- Tuesday
- July 28th, 2026
ಬೆಳ್ಳಾರೆ ಕೆ.ಪಿ.ಎಸ್.ವಿದ್ಯಾರ್ಥಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯದಲ್ಲಿ ದ್ವಿತೀಯ ; ಖೇಲೋ ಇಂಡಿಯಾ ಪಂದ್ಯಾಟಕ್ಕೆ ಆಯ್ಕೆ
ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ ತೆಲಂಗಾಣದಲ್ಲಿ ನಡೆಯಿತು. ೧೭ ವರ್ಷದ ಹುಡುಗರ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ಬೆಳ್ಳಾರೆ ಕೆ.ಪಿ.ಎಸ್. ಸಂಸ್ಥೆಯ ೧೦ ನೇ ತರಗತಿಯ ವಿದ್ಯಾರ್ಥಿಗಳಾದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಕೆಪಿಎಸ್ ನ ದೈಹಿಕ...
ರಾಜ್ಯದಲ್ಲಿ ಸರಕಾರಿ ಶಾಲೆ, ಅನುದಾನಿತ ಶಾಲೆ ಎಂಬ ತಾರತಮ್ಯ ಬದಲಾಗಬೇಕಾಗಿದೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸಮಾನವಾದ ರೀತಿಯ ಅನುದಾನ, ಸೌಕರ್ಯ ಹಂಚಿಕೆಯಾಗಬೇಕು. ಇದಕ್ಕಾಗಿ ಸರಕಾರಿ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಾಗಿದೆ.ಈ ಹಿನ್ನಲೆಯಲ್ಲಿ ಸರಕಾರದ ಹಿಂದಿನಿಂದಲು ಗಮನ ಸೆಳೆಯುತ್ತ ಬಂದಿದ್ದೆನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮೂರು ದಿನಗಳ ಕಾಲ...
ಸುಳ್ಯ ನಗರ ಯೋಜನಾ ಮಹಾಯೋಜನೆಗೆ .ತಾತ್ಕಾಲಿಕ ಅನುಮೋದನೆ ದೊರೆತಿರುತ್ತದೆ. ಈ ಪ್ರಾಧಿಕಾರದಿಂದ ಮಹಾಯೋಜನೆಯಲ್ಲಿ ಪರಿಷ್ಕರಣೆಯೊಂದಿಗೆ ಅನುಮೋದನೆ ನೀಡುವ ಬಗ್ಗೆ ಇಲಾಖಾ ಅಧಿಕಾರಿಗಳ, ಉಸ್ತುವಾರಿ ಸಚಿವರ, ಇಲಾಖಾ ಸಚಿವರ ಸಭೆ ನಡೆಸಿ ಪರಿಹಾರ ಒದಗಿಸಿ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಶಹೀದ್ ಪಾರೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ. ಸುಳ್ಯ ನಗರ ಪಂಚಾಯತ್ ಅಧಿಕಾರಿಗಳು ಸುಳ್ಯದ...
ಕೃಷಿ ಕಾರ್ಯಗಳಿಗಾಗಿ ಸರಕಾರ ನೀಡಿದ ಉಚಿತ ವಿದ್ಯುತ್ ನ್ನು ಗ್ರಾಹಕರೊಬ್ಬರು ಮನೆಗೆ ಮತ್ತು ಕೈಗಾರಿಕೆಗೆ ಬಳಕೆ ಮಾಡಿರುವ ಆರೋಪದಲ್ಲಿ ಮಂಗಳೂರಿನ ಮೆಸ್ಕಾಂ ಜಾಗೃತದಳ ಅಧಿಕಾರಿಗಳು (ವಿಜಿಲೆನ್ಸ್) ದಾಳಿ ನಡೆಸಿದ ಘಟನೆ ವರದಿಯಾಗಿದೆ. ಮಂಡೆಕೋಲಿನ ಕೆ.ಬಿ.ಇಬ್ರಾಹಿಂ ಎಂಬವರಿಗೆ ಕೃಷಿ ಕಾರ್ಯಕ್ಕೆ ಉಚಿತ ವಿದ್ಯುತ್ ಸೌಲಭ್ಯವಿದೆ. ಈ ಕೃಷಿ ಪಂಪ್ ನಿಂದ ವಿದ್ಯುತ್ತನ್ನು ಇಬ್ರಾಹಿಂ ರವರು ತಮ್ಮ ಮನೆ...
ನಟರಾಜಾಸನದಲ್ಲಿ ಒಂದು ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ಇಂಟರ್ನ್ಯಾಷನಲ್ ಯೋಗ ಬುಕ್ ರೆಕಾರ್ಡ್ ನಲ್ಲಿ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಇಲ್ಲಿಯ ವಿದ್ಯಾರ್ಥಿನಿ ಜಿಶಾ ಕೊರಂಬಡ್ಕ, ಭಾಗವಹಿಸಿರುತ್ತಾರೆ. ಇವರಿಗೆ ಪ್ರಮಾಣ ಪತ್ರ ಮತ್ತು ಪದಕ ನೀಡಿ ಗೌರವಿಸಿರುತ್ತಾರೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ತಾಜೆ ಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು...
ಪುತ್ತೂರಿನ ಮಕ್ಕಳ ಮಂಟಪ ವೇದಿಕೆಯಲ್ಲಿ ಉಪತಹಸೀಲ್ದಾರ್ ಮತ್ತು ಕವಯತ್ರಿಯಾದ ಕು || ಸುಲೋಚನಾ ಪಿ ಕೆ ಅವರ ಜೋಡಿ ಸಾಹಿತ್ಯ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯದ ಜ್ಯೋತಿಷಿ, ಸಾಹಿತಿ, ಚಿತ್ರ ನಿರ್ದೇಶಕರಾದ ಎಚ್. ಭೀಮರಾವ್ ವಾಷ್ಠರ್ ಅವರನ್ನು ವೇದಿಕೆಯ ಗಣ್ಯರ ಜೊತೆ ಭಾಗವಹಿಸಿದ ಎಲ್ಲಾ ಕವಿಗಳು ಜೊತೆಯಾಗಿ ಸಮ್ಮಾನಿಸಿ ಗೌರವಿಸಿದರು. ಸಮಾರಂಭದ...
ಸುಬ್ರಹ್ಮಣ್ಯ: ಯುವ ಜನತೆಯ ಪ್ರಗತಿಯಿಂದ ರಾಷ್ಟ್ರದ ಏಳಿಗೆ ಸಾಧಿತವಾಗುತ್ತದೆ. ಭವಿಷ್ಯದಲ್ಲಿ ಯುವ ಜನತೆಯ ಅಭ್ಯುದಯಕ್ಕೆ ಯುಗದಲ್ಲಿ ಗಣಕಯಂತ್ರ ಜ್ಞಾನ ಅಡಿಗಲ್ಲಾಗುತ್ತದೆ.ಆದುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗಿದೆ.ಇದು ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಪ್ರಗತಿ ಸಾಧಿಸಲು ಅನುಕೂಲತೆ ಒದಗಿಸುತ್ತದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಎಸ್ಎಸ್ಪಿಯು ಕಾಲೇಜಿನ ಕಾರ್ಯದರ್ಶಿ ಡಾ.ನಿಂಗಯ್ಯ ಹೇಳಿದರುಮಹತೋಭಾರ ಕುಕ್ಕೆ...
ಅನಾರೋಗ್ಯಕ್ಕೊಳಗಾಗಿ ವಿದ್ಯಾರ್ಥಿನಿ ಮೃತ ಪಟ್ಟ ಘಟನೆ ಎಡಮಂಗಲದಿಂದ ವರದಿಯಾಗಿದೆ. 11 ರಂದು ಅನಾರೋಗ್ಯಕ್ಕೊಳಗಾದ ವಿದ್ಯಾರ್ಥಿಯನ್ನು ಕೂಡಲೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಈಕೆ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪದವಿ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿ. ಈಕೆ ಎಡಮಂಗಲ ಗ್ರಾಮದ ಗಂಡಿತಡ್ಕ ರಾಮಚಂದ್ರ ನಾಯ್ಕ ಇವರ...
‘ಕುವೆಂಪು’ ಈ ಜಗದ ಸೋಜಿಗ. ಬಹುಷ: ಅವರ ‘ವಿಶ್ವಮಾನವತತ್ವ’ ಕುರಿತಾಗಿ ಆದಷ್ಟು ಚರ್ಚೆ ಬೇರೆ ಯಾವ ಸಾಹಿತಿಯ ಬಗ್ಗೆಯೂ ನಡೆದಿಲ್ಲ. ಕನ್ನಡಕ್ಕೆ ಪ್ರಥಮ ‘ಜ್ಙಾನಪೀಠ’ ಪ್ರಶಸ್ತಿ ತಂದುಕೊಟ್ಟ ಈ ಪ್ರಥಮ ‘ರಾಷ್ಟçಕವಿ’, ಮುದ್ರಿತ ಪುಟಗಳಲ್ಲಿ ಸುಮಾರು 40,000 ಪುಟಗಳಾಗುವಷ್ಟು ಕವನ, ಕತೆ, ಲೇಖನ, ವಿಮರ್ಷೆ, ನಾಟಕ, ಕಾದಂಬರಿಗಳನ್ನು (69 ಕೃತಿಗಳು) ಬರೆದವರು. ಅದೂ ಆಧುನಿಕ ಸೌಲಭ್ಯಗಳಾದ...
ಸಮಾಜ ಹೇಗಿದೆ ನೋಡಲು ಪತ್ರಿಕೆಗಳನ್ನು ನೋಡಬೇಕಿದೆ. ಪತ್ರಿಕೆ ಸಮಾಜದ ಕನ್ನಡಿ ಎಂದು ಹಿರಿಯ ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು.ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸುಳ್ಯ ಇದರ ವತಿಯಿಂದ ಶಾರದಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪತ್ರಿಕೋದ್ಯಮದ ಕುರಿತು ಉಪನ್ಯಾಸ ನೀಡಿದರು. ಸಹಜವಲ್ಲದ ಘಟನೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳು ಪತ್ರಿಕೆಗಳಲ್ಲಿ ವರದಿಗಳಾಗಿ ಬರುತ್ತದೆ....
Loading posts...
All posts loaded
No more posts
