

ಪೆರುವಾಜೆ ಗ್ರಾಮದ ಕಾನಾವುಜಾಲಿನಲ್ಲಿ ಧರ್ಮದೈವ, ಪಿಲಿಭೂತ, ಶಿರಾಡಿದೈವ ಹಾಗೂ ಉಪದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಭಿಷೇಕ ಡಿ.28 ರಂದು ವೇ.ಮೂ. ಪಂಜ ನಾರಾಯಣ ಅಸ್ರಣ್ಣ ಅವರ ನೇತೃತ್ವದಲ್ಲಿ ನಡೆಯಿತು.
ಡಿ.21 ರಿಂದ ಡಿ.28 ರ ತನಕ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಪವಮಾನ ಹೋಮ, ಸುದರ್ಶನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸೋಮವಾರ ಬೆಳಗ್ಗೆ ಧರ್ಮದೈವ,ಪಿಲಿಭೂತ, ಶಿರಾಡಿ, ಉಪದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕಾನಾವುಜಾಲು ವಿಠಲ ಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
