Ad Widget

ಅಮರ ಸುದ್ದಿ ವೆಬ್‌ಸೈಟ್ ಲೋಕಾರ್ಪಣೆ

ಸುಳ್ಯ ತಾಲೂಕಿನಾದ್ಯಂತ ಹಾಗೂ ಪ್ರಪಂಚದ ವಿವಿಧ ಭಾಗಗಳಲ್ಲಿ ಇರುವ ಸುಳ್ಯದ ಜನತೆಯ ಅಚ್ಚು ಮೆಚ್ಚಿನ ಪತ್ರಿಕೆ ಅಮರ ಸುಳ್ಯ ಸುದ್ದಿ ಕಳೆದ ಹತ್ತು ವರ್ಷಗಳಿಂದ ಪತ್ರಿಕಾಮುದ್ರಣದ ಮೂಲಕ ಯಶಸ್ವಿಯಾಗಿ ಮೂಡಿಬರುತ್ತಿದೆ. ಆಧುನಿಕ ಇಚ್ಚಾಶಕ್ತಿಗನುಗುಣವಾಗಿ ಕಾಲಗಳು ಬದಲಾಗುತ್ತಿದ್ದು ಕ್ಷಣ ಕ್ಷಣದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಜನತೆಗೆ ಕ್ಷಣ ಕ್ಷಣದ ನೈಜ ಸುದ್ದಿಯನ್ನು ನೀಡುವ ಉದ್ದೇಶದಿಂದ ಅಮರ ಸುದ್ದಿ ವೆಬ್‌ಸೈಟ್ ಅನ್ನು ಇಂದು ( ಮೇ. ೨೧) ಚಾಲನೆ ನೀಡಲಾಯಿತು. ಪುತ್ತೂರು ಡಿ.ವೈ.ಎಸ್ ಪಿ. ದಿನಕರ ಶೆಟ್ಟಿ ನೂತನ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಂ.ಬಿ.ಪೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ , ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ, ಸುಳ್ಯ ಠಾಣಾಧಿಕಾರಿ ಹರೀಶ್ ಎಂ.ಆರ್. , ನ.ಪಂ.ಸದಸ್ಯ ಶರೀಫ್ ಕಂಠಿ, ಬಳ್ಳಾರಿ ಕಸ್ಟ್ರಕ್ಷನ್ ಮಾಲಕ ಮಂಜುನಾಥ್ ಬಳ್ಳಾರಿ, ಉದ್ಯಮಿ ಸಿದ್ಧಿಕ್ ಕಟ್ಟೆಕಾರ್, ಪತ್ರಿಕಾ ಸಂಪಾದಕ ಮುರಳೀಧರ ಅಡ್ಡನಪಾರೆ, ಸಿಬ್ಬಂದಿ ಗಳಾದ ಪದ್ಮನಾಭ ಅರಂಬೂರು, ದಿನೇಶ್ ಮಠ, ಜಯದೀಪ್ ಕುದ್ಕುಳಿ, ಪ್ರಮೋದ್ ಬೊಳ್ಳಾಜೆ ಮೊದಲಾವರು ಉಪಸ್ಥಿತರಿದ್ದರು. ಪ್ರತಿಕಾ ವರದಿಗಾರ ಹಸೈನಾರ್ ಜಯನಗರ ಸ್ವಾಗತಿಸಿ, ನಿರೂಪಿಸಿದರು. ಕಛೇರಿ ನಿರ್ವಾಹಕ ವಿಶ್ವನಾಥ್ ಮೋಟುಕಾನ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!