ಸುಬ್ರಹ್ಮಣ್ಯ : ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ  ಪದಗ್ರಹಣ ಸಮಾರಂಭ ಹಾಗೂ ಚಾರ್ಟರ್ ನೈಟ್ ಸಮಾರಂಭವು  ಜು.01 ರಂದು ಏನೆಕಲ್ ನ ಸಂತೃಪ್ತಿ ಕೃಷಿ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಡಿಸ್ಟ್ರಿಕ್ಟ್ 317 ಡಿ ದ್ವಿತೀಯ ಉಪ ರಾಜ್ಯಪಾಲ ಹೆಚ್. ಎಂ. ತಾರಾನಾಥ್ ಪದಗ್ರಹಣ  ನೆರವೇರಿಸಿಕೊಟ್ಟರು. ಚಾರ್ಟರ್ ನೈಟ್ ಕಾರ್ಯಕ್ರಮವನ್ನು ಪೂರ್ವ ರಾಜ್ಯಪಾಲ...

ಸುಳ್ಯ : ಭೂನ್ಯಾಯ ಮಂಡಳಿಗೆ ಸದಸ್ಯರ ನೇಮಕಗೊಳಿಸಿದ ಸರಕಾರ

ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರನ್ನು ಸರಕಾರ ನೇಮಕ ಮಾಡಿದೆ. ಮಾಜಿ ತಾ.ಪಂ.ಸದಸ್ಯೆ ಶ್ರೀಮತಿ ಅನಸೂಯ ಪೆರುವಾಜೆ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜಾರಾಮ ಬೆಟ್ಟ ಹಾಗೂ ಐವರ್ನಾಡಿನ ಕಾಂಗ್ರೆಸ್ ಮುಂದಾಳು ಕರುಣಾಕರ ಮಡ್ತಿಲ, ನ್ಯಾಯವಾದಿ ಫವಾಜ್ ಕನಕಮಜಲು ಇವರುಗಳನ್ನು ಸದಸ್ಯರನ್ನು ರಾಜ್ಯ ಸರಕಾರ ಸದಸ್ಯರನ್ನಾಗಿ ನೇಮಕಗೊಳಿಸಿದ್ದು, ಪುತ್ತೂರು ಸಹಾಯಕ ಕಮಿಷನ‌ರ್ ಅಧ್ಯಕ್ಷರಾಗಿರುತ್ತಾರೆ. ತಹಶೀಲ್ದಾ‌ರ್ ಕಾರ್ಯದರ್ಶಿಯಾಗಿರುತ್ತಾರೆ.
Ad Widget

ವೈದ್ಯ ಪಿ.ರಾಮಕೃಷ್ಣ ಭಟ್ ಅವರಿಗೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸನ್ಮಾನ

ವೈದ್ಯರ ದಿನಾಚರಣೆ ಅಂಗವಾಗಿ ಬಳ್ಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯ ಪಿ.ರಾಮಕೃಷ್ಣ ಭಟ್ ಅವರನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು. ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್, ಪ್ರಮುಖರಾದ ಚಿದಾನಂದ ಕುಳ, ಭರತ್ ನೆಕ್ರಾಜೆ, ರವಿ ಕಕ್ಕೆಪದವು, ಗಿರಿಧರ ಸ್ಕಂದ, ಸೀತಾರಾಮ - ಎಣ್ಣೆಮಜಲು, ಮಾಯಿಲಪ್ಪ ಸಂಕೇಶ, ಶಿವರಾಮ್ ಏನೆಕಲ್ಲು, ಮೋಹನ್ ದಾಸ್‌ ಎಣ್ಣೆಮಜಲು, ಗೋಪಾಲ್ ಎಣ್ಣೆಮಜಲು,...

ಮೇನಾಲದಲ್ಲಿ ವಿಷ್ಣು ಯುವಕ ಮಂಡಲದಿಂದ ವನಮಹೋತ್ಸವ

ಅಜ್ಜಾವರ ಮೇನಾಲ ವಿಷ್ಣು ಯುವಕ ಮಂಡಲ ಇದರ ವತಿಯಿಂದ ಜು.1ರಂದು ವನಮಹೋತ್ಸವ ಕಾರ್ಯಕ್ರಮ ಮೇದಿನಡ್ಕದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ  ಪ್ರಸಾದ್ ರೈ ಮೇನಾಲ, ವಿಷ್ಣು ಯುವಕ ಮಂಡಲ ಅಧ್ಯಕ್ಷರಾದ ರಂಜಿತ್ ರೈ ಮೇನಾಲ, ಗೌರವ ಅಧ್ಯಕ್ಷರಾದ ಶ್ರೀಧರ ಮಣಿಯಾಣಿ, ವಿಷ್ಣು ಯುವಕ ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಾಲ್,ಕೋಶಾಧಿಕಾರಿಯಾದ ಕೀರ್ತನ್...

ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ, ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ, ನಡೆದ ಸುಮಾರು ₹1,48,000 ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ ₹ 30,000/- ಸೇರಿ ಒಟ್ಟು ₹1,78,000/- ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು,...

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ ಜು.05 ರಂದು ವಾರ್ಡ್ ಸಭೆ ಹಾಗೂ ಜು.08 ರಂದು ಗ್ರಾಮಸಭೆ

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನಲ್ಲಿ ಜುಲೈ 05 ರಂದು ವಾರ್ಡ್ ಸಭೆಗಳು ಹಾಗೂ ಜುಲೈ 08 ರಂದು ಗ್ರಾಮಸಭೆ ನಡೆಯಲಿದೆ. ವಾರ್ಡ್ ಸಭೆಗಳು ಜುಲೈ 05 ರಂದು ಪೂರ್ವಾಹ್ನ 10:00 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ, ಪೂರ್ವಾಹ್ನ 11:30ಕ್ಕೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಹಾಗೂ ಅಪರಾಹ್ನ 1:30ಕ್ಕೆ ಸ.ಕಿ.ಪ್ರಾ. ಶಾಲೆ ಕೊಡಿಯಾಲಬೈಲು ಇಲ್ಲಿ ನಡೆಯಲಿದೆ.ಗ್ರಾಮಸಭೆಯು...

ಪತ್ರಿಕ ದಿನಾಚರಣೆಯ ಶುಭಾಶಯ ಹೇಳಿದ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷರು

ಕುಕ್ಕೆ ಸುಬ್ರಹ್ಮಣ್ಯ :ಜು.1,ಜುಲೈ ಒಂದು ಪತ್ರಿಕಾ ದಿನಾಚರಣೆ ಈ ವಿಶೇಷ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಈಗಿನ ಅಧ್ಯಕ್ಷರಾದ ವಿಶ್ವನಾಥ್ ನಡುತೋಟ ಅವರು ನಾಡಿನ ಸಮಸ್ತ ದೃಶ್ಯ, ಡಿಜಿಟಲ್ ಹಾಗೂ ಪತ್ರಿಕಾವೃತ್ತಿಬಾಂಧವರಿಗೆ ಶುಭಾಶಯ ಹೇಳಿದ್ದಾರೆ.ಪತ್ರಿಕೆ,ದೃಶ್ಯ ಮಾಧ್ಯಮಗಳು ಜನಸಾಮಾನ್ಯರಿಗೆ ಸಹಕಾರಿಯಾಗಿರಬೇಕು, ಯಾವುದೇ ವರದಿ ಮಾಡುವ ಸಂದರ್ಭದಲ್ಲಿ ಸತ್ಯತೆಯನ್ನ ಅರಿತು ನಿಷ್ಪಕ್ಷಪಾತ ವರದಿ ಮಾಡಬೇಕು, ನಾವೆಲ್ಲ ಮಾಧ್ಯಮದವರು ...

ಜು.02: ನಾಳೆ ಸುಳ್ಯದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ಜುಲೈ 2 ಮಂಗಳವಾರದಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ಜಬಳೆ, ಡಿಪ್ಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ, ಮಂಡೆಕೋಲು ಫೀಡರುಗಳಲ್ಲಿ ಬೆಳಿಗ್ಗೆ 10:00...

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಟ್ಟದ ತರ್ತೀಲ್

ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಟ್ಟದ ತರ್ತೀಲ್(ಕುರ್ಆನ್) ಸ್ಪರ್ಧೆಯುದಿನಾಂಕ 30-06-2024 ಆದಿತ್ಯವಾರದಂದು ಸುಳ್ಯ ಸ್ಟೂಡೆಂಟ್ಸ್ ಸೆಂಟರ್ ನಲ್ಲಿ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಸಿದ್ದೀಕ್ ಹಿಮಮಿ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಳ್ಯ ಡಿವಿಷನ್ ನ 4 ಸೆಕ್ಟರ್ ಗಳ 20 ರಷ್ಟು ಯೂನಿಟ್ ಗಳಿಂದ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಾರ್ಥಿಗಳು ಭಾಗವಹಿಸಿದರು. ಅಂಕಪಟ್ಟಿಯಲ್ಲಿ ಸುಳ್ಯ ಸೆಕ್ಟರ್ ಪ್ರಥಮ ಹಾಗೂ...

ಚೋಮ ಮುಗೇರ ನಿಧನ

ದೇವಚಳ್ಳ ಗ್ರಾಮ ದ ಬಾಜಿನಡ್ಕ ನಿವಾಸಿ ಸುಳ್ಯದ ಎನ್ ಎಂ ಸಿ ಯಲ್ಲಿ ಎಟೆಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಚೋಮ ಮುಗೇರ ಜೂ. 30 ರಂದು ಸ್ವಗೃಹ ದಲ್ಲಿ ನಿಧನರಾದರು. ಮೃತರು  ಪತ್ನಿ, ನಾಲ್ವರು ಮಕ್ಕಳು ಹಾಗೂ ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!