Ad Widget

ಹಸೀನ ಸಂಪಾಜೆ ಯವರಿಗೆ ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಚಂದನ ಸಾಹಿತ್ಯ ವೇದಿಕೆಯು ಡಿಸೆಂಬರ್ 13 ರಂದು ಪುತ್ತೂರಿನ ರೋಟರಿ ಟ್ರಸ್ಟ್ ನ ಸಭಾಂಗಣದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಭಾವೈಕ್ಯತಾ ಕವಿಗೋಷ್ಠಿ ಯಲ್ಲಿ ಸಂಪಾಜೆಯ ಶ್ರೀಮತಿ ಹಸೀನಾ ರವರಿಗೆ ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸ್ತುತ ಇವರು ಬೆಳ್ಳಾರೆಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ಧಾರೆ.

ರಂಗತ್ತಮಲೆ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ – ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿಗಳು ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆ ಈಡೇರಿಸುವಂತೆ ಹಾಗೂ ಕುಡಿಯುವ ನೀರಿನ ಟ್ಯಾಂಕ್ ದುರ್ಬಳಕೆ ಆಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಮೂಲಭೂತ ಅವಶ್ಯಕತೆಗಳನ್ನು ಅಧಿಕಾರಿಗಳು ಈಡೇರಿಸದಿದ್ದರೇ ಮತದಾನ ಬಹಿಷ್ಕಾರ ನಡೆಸುವುದೆಂದೂ ತೀರ್ಮಾನಿಸಿದ್ದಾರೆ.
Ad Widget

ಟೈಲರ್ ಅಸೋಶಿಯೇಷನ್ ಮಹಾಸಭೆ

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸುಳ್ಯ ಕ್ಷೇತ್ರ ಸಮಿತಿಯ ಮಹಾಸಭೆಯು ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು. ಸ್ಥಾಪಕಾದ್ಯಕ್ಷ ನರಸಿಂಹ ಟೈಲರ್ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಸಮಿತಿ ಪ್ರ. ಕಾರ್ಯದರ್ಶಿ ಜಯಂತ ಉರ್ಲಾಂಡಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆ ಟಿ. ದಿವಾಕರ ಜಾಲ್ಸೂರು ವಹಿಸಿದ್ದರು. ಈ ಸಂದರ್ಭದಲ್ಲಿ ನರಸಿಂಹ ಟೈಲರ್, ಜಯಂತ್...

ಲಯನ್ಸ್ ವತಿಯಿಂದ ದಿ. ಡಾ ಸುಗುಣ ಗೌಡ ಸ್ಮರಣಾರ್ಥ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ದಿ.ಡಾ.ಸುಗುಣ ಗೌಡ ಮಿತ್ತಮಜಲು ಸ್ಮರಣಾರ್ಥ ಪ್ರಾಂತೀಯ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ದ.12 ರಂದು ಸುಳ್ಯದ ಲಯನ್ ಸೇವಾ ಸದನದಲ್ಲಿ ನಡೆಯಿತು. ಸುಳ್ಯ, ಗುತ್ತಿಗಾರು, ಪಂಜ,ಸಂಪಾಜೆ, ಕಡಬ ಕ್ಲಬ್‌ಗಳ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಲಯನ್ ವಲಯಾಧ್ಯಕ್ಷೆ ಶ್ರೀಮತಿ ಸಂಧ್ಯಾ ಸಚಿತ್ ರೈ ಯವರು ಪಂದ್ಯವನ್ನು ಉದ್ಘಾಟಿಸಿದರು. ಡಾ.ಎಂ ಸುಗುಣ ಗೌಡರ ಪುತ್ರ...

ಅನ್ಸಾರಿಯಾ ಜೀಲಾನಿ ಅನುಸ್ಮರಣೆ ಮತ್ತು ಗ್ರಂಥಾಲಯ ಉದ್ಘಾಟನೆ

ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರಿಯಾ ದ‌ಅವಾ ವಿದ್ಯಾರ್ಥಿಗಳ ಒಕ್ಕೂಟವಾದ ಅನ್ಸಾರುಸುನ್ನಃ ಸ್ಟೂಡೆಂಟ್ ಅಸೋಸಿಯೇಷನ್ ಇದರ ಅಧೀನದಲ್ಲಿ ಜೀಲಾನಿ ಅನುಸ್ಮರಣಾ ಸಂಗಮವು ಡಿ.9 ರಂದು ಅನ್ಸಾರಿಯಾ ಮದರಸ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಅನ್ಸಾರಿಯಾ ದ‌ಅವಾ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾಗಿರುವ ಇಮಾಮ್ ಗಝ್ಝಾಲಿ ಗ್ರಂಥಾಲಯದ ಉದ್ಘಾಟನೆಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ನಿರ್ವಹಿಸಿದರು....

ಬಾಳಿಲ : ತರವಾಡು ಮನೆಯಲ್ಲಿ ಶ್ರಮದಾನ

ಬಾಳಿಲ ತೋಟದಮೂಲೆ ತರವಾಡು ಮನೆಯ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಡಿ.13 ರಂದು ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಕೋಟೆ ದೇವಾಲಯದಲ್ಲಿ ಶ್ರಮದಾನ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಬೆಳ್ಳಾರೆ ಇದರ ವತಿಯಿಂದ ಷಷ್ಠಿ ಮಹೋತ್ಸವದ ಪೂರ್ವಭಾವಿಯಾಗಿ ಡಿ.13 ರಂದು ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರಮದಾನ ನಡೆಸಲಾಯಿತು. ವಲಯದ ಸಂಯೋಜಕರಾದ ವಸಂತ ಗೌಡ ನೆಟ್ಟಾರು, ಸುಂದರನಾಯ್ಕ ಶೇಣಿ ,ಪ್ರಸಾದ ಕೋಟೆಬನ, ಶೇಷಪ್ಪ ನಾಯ್ಕ ಮಠತ್ತಡ್ಕ, ಶ್ರೀನಿವಾಸ ಮಠತ್ತಡ್ಕ, ಗಂಗಾಧರ ಕಿಲಂಗೋಡಿ, ಐತ್ತಪ್ಪ ಕಿಲಂಗೋಡಿ ಶ್ರಮದಾನದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ...

ಬಳ್ಪದಲ್ಲಿ ರಕ್ತದಾನ ಶಿಬಿರ

ಹಿಂದೂ ಜಾಗರಣ ವೇದಿಕೆ ಬಳ್ಪ ಹಾಗೂ ಎ.ಜೆ.ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಡಿ.13 ರಂದು ಬಳ್ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ರಕ್ತದಾನ ಶಿಬಿರ ನಡೆಯಿತು.ಶಿಬಿರದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಲಿಂಗಪ್ಪ ರೈ ಅರ್ಗುಡಿ ನೆರವೇರಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹಿ.ಜಾ.ವೇ. ಬಳ್ಪ ಇದರ ಅಧ್ಯಕ್ಷರಾದ ಪ್ರಖ್ಯಾತ್ ರೈ ಪಾರ್ಚೋಡು ಅಧ್ಯಕ್ಷತೆ ವಹಿಸಿದ್ದರು....

ಕಳಂಜ : ಆಟೋರಿಕ್ಷಾ – ಸ್ಕೂಟಿ ಡಿಕ್ಕಿ

ಕಳಂಜ ಗ್ರಾಮದ ಪಟ್ಟೆಯಲ್ಲಿರುವ ಬಸ್ ತಂಗುದಾಣದ ಸಮೀಪ ವಿಶ್ವನಾಥ ಎಡಮಂಗಲರವರು ಚಲಾಯಿಸುತ್ತಿದ್ದ ಆಟೋರಿಕ್ಷಾ (ಪಂಚಶ್ರೀ ಆಟೋ) ಹಾಗೂ ಕಳಂಜ ನಿವಾಸಿ ಇಸ್ಮಾಯಿಲ್ ಎಂಬವರು ಚಲಾಯಿಸುತ್ತಿದ್ದ ಹೋಂಡಾ ಆಕ್ಟಿವಾ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳು ಜಖಂಗೊಂಡಿದ್ದು, ಸವಾರರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರಾದ ಗಗನ್ ನಾಲ್ಗುತ್ತು, ಪ್ರಶಾಂತ್ ಪಟ್ಟೆ, ಜೀವನ್ ಕಜೆಮೂಲೆ,...

ಗ್ರಾ.ಪಂ. ಚುನಾವಣೆಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಕಾಂಗ್ರೆಸ್ಸಿನ ಬೆಂಬಲಿತ ಅಭ್ಯರ್ಥಿಗಳು ಕಣಕ್ಕೆ , ಜತೆಗೆ ಹೆಚ್ಚಿನ ಸ್ಥಾನಗಳನ್ನು ಪಡೆಯುವ ವಿಶ್ವಾಸ – ಜಯಪ್ರಕಾಶ್ ರೈ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದ್ದು ಈ ಬಾರಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಹೆಚ್ಚಿನ ಪಂಚಾಯತ್ ಗಳಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಡಿ.12 ರಂದು ಸುಳ್ಯ ಪ್ರೆಸ್ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ...
Loading posts...

All posts loaded

No more posts

error: Content is protected !!