- Saturday
- July 25th, 2026
ಆದೂರು : ಕರ್ನಾಟಕ ಕೇರಳ ಗಡಿ ಪ್ರದೇಶವಾದ ದೇಲಂಬಾಡಿ ಎಂಬಲ್ಲಿ ಒಂದು ದಿನದ ನವಜಾತ ಶಿಶುವನ್ನು ಶಾಲೆಯ ಹೊರಾಂಗಣದಲ್ಲಿ ಇರಿಸಿ ನಾಪತ್ತೆಯಾಗಿದ್ದರು. ಮಗುವಿನ ಅಳು ಕೇಳಿಸಿದ ನೆರೆ ಹೊರೆಯವರು, ಆದೂರು ಠಾಣೆಗೆ ಮಾಹಿತಿ ರವಾನಿಸಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ನವಜಾತ ಶಿಶುವನ್ನು ರಕ್ಷಿಸಿ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆಗೆ ಕರೆದೊಯ್ದು ಮಕ್ಕಳ ರಕ್ಷಣಾ ಸಮಿತಿಗೆ...
10 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಎಸ್. ಜಿ.ಎಸ್ ಇಂಟರ್ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರ ಕರ್ನಾಟಕ ಸರ್ಕಾರ ಇವರ ಸಹಕಾರದಲ್ಲಿ 14 ಜುಲಾಯಿ...
ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿರುವ ಪಂಜಿಕಲ್ಲು ಶಾಲೆಯ ಜಗಲಿಯಲ್ಲಿ ನವಜಾತ ಶಿಶುವೊಂದನ್ನು ಬಿಟ್ಟು ಪರಾರಿಯಾಗಿದ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಹತ್ತಿರದ ಮನೆಯವರಿಗೆ ಮಗು ಅಳುವ ಧ್ವನಿ ಕೇಳಿ ಬಂದಿದ್ದರಿಂದ ವಿಷಯ ಗೊತ್ತಾಗಿದೆ. ನವಜಾತ ಶಿಶು ಹೆಣ್ಣು ಮಗುವೆಂದು ಹೇಳಲಾಗುತ್ತಿದೆ. ಇದೀಗ ಮಗುವನ್ನು ಆದೂರು ಪೋಲೀಸರು ತೆಗೆದುಕೊಂಡು ಹೋಗಿದ್ದು ತನಿಖೆ ನಡೆಸುತ್ತಿದ್ದಾರೆ.
33 ಕೆವಿ ವಿದ್ಯುತ್ ಲೈನ್ ಗೆ ಇಂದು ಬೆಳಿಗ್ಗೆ ಕದಿಕಡ್ಕದಲ್ಲಿ ಬೃಹತ್ ಮರ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮಧ್ಯಾಹ್ನ ವೇಳೆಗೆ ಲೈನ್ ದುರಸ್ತಿಗೊಂಡಿತಾದರೂ ಮತ್ತೆ ಕೌಡಿಚಾರ್ ನಲ್ಲಿ ಮರ ಬಿದ್ದು ಪರಿಣಾಮವಾಗಿ ವಿದ್ಯುತ್ ಲೈನ್ ಗೆ ಹಾನಿಯಾಗಿದ್ದು ಸಂಜೆ ವೇಳೆಗೆ ಸರಿಯಾಗಬಹುದೆಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಜಾಲ್ಸೂರಿನ ಕದಿಕಡ್ಕದಲ್ಲಿ ಇಂದು ಬೆಳಿಗ್ಗೆ ಬೃಹತ್ ಮರ ಬಿದ್ದ ಪರಿಣಾಮ 33 ಕೆ.ವಿ. ವಿದ್ಯುತ್ ಲೈನ್ ಗೆ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಲೈನ್ ಮೇಲೆ ಬಿದ್ದ ಪರಿಣಾಮವಾಗಿ ವಿದ್ಯುತ್ ಲೈನ್ ಹಾಗೂ ಇನ್ಸೂಲೇಟರ್ ಗಳಿಗೆ ಹಾನಿಯಾಗಿದ್ದು ಮೆಸ್ಕಾಂ ಸಿಬ್ಬಂದಿಗಳು ಬಂದು ದುರಸ್ತಿ ಕಾರ್ಯ ಮಾಡುತ್ತಿದ್ದು ಮಧ್ಯಾಹ್ನದ ವೇಳೆಗೆ ಸರಿಯಾಗಬಹುದೆಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಪಾದೆ , ನರಿಮೊಗರು, ಪುತ್ತೂರು -ಇದರ ಆಶ್ರಯದಲ್ಲಿ ಹಾಗೂ ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ ಇದರ ಸಹಯೋಗದಲ್ಲಿ, ಅರೋಗ್ಯ ಭಾರತಿಯ ರಾಷ್ಟೀಯ ಯೋಗ ಪ್ರಮುಖ್ ಹಾಗೂ ಆಯುರ್ವೇದ ವೈದ್ಯ ಡಾ . ಟಿ . ಎನ್ . ಮಂಜುನಾಥ್ ಮತ್ತು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಯುರ್ವೇದ...
ಬೆಂಗಳೂರಿನಿಂದ ಅಡೂರು ಕಡೆಗೆ ತೆರಳುತ್ತಿದ್ದ ಕಾರೊಂದು (ka51MO 2420)ಅರಂತೋಡು ಸಮೀಪದ ಬಿಳಿಯಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿ ಮೇಲೆ ಹತ್ತಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಏರ್ ಬ್ಯಾಗ್ ತೆರೆದಿದ್ದರಿಂದ ಚಾಲಕ ಮತ್ತು ಸಹಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಬಲಭಾಗದ...
ಜು.31ರೊಳಗೆ ಮಾನ್ಸೂನ್ ಮೇಳ ಮುಂದುವರಿಕೆಸುಳ್ಯದ ಮುಖ್ಯ ರಸ್ತೆಯಲ್ಲಿರುವ ದ್ವಾರಕಾ ಹೋಟೆಲ್ನ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕುಂ..ಕುಂ.. ಪ್ಯಾಷನ್ನಲ್ಲಿ ರೈನ್ ಕೋಟ್ಗಳಿಗೆ ಭರ್ಜರಿ ಆಫರ್ ನೀಡಲಾಗುತ್ತಿದೆ. ಪ್ರತಿಷ್ಠಿತ ಕಂಪೆನಿಗಳಾದ ಝೀಲ್, ರಿಯಲ್, ಡಕ್ಬ್ಯಾಗ್, ಬಾಸ್ ಸೇರಿದಂತೆ ಆಲ್ ಬ್ರಾಂಡೆಂಡ್ ರೈನ್ಕೋಟು ಲಭ್ಯವಿದ್ದು ಖರೀದಿಯಲ್ಲಿ ಗ್ರಾಹಕಕರಿಗೆ ಶೇ. ೧೫ ರಿಂದ ಶೇ.೫೦ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.ಮಾನ್ಸೂನ್ ಮೇಳ : ಕುಂ..ಕುಂ… ಫ್ಯಾಶನ್ನಲ್ಲಿ...
ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಹಿರಿಯರು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ರಾಮಣ್ಣ ಗೌಡ ಕುಂಚಡ್ಕ ರವರು ಇಂದು ಬೆಳಗ್ಗೆ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಚಂದ್ರಾವತಿ ಹಾಗೂ ಓರ್ವ ಪುತ್ರ. ಶಿವಪ್ರಸಾದ್, ಓರ್ವ ಪುತ್ರಿ ಮಹಾಲಕ್ಷ್ಮಿ ಮತ್ತು ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
Loading posts...
All posts loaded
No more posts
