ಎನೆಕಲ್ಲು : ರೈತ ಯುವಕ ಮಂಡಲದ ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧ – ಆಮಂತ್ರಣ ಬಿಡುಗಡೆ

ಏನೆಕಲ್ಲು ರೈತ ಯುವಕ ಮಂಡಲದ ನೂತನ ಕಟ್ಟಡ ಸುಮಾರು ಒಂದು ಕೋಟಿ 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತಿದೆ. ಇದರ ತಳ ಅಂತಸ್ತು ಸುಮಾರು 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಉದ್ಘಾಟನಾ ಸಮಾರಂಭವು ಫೆಬ್ರವರಿ 24ರಂದು ನಡೆಯಲಿರುವುದು. ಅದರ ಅಂಗವಾಗಿ ಆಮಂತ್ರಣ ಪತ್ರಿಕೆಯನ್ನು ಯುವಕ ಮಂಡಲದ ಕಟ್ಟಡದ ಆವರಣದಲ್ಲಿ ಫೆ.11 ರಂದು ಬಿಡುಗಡೆಗೊಳಿಸಲಾಯಿತು. ಕಟ್ಟಡ ರಚನಾ ಸಮಿತಿಯ...

ಗುತ್ತಿಗಾರಿನ ಬಾಕಿಲ ಬಳಿ ಭೀಕರ ಅಪಘಾತ : ಸವಾರ ಮೃತ್ಯು – ಜತೆಗಿದ್ದ ಮಗಳ ಕಾಲಿಗೆ ಗಂಭೀರ ಗಾಯ

ಗುತ್ತಿಗಾರು ಬಾಕಿಲ ಎಂಬಲ್ಲಿ ಗುತ್ತಿಗಾರಿನಿಂದ ಸುಳ್ಯ ಕಡೆ ಬರುತ್ತಿದ್ದ ಸ್ಕೂಟಿ ಒಂದಕ್ಕೆಎದುರುನಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ. ನಡುಗಲ್ಲು ನಿವಾಸಿ ಶಿವರಾಮ ಗೌಡ ಮೃತಪಟ್ಟ ದುರ್ದೈವಿ. ಹಿಂಬದಿ ಕುಳಿತಿದ್ದ ಮಗಳ ಕಾಲಿಗೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
Ad Widget

ಗುತ್ತಿಗಾರಿನ ಬಾಕಿಲ ಬಳಿ ಭೀಕರ ಅಪಘಾತ , ಗಂಭಿರ ಗಾಯ ಆಸ್ಪತ್ರೆಗೆ ವರ್ಗಾವಣೆ.

ಗುತ್ತಿಗಾರು ಬಾಕಿಲ ಎಂಬಲ್ಲಿ ಗುತ್ತಿಗಾರಿನಿಂದ ಸುಳ್ಯ ಕಡೆ ಬರುತ್ತಿದ್ದ ಸ್ಕೂಟಿ ಒಂದಕ್ಕೆಎದುರುನಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿ ಸ್ಕೂಟಿಯ ಚಾಲಕನನ್ನು ದೂರದ ವರೆಗೆ ಎಳೆದುಕೊಂಡು ಹೋಗಿ ಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಸ್ಕೂಟಿಯನ್ನು ನಾಲ್ಕೂರಿನ ಶಿವರಾಮ ಎಂಬವರು ಚಾಲಾಯಿಸಿಕೊಂಡು ಹೋಗುತಿದ್ದರು ಅಲ್ಲದೆ ಸ್ಕೂಟಿಯಲ್ಲಿ ಅವರ ಮಗಳು ಕೂಡ ಇದ್ದಳು ಅವಳಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದ್ದು...

ಅಕ್ರಮ ಮರಳು ಸಾಗಾಟ ಲಾರಿ ಪೋಲೀಸ್ ವಶ.

ದಿನಾಂಕ:10.02.2024 ರಂದು ರಾತ್ರಿ ಸುಳ್ಯ ಕಸಬಾ ಗ್ರಾಮದ, ಬಸ್ಮಡ್ಕ ಎಂಬಲ್ಲಿ, ಈರಯ್ಯ ಡಿ ಎನ್ ಪೊಲೀಸ್ ಉಪನಿರೀಕ್ಷಕರು (ಕಾ&ಸು)ಸುಳ್ಯ ಪೊಲೀಸ್ ಠಾಣೆರವರು ಮತ್ತು ಸಿಬ್ಬಂದಿಗಳು ಅಕ್ರಮ ಮರಳು ಸಾಗಾಟ ನಡೆಸುವ ಲಾರಿಯನ್ನು ವಶಕ್ಕೆ ಕಡೆದ ಪ್ರಕರಣ ಇದೀಗ ವರದಿಯಾಗಿದೆ. ಕೆಎ 19 ಎಎ 4295ನೇ ಟಿಪ್ಪರ್‌‌ ಲಾರಿಯನ್ನು ತಪಾಸಣೆಗಾಗಿ ಪೋಲೀಸ್ ಅಧಿಕಾರಿಗಳು ನಿಲ್ಲಿಸಿದಾಗ ಲಾರಿಯ ಚಾಲಕನು...

ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ ಹಾಗೂ ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ವತಿಯಿಂದ ಕೆಡ್ಡಸ ಆಚರಣೆ.

ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ ಹಾಗೂ ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳುನಾಡಿನ ವಿಶಿಷ್ಟ ಪರ್ವದಿನವಾದ ಕೆಡ್ಡಸವನ್ನು ಸೂರ್ಯಕುಮಾರ್ ನಿಲಯ,ಕಲ್ತಡ್ಕದಲ್ಲಿ ಆಚರಿಸಲಾಯಿತು.ಸರಕಾರಿ ಪ್ರೌಢಶಾಲೆ ಅಜ್ಜಾವರದ ಮುಖ್ಯ್ಯೋಪಾಧ್ಯಾರಾದ ಶ್ರೀ ಗೋಪಿನಾಥ್ ಮೆತ್ತಡ್ಕರವರು ಕೆಡ್ಡಸದ ಮಹತ್ವ ವಿವರಿಸಿದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಲೋಕಯ್ಯ ಅತ್ಯಾಡಿ,ಯುವಜನ ಸoಯುಕ್ತ ಮಂಡಳಿ ಸುಳ್ಯ ಇದರ ಉಪಾಧ್ಯಕ್ಷರಾದ...

ಪೇರಡ್ಕ ಉರೂಸ್ ಸಮಾರಂಭ . ಪೇರಡ್ಕ ಗೂನಡ್ಕ ಸೌಹಾರ್ದತೆಯ ಪ್ರದೇಶ : ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್

ಪೇರಡ್ಕ ಗೂನಡ್ಕ ಪ್ರದೇಶವು ಹಿಂದಿನಿಂದಲೂ ಸೌಹಾರ್ದತೆಯ ಪ್ರದೇಶವಾಗಿದೆ. ಇಲ್ಲಿ ಹಲವಾರು ಸರ್ವಧರ್ಮಿಯರು ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ನಾವೆಲ್ಲರು ಜಾತ್ಯಾತೀತ ಮನೋಭಾವದಿಂದ ಸಹಬಾಳ್ವೆಯ ಜೀವನ ಸಡೆಸಬೇಕು ರಾಜಕೀಯ ಜೀವನದಲ್ಲಿ ಟೀಕೆಗಳು ಸಹಜ ಅದಕ್ಕೆಲ್ಲ ಎದೆ ಗುಂದುವನು ನಾನಲ್ಲ ಸೌಹಾರ್ಧತೆಯನ್ನು ನನ್ನ ಪೂರ್ವಿಕರಿಂದ ತಂದೆ- ತಾಯಿಯಿಂದ ಕಲಿತಿರುತ್ತೇನೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಫರೀದ್ ಹೇಳಿದರು....

ಸುಳ್ಯ‌ ಜೆಡಿಎಸ್ ಪದಾಧಿಕಾರಿಗಳ ಸಭೆ

ಜನತಾದಳ ಜಾತ್ಯಾತೀತ ಪಕ್ಷದ ಪದಾಧಿಕಾರಿಗಳ ಸಭೆಯು ಪಕ್ಷದ ಕಛೇರಿಯಲ್ಲಿ ಫೆ.10ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ ಇವರು ವಹಿಸಿದ್ದರು. ಈ ಸಭೆಯಲ್ಲಿ ಪ್ರಸ್ತುತ ರಾಜ್ಯದಲ್ಲಿನ ರಾಜಕೀಯ ಬೆಳವಣಿಗಳ ಬಗ್ಗೆ ಚರ್ಚೆ ನಡೆಯಿತು. ಹಾಗೆಯೇ ಎಪ್ರಿಲ್ 2024ರ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಾಗೂ ಮುಂಬರುವ ಜಿಲ್ಲಾ ಪಂಚಾಯತ್ ಹಾಗು ತಾಲೂಕು...

ಕೊಲ್ಲಮೊಗ್ರದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಉದ್ಘಾಟನೆ

ಅಧಿಕಾರಿಗಳು ಒಂದೇ ವೇದಿಕೆ ಕುಳಿತು ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಪತ್ರಕರ್ತರ ಗ್ರಾಮ ವಾಸ್ತವ್ಯ ಮುನ್ನುಡಿ : ಭಾಗೀರಥಿ ಮುರುಳ್ಯಭಾಗಶಃ ಅರಣ್ಯ ಸಮಸ್ಯೆ ಪರಿಹಾರಕ್ಕೆ ಆದ್ಯತೆ : ಜಿಲ್ಲಾಧಿಕಾರಿ ಭರವಸೆಗ್ರಾಮದ ಜನರಿಗೆ ಸರಕಾರಿ ಕಚೇರಿಗಳಿಗೆ ಹೋಗಿ ತಮ್ಮ ಕೆಲಸ ಕಾರ್ಯವನ್ನು ಮಾಡಲು ಕಷ್ಟವಾಗುವ ಇಂತ ದಿನದಲ್ಲಿ ಗ್ರಾಮದ ಒಂದೇ ವೇದಿಕೆಯಲ್ಲಿ ಎಲ್ಲ ಅಧಿಕಾರಿಗಳು ಕುರಿತು ಸಮಸ್ಯೆ...

ಗುತ್ತಿಗಾರು: ‘ಮಗಳನ್ನು ಉಳಿಸಿ ಮಗಳನ್ನು ಓದಿಸಿ ಯೋಜನೆ ಅಡಿ ಜಾಥಾ’ ಕಾರ್ಯಕ್ರಮ

ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗ್ರಾಮ ಪಂಚಾಯತ್ ಗುತ್ತಿಗಾರು ಶಂಖಶ್ರೀ ಸ್ತ್ರೀ ಶಕ್ತಿ ಗೊಂಚಲು ಗುತ್ತಿಗಾರು ಹಾಗೂ ಅಮರ ಸಂಜೀವಿನಿ ಒಕ್ಕೂಟ ಗುತ್ತಿಗಾರು ಇದರ ಸಹಯೋಗದಲ್ಲಿ 'ಮಗಳನ್ನು ಉಳಿಸಿ ಮಗಳನ್ನು ಓದಿಸಿ...

ಪೇರಡ್ಕ ವಲಿಯುಲ್ಲಾಹಿ ದರ್ಗಾ ಷರೀಫ್ ಮಖಾಂ ಉರೂಸ್

"ಅನಾದಿಕಾಲದಿಂದಲೂ ಪೇರಡ್ಕ ಸೌಹಾರ್ದತೆಯ ಪ್ರದೇಶ" -ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ಜಾತಿ ಮತ ಭೇದವಿಲ್ಲದೆ  ಸರ್ವರಿಂದಲೂ ಗೌರವಿಸಲ್ಪಡುವ ಸಂಪಾಜೆ ಗ್ರಾಮದ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ನ ಉರೂಸ್ ಸಮಾರಂಭವು ಫೆ.9ರಂದು ಗುರುವಾರ ರಾತ್ರಿ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಿತು.ಮಸೀದಿ ಅಧ್ಯಕ್ಷ ಟಿ ಎಂ ಶಹೀದ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಸಭಾ ಕಾರ್ಯಕ್ರಮವನ್ನು ಸಯ್ಯದ್ ಜೈನುಲ್...
Loading posts...

All posts loaded

No more posts

error: Content is protected !!