- Sunday
- July 26th, 2026
ಸುಬ್ರಹ್ಮಣ್ಯ: ಸಿಡಿಲು ಬಡಿದು ವ್ಯಕ್ತಿಯೋರ್ವರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಮೇ .3 ರಂದು ಸಂಭವಿಸಿದೆ. ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್ (34) ಮೃತಪಟ್ಟವರು.ಮಳೆ ಆರಂಭಕ್ಕೂ ಮೊದಲು ಗುಡುಗು ಸಹಿತ ಗಾಳಿ ಬೀಸುತ್ತಿತ್ತು. ಮನೆಯಂಗಲದಲ್ಲಿ ಒಣಗಿಸಲು ಹಾಕಲಾಗಿದ್ದ ಅಡಿಕೆಯನ್ನು ಸೋಮಸುಂದರ್ ಅವರು ರಾಶಿ ಮಾಡುವ ವೇಳೆ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದರು ಕೂಡಲೇ...
ಸುಬ್ರಹ್ಮಣ್ಯ, ಮೇ 2: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಗೊಂಡಿರುವ ಎಸ್.ಜೆ.ಯೇಸುರಾಜ್ ಹಿಂದು ಧರ್ಮದವರು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.ಯೆಸ್.ಜೆ.ಯೇಸುರಾಜ್ ಅವರು ದಿನಾಂಕ 17.01.2005ರಂದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೌಕರರಾಗಿ ಆಯ್ಕೆ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಇವರ ಶಾಲಾ ದಾಖಲಾತಿ ಮತ್ತು ನೇಮಕಾತಿ ಸಂದರ್ಭದಲ್ಲಿ ಹಾಜರು...
ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನಲೆಯಲ್ಲಿ ಸುಳ್ಯ ಶಾಸಕಿ ನೇತೃತ್ವದಲ್ಲಿ ಉಪ್ಪುಂದ ಜನತಾ ಕಾಲನಿಗೆ ಭೇಟಿಮಾಡಿ ಚಾವಡಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಗುರುರಾಜ ಗಂಟಿಹೊಳಿ ಅವರ ಪತ್ನಿ ಅನುರಾಧ, ಪಕ್ಷದ ಜಿಲ್ಲಾ ಎಸ್ ಸಿ ಮೊರ್ಚಾ ಅಧ್ಯಕ್ಷ ಅಶೋಕ ಗಂಗೊಳ್ಳಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಬೈಂದೂರು, ದ.ಕ ಜಿಲ್ಲಾ ಸಾಮಾಜಿಕ ಜಾಲಾತಾಣ ಪ್ರಕೋಷ್ಠದ...
ಮನೆಗೆ ಅಳವಡಿಸಿದ ಸಿ.ಸಿ.ಕೆಮರಾ ಕಳವಾದ ಘಟನೆ ಬೆಳ್ಳಾರೆಯ ಕಾವಿನಮೂಲೆಯಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆಯೋರ್ವರು ಪೊಲೀಸ್ ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ಳಾರೆ ಗ್ರಾಮದಲ್ಲಿರುವ ಸ್ಥಿರಾಸ್ಥಿ ಸರ್ವೆ ನಂ ೨೧೪/೧ ರಲ್ಲಿ ೨.೫೩ ಎಕ್ರೆ, ಹಾಗೂ ಸರ್ವೆ ನಂ ೮೮/೧ಎ/ಎ೨ ರಲ್ಲಿ ೦.೦೬೦ ಎಕ್ರೆ ಜಮೀನು ಹಾಗೂ ಅದರಲ್ಲಿರುವ ಮನೆಗೆ ಸಿಸಿಟಿವಿ, ಅಳವಡಿಸಿ...
ನಿಂತಿಕಲ್ಲು ಕಡೆ ಹೋಗುತ್ತಿದ್ದ ಕಾರು ರಸ್ತೆಯಲ್ಲಿ ಸತ್ತಿದ್ದ ಬೆಕ್ಕನ್ನು ಕಂಡು ಬ್ರೇಕ್ ಹಾಕಿದ ಪರಿಣಾಮ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ ಎದುರಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಘಟನೆ ಮೇ.2 ರಂದು ಸಂಜೆ ಪಡ್ಪಿನಂಗಡಿಯಿಂದ ನಡೆದಿದೆ. ಪಡ್ಪಿನಂಗಡಿ ಮುಖ್ಯ ರಸ್ತೆಯಲ್ಲಿ ನಿಂತಿಕಲ್ಲು ಕಡೆ ಹೋಗುತ್ತಿದ್ದ ಕಾರು ರಸ್ತೆಯಲ್ಲಿ ಸತ್ತು ಬಿದ್ದಿದ್ದ ಬೆಕ್ಕನ್ನು ಕಂಡು ಅದನ್ನು...
ಚಾಲಕನ ನಿಯಂತ್ರಣ ತಪ್ಪಿ ಹೋಟೆಲೊಂದಕ್ಕೆ ಕಾರೊಂದು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ದಂಪತಿಗೆ ಗಂಭೀರ ಗಾಯವಾದ ಘಟನೆ ಮೇ.3ರಂದು ಬೆಳಿಗ್ಗೆ ಸಂಪಾಜೆಯಲ್ಲಿ ನಡೆದಿದೆ.ವಿಟ್ಲದ ಅಡ್ಯನಡ್ಕ ದಂಪತಿಗಳು ಕಾರಿನಲ್ಲಿ ಪುತ್ತೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ವೇಳೆ ಸಂಪಾಜೆಯ ಹೈವೆ ಹೋಟೆಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೋಟೆಲಿನ ಮುಂಭಾಗದ ಗೋಡೆಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಹಾಗೂ...
ಭಾರತ ಚುನಾವಣಾ ಆಯೋಗವು ಕರ್ನಾಟಕ ನೈರುತ್ಯ ಪದವೀಧರರ, ನೈರುತ್ಯ ಶಿಕ್ಷಕರ,ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಇದರ ಅನ್ವಯ ಕರ್ನಾಟಕ ನೈರುತ್ಯ ಪದವೀಧರರ , ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗಳ ನಿರಂತರ ಪರಿಷ್ಕರಣೆಯಡಿ ಹೊಸ ಅರ್ಜಿಗಳನ್ನು ನಾಮಪತ್ರಗಳ ಸ್ವೀಕೃತಿಯ ಕೊನೆಯ ದಿನಾಂಕದವರೆಗೆ ಸ್ವೀಕರಿಸಲು ಅವಕಾಶವಿದ್ದು ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಯಾವುದೇ ದೂರುಗಳಿಗೆ ಆಸ್ಪದ...
ಮಕ್ಕಳು ಮನೆಯಲ್ಲಿ ಅರಳುವ ಹೂವುಗಳು ಆಚಾರ ವಿಚಾರ ಸಂಸ್ಕೃತಿಗಳನ್ನು ಕಲಿಸಬೇಕು - ಅನುರಾಧ ಕುರುಂಜಿ. ಸುಳ್ಯ: ವಿಶ್ವ ಹಿಂದು ಪರಿಷದ್ ಬಜರಂಗದಳ ಸುಳ್ಯ ನಗರ ಇದರ ಆಶ್ರಯದಲ್ಲಿ ಎಪ್ರಿಲ್ ೨೦ ರಿಂದ ಮೇ ೨ ರ ವರೆಗೆ ನಡೆದ ಮಕ್ಕಳ ಬೇಸಿಗೆ ಶಿಬಿರವು ಸಂಪನ್ನವಾಯಿತು . ಶಿಬಿರದ ಸಮಾರೋಪ ಸಮಾರಂಭವು ಸುಳ್ಯ ಶ್ರೀ ಚೆನ್ನಕೇಶವ ದೇವಾಲಯದ...
ಅರಂತೋಡು ಗ್ರಾಮದ ಉಳುವಾರು ಎಂಬಲ್ಲಿ ಯುವಕನೋರ್ವ ಬಾವಿಗೆ ಇಳಿದ ಸಂದರ್ಭ ಮೇಲಿನಿಂದ ಕಲ್ಲು ಬಿದ್ದು ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ಅರಂತೋಡು ಗ್ರಾಮದ ಉಳುವಾರು ಮಲ್ಲಡ್ಕ ನಿವಾಸಿ ಯಶವಂತ ಗೌಡ ಅವರ ಪುತ್ರ ತರುಣ್ ಬಾವಿಗೆ ಇಳಿದ ವೇಳೆ ಈ ಘಟನೆ ನಡೆದಿದೆ. ತಲೆಗೆ ಗಂಭೀರ ಗಾಯಗೊಂಡ ತರುಣ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ...
ಸುಳ್ಯ ಬಸ್ಸು ನಿಲ್ದಾಣದಲ್ಲಿ ಮಹಿಳೆಯೊರ್ವರು ಕುಸಿದು ಬಿದ್ದು ತಲೆಗೆ ಗಾಯಗಳಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಇದೀಗ ನಡೆದಿದೆ . ಕುಸಿದ ಬಿದ್ದ ವೃದ್ದೆಯು ವಿಮಲ ಅರಂತೋಡು ಎಂದು ಹೇಳುತ್ತಿದ್ದು ಮನೆಯವರು ಅಥವಾ ಪರಿಚಯಸ್ಥರು ಕೂಡಲೇ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಬೇಕಾಗಿದೆ , ವೃದ್ದೆ ಕುಸಿದು ಬಿದ್ದಿರುವುದನ್ನು ಸ್ಥಳೀಯರು ಅಚ್ಚು ಪ್ರಗತಿರವರಿಗೆ ತಿಳಿಸಿದ ಮೇರೆಗೆ ಅವರು...
Loading posts...
All posts loaded
No more posts
