ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಅಮೂಲ್ಯ ಕುಟುಂಬ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರನಟಿ ಅಮೂಲ್ಯ ಮತ್ತು ಅವರ ಕುಟುಂಬ ಮೇ. 6ರಂದು ಸುಬ್ರಹ್ಮಣ್ಯ ದೇವರ ದರುಶನ ಪಡೆದರು. ಅಮೂಲ್ಯ ಕುಟುಂಬದ ಆಪ್ತರಾದ ಕಾಂಗ್ರೆಸ್ ಯುವ ನಾಯಕ ಸುಬ್ರಹ್ಮಣ್ಯ ತಾ.ಪಂ. ಕ್ಷೇತ್ರದ ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆಯವರು ಅಮೂಲ್ಯ ಕುಟುಂಬದ ಜೊತೆಗಿದ್ದು, ದೇವರ ದರ್ಶನ ಮಾಡಿಸಿ ಬೀಳ್ಕೊಟ್ಟರು.

ಉಪೇಂದ್ರ ಕಾಮತ್ ನಿಧನ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂತಾಪ

ಸುಳ್ಯದ ಹಿರಿಯ ಉದ್ಯಮಿಯಾದ ಜಾಲ್ಸೂರು ಅಡ್ಕಾರಿನ ಗೇರು ಬೀಜ ಫ್ಯಾಕ್ಟರಿ ಮಾಲಕ, ಬಿಜೆಪಿಯ ಹಿರಿಯ ಮುಖಂಡ ಹಾಗೂ ಜಾಲ್ಸೂರು ಮಂಡಲ ಪಂಚಾಯತ್‌ನ ಮಾಜಿ ಪ್ರಧಾನರಾಗಿದ್ದ ಉಪೇಂದ್ರ ಕಾಮತ್‌(9೦ ವ.) ರವರು ನಿಧನರಾದ ಹಿನ್ನೆಲೆಯಲ್ಲಿ ದ‌.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಂತಾಪವನ್ನು ವ್ಯಕ್ತಪಡಿಸಿದರು. ಬಿಜೆಪಿಯ...
Ad Widget

ಅಪ್ರಾಪ್ತೆಯ ಭಾವಚಿತ್ರ ತೆಗದ ಪ್ರಕರಣದಲ್ಲಿ ಅನ್ಯ ಕೋಮಿನ ಯುವಕನ ಬಂಧನ.

ಸುಳ್ಯ: ಅಪ್ರಾಪ್ತೆ ಯುವತಿಯ ಭಾವಚಿತ್ರ ಸೆರೆ ಹಿಡಿದ ಪ್ರಕರಣದಲ್ಲಿ ಇದೀಗ ಅನ್ಯ ಕೋಮಿನ ಯುವಕನ ಬಂಧನವಾದ ಘಟನೆ ಇದೀಗ ವರದಿಯಾಗಿದೆ . ಸುಳ್ಯದ ಅಪ್ರಾತ್ತೆ ಯುವತಿಯು ಸುಳ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಸುಳ್ಯದ ಏರಟೆಲ್ ಕಛೇರಿಯಲ್ಲಿ ರೀಚಾರ್ಜ್ ಮಾಡುವ ಸಲುವಾಗಿ ತೆರಳಿದಾಗ ಅಲ್ಲಿನ ಉದ್ಯೋಗಿಯಾದ ಮಾಫಜ್...

ಸುಳ್ಯ: ಪ್ರಾಕೃತಿಕ ವಿಕೋಪ ಮತ್ತು ಮಳೆ ಸಂದರ್ಭದಲ್ಲಿ ಸಮಸ್ಯೆಗಳನ್ನು ಎದುರಿಸಲು ಅಧಿಕಾರಿಗಳ ಸಭೆ, ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ

ಸುಳ್ಯ: ಸುಳ್ಯ ಮುಂದಿನ ತಿಂಗಳು ಮಳೆ ಬರುವ ಸಾಧ್ಯತೆಗಳು ಇದ್ದು ಈ ಹಿನ್ನಲೆಯಲ್ಲಿ ಸುಳ್ಯ ತಹಾಶೀಲ್ದಾರ್ ಜಿ ಮಂಜುನಾಥ್ ನೇತೃತ್ವದಲ್ಲಿ ತಾಲೂಕು ಕಛೇರಿ ಸಭಾಂಗಣದಲ್ಲಿ ಸಭೆ ನಡೆಯಿತು . ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕಿನ ಪ್ರತಿ ಇಲಾಖಾ ಅಧಿಕಾರಿಗಳು ಜನರಿಂದ ಯಾವುದೇ ದೂರುಗಳು ಬಂದಾಗ...

ಸುಳ್ಯದ ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ನಿಧನ

ಸುಳ್ಯದ ಹಿರಿಯ ಉದ್ಯಮಿಯಾದ ಜಾಲ್ಸೂರು ಅಡ್ಕಾರಿನ ಗೇರು ಬೀಜ ಫ್ಯಾಕ್ಟರಿ ಮಾಲಕ, ಬಿಜೆಪಿಯ ಹಿರಿಯ ಮುಖಂಡ ಹಾಗೂ ಜಾಲ್ಸೂರು ಮಂಡಲ ಪಂಚಾಯತ್‌ನ ಮಾಜಿ ಪ್ರಧಾನರಾಗಿದ್ದ ಉಪೇಂದ್ರ ಕಾಮತ್‌(9೦ ವ.) ರವರು ಇದೀಗ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ಪದ್ಮಾವತಿ ಕಾಮತ್, ಪುತ್ರ ಸುಧಾಕರ ಕಾಮತ್, ಸೊಸೆ, ಮೊಮ್ಮಕ್ಕಳನ್ನು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಒಳಾಂಗಣ ಸಭಾಭವನಕ್ಕೆ ಗುದ್ದಲಿ ಪೂಜೆ

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ 30 ಲಕ್ಷ  ವೆಚ್ಚದಲ್ಲಿ ಸಭಾಭವನ ನಿರ್ಮಾಣಕ್ಕೆ ಆಡಳಿತ ಮಂಡಳಿಯ ನಿರ್ದೇಶಕ ಗಣಪತಿ ಭಟ್ ಗುದ್ದಲಿ ಪೂಜೆಯ ದೀಪ ಬೆಳಗಿಸಿ, ಉಪಾಧ್ಯಕ್ಷ ಜತ್ತಪ್ಪ ಮಾಸ್ತರ್ ಅಳಿಕೆ ಗುದ್ದಲಿ ಪೂಜೆ ನೆರವೇರಿಸಿದರು.ಕಾಲೇಜಿನ ಸಂಚಾಲಕರು ಕೆ ಆರ್ ಗಂಗಾಧರ್, ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಆರ್ ಪದ್ಮನಾಭ ಮತ್ತು ಸದಸ್ಯರಾದ, ಪಿ.ಎನ್.ಗಣಪತಿಭಟ್ಜನಾರ್ದನ ಅಡ್ಕಬಳೆ, ಅಬ್ದುಲ್ಲಾ...

ಚಿನ್ನದ ಸರ ಕಳೆದುಹೋಗಿದೆ

ಸ್ಟೇಟ್ ಬ್ಯಾಂಕ್ - ಧರ್ಮಸ್ಥಳ  ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬಿ ಸಿ ರೋಡ್ , ಧರ್ಮಸ್ಥಳ ನಡುವೆ ಮಗುವಿನ ಚಿನ್ನದ ಸರ ಕಳೆದುಹೋಗಿರುತ್ತದೆ.‌ ಸಿಕ್ಕಿದವರು ಹಿಂತಿರುಗಿಸುವಂತೆ (ಭುವನ್ 9008644352) ಮನವಿ ಮಾಡಿದ್ದಾರೆ.‌

ಪಂಜ : 15 ನೇ ವರ್ಷದ ಭಜನಾ ತರಬೇತಿ ಶಿಬಿರ ಉದ್ಘಾಟನೆ

ಶ್ರೀ ಶಾರದಾಂಬ ಭಜನಾ ಮಂಡಳಿ  ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ಸುಳ್ಯ ತಾಲೂಕು,  ಪಂಜ ಮತ್ತು ನಿಂತಿಕಲ್ಲು ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 15ನೇ ವರ್ಷದ ಭಜನಾ ತರಬೇತಿ ಶಿಬಿರ ಉದ್ಘಾಟನೆ ಮೇ.5 ರಂದು ನಡೆಯಿತು.ಪಾಲ್ತಿಮಾರ್ ಶ್ರೀ ಮೂಕಾಂಬಿಕ ಕ್ಷೇತ್ರದ...

ಸುಳ್ಯ : ಪೈಪ್ ಲೈನ್ ಕಾಮಗಾರಿ ಸ್ಥಳದಲ್ಲಿ ಹೂತು ಹೋದ ಲಾರಿ

ಸುಳ್ಯದ ಎಪಿಎಂಸಿ ಎದುರು ಭಾಗದಲ್ಲಿ ಪೈಪ್ ಲೈನ್ ಕಾಮಗಾರಿ ನಡೆದ ಜಾಗದಲ್ಲಿ ಲಾರಿಯೊಂದು ಹೂತು ಹೋದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಬಳಿಕ ಕ್ರೇನ್ ಬಳಸಿ ಲಾರಿಯನ್ನು ಮೇಲಕ್ಕೆ ಎತ್ತಲಾಯಿತು. ಇನ್ನೂ ಮಳೆ ಆರಂಭವಾದಾಗ ಕೆಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ಘನ ವಾಹನ ಚಾಲಕ ಸಂಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವುದು...

ಪ್ರಗತಿ ಸ್ಟಡಿ ಸೆಂಟರ್‌ನ ಐದು ವಿದ್ಯಾರ್ಥಿನಿಯರು ಮೊಂಟೆಸರಿ ಶಿಕ್ಷಕಿಯಾಗಿ ಆಯ್ಕೆ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಂಟೆಸರಿ ಶಿಕ್ಷಕಿ ತರಬೇತಿಯ ೫ ವಿದ್ಯಾರ್ಥಿನಿಯರು ನರ್ಸರಿ ಶಿಕ್ಷಕಿಯರಾಗಿ ಆಯ್ಕೆಯಾಗಿರುತ್ತಾರೆ. ಮಾಡಾವು ನಿವಾಸಿಯಾದ ಶ್ರೀ ವಿಶ್ವನಾಥ ಮೊಗೇರ ಹಾಗೂ ಬೇಬಿ ದಂಪತಿಗಳ ಪುತ್ರಿಯಾದ ಶ್ರಾವ್ಯ ಇವರು ಮತ್ತು ಪುತ್ತೂರಿನ ದರ್ಬೆ ನಿವಾಸಿಯಾದ ಬಿ. ಜಗದೀಶ್ ಆಚಾರ್ಯ ಮತ್ತು ಶ್ರೀಮತಿ ಸರಿತಾ ದಂಪತಿಗಳ ಪುತ್ರಿಯಾದ ನಿಹಾರಿಕ ಇವರು ಶ್ರೀ ರಾಮಕೃಷ್ಣ ಸೇವಾ...
Loading posts...

All posts loaded

No more posts

error: Content is protected !!