
ಕಾಲೇಜುಗಳಲ್ಲಿ ಕೋವಿಡ್ 19 ರ ತಪಾಸಣೆ ನಡೆಸಿ,ಅದರ ವರದಿಯನ್ನು ಕಾಲೇಜಿನಲ್ಲೆ ನೀಡುವಂತಾಗಲು ಸುಳ್ಯವಿಧಾನ ಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ (ಎನ್ ಎಸ್ ಯು ಐ) ವಿಧಾನ ಸಭಾ ಕ್ಷೇತ್ರದ ವತಿಯಿಂದ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಮುಖಂಡರುಗಳಾದ ಕೀರ್ತನ್ ಗೌಡ ಕೊಡಪಾಲ, ಆಶಿಕ್ ಆರಂತೋಡು, ಧನುಷ್ ಕುಕ್ಕೆಟಿ, ಯಶವಂತ್ ಅಡ್ಯಡ್ಕ, ಶಹಾಲ್ ಕೆ.ಎಸ್, ಭರತ್ ಅಡ್ಯಡ್ಕ, ಸುದೀಪ್ ಶೆಟ್ಟಿ, ರವರು ಉಪಸ್ಥಿತರಿದ್ದರು.