ಕೆ ಎಫ್ ಡಿ ಸಿ ಕ್ವಾಟರ್ಸ್ ನಲ್ಲಿ ಮನೆಯ ಬಾಗಿಲು ಮುರಿದು ನಗ ನಾಣ್ಯ ಕಳ್ಳತನ , ಪ್ರಕರಣ ದಾಖಲು.

ಸುಳ್ಯ : ಸುಳ್ಯ ಕೆ ಎಫ್ ಡಿ ಸಿ ಕ್ವಾಟರ್ಸ್ ನಲ್ಲಿ ಮನೆಯಲ್ಲಿ ಇರಿಸಿದ್ದ ನಗ ನಾಣ್ಯವನ್ನು ಮನೆಯ ಬಾಗಿಲು ಮುರಿದು ಕಳ್ಳರು ಕದ್ದೋಯ್ದ ಘಟನೆ ವರದಿಯಾಗಿದೆ. ನಾಚಪ್ಪ.ಎ.ಸಿ ಎಂಬುವವರು ಕೆ.ಎಫ್.ಡಿ.ಸಿ ಕ್ವಾಟ್ರಸ್, ವಾಸ್ತವ್ಯವಿದ್ದು ಇವರು ದಿನಾಂಕ 29.04.2024 ರಂದು ಸಮಯ ಸುಮಾರು 09:00 ಗಂಟೆಗೆ ನಾಚಪ್ಪರು ಮತ್ತು ಅವರ ಪತ್ನಿ ಮನೆಗೆ ಬೀಗ ಹಾಕಿ...

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮಹೇಶ್ ಪುಚ್ಚಪ್ಪಾಡಿ ಆಯ್ಕೆ ಎಂ.ಡಿ.ವಿಜಯಕುಮಾ‌ರ್ ಉಪಾಧ್ಯಕ್ಷ

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾಗಿ ಗುತ್ತಿಗಾರು ಕಮಿಲದ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿಯಾಗಿ ಕೋಡಪದವು ಕೆಲಿಂಜದ ವೆಂಕಟಗಿರೀಶ್ ಸಿ. ಜಿ. ಆಯ್ಕೆಯಾಗಿದ್ದಾರೆ. ಪುತ್ತೂರಿನಲ್ಲಿ ನಡೆದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಎಂ. ಡಿ. ವಿಜಯಕುಮಾರ್ ಮಡಪ್ಪಾಡಿ ಹಾಗೂ ಜತೆ ಕಾರ್ಯದರ್ಶಿಯಾಗಿ...
Ad Widget

ಪಾತಿಕಲ್ಲು ಹರಿಶ್ಚಂದ್ರರ ಮನೆಗೆ ಧರ್ಮಪಾಲನಾಥ ಸ್ವಾಮೀಜಿ ಭೇಟಿ

ಮಂಡೆಕೋಲು ಶ್ರೀ ಮಹಾವಿಷ್ಣು ಮುರ್ತಿ ದೇವಸ್ಥಾನಕ್ಕೆ ಆಗಮಿಸಿದ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಯವರು ಕಾರ್ಯಕ್ರಮ ಮುಗಿಸಿ, ಪಾತಿಕಲ್ಲು ಹರಿಶ್ಚಂದ್ರ- ಶ್ರೀಮತಿ ವಿನುತಾ ದಂಪತಿ ಮನೆಗೆ ಭೇಟಿ ನೀಡಿದರು.ಸ್ವಾಮೀಜಿಯವರ ಬರಮಾಡಿಕೊಂಡ ಶ್ರೀಮತಿ ವಿನುತಾ- ಹರಿಶ್ಚಂದ್ರ ದಂಪತಿ ಹಾಗೂ‌ ಪುತ್ರ ಮಿಲನ್ ಪಾತಿಕಲ್ಲು ಪಾದಪೂಜೆ ಮಾಡಿದರು. ಈ‌ ವೇಳೆ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ...

ಕೆವಿಜಿ ಪಾಲಿಟೆಕ್ನಿಕ್ ನಿವೃತ್ತ ಉಪನ್ಯಾಸಕರಿಗೆ ಬೀಳ್ಕೊಡುಗೆ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕರಾಗಿ  ಸುಧೀರ್ಘ ಸೇವೆ ಸಲ್ಲಿಸಿ ಏಪ್ರಿಲ್ 30 ರಂದು ವಯೋ ನಿವೃತ್ತಿ ಹೊಂದಿದ ಶ್ರೀ ವೈ.ವಿ ಪಾಲಚಂದ್ರ ಇವರನ್ನು  ಸನ್ಮಾನಿಸಿ ಬೀಳ್ಕೊಡಲಾಯಿತು. ಪಾಲಿಟೆಕ್ನಿಕ್ ಪ್ರಾಂಶುಪಾಲರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್  ಯು.ಜೆ ನಿವೃತ್ತರನ್ನು  ಸನ್ಮಾನಿಸಿ ಮಾತನಾಡುತ್ತಾ   ಸಂಸ್ಥೆಗೆ ಮತ್ತು ವಿದ್ಯಾರ್ಥಿಗಳಿಗೆ ...

ಅರಂತೋಡು : ಅಣ್ಣನ ಸಾವಿನ ವಿಚಾರ ತಿಳಿದು ತಮ್ಮ ಕುಸಿದು ಬಿದ್ದು ಸಾವು, ಸಾವಿನಲ್ಲು ಜತೆಯಾದ ಸಹೋದರರು

ಅರಂತೋಡು: ಅಣ್ಣ ನಿಧನರಾದ ವಿಷಯ ತಿಳಿದು‌ ತಮ್ಮನು ಕುಸಿದು ಬಿದ್ದು ಮೃತಪಟ್ಟ ಧಾರುನ ಘಟನೆ ಇಂದು ನಡೆದಿದೆ.  ಅರಂತೋಡು ಗ್ರಾಮದ ನಿವಾಸಿ ಅಬ್ದುಲ್ಲ ರವರು (82) ರವರು ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಈ ವಿಷಯ ತಿಳಿಯುತಿದ್ದಂತೆ ಸಹೋದರ ಉದಯನಗರದ ನಿವಾಸಿ ಮಹಮ್ಮದ್ (76) ಅವರು ಮನೆಯಲ್ಲಿ ಕುಸಿದುಬಿದ್ದರು.ಮನೆಯವರು ತಕ್ಷಣ ಮಹಮ್ಮದ್ ರನ್ನು ಸುಳ್ಯ ಆಸ್ಪತ್ರೆಗೆ...

ಮರ ಕಡಿಯುವಾಗ ಕೇರ್ಪಳ ವ್ಯಕ್ತಿ ಕೊಂಬೆಯ ನಡುವೆ ಸಿಲುಕಿ ವ್ಯಕ್ತಿ ಸಾವು .

ಸುಳ್ಯ: ಸುಳ್ಯದ ಕುರುಂಜಿ ಗುಡ್ಡೆಯಲ್ಲಿ ವ್ಯಕ್ತಿಯೋರ್ವರು ಮರ ಕಡಿಯುವ ಸಂದರ್ಭದಲ್ಲಿ ಮರದ ಕೊಂಬೆಯ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ತಲುಪಿದ ಸಂದರ್ಭದಲ್ಲಿ ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ . ಮೃತ ವ್ಯಕ್ತಿಯನ್ನು ಚಿನ್ನಪ್ಪ ನಾಯ್ಕ್ ಕೇರ್ಪಳ್ಳ ಮನೆ ಎಂದು ತಿಳಿದು ಬಂದಿದ್ದು ಗಂಭೀರವಾಗಿ ಗಾಯಗೊಂಡ ವಿಚಾರ ತಿಳಿಯುತ್ತಿದ್ದಂತೆ ಅಚ್ಚು ಪ್ರಗತಿ ತೆರಳಿ ಅವರನ್ನು ಆಸ್ಪತ್ರೆಗೆ...

ಜಾನಕಿ ಅಂಬೆಕಲ್ಲು ನಿಧನ

ದೇವಚಳ್ಳ‌ ಗ್ರಾಮದ ಅಂಬೆಕಲ್ಲು ಮನೆತನದ ವಿಷ್ಣುಗೌಡ ಇವರ ಧರ್ಮಪತ್ನಿ ಜಾನಕಿ(72) ಎ.29ರಂದು ಕಡಿಮೆ ರಕ್ತದೊತ್ತಡ ಸಂಭವಿಸಿ ನಿಧನರಾದರು. ಮೃತರು ಪುತ್ರರಾದ ಬಾಲಚಂದ್ರ, ಜಗದೀಶ, ಮಧುಸೂಧನ, ಪುತ್ರಿ ಶೈಲಾ ದಿವಾಕರ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ,ಮೂರನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ.

ನಾನೆಂಬ ಅಹಂಕಾರ, ಆಸೆ ಇರುವಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ- ಒಡಿಯೂರು ಶ್ರೀ ಗುರುದೇವಾನಂದ ಮಹಾಸ್ವಾಮೀಜಿ ಸುಳ್ಯ: ನಾನು ಎಂಬ ಅಹಂಭಾವ ಹಾಗೂ ಆಸೆ ಇರುವಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಮಹಾಸ್ವಾಮೀಜಿ ಹೇಳಿದರು. ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ಆಯೋಜಿಸಲಾದ ಮೂರನೇ ದಿನದ...

ಚುನಾವಣೆ ಹಿನ್ನಲೆಯಲ್ಲಿ ಡೆಪಾಸಿಟ್ ಇರಿಸಿದ ಕೋವಿ ರೈತರಿಗೆ ಷರತ್ತಿನೊಂದಿಗೆ ನೀಡಲು ಆದೇಶ.

ಸುಳ್ಯ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಕೃಷಿಕರ ಉಪಯೋಗಕ್ಕೆ ನೀಡಿದ್ದ ಮತ್ತು ಆತ್ಮ ರಕ್ಷಣೆಗೆ ನೀಡಲಾದ ಗನ್ ಗಳನ್ನು ಡೆಪಾಸಿಟ್ ಇಡಲು ಆದೇಶಿಸಿದ್ದರು ಅಲ್ಲದೇ ಕೆಲವು ಕಡೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ಮನಗಂಡು ಜಿಲ್ಲಾಧಿಕಾರಿಗಳು ಇಂದು ಠೇವನಿ ಇರಿಸಲಾದ ಕೋವಿ ಮತ್ತು ಗನ್ ಗಳನ್ನು ಮರಳಿ ರೈತರಿಗೆ ನೀಡಲು ಷರತ್ತಿನೊಂದಿಗೆ ಆದೇಶಿಸಿದ್ದಾರೆ ಆದೇಶದಲ್ಲಿ ಏನಿದೆ ಷರತ್ತುಗಳು...

ಬೊಳುಬೈಲ್ ಬಳಿ ಕಾರು ಬೈಕ್ ಅಪಘಾತ ಪ್ರಕರಣ ಮಹಿಳೆಯನ್ನು ಮಂಗಳೂರಿಗೆ ವರ್ಗಾವಣೆ ಸಾಧ್ಯತೆ.

ಸುಳ್ಯ: ಸುಳ್ಯ ನಗರಸ ಬೋಳುಬೈಲ್ ಬಳಿಯಲ್ಲಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡವರನ್ನು ವಿಟ್ಲ ಮೂಲದ ಬಾಯರ್ ಎಂಬಲ್ಲಿಯ ಗುರು ಮತ್ತು ಶಶಿಕಲಾ ಎಂದು ಗುರುತಿಸಲಾಗಿದ್ದು ಗಾಯಗೊಂಡ ಮಹಿಳೆ ಶಶಿಕಲಾರಿಗೆ ತಲೆಗೆ ಗಾಯಗಳಾಗಿರುವ ಹಿನ್ನಲೆಯಲ್ಲಿ ಮಂಗಳೂರಿಗೆ ವರ್ಗಾವಣೆ ಸಾಧ್ಯೆಗಳಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
Loading posts...

All posts loaded

No more posts

error: Content is protected !!