚಾಯತ್ ನ 2 ವಾರ್ಡ್ ಗಳ 5 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಅಭ್ಯರ್ಥಿಗಳು ಮತ ಬೇಟೆಗೆ ಕೊನೆಯ ಕಸರತ್ತು ನಡೆಸುವುದು ಕಂಡುಬರುತ್ತಿದೆ. ಚುನಾವಣೆ ಕೇಂದ್ರದಲ್ಲಿ ಕೊರೊನ ಮುಂಜಾಗೃತಾ ಕ್ರಮಗಳೊಂದಿಗೆ ಚುನಾವಣೆ ನಡೆಯುತ್ತಿದೆ. ಇದುವರೆಗೆ ವಾರ್ಡ್-1 ರಲ್ಲಿ 53.55% ವಾರ್ಡ್-2 ರಲ್ಲಿ 49.16% ಮತದಾನ ನಡೆದಿದೆ.

ಕಲ್ಮಡ್ಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ತನ್ನ ಸೋದರ ಸಂಬಂಧಿಯಾಗಿರುವ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಪೋಲೀಸರು ಬಂಧಿಸಿದ ಘಟನೆ ಡಿ.25 ರಂದು ವರದಿಯಾಗಿದೆ. ಕಲ್ಮಡ್ಕ ಗ್ರಾಮದ ವಾರ್ಡ್ 1 ರಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹುಕ್ರಪ್ಪ ಯಾನೆ ನಾರಾಯಣ ಪುಚ್ಚಮ ಎಂಬವರು ಪೊಲೀಸರ ವಶವಾಗಿದ್ದಾರೆ. ಚಿಕ್ಕಪ್ಪನ ಮಗಳಿಗೇ ಅವರು ಈ ರೀತಿ...

ಎಣ್ಮೂರು ಬೂತ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಮಾಯಿಲಪ್ಪ ಗೌಡ, ರಾಜೀವಿ ರೈ, ಸುಮಿತ್ರಾ ಹಾಗೂ ಜ್ಯೋತಿ ಎನ್ ಕಾರ್ಯಕರ್ತರೊಂದಿಗೆ ಮತಯಾಚನೆಯಲ್ಲಿ ನಿರತರಾಗಿದ್ದಾರೆ.

ಎಣ್ಮೂರು ಬೂತ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪ್ರವೀಣ್ ಹೇಮಳ, ದಿವ್ಯಾ ಯೋಗಾನಂದ, ರೇವತಿ ರಘು ಹಾಗೂ ಸವಿತಾ ಕಾರ್ಯಕರ್ತರೊಂದಿಗೆ ಮತಯಾಚನೆಯಲ್ಲಿ ನಿರತರಾಗಿದ್ದಾರೆ.

ಕಲ್ಮಡ್ಕ ಗ್ರಾ.ಪಂ.ನ ಒಂದನೇ ವಾರ್ಡ್ ನ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ಹಮೀದ್ ಮರಕ್ಕಡ ಪಡ್ಪಿನಂಗಡಿ ಶಾಲಾ ಬೂತ್ ಬಳಿ ಕೊನೆ ಹಂತದ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಬೆಂಬಲಿಗರಾದ ಅಶ್ರಫ್ ಮರಕ್ಕಡ, ಜಕಾರಿಯ ಮುಚ್ಚಿಲ ಮತ್ತಿತರರಿದ್ದರು.

ಗ್ರಾಮ ಪಂಚಾಯತ್ ಚುನಾವಣೆಯ ಮತದಾನ ಬಗೆಗಿನ ಕ್ಷಣಕ್ಷಣದ ಮಾಹಿತಿಯನ್ನು ಸಿಬ್ಬಂದಿಗಳು ವೆಬ್ಸೈಟ್ ಅಪ್ ಲೋಡ್ ಮಾಡಬೇಕಾಗಿರುವುದರಿಂದ ನೆಟ್ವರ್ಕ್ ಸಮಸ್ಯೆ ಹಲವಾರು ಪಂಚಾಯತ್ ಸಿಬ್ಬಂದಿಗಳನ್ನು ಕಾಡಲಾರಂಭಿಸಿದೆ. ಪ್ರತಿ ಬೂತ್ ಮಟ್ಟದಲ್ಲಿ ಮತದಾನ ಪ್ರಕ್ರಿಯೆಯ ಪರ್ಸಂಟೇಜ್ ನ್ನು ಪ್ರತಿ 2 ಗಂಟೆಗೊಮ್ಮೆ ರಾಜ್ಯ ಚುನಾವಣಾ ಆಯೋಗದ ವೆಬ್ ಸೈಟ್ ಗೆ ಅಪ್ ಡೇಟ್ ಮಾಡಬೇಕಾಗುತ್ತದೆ. ಇದೀಗ ನೆಟ್ವರ್ಕ್ ಸಮಸ್ಯೆಯಿಂದ...

ನಾಲ್ಕೂರು ಗ್ರಾಮದ ನಡುಗಲ್ಲು ಬಿಜೆಪಿ ಭದ್ರ ಕೋಟೆಗೆ ಶಾಸಕ ಎಸ್. ಅಂಗಾರ ಭೇಟಿ ಕಾರ್ಯಕರ್ತರ ಜತೆ ಮಾತನಾಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ವಿಜಯಕುಮಾರ್ ಚಾರ್ಮತ, ಹರೀಶ್ ಕೊಯಿಲ,ಪ್ರಮೀಳಾ ಎರ್ದಡ್ಕ ಕೋಡಿಬೈಲ್, ಲೀಲಾವತಿ ಅಂಜೇರಿ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ನವೀನ್ ಬಾಳುಗೋಡು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಎಡಮಂಗಲ ಗ್ರಾ.ಪಂ.ನ ಮತದಾನವು ಎಣ್ಮೂರು ಹಿ.ಪ್ರಾ. ಶಾಲೆಯ ಮತಕೇಂದ್ರದಲ್ಲಿ ನಡೆಯುತ್ತಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ರವರು ಜಾಲ್ಸೂರು ಗ್ರಾಮ ಪಂಚಾಯತ್ ಚುನಾವಣೆಯ ನಾಲ್ಕನೇ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತದಾನ ಕೇಂದ್ರದಲ್ಲಿ ಏಜೆಂಟರ ಬಳಿ ಹೆಚ್ಚು ಜನ ಕುಳಿತುಕೊಳ್ಳಲು ಅವಕಾಶ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಮತದಾರರು ಚುನಾವಣಾ ಕೇಂದ್ರದ ಒಳಗಡೆ ಏಜೆಂಟರ ಬಳಿ ಹೋಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು....

All posts loaded
No more posts