Ad Widget

ಹೃದಯವಂತರು ಪ್ರಶಸ್ತಿಗೆ ಭಾಜನರಾದ ಪಂಜದ ಪಶುವೈದ್ಯರಾಗಿರುವ ಡಾಕ್ಟರ್ ದೇವಿಪ್ರಸಾದ್ ಕಾನತ್ತೂರು

ಹೃದಯವಾಹಿನಿ ಮಂಗಳೂರು ಮತ್ತು ಎಸ್.ಕೆ. ಮುನ್ಸಿಪಲ್ ಎಂಪ್ಲಾಯಸ್ ಯೂನಿಯನ್ ಆಶ್ರಯದಲ್ಲಿ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಡಿಸೆಂಬರ್ 12 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.

. . . . . . . . .

ಬೆಳಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಆರಂಭಗೊಂಡು ಶಾಸ್ತ್ರೀಯ ನೃತ್ಯ ರೂಪಕ, ಭಾಷಾ ಬಾಂಧವ್ಯ ಗೋಷ್ಠಿ, ಮಿಮಿಕ್ರಿ, ಸಮೂಹ ಗಾಯನ ಜೊತೆಗೆ ಹೃದಯವಂತರು ಪ್ರಶಸ್ತಿ 2020 ಪ್ರಧಾನ ಮಾಡಲಾಯಿತು.

ಪ್ರಶಸ್ತಿ ಪ್ರಧಾನ: ಪಂಜದಲ್ಲಿ ಕಳೆದ 35 ವರ್ಷಗಳಿಂದ ಗ್ರಾಮೀಣ ಪಶುವೈದ್ಯಕೀಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಹಾಗೆ ಒಂದುವರೆ ವರ್ಷಗಳ ಕಾಲ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಮಾಡಿದ ಅಭಿವೃದ್ಧಿಗೆ ಮತ್ತು ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯಾಗಿ ಮಾಡಿದ ಸೇವೆಗೆ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಇವರು ಹೃದಯವಂತರು 2020 ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ಪ್ರಧಾನದ ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಡಾ.ಮೊಯಿದೀನ್ ಬಾವ, ಹರತಾಳ ಹಾಲಪ್ಪ, ಜ್ಯೋತಿಷಿ ಹಾಗೂ ಆಧ್ಯಾತ್ಮಿಕ ಚಿಂತಕ ಡಾ. ಜೆ.ಆರ್. ಮನೋಜ್ ಶರ್ಮ, ನಾಡೋಜ ಡಾ| ಮಹೇಶ್ ಜೋಷಿ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!