Ad Widget

ಗುತ್ತಿಗಾರು : ವಿದ್ಯಾರ್ಥಿನಿ ಅನಾರೋಗ್ಯದಿಂದ ಮೃತ್ಯು

ಗುತ್ತಿಗಾರು ಗ್ರಾಮದ ಲಿಂಗಪ್ಪ ಗೌಡ ಪೈಲೂರುರವರ ಪುತ್ರಿ ಯಶಸ್ವಿನಿ ಇಂದು ಮುಂಜಾನೆ ಅನಾರೋಗ್ಯದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಈಕೆ ಗುತ್ತಿಗಾರಿನ ಕುರಿಯಾಕೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಕೆಲವು ದಿನಗಳಿಂದ ಈಕೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಳೆಂದು ತಿಳಿದುಬಂದಿದೆ. ಮೃತಳು ತಂದೆ, ತಾಯಿ ದಮಯಂತಿ, ಸಹೋದರಿವೃಂದಶ್ರೀ ಅಗಲಿದ್ದಾರೆ.

ಭಾರಿ ಸದ್ದಿಗೆ ಬೆಚ್ಚಿ ಬಿದ್ದ ಹರಿಹರಪಲ್ಲತ್ತಡ್ಕದ ಜನತೆ – ಕಾರಣ ನಿಗೂಢ

ಹರಿಹರ ಪಳ್ಳತ್ತಡ್ಕದಲ್ಲಿ ಡಿ.13ರಂದು ರಾತ್ರಿ 10 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಭಾರಿ ಶಬ್ದವೊಂದು ಕೇಳಿ ಬಂದಿರುವ ಘಟನೆ ನಡೆದಿದೆ.ಈ ಶಬ್ದ ಕೇಳಿ ಬಂದಿದ್ದು ಜನ ಭಯಭೀತರಾಗಿದ್ದಾರೆ‌. ಜನರಿಗೆ ಭೂಕಂಪ ಆಯಿತೆನ್ನುವಷ್ಟು ಶಬ್ದ ಕೇಳಿಸಿದ್ದು. ಪರಿಸರದ ಮನೆಗಳಿಂದ ಜನ ಹೊರಗೆ ಓಡಿ ಬಂದಿದ್ದಾರೆ. ಕಲ್ಲೇಮಠದ ಕಡೆಯಿಂದ ಶಬ್ದ ಕೇಳಿಸಿತು ಎಂದು ಸ್ಥಳಿಯರು ತಿಳಿಸಿದ್ದಾರೆ. ಘಟನೆ ಗ್ರಾಮದಲ್ಲಿ ಭೀತಿಯ...
Ad Widget

ಡಿ.19 : ಸುಳ್ಯ ತಾಲೂಕು ಖಾಸಗಿ ಶಿಕ್ಷಕರ ಒಕ್ಕೂಟ ಉದ್ಘಾಟನೆ ಮತ್ತು ಸದಸ್ಯತ್ವ ನೋಂದಾವಣೆ ಕಾರ್ಯಕ್ರಮ

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ(ರಿ)(ಶಿಕ್ಷಕರ ಮತ್ತು ಉಪನ್ಯಾಸಕರ ಒಕ್ಕೂಟ) ಇದರ ಸುಳ್ಯ ತಾಲೂಕು ಘಟಕದ ಉದ್ಘಾಟನೆ ಮತ್ತು ಸದಸ್ಯತ್ವ ನೋಂದಣಿ ಕಾರ್ಯಕ್ರಮ ಡಿ.19 ಶನಿವಾರ ದಂದು ಅಪರಾಹ್ನ 02:00 ಗಂಟೆಗೆ ರಥಬೀದಿಯಲ್ಲಿರುವ ರೋಟರಿ ಆಂಗ್ಲ ಮಾಧ್ಯಮ ಹಿ.ಪ್ರಾ ಶಾಲೆ, ಸುಳ್ಯ ಇಲ್ಲಿ ನಡೆಯಲಿದೆ. ಖಾಸಗಿ, ಅತಿಥಿ ಹಾಗೂ ಗೌರವ ಶಿಕ್ಷಕರು ಸದಸ್ಯತನಕ್ಕಾಗಿ2 ಪಾಸ್‌ಪೋರ್ಟ್ ಸೈಜ್...

ಹಸೀನ ಸಂಪಾಜೆ ಯವರಿಗೆ ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಚಂದನ ಸಾಹಿತ್ಯ ವೇದಿಕೆಯು ಡಿಸೆಂಬರ್ 13 ರಂದು ಪುತ್ತೂರಿನ ರೋಟರಿ ಟ್ರಸ್ಟ್ ನ ಸಭಾಂಗಣದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಭಾವೈಕ್ಯತಾ ಕವಿಗೋಷ್ಠಿ ಯಲ್ಲಿ ಸಂಪಾಜೆಯ ಶ್ರೀಮತಿ ಹಸೀನಾ ರವರಿಗೆ ಸಜ್ಜನ ಚಂದನ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸ್ತುತ ಇವರು ಬೆಳ್ಳಾರೆಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ಧಾರೆ.

ರಂಗತ್ತಮಲೆ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ – ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿಗಳು ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆ ಈಡೇರಿಸುವಂತೆ ಹಾಗೂ ಕುಡಿಯುವ ನೀರಿನ ಟ್ಯಾಂಕ್ ದುರ್ಬಳಕೆ ಆಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಮೂಲಭೂತ ಅವಶ್ಯಕತೆಗಳನ್ನು ಅಧಿಕಾರಿಗಳು ಈಡೇರಿಸದಿದ್ದರೇ ಮತದಾನ ಬಹಿಷ್ಕಾರ ನಡೆಸುವುದೆಂದೂ ತೀರ್ಮಾನಿಸಿದ್ದಾರೆ.

ಟೈಲರ್ ಅಸೋಶಿಯೇಷನ್ ಮಹಾಸಭೆ

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸುಳ್ಯ ಕ್ಷೇತ್ರ ಸಮಿತಿಯ ಮಹಾಸಭೆಯು ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು. ಸ್ಥಾಪಕಾದ್ಯಕ್ಷ ನರಸಿಂಹ ಟೈಲರ್ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಸಮಿತಿ ಪ್ರ. ಕಾರ್ಯದರ್ಶಿ ಜಯಂತ ಉರ್ಲಾಂಡಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆ ಟಿ. ದಿವಾಕರ ಜಾಲ್ಸೂರು ವಹಿಸಿದ್ದರು. ಈ ಸಂದರ್ಭದಲ್ಲಿ ನರಸಿಂಹ ಟೈಲರ್, ಜಯಂತ್...

ಲಯನ್ಸ್ ವತಿಯಿಂದ ದಿ. ಡಾ ಸುಗುಣ ಗೌಡ ಸ್ಮರಣಾರ್ಥ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ದಿ.ಡಾ.ಸುಗುಣ ಗೌಡ ಮಿತ್ತಮಜಲು ಸ್ಮರಣಾರ್ಥ ಪ್ರಾಂತೀಯ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ದ.12 ರಂದು ಸುಳ್ಯದ ಲಯನ್ ಸೇವಾ ಸದನದಲ್ಲಿ ನಡೆಯಿತು. ಸುಳ್ಯ, ಗುತ್ತಿಗಾರು, ಪಂಜ,ಸಂಪಾಜೆ, ಕಡಬ ಕ್ಲಬ್‌ಗಳ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಲಯನ್ ವಲಯಾಧ್ಯಕ್ಷೆ ಶ್ರೀಮತಿ ಸಂಧ್ಯಾ ಸಚಿತ್ ರೈ ಯವರು ಪಂದ್ಯವನ್ನು ಉದ್ಘಾಟಿಸಿದರು. ಡಾ.ಎಂ ಸುಗುಣ ಗೌಡರ ಪುತ್ರ...

ಅನ್ಸಾರಿಯಾ ಜೀಲಾನಿ ಅನುಸ್ಮರಣೆ ಮತ್ತು ಗ್ರಂಥಾಲಯ ಉದ್ಘಾಟನೆ

ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರಿಯಾ ದ‌ಅವಾ ವಿದ್ಯಾರ್ಥಿಗಳ ಒಕ್ಕೂಟವಾದ ಅನ್ಸಾರುಸುನ್ನಃ ಸ್ಟೂಡೆಂಟ್ ಅಸೋಸಿಯೇಷನ್ ಇದರ ಅಧೀನದಲ್ಲಿ ಜೀಲಾನಿ ಅನುಸ್ಮರಣಾ ಸಂಗಮವು ಡಿ.9 ರಂದು ಅನ್ಸಾರಿಯಾ ಮದರಸ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಅನ್ಸಾರಿಯಾ ದ‌ಅವಾ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾಗಿರುವ ಇಮಾಮ್ ಗಝ್ಝಾಲಿ ಗ್ರಂಥಾಲಯದ ಉದ್ಘಾಟನೆಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ನಿರ್ವಹಿಸಿದರು....

ಬಾಳಿಲ : ತರವಾಡು ಮನೆಯಲ್ಲಿ ಶ್ರಮದಾನ

ಬಾಳಿಲ ತೋಟದಮೂಲೆ ತರವಾಡು ಮನೆಯ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಡಿ.13 ರಂದು ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಕೋಟೆ ದೇವಾಲಯದಲ್ಲಿ ಶ್ರಮದಾನ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಬೆಳ್ಳಾರೆ ಇದರ ವತಿಯಿಂದ ಷಷ್ಠಿ ಮಹೋತ್ಸವದ ಪೂರ್ವಭಾವಿಯಾಗಿ ಡಿ.13 ರಂದು ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರಮದಾನ ನಡೆಸಲಾಯಿತು. ವಲಯದ ಸಂಯೋಜಕರಾದ ವಸಂತ ಗೌಡ ನೆಟ್ಟಾರು, ಸುಂದರನಾಯ್ಕ ಶೇಣಿ ,ಪ್ರಸಾದ ಕೋಟೆಬನ, ಶೇಷಪ್ಪ ನಾಯ್ಕ ಮಠತ್ತಡ್ಕ, ಶ್ರೀನಿವಾಸ ಮಠತ್ತಡ್ಕ, ಗಂಗಾಧರ ಕಿಲಂಗೋಡಿ, ಐತ್ತಪ್ಪ ಕಿಲಂಗೋಡಿ ಶ್ರಮದಾನದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ...
Loading posts...

All posts loaded

No more posts

error: Content is protected !!