Ad Widget

ಪಂಜ : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಪಂಜ ಗ್ರಾಮ ಪಂಚಾಯತ್ ಕೂತ್ಕುಂಜ 2ನೇ ವಾರ್ಡಿನ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶರತ್ ಕುದ್ವ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುವರ್ಣಿನಿ ಎನ್ ಎಸ್., ರವಿ ಬಿ.ಎನ್. ನಾಗತೀರ್ಥ, ನಂದಕುಮಾರ್ ಗಟ್ಟಿಗಾರ್, ಚೇತನ್ ಪಂಜ, ರಮೇಶ್ ಕುದ್ವ, ಅಕ್ಷಯ್...

ಗ್ರಾಪಂ ಚುನಾವಣೆ : ಗುತ್ತಿಗಾರಿನಲ್ಲಿ ಕಣಕ್ಕಿಳಿದ ಗ್ರಾಮ ಭಾರತ ತಂಡ

ಗ್ರಾಮ‌ ಪಂಚಾಯತ್ ಚುನಾವಣೆಯಲ್ಲಿ ಗುತ್ತಿಗಾರು ಗ್ರಾ.ಪಂ‌.ನ ಒಂದನೇ ವಾರ್ಡ್ ನ ಎಲ್ಲಾ ಸ್ಥಾನಗಳಿಗೆ ನಾಗರಿಕರ ತಂಡವು ಗ್ರಾಮ‌ ಭಾರತ ಹೆಸರಿನಲ್ಲಿ ಸ್ಫರ್ಧೆಗೆ ಇಳಿದಿದೆ. ರಸ್ತೆ, ಕುಡಿಯುವ ನೀರು ಹಾಗೂ ಮೂಲಭೂತ ವ್ಯವಸ್ಥೆಗಳು, ರಸ್ತೆ ಹಾಗೂ ಸೇತುವೆ ಸೇರಿದಂತೆ ವಿವಿಧ ಉದ್ದೇಶಗಳೊಂದಿಗೆ ಭ್ರಷ್ಟಾಚಾರ ತಡೆಯಲು ಸ್ಫರ್ಧೆಗೆ ಇಳಿದಿದೆ. ಈಗಾಗಲೇ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗುತ್ತಿಗಾರು ಒಂದನೇ...
Ad Widget

ಜಾಲ್ಸೂರು : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಜೀಬ್ ಪೈಚಾರ್ ನಾಮಪತ್ರ ಸಲ್ಲಿಕೆ

ಜಾಲ್ಸೂರು ಗ್ರಾಮ ಪಂಚಾಯತ್ ನ ಎರಡನೇ ವಾರ್ಡಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮುಜೀಬ್ ಪೈಚಾರ್ ಇಂದು ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರಾದ ಸೀತಾರಾಮ ಜಾಲ್ಸೂರು, ಸುಬ್ಬಯ್ಯ ಸೋಣಂಗೇರಿ, ಲತೀಫ್ ಬಿ.ಎಲ್. ಮೊದಲಾದವರು ಉಪಸ್ಥಿತರಿದ್ದರು.

ಮಡಪ್ಪಾಡಿ : ಪಕ್ಷೇತರ ಅಭ್ಯರ್ಥಿ ತೀರ್ಥರಾಮ ದೋಣಿಪಳ್ಳ ನಾಮಪತ್ರ

ಮಡಪ್ಪಾಡಿ ಗ್ರಾಮ ಪಂಚಾಯತಿ ಚುನಾವಣೆಗೆ ಡಿ.15 ರಂದು 1 ನಾಮಪತ್ರ ಮಾತ್ರ ಸಲ್ಲಿಕೆಯಾಗಿವೆ. ಮಡಪ್ಪಾಡಿ2 ನೇ ವಾರ್ಡ್ ನಿಂದ ಸಾಮಾನ್ಯ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ತೀರ್ಥರಾಮ ದೋಣಿಪಳ್ಳ ಅವರು ಇಂದು ನಾಮಪತ್ರ ಸಲ್ಲಿಸಿದರು.

ಕೊಲ್ಲಮೊಗ್ರ : ಟಿಕೇಟ್ ಹಂಚಿಕೆಯಲ್ಲಿ ಅಸಮಾಧಾನ – ಬಿಜೆಪಿ ಕಾರ್ಯಕರ್ತರಿಂದ ರಾಜೀನಾಮೆಗೆ ಸಿದ್ಧತೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ನ ಕಲ್ಮಕಾರು ವಾರ್ಡ್ 1 ರಲ್ಲಿ ಆಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲವಿದ್ದು, ಕೊನೆಯ ಕ್ಷಣದಲ್ಲಿ ಮಂಡಲ ಸಮಿತಿಯು ಪಕ್ಷದ ನಿಷ್ಠಾವಂತರಿಗೆ ಮಣೆ ಹಾಕಿಲ್ಲವೆಂದು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಸಜ್ಜಾಗಿದ್ದಾರೆ.ಇಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧೆಗೆ ಅಶ್ವಥ್ ಯಾಲದಾಳು ಮತ್ತು ಪುಷ್ಪರಾಜು ಪಡ್ಪು ಅವರಿಗೆ ಪಕ್ಷ ಟಿಕೇಟ್ ನೀಡಿದೆ. ಅಶ್ವಥ್ ಯಾಲದಾಳು ಅವರಿಗೆ ಟಿಕೆಟ್...

ಸಂಪಾಜೆ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಸಂಪಾಜೆ (ದ. ಕ) ಗ್ರಾಮ ಪಂಚಾಯತ್ ನ 5 ನೇ ವಾರ್ಡ್ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಯಾಗಿ ರಿಫಾತ್ ಜಿ. ಎಸ್ ನಾಮಪತ್ರ ಸಲ್ಲಿಸಿದ್ದಾರೆ.

ಸುಳ್ಯದಲ್ಲಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಶೈಲೇಂದ್ರ ಸರಳಾಯ – ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎಸ್ ವೈ

ಸುಳ್ಯ ನಗರದಲ್ಲಿ ಕಾರ್ಯಚರಿಸುತ್ತಿರುವ ಮೊಬೈಲ್ ಫೋನ್ ಅಂಗಡಿಗಳ ಉದ್ಯಮಿಗಳು ಒಟ್ಟುಗೂಡಿ ಮಾರಾಟಗಾರರ ಸಮಸ್ಯೆಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ ನೂತನವಾಗಿ ಅಸೋಶಿಯೇಶನ್ ಅನ್ನು ರಚಿಸಲಾಯಿತು. ನೂತನ ಸಮಿತಿ ರಚನಾ ಸಭೆಯು ಡಿಸೆಂಬರ್ 14ರಂದು ಬಾಳೆಮಕ್ಕಿ ದ್ವಾರಕಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ತಮ್ಮ ಸಂಘಟನೆಯ ಹಿತಾಶಕ್ತಿಗಳು ಮತ್ತು ಸಾಮಾಜಿಕವಾಗಿ ಜನ ಸ್ಪಂದನೆಯನ್ನು ರೂಪಿಸುವ ಕುರಿತು ಚರ್ಚೆ ಕಾರ್ಯಕ್ರಮ ನಡೆಯಿತು....

ಕಲ್ಮಡ್ಕ : ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಕಲ್ಮಡ್ಕ ಪಂಚಾಯತ್ ಚುನಾವಣೆಗೆ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಯಾಗಿ 1ನೇ ವಾರ್ಡ್ ನಿಂದ ಹಮೀದ್ ಮರಕ್ಕಡ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಐವರ್ನಾಡು : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಐವರ್ನಾಡು ಗ್ರಾಮ ಪಂಚಾಯತ್ ಚುನಾವಣೆಗೆ ದೇರಾಜೆ ವಾರ್ಡ್ ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ದೇವಿಪ್ರಸಾದ್ ಎಸ್.ಎನ್ ಮತ್ತು ಬಾಂಜಿಕೋಡಿ ವಾರ್ಡ್ ನಿಂದ ರಂಜನ್ ಮೂಲೆತೋಟ, ನಿಡುಬೆ ವಾರ್ಡ್ ನಿಂದ ಚಂದ್ರಕಲಾ ಜಬಳೆ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ ಗೆ ಸುಳ್ಯದ ವಿದ್ಯಾರ್ಥಿಗಳು

ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆ (ರಿ) ನಡೆಸುವ 40ನೇ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ - 2020 ಡಿಸೆಂಬರ್ 16 ರಿಂದ 25 ರ ತನಕ ನಡೆಯಲಿದೆ. ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿಗಳಾದ ಅವನಿ ಎಂ.ಎಸ್. ಸುಳ್ಯ, ಶರತ್ ಮರ್ಗಿಲಡ್ಕ, ಅಧಿತಿ...
Loading posts...

All posts loaded

No more posts

error: Content is protected !!