Ad Widget

ತಾಹಿರಾ ಪ್ಯಾಭ್ರಿಕ್ಸ್ ನಲ್ಲಿ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ

ಸುಳ್ಯ ರಥಬೀದಿಯಲ್ಲಿ ಕಾರ್ಯಚರಿಸುತ್ತಿರುವ ಶಾಫಿ ಕುತ್ತಮೊಟ್ಟೆರವರ ಮಾಲಕತ್ವದ ತಾಹಿರಾ ಫ್ಯಾಬ್ರಿಕ್ಸ್ ವತಿಯಿಂದ ನಡೆದ ದೀಪಾವಳಿ ಹಬ್ಬದ ವಿಶೇಷ ಕೊಡುಗೆ ಕೂಪನ್ ವಿಜೇತರಿಗೆ ಇಂದು ಬಹುಮಾನ ವಿತರಣೆ ನಡೆಯಿತು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿಬಿ ಸುಧಾಕರ ರೈ , ನ ಪಂ ಸದಸ್ಯೆ ಕಿಶೋರಿ ಶೇಟ್, ನ ಪಂ ಮಾಜಿ ಸದಸ್ಯ ಹಾಜಿ ಮುಸ್ತಪ ಜನತಾ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನವನ್ನು ಜಯನಗರ ನಿವಾಸಿ ಜಯರಾಮ ಪಡೆದುಕೊಂಡು, ದ್ವಿತೀಯ ಬಹುಮಾನವನ್ನು ಮೇನಾಲ ನಿವಾಸಿ ಕುಮಾರಿ ಜ್ಯೋತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯರಾದ ರಾಜು ಪಂಡಿತ್, ಪತ್ರಕರ್ತ ಹಸೈನಾರ್ ಜಯನಗರ, ಕುಂಞಿರಾಮನ್ ವೈದ್ಯರ್, ಸಂಸ್ಥೆಯ ಹಿತೈಷಿ ಶಶಿಧರ ಎಂ ಜೆ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಶಾಫಿ ಕುತ್ತಮೊಟ್ಟೆ ಸ್ವಾಗತಿಸಿ ವಂದಿಸಿದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!