ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 ದಿನಾಂಕ:01/04/2026 ಬುಧವಾರ*01,🐏ಮೇಷರಾಶಿ🐏*📃,ನೆನೆಬಿದ್ದ ಕೆಲಸಗಳಿಂದಾಗಿ ನಿಮ್ಮಲ್ಲಿ ಇಂದು ಲವಲವಿಕೆ ಕಂಡು ಬರುವುದಿಲ್ಲ. ನಿದ್ದೆಗೇಡು ಬುದ್ಧಿಗೇಡು ಎನ್ನುವಂತೆ ಸಣ್ಣಪುಟ್ಟ ವಿಷಯಗಳ ಮೇಲೆ ಕೂಗಾಡುವಿರಿ. ಆದಷ್ಟು ತಾಳ್ಮೆ ಇರಲಿ. ಈ ದಿನವೂ ನಿಮ್ಮ ಮನವು ಅಸ್ತವ್ಯಸ್ತವಾಗಿರುವದು, ಶಾಂತಚಿತರಾಗಿರಲು ಪ್ರಯತ್ನಿಸಿ,ಗಮನಿಸಿ:-ಇಂದು ಪರಿಸ್ಥಿತಿಗಳನ್ನು ಸಮರ್ಥ ರೀತಿಯಿಂದ ಎದುರಿಸಿ,ಪರಿಹಾರ:-ಶಿವನ ಮಂತ್ರವನ್ನು ಪಠಿಸಿ,*02,🐂ವೃಷಭರಾಶಿ🐂*📃,ಬಾಳಸಂಗಾತಿಯ ಆರೋಗ್ಯದ...

ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ರೂ. 43.81 ಕೋಟಿ ವ್ಯವಹಾರ ರೂ. 13.57 ಲಕ್ಷ ಲಾಭ.

ಸುಳ್ಯ ನಗರದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿಯಮಿತ ಸುಳ್ಯ ಇದು 2023ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು 2025-26 ನೇ ಸಾಲಿನ ಆರ್ಥಿಕ ವರ್ಷವೂ ಸಹಕಾರಿಗೆ ಪೂರ್ಣವಾಗಿ ವ್ಯವಹರಿಸಲು ದೊರಕಿದ ಎರಡನೇ ಆರ್ಥಿಕ ವರ್ಷವಾಗಿದ್ದು ಈ ಅವಧಿಯಲ್ಲಿ ಸದಸ್ಯರ ಸಹಕಾರದೊಂದಿಗೆ ರೂ. 43.81 ಕೋಟಿ ವ್ಯವಹಾರ ನಡೆಸಿ...
Ad Widget

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಸಂಭ್ರಮ – ಇಂದು ಅಪರಾಹ್ನ ಇತಿಹಾಸ ಪ್ರಸಿದ್ಧ ಶ್ರೀ ಭಗವತಿ ದೊಡ್ಡಮುಡಿ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಸಂಭ್ರಮದಿಂದ ಜರುಗುತ್ತಿದ್ದು, ಇಂದು ಅಪರಾಹ್ನ ಇತಿಹಾಸ ಪ್ರಸಿದ್ಧ ಶ್ರೀ ಭಗವತಿ ದೊಡ್ಡಮುಡಿ ನಡೆಯಲಿದೆ. ಮಾ.25ರಂದು ಉಗ್ರಾಣ ತುಂಬಿಸುವುದರ ಮೂಲಕ ಜಾತ್ರೋತ್ಸವವು ಆರಂಭಗೊಂಡಿದ್ದು, ಮಾ.31ರಂದು ರಾತ್ರಿ ಭಗವತಿ ದೇವಿ ಸಮಾರಾಧನೆ, ಪುಲ್ಲೂರು ಕಣ್ಣನ್ ಬೆಳ್ಳಾಟ 1, ಮಲೆಕಾರಿ ಬೆಳ್ಳಾಟ 1, ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್, ರಕ್ತೇಶ್ವರಿ ದೈವದ...

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಿರಿಯ ಮುಖ್ಯೋಪಾಧ್ಯಾಯ ಶ್ರೀಧರ ಗೌಡ ಕೆರೆಮೂಲೆ ನಿವೃತ್ತಿ

2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಮರಮುಡ್ನೂರು ಗ್ರಾಮದ ಕೆರೆಮೂಲೆ ಶ್ರೀಧರ ಗೌಡರು ತಮ್ಮ ಸುದೀರ್ಘ 36 ವರ್ಷಗಳ ಶಿಕ್ಷಕ ವೃತ್ತಿಜೀವನದಿಂದ ಮಾ.31ರಂದು ನಿವೃತ್ತಿ ಹೊಂದಿದರು. ಅಮರಮುಡ್ನೂರು ಗ್ರಾಮದ ಪೈಲಾರಿನ ಕೆರೆಮೂಲೆ ದಿ. ಎಲ್ಯಣ್ಣ ಗೌಡ ಹಾಗೂ ಶ್ರೀಮತಿ ದೇವಮ್ಮ ದಂಪತಿಗಳ ಮಗನಾದ ಶ್ರೀಧರ ಗೌಡರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚೊಕ್ಕಾಡಿ...

ಸುಳ್ಯ ಹಾಗೂ ಕಡಬ ತಾಲೂಕಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಗುತ್ತಿಗಾರು, ನಡುಗಲ್ಲು, ಹರಿಹರ ಪಳ್ಳತ್ತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಹಾಗೂ ಕಡಬ ತಾಲೂಕಿನ ಸುಬ್ರಹ್ಮಣ್ಯ, ಐನೆಕಿದು ಸೇರಿದಂತೆ ಉಭಯ ತಾಲೂಕುಗಳ ಹಲವು ಕಡೆಗಳಲ್ಲಿ ಇಂದು(ಮಾ.31) ಸಂಜೆಯ ವೇಳೆಗೆ ಗಂಟೆಗಳ ಕಾಲ ಗುಡುಗು-ಸಿಡಿಲು ಹಾಗೂ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಧಾರಾಕಾರ ಮಳೆ ಸುರಿದ ಪರಿಣಾಮವಾಗಿ ಕುಕ್ಕೆ ಸುಬ್ರಹ್ಮಣ್ಯ...

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಭರವಸೆ ಮೇರೆಗೆ ನಾಳೆಯಿಂದ ನಡೆಯಬೇಕಿದ್ದ  ಧರಣಿ ಸತ್ಯಾಗ್ರಹ ಕೈಬಿಟ್ಟ ಕೆ ಎಫ್ ಡಿ ಸಿ ಕಾರ್ಮಿಕ ಸಂಘಟನೆ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ರಬ್ಬರ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಬೇಡಿಕೆಗಳನ್ನು ಇತ್ಯರ್ಥಪಡಿಸದೆ ಇರುವ ಬಗ್ಗೆ ಎ. 01ರಿಂದ ಕೆ ಎಫ್ ಡಿ ಸಿ ವಿಭಾಗೀಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಎದುರು ಅನಿರ್ಧಷ್ಟಾವಧಿ ಪ್ರತಿಭಟನಾ ಹೋರಾಟ ಮತ್ತು ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿರುವ ಕೆ ಎಫ್ ಡಿ ಸಿ ಕಾರ್ಮಿಕ ಸಂಘಟನೆಗಳು ಸುಳ್ಯ...

ಭೂಸೇನೆಯ ಯೋಧ ಯಶವಂತ ನಿಡುಬೆ ಸೇವಾ ನಿವೃತ್ತಿ

ಕಲ್ಮಕಾರು ಗ್ರಾಮದ ಯಶವಂತ್ ನಿಡುಬೆ ಅವರು ಭಾರತೀಯ ಭೂಸೇನೆಯಲ್ಲಿ 25 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ ಇಂದು ಸೇವಾ ನಿವೃತ್ತರಾದರು. 2002 ರಲ್ಲಿ ಮಂಗಳೂರಿನಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಆಯ್ಕೆಗೊಂಡು ಹೈದರಾಬಾದ್ ನಲ್ಲಿ ತರೆಬೇತಿ ಪಡೆದರು. ಸಿಯಾಚಿನ್ ಗ್ಲಾಸಿಯರ್ ನಲ್ಲಿ ವೃತ್ತಿ ಆರಂಭಿಸಿ, ಟಾಟಾ ನಗರ್, ಅಕ್ನೂರ್ ಸೆಕ್ಟರ್, ಪ್ರಯಾಗ್ ರಾಜ್, ಲಡಾಕ್, ಜಾನ್ಸಿ, ಬರೇಲಿ,...

ಕಲ್ಲುಗುಂಡಿ : ಅಮ್ಮನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸುನಿಲ್ ಕುಮಾರ್ ನೆಲ್ಲಿಕುಮೇರಿ – ಉಪಾಧ್ಯಕ್ಷರಾಗಿ ಶಶಿಧರ ಬಿ.ಕೆ. ಬೆಳ್ಳಾರೆ ಅವಿರೋಧ ಆಯ್ಕೆ

ಕಲ್ಲುಗುಂಡಿಯ ಅಮ್ಮನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾ.31 ರಂದು ಅವಿರೋಧವಾಗಿ ನಡೆಯಿತು. ನೂತನ ಅಧ್ಯಕ್ಷರಾಗಿ ಸುನಿಲ್ ಕುಮಾರ್ ಎನ್.ನೆಲ್ಲಿಕುಮೇರಿ, ಉಪಾಧ್ಯಕ್ಷರಾಗಿ ಶಶಿಧರ ಬಿ.ಕೆ. ಬೆಳ್ಳಾರೆ ಅವಿರೋಧವಾಗಿ ಆಯ್ಕೆಯಾದರು. ಸಂಘದ ನೂತನ ನಿರ್ದೇಶಕರಾಗಿ ಅಣ್ಣಾದೊರೆ ಅಡ್ಯಡ್ಕ, ಕೃಷ್ಣಕುಮಾರ್ ಅಡ್ಯಡ್ಕ, ಪೀಟರ್ ಪೌಲು ನೆಲ್ಲಿಕುಮೇರಿ, ಸಿರಾಜುದ್ದೀನ್ ಕಡೆಪಾಲ,ಸುನಿಲ್ ಕುಮಾರ್...

ಏ.01 ರಿಂದ ಜನಗಣತಿ ಪ್ರಾರಂಭ ; ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ – ಸಾರ್ವಜನಿಕರಿಗೆ ಸ್ವಯಂ ಗಣತಿಗೆ ಅವಕಾಶ

ಏ.01 ರಿಂದ ಪ್ರಾರಂಭವಾಗಲಿರುವ ಜನಗಣತಿ ದೇಶದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯುತ್ತಿದ್ದು, ಕೋವಿಡ್ ಕಾರಣದಿಂದ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಈಗ ನಡೆಸಲಾಗುತ್ತಿದೆ.ತ್ವರಿತ ದತ್ತಾಂಶ ಸಂಗ್ರಹಣೆ : ಹಿಂದೆ ಕಾಗದದ ಪಾರ್ಮ್‌ಗಳನ್ನು ಸಂಗ್ರಹಿಸಿ ಅವುಗಳನ್ನು ಸ್ಕ್ಯಾನ್ ಮಾಡಿ ಫಲಿತಾಂಶ ಪ್ರಕಟಿಸಲು ವರ್ಷಗಟ್ಟಲೆ ಸಮಯ ಬೇಕಾಗುತ್ತಿತ್ತು. ಆದರೆ ಈಗ ಡಿಜಿಟಲ್...

ಅಂದು ಶಿಕ್ಷಕರ ಜೀವನದಲ್ಲಿ ಚೆಲ್ಲಾಟ ಇಂದು ವಿದ್ಯಾರ್ಥಿಗಳ ಭಾಷಾವಾರು ವಿಷಯಗಳನ್ನು ಇಟ್ಟುಕೊಂಡು ಚೆಲ್ಲಾಟವೇ…?

ಮೊದಲು ಶಿಕ್ಷಕರ ಜೀವನದಲ್ಲಿ ಚೆಲ್ಲಾಟವಾಡಿದರು. ಅಂದರೆ ಶಿಕ್ಷಕರು ಕೇವಲ ಪಾಠ ಮಾಡುವುದಲ್ಲದೆ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಥವಾ ಹೊರಸೆಳೆಯುವ ಕಾಯಕ ಯೋಗಿಗಳಂತೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಅಕ್ಷಯ ಪಾತ್ರೆಯಂತೆ ಕಾರ್ಯನಿರ್ವಹಿಸುವ ಅಂದ ಹಾಗೇ “ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ”.ವಿದ್ಯೆಯನ್ನು ಧಾರೆ ಎರೆಯುದರಲ್ಲಿ ಸೈ ಎನಿಸಿಕೊಂಡವರು ಗುರುಗಳು. ಅಲ್ಲದೆ ಶಿಕ್ಷಕರು ತಮ್ಮ ಪ್ರೀತಿಯ...
Loading posts...

All posts loaded

No more posts

error: Content is protected !!