- Saturday
- March 7th, 2026
ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ಭಟ್ ಕೊಡಂಕೇರಿಯವರ ನೇತೃತ್ವದಲ್ಲಿ ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಯನಗರ 3ನೇ ವಾರ್ಡ್ ನ ಮನೆಗಳಿಗೆ 2021 ರ ಕ್ಯಾಲೆಂಡರ್ ಗಳನ್ನು ಡಿಸೆಂಬರ್ 28ರಂದು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೂತ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಮಚಾದೋ, ಕಾರ್ಯದರ್ಶಿ ಸುಂದರ ಕುದ್ಪಾಜೆ, ಅಭಿವೃದ್ಧಿ ಕಾವಲು ಸಮಿತಿ ಅಧ್ಯಕ್ಷ ದೀಕ್ಷಿತ್ ಕುಮಾರ್ ಜಯನಗರ,...
ಕೊರೋನಾ ಸಂಕಷ್ಟ ಕಾಲದಲ್ಲಿ ಸುಳ್ಯದಿಂದ ಹೊರರಾಜ್ಯ ಮತ್ತು ಜಿಲ್ಲೆಗಳಿಗೆ ತೆರಳಲು ಕೂಲಿ ಕಾರ್ಮಿಕರಿಗೆ, ಹಾಗೂ ಪ್ರಯಾಣಿಕರಿಗೆ ಸರಕಾರದ ನಿರ್ದೇಶನದ ಮೇರೆಗೆ ಬಸ್ ಸೌಲಭ್ಯವನ್ನು ಸೂಕ್ತ ಸಮಯಕ್ಕೆ ಒದಗಿಸಿ ಕರ್ತವ್ಯ ನಿಷ್ಠೆ ಮೆರೆದ ಸುಳ್ಯ ಘಟಕದ ಕೆಎಸ್ಆರ್ಟಿಸಿ ಬಸ್ ಡಿಪೋ ಮ್ಯಾನೇಜರ್ ಸುಂದರ್ ರಾಜ್ ರವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಿಸೆಂಬರ್ 28ರಂದು ಟ್ರಸ್ಟ್ ಕಚೇರಿಯಲ್ಲಿ...
ಕಾಂಗ್ರೆಸ್ ಸ್ಥಾಪನಾ ದಿನಾಚರಣೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕ (ಐ ಎನ್ ಟಿ ಯು ಸಿ ) ಮುಖಂಡ ರಾಕೇಶ್ ಮಲ್ಲಿ ಯವರ 50 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ರಕ್ತದಾನದಲ್ಲಿ ದಾಖಲೆ ಮಾಡಿದ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿಬಿ ಸುಧಾಕರ್ ರವರಿಗೆ ಸನ್ಮಾನ ನಡೆಯಿತು....
ಕೊಲ್ಲಮೊಗ್ರ ಬೂತ್ ನ ಬಿಜೆಪಿ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಶಕ್ತಿ ಪ್ರದರ್ಶನ ನಡೆಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಹಾಗೂ ಅಭ್ಯರ್ಥಿ ಉದಯ ಕೊಪ್ಪಡ್ಕ, ಅಭ್ಯರ್ಥಿ ಜಯಶ್ರೀ ಎಸ್., ಗ್ರಾ.ಪಂ. ಮಾಜಿ ಸದಸ್ಯರಾದ ಕಮಲಾಕ್ಷ ಮುಳ್ಳುಬಾಗಿಲು, ಪ್ರೇಮಾ ಚಾಂತಾಳ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಬಾರಿಯ ಗ್ರಾಮ ಪಂಚಾಯತ್ ಮತದಾನ ಶಾಂತಿಯುತವಾಗಿ ಮುಗಿದಿದ್ದು ತಾಲೂಕಿನಲ್ಲಿ ಶೇ 80.54 ಮತದಾನ ದಾಖಲಾಗಿದೆ. ಬಾಳುಗೋಡು ಹಿ.ಪ್ರಾ.ಶಾಲಾ ಬೂತ್ ನಲ್ಲಿ ಶೇ. 92.15 ಗರಿಷ್ಠ ಮತದಾನ ಹಾಗೂ ಕನಿಷ್ಠ ಮತದಾನ ಬಾಳಿಲ ವಿದ್ಯಾಭೋದಿನಿ ಪ್ರೌಢಶಾಲಾ ಬೂತ್ ನಲ್ಲಿ ಶೇ. 62.74 ದಾಖಲಾಗಿದೆ.
ಸೌಹಾರ್ದ ಕ್ರಿಕೆಟರ್ಸ್ ನಡೆಸಿದ ಅಮರ್, ಅಕ್ಬರ್, ಅಂತೋನಿ ಟ್ರೋಫಿ ವಾರ್ಷಿಕ ಕ್ರಿಕೆಟ್ ಕ್ರೀಡಾಕೂಟ ಪುತ್ತೂರಿನಲ್ಲಿ ಇಂದು ನಡೆಯಿತು. ಪಂದ್ಯಾಟದಲ್ಲಿ ವೆಂಕಟರಮಣ ಸೊಸೈಟಿ ಪುತ್ತೂರು ಶಾಖೆಯ ಸಿಬ್ಬಂದಿಗಳಾದ ಸಂದೇಶ್ ಹಾಗೂ ಬಿ.ಸಿ ರೋಡ್ ಶಾಖೆಯ ವಿಶ್ವನಾಥ್ ಭಾಗವಹಿಸಿದ ಸಹಕಾರಿ ಸಂಘ ಬ್ಯಾಂಕ್ ತಂಡ ರನ್ನರ್ ಅಪ್ ಗಳಿಸಿದೆ. ಕ್ಯಾಂಪ್ಕೋ ಪುತ್ತೂರು ತಂಡ ಪ್ರಥಮ ಸ್ಥಾನ ಗಳಿಸಿತು.
ದೇವಚಳ್ಳ ಗ್ರಾ.ಪಂ.ನ ಕಂದ್ರಪ್ಪಾಡಿ ಬೂತ್ ನಲ್ಲಿ ಅಭ್ಯರ್ಥಿಗಳ ಜತೆ ಬಿಜೆಪಿ ಕಾರ್ಯಕರ್ತರ ಶಕ್ತಿ ಪ್ರದರ್ಶನ ನಡೆಸಿದರು. ಅಭ್ಯರ್ಥಿಗಳಾದ ರಮೇಶ್ ಪಡ್ಪು, ಭವಾನಿಶಂಕರ ಮುಂಡೋಡಿ, ಉಷಾ ದೇವ, ಸೀತಮ್ಮ ಕರಂಗಲ್ಲು, ತಾ.ಪಂ.ಸದಸ್ಯೆ ಯಶೋಧ ಬಾಳೆಗುಡ್ಡೆ, ಗ್ರಾ.ಪಂ.ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಮಾಜಿ ಸದಸ್ಯರಾದ ಶಿವಪ್ರಕಾಶ್ ಅಡ್ಡನಪಾರೆ, ವಾರ್ಡ್ ಸಮಿತಿ ಅಧ್ಯಕ್ಷ ಯೋಗೀಶ್ ದೇವ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮರ್ಕಂಜ ಬೂತ್ ನಲ್ಲಿ ಅಭ್ಯರ್ಥಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಜತೆ ಮಂಡಲ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಸಾಥ್ ನೀಡಿದರು.
ಎಲಿಮಲೆಯ ಸೈಂಟ್ ಮೇರಿಸ್ ಇಂಡಸ್ಟ್ರೀಸ್ ನ ನೂತನ ಘಟಕವಾಗಿ ಹಾರ್ಡ್ವೇರ್, ಪೈಂಟ್ಸ್, ಪೈಪ್ಸ್ ಮತ್ತು ಪಿಟ್ಟಿಂಗ್ಸ್, ಸ್ಯಾನಿಟರಿವೇರ್ಸ್ , ಸಿಮೆಂಟ್ ಮತ್ತು ಸಿಮೆಂಟ್ ಪ್ರೊಡಕ್ಟ್ ನ ವಿಶಾಲವಾದ ಮಳಿಗೆ ಡಿ.28 ರಂದು ಶುಭಾರಂಭಗೊಂಡಿತು. ಧರ್ಮಗುರುಗಳಾದ ಫಾ|ಸಿಬಿ ಪನಚಿಕಲ್ ಪ್ರಾರ್ಥಿಸಿ, ಸಂಸ್ಥೆಯ ಬೆಳವಣಿಗೆಗೆ ಶುಭಹಾರೈಸಿದರು. ಶ್ರೀಮತಿ ರೋಸಮ್ಮ ಮತ್ತು ಮ್ಯಾಥ್ಯೂ ಕಕ್ಕಿಂಜೆ ದಂಪತಿಗಳು ಉದ್ಘಾಟಿಸಿ ಶುಭಹಾರೈಸಿದರು. ಸುಮಾರು...
Loading posts...
All posts loaded
No more posts
