ಸರಕಾರಿ ನೌಕರರ ಸಂಘದಿಂದ ರಕ್ತದಾನ ಶಿಬಿರ – ಮಾಹಿತಿ ಕಾರ್ಯಾಗಾರ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸುಳ್ಯ ಘಟಕ, ತಾಲೂಕು ಕಚೇರಿ ಸುಳ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ಸಹಯೋಗದಲ್ಲಿ ಮಾಹಿತಿ ಕಾರ್ಯಾಗಾರ ಮತ್ತು ರಕ್ತದಾನ ಶಿಬಿರ ಡಿ .೨೭ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ವಹಿಸಿದ್ದರು, ಉದ್ಘಾಟನೆಯನ್ನು ಶಾಸಕಿ...

ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿ ಪ್ರತಿಭೆಗಳಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿ ಪ್ರತಿಭೆಗಳಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ.ದ. ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತೀಗೆ ಗ್ರಾಮದ ಇಬ್ಬರು ಪ್ರಸಿದ್ಧ ಗಾಯಕರು&ಸಾಹಿತಿಗಳಾದ ರವಿ ಪಾಂಬಾರು ಇವರಿಗೆ ರಾಷ್ಟ್ರ ಮಟ್ಟದ ಕಲಾ ರತ್ನ. ಹಾಗೂ ಶ್ರೀಧರ್ ಎಕ್ಕಡ ಇವರಿಗೆ ರಾಷ್ಟ್ರ ಮಟ್ಟದ ಬಸವ ಶ್ರೀ ಪ್ರಶಸ್ತಿಯನ್ನು ರಾಯಚೂರಿನಲ್ಲಿ ನಡೆದ ಬೆಳಕು ಶೈಶಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್...
Ad Widget

ಜಟ್ಟಿಪಳ್ಳ – ನೀರಬಿದಿರೆ ಹಾಗೂ ಸುಳ್ಯ ನಗರದ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ರಿಕ್ಷಾ ಚಾಲಕರಿಂದ ನ.ಪಂ. ಎದುರು ಪ್ರತಿಭಟನೆ

ಜಟ್ಟಿಪಳ್ಳ – ನೀರಬಿದಿರೆ ಹಾಗೂ ಸುಳ್ಯ ನಗರದ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘ ಬಿ.ಎಂ.ಎಸ್. ಸಂಯೋಜಿತ ಇವರು ನ.ಪಂ. ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಯಲ್ಲಿ ಮಾತನಾಡಿದ ಅಟೋ ಚಾಲಕರ ಸಂಘದ ಕಾನೂನು ಸಲಹೆಗಾರರಾದ ಭಾಸ್ಕರ್ ರಾವ್ ರವರು “ಸುಳ್ಯ ಜಟ್ಟಿಪಳ್ಳ – ನೀರಬಿದಿರೆ ಹಾಗೂ ನಗರದ ವಿವಿಧ ರಸ್ತೆಯ...

ಡಾ. ಕುರುಂಜಿ ವೆಂಕಟ್ರಮಣ ಗೌಡರ ಜಯಂತ್ಯೋತ್ಸವ ಪ್ರಯುಕ್ತ;  ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ ಪ್ರದಾನ

ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ ೯೫ ನೇ ಜಯಂತ್ಯೋತ್ಸವವು ಡಿ. ೨೬ರಂದು ನಡೆಯಿತು. ಕೆ.ವಿ.ಜಿ. ಸಂಸ್ಮರಣೆ ಹಾಗು ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮಂಗಳೂರು ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ್...

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮಾಹಿತಿ ಕಾರ್ಯಗಾರ ಹಾಗೂ ನೋಂದಾವಣೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ಹಾಗೂ ಬಾರ್ಬಾರ್ಸ್‌ ಎಸೋಸಿಯೇಶನ್‌ ಸುಳ್ಯ ವತಿಯಿಂದ ದಿನಾಂಕ 26.12.2023ರಂದು ಸುಳ್ಯ ಯೋಜನಾ ಕಛೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಪ್ರಾಥಮಿಕ ಮಾಹಿತಿ ಕಾರ್ಯಗಾರ ಹಾಗೂ ನೋಂದಾವಣೆ ಕಾರ್ಯಕ್ರಮ ನಡೆಸಲಾಯಿತು. ಸದ್ರಿ ಕಾರ್ಯಕ್ರಮದ ಉದ್ಘಾಟನೆಯನ್ನು ನಾಗೇಶ್‌ ಪಿ ಯೋಜನಾಧಿಕಾರಿ, ಶ್ರೀ.ಕ್ಷೇ,ಧ.ಗ್ರಾ. ಯೋಜನೆ ಸುಳ್ಯ...

ಡಾ. ಕುರುಂಜಿ ವೆಂಕಟ್ರಮಣ ಗೌಡರ ಭಾವ ಚಿತ್ರಕ್ಕೆ ಪುಷ್ಪ ನಮನ

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಸಂಘದ ವತಿಯಿಂದ ಕುರುಂಜಿಯವರ ೯೫ನೇ ಹುಟ್ಟು ಹಬ್ಬದ ಪ್ರಯುಕ್ತ ಡಾ. ಕುರುಂಜಿ ವೆಂಕಟ್ರಮಣ ಗೌಡರ ಭಾವ ಚಿತ್ರಕ್ಕೆ ಸಂಘ ದ ಕಚೇರಿಯಲ್ಲಿ ಪುಷ್ಪ ನಮನವನ್ನು ಕೆವಿಜಿ ಸುಳ್ಯ ಹಬ್ಬದ ಗೌರವಾಧ್ಯಕ್ಷರಾದ ಡಾ ಚಿದಾನಂದ ಕೆ ವಿ ಇವರು ನೆರವೆರಿಸಿದರು. ಕರ‍್ಯಕ್ರಮದಲ್ಲಿಶ್ರೀ ಗಿರೀಶ್ ಭಾರದ್ವಾಜ್, ಡಾ ಲೀಲಾಧರ್, ಪರ‍್ವಾಧ್ಯಕ್ಷರಾದ...

ಡಿ.31 : ಗುತ್ತಿಗಾರಿನ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಸಾಮೂಹಿಕ ಶನೈಶ್ವರ ಪೂಜೆ ಹಾಗೂ ಗುಳಿಗ ಶಿವಗುಳಿಗ ಯಕ್ಷಗಾನ ಬಯಲಾಟ

ಗುತ್ತಿಗಾರು : ಶ್ರೀ ಅಯ್ಯಪ್ಪ ಸೇವಾ ಸಮಿತಿ ಕೃಷ್ಣನಗರ ಇದರ ವತಿಯಿಂದ ಸಾಮೂಹಿಕ ಶನೈಶ್ವರ ಪೂಜೆ ಹಾಗೂ ಗುಳಿಗ ಶಿವಗುಳಿಗ ಯಕ್ಷಗಾನ ಬಯಲಾಟ ಡಿ.31 ರಂದು ನಡೆಯಲಿದೆ. ಗುತ್ತಿಗಾರಿನ ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಡಿ.31 ರಂದು ಪೂರ್ವಾಹ್ನ ಗಂಟೆ 8.00ರಿಂದ ಶ್ರೀ ಗಣಪತಿ ಹೋಮ, ಪೂ. 10 ರಿಂದ ಶನೈಶ್ವರ ಪೂಜೆ ಪ್ರಾರಂಭ,...

ನೆಟ್ಟಣ : ಸೌಹಾರ್ದ ಕ್ರಿಸ್ಮಸ್ ಸಂಗಮ : ಕ್ರಿಸ್ಮಸ್ ಬೆಲ್ಸ್ 2k23

ಸೈoಟ್ ಮೇರಿಸ್ ಚರ್ಚ್, ನೆಟ್ಟಣ ಹಾಗೂ ಕರ್ನಾಟಕ ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್, ನೆಟ್ಟಣ ಘಟಕ ಇದರ ನೇತೃತ್ವದಲ್ಲಿ ಆಯೋಜಿಸಿದ ಸೌಹಾರ್ದ ಕ್ರಿಸ್ಮಸ್ ಸಂಗಮ ವನ್ನು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ದಿನೇಶ್ ಉದ್ಘಾಟನೆ ಮಾಡಿದರು. ಶ್ರೀ ರಾಜೇಶ್ ಪಿ ಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ನೆಟ್ಟಣ ಧರ್ಮಗುರುಗಳು ಫಾ. ಆದರ್ಶ್ ಜೋಸೆಫ್...

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ
ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ ಜನ್ಮದಿನಾಚರಣೆ

ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ 95ನೇ ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ ಪುಷ್ಪ ನಮನ ಕಾರ್ಯಕ್ರಮವು ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಿಸೆಂಬರ್ 26ರಂದು ನಡೆಯಿತು.ಅಕಾಡೆಮಿ ಆಫ್ ಲಿಬಲರ್ ಎಜ್ಯುಕೇಶನ್ (ರಿ.)ಸುಳ್ಯ ಇದರ ಕೌಂನ್ಸಿಲ್ ಮೆಂಬರ್ ಶ್ರೀ....

ಕಾರು – ಬಸ್ ಮುಖಾಮುಖಿ- ಅಪಾಯದಿಂದ ಪಾರು

ದೊಡ್ಡತೋಟ ತಿರುವಿನಲ್ಲಿ ಡಿ.26ರಂದು ಮುಂಜಾನೆ ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಜಖಂಗೊಂಡಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!