ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ವತಿಯಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಶಾಲೆಗಳಿಗೆ ವಿತರಣೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ವತಿಯಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗಳನ್ನು, ಸಭಾಪತಿಗಳಾದ ಸುಧಾಕರ್ ರೈ ಇವರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ ಈ ಇವರಿಗೆ ಹಸ್ತಾಂತರಿಸಿ ಸುಳ್ಯ ತಾಲೂಕಿನ ಆಯ್ದ ಶಾಲೆಗಳಿಗೆ ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಮತ್ತು ಭಾ.ರೆ.ಕ್ರಾ. ನಿರ್ದೇಶಕರಾದ ಪೃಥ್ವಿ ಕುಮಾರ್...

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತುಯುವ ರೆಡ್‌ಕ್ರಾಸ್ ಘಟಕದ ಉದ್ಘಾಟನೆ

ಜ.3ರಂದು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ ವಹಿಸಿದ್ದರು. ಉದ್ಘಾಟಕರಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಇದರ ಅಧ್ಯಕ್ಷರಾದ ಪಿ.ಬಿ. ಸುಧಾಕರ ರೈ, ಮುಖ್ಯ ಅತಿಥಿಗಳಾಗಿ ಜಿಲ್ಲಾ ರೆಡ್ ಕ್ರಾಸ್ ಪ್ರತಿನಿಧಿ ಗಣೇಶ್ ಭಟ್...
Ad Widget

ನೂತನ ಆಕ್ರಮ ಸಕ್ರಮ ಸಮಿತಿ ರಚನೆ : ಅಧ್ಯಕ್ಷರಾಗಿ ಭಾಗೀರಥಿ ಮುರುಳ್ಯ, ಸದಸ್ಯರಾಗಿ ಗೀತಾ ಕೋಲ್ಚಾರು ಸುಳ್ಯ , ಹೆಚ್ ಆದಂ ಕಡಬ, ಪಿ.ಪಿ.ವರ್ಗೀಸ್ ಕಡಬ ಆಯ್ಕೆ

ಸುಳ್ಯ ವಿಧಾನಸಭಾ ಕ್ಷೇತ್ರದ ಆಕ್ರಮ ಸಕ್ರಮ ಸಮಿತಿ ರಚಿಸಿ, ಜಾರಿಗೊಳಿಸಿ ಸರಕಾರ ಆದೇಶಿಸಿದೆ. ಈ ನೂತನ ಸಮಿತಿಯ ಅಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಸದಸ್ಯರಾಗಿ ಸುಳ್ಯದ ಗೀತಾ ಕೋಲ್ಚಾರು , ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಾಜಿರಕುಕ್ಕ ಮನೆ ಹೆಚ್ ಆದಂ, ಇನ್ನೋರ್ವ ಸದಸ್ಯ ಕಡಬ ತಾಲೂಕಿನ ನೂಜಿ ಬಾಳ್ತಿಲ ಗ್ರಾಮದ ದರ್ಜಿ ಮಜಲು ಮನೆ...

ಪೆರ್ನಾಜೆ : ಮತ್ತೆ ಒಂಟಿ ಸಲಗ ದಾಳಿ – ಅಪಾರ ಕೃಷಿ ಹಾನಿ

ಆನೆಗುಂಡಿ ರಕ್ಷಿತಾರಣ್ಯ ಭಾಗದಿಂದ ಬಂದ ಒಂಟಿ ಸಲಗವು ಜ.3 ರಂದು ಮುಂಜಾನೆ ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ನುಗ್ಗಿ ಹತ್ತು ಬಾಳೆ ನಾಲ್ಕು ದೀವಿ ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ, ಕೊಂಬೆಗಳನ್ನು ಮುರಿದು ತಿಂದಿದೆ.ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾ ಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು...

ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡಾಧಿಕಾರಿಯಾಗಿ ಕೆ ಪಿ ಎಸ್ ಬೆಳ್ಳಾರೆ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಪಿ ನೇಮಕ

ಸುಳ್ಯ :- 67ನೇ ರಾಷ್ಟ್ರ ಮಟ್ಟದ 17 ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾವಳಿಯು ತೆಲಂಗಾಣ ಕಾಮರೆಡ್ಡಿ ನಗರದಲ್ಲಿ ಜನವರಿ 6ರಿಂದ 11 ರ ವರೆಗೆ ಆಯೋಜಿಸಿಲಾಗಿದ್ದು ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯದ ತಂಡದ ಕ್ರೀಡಾಪಟುಗಳ ಸುರಕ್ಷತೆ ಹಾಗೂ ಮೇಲ್ವಿಚಾರಕರಾಗಿ ಕರ್ನಾಟಕ ಪಬ್ಲಿಕ್‌ಸ್ಕೂಲ್ ಬೆಳ್ಳಾರೆ ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಪಿ ಇವರನ್ನು...

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ 2 ವಿದ್ಯಾರ್ಥಿಗಳು ಕರ್ನಾಟಕ ಬ್ಯಾಂಕ್ ಹುದ್ದೆಗೆ ಆಯ್ಕೆ.

ಪುತ್ತೂರು : ಕರ್ನಾಟಕ ಬ್ಯಾಂಕ್ ಕ್ಲರಿಕಲ್ ಹುದ್ದೆಗಳಿಗೆ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉದ್ಯೋಗಕ್ಕೆ ಆಯ್ಕೆಗೊಂಡಿರುತ್ತಾರೆ. ಶ್ರೀ ಮಹೇಶ್ ಕೆ ಎಂ ರವರು ಪುತ್ತೂರಿನ ನಿವಾಸಿಯಾಗಿದ್ದು , ಶ್ರೀ ಶ್ರೀವತ್ಸ ಭಾರದ್ವಾಜ್ ರವರು ಸುಳ್ಯದ ನಿವಾಸಿಯಾಗಿರುತ್ತಾರೆ. ಇವರು ಪ್ರತಿಷ್ಠಿತ ಕರ್ನಾಟಕ ಎಜುಕೇಷನಲ್ ಅವಾರ್ಡ್ ಪಡೆದ ಐ.ಆರ್.ಸಿ.ಎಂ.ಡಿ ಶಿಕ್ಷಣ...

ಆಲೆಟ್ಟಿ ಯುವಕ ವಿಷ ಸೇವಿಸಿ ಆತ್ಮಹತ್ಯೆ ಯತ್ನ, ಆಸ್ಪತ್ರೆಯಲ್ಲಿ ಸಾವು

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅಶೋಕ ಎಂಬ ಯುವಕ ಅರಂತೋಡು ಗ್ರಾಮದಲ್ಲಿ ಕಾರ್ಯಚರಿಸುತ್ತಿರುವ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಅವರು ಡಿ.28 ರ ಗುರುವಾರದಂದು ವಿಷ ಸೇವಿಸಿ ರಾತ್ರಿ 12 ಗಂಟೆಗೆ ಮನೆಯ ಬಳಿಗೆ ಬಂದಿದ್ದರು. ಇದನ್ನು ಗಮನಿಸಿದ ಮನೆಯವರು ಮತ್ತು ಸಂಬಂಧಿಕರು ತಕ್ಷಣವೇ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ...

ಅದೃಷ್ಟವಂತರಿಗಾಗಿ ಸುವರ್ಣಾವಕಾಶ ಒದಗಿಸಿದೆ ಆಶೀರ್ವಾದ ಎಂಟರ್ ಪ್ರೈಸಸ್ – ಕನಸಿನ ಸುಂದರ ಮನೆ ಹಾಗೂ ಬಂಪರ್ ಬಹುಮಾನ ನಿಮ್ಮದಾಗಿಸಿ

ಪುತ್ತೂರಿನ ಆಶೀರ್ವಾದ ಎಂಟರ್ಪ್ರೈಸಸ್ ಪ್ರಸ್ತುತ ಪಡಿಸುತ್ತಿರುವ ಆಶೀರ್ವಾದ ಲಕ್ಕಿ ಸ್ಕೀಮ್ ಮೂಲಕ ಕನಸಿನ ಮನೆಯನ್ನು ಗೆಲ್ಲುವ ಸುವರ್ಣಾವಕಾಶ ಒದಗಿಸಿದೆ. ಪ್ರತಿ ತಿಂಗಳು ಬಂಪರ್ ಬಹುಮಾನ  ಹಾಗೂ ತಿಂಗಳಿಗೆ 50 ಆಕರ್ಷಕ ಬಹುಮಾನ ಕೂಡ ಪಡೆಯಲು ಅವಕಾಶವಿದೆ.   ತಿಂಗಳಿಗೆ ಕೇವಲ 1000ರೂ ನಂತೆ ಪಾವತಿಸಬೇಕು.  ಒಟ್ಟು 20 ತಿಂಗಳು ಅವಧಿಯ ಈ ಯೋಜನೆಯಾಗಿದ್ದು ಅದೃಷ್ಟದ ಬಹುಮಾನ ಸಿಗದಿರುವ...

ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಆಮಂತ್ರಣ ಬಿಡುಗಡೆ

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಸುವರ್ಣ ಮಹೋತ್ಸವ ಸಂಭ್ರಮಕಾರ್ಯಕ್ರಮವು ಜ.12,13 ಮತ್ತು 14 ರಂದು ನಡೆಯಲಿದ್ದು ಆಮಂತ್ರಣ ಪತ್ರ ಬಿಡುಗಡೆಯು ಜ.01ರಂದು ಶಾಲೆಯ ಸಭಾಂಗಣದಲ್ಲಿ ನಡೆಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ,ಮಾಜಿ ಸಚಿವ ಎಸ್.ಅಂಗಾರ ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಚೊಕ್ಕಾಡಿ ವಿದ್ಯಾ ಸಂಸ್ಥೆ ಯ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಸಮಿತಿ...

ಸೇವಾ ನಿವೃತ್ತರಾದ ಕುಕ್ಕೆ ಸುಬ್ರಹ್ಮಣ್ಯ ಆನೆ ಮಾವುತ ಶ್ರೀನಿವಾಸ ಗೌಡರಿಗೆ ಸನ್ಮಾನ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಮಾವುತ ಶ್ರೀನಿವಾಸ ಗೌಡರಿಗೆ ಡಾl ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಜಂಟಿಯಾಗಿ ಸನ್ಮಾನವನ್ನು ಏರ್ಪಡಿಸಲಾಯಿತು. ಆನೆ ಮಾವುತ ಶ್ರೀನಿವಾಸಗೌಡರ ಹುಟ್ಟೂರು, ಬಾಲ್ಯದಿಂದ ಬೆಳೆದ ರೀತಿ, ತನ್ನ ಅಜ್ಜನ ಕಾಲದಿಂದ ವಂಶ ಪಾರಂಪರಿಯವಾಗಿ ಆನೆ ಮಾವತರಾಗಿ ಸೇವೆ...
Loading posts...

All posts loaded

No more posts

error: Content is protected !!