ಸಂಪಾಜೆ ನಿಯೋಗದಿಂದ ಕೇರಳದ ವಯನಾಡ್ ಬಳಿ ಪ್ರಾಕೃತಿಕ ವಿಕೋಪದಿಂದ ಹಾನಿಯದ ಮುಂಡಕಯ್  ಚೂರಲ್ ಮಾಲಾ ಭೇಟಿ

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ.ನೇತೃತ್ವದಲ್ಲಿ ಸಂಪಾಜೆಯಾ ಉಮ್ಮರ್ ತಾಜ್, ಹಾರೀಸ್ ಸಿ.ಕೆ,ಆರಾಫಾತ್ ಜೊತೆಗೆ ಕೊಝಿಕೋಡ್ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಅಡ್ವಕೆಟ್ ಆದಿಲ್ ವಿಕೋಪದಲ್ಲಿ ಹಾನಿಯದ ಸ್ಥಳಗಳಿಗೆ ಭೇಟಿ ಮಾಡಿ ನಂತರ ಯುವ ಕಾಂಗ್ರೆಸ್ ವತಿಯಿಂದ ಸಂತ್ರಸ್ತರಿಗೆ ನೀಡುತ್ತಿರುವ ಸವಲತ್ತುಗಳ ಕೇಂದ್ರಕ್ಕೆ ಭೇಟಿ ನೀಡಿ ಯುವ ಕಾಂಗ್ರೆಸ್ ರಾಷ್ಟ್ರೀಯ...

ಮಳೆಯಿಂದ ಹಾನಿಯಾದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ

ಸಮಾಜಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್,ಸಿ, ಮಹಾದೇವಪ್ಪ ರನ್ನು ಅವರ ನಿವಾಸದ ಕಛೇರಿಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿಯಾಗಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ಮಳೆಯಿಂದ ಹಾನಿಯಾದ ರಸ್ತೆಗಳಿಗೆ ವಿಶೇಷ ಅನುದಾನ ಒದಗಿಸುವಂತೆ‌ ಮತ್ತು ಸುಳ್ಯ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ವಿನಂತಿಸಿದರು.
Ad Widget

ಬಾಳೆಮಕ್ಕಿಯಲ್ಲಿ ನೆರಳಿಗೆ ನೆಟ್ಟ ಮರಗಳ ನಾಶ – ಕಿಡಿಗೇಡಿಗಳ ಪತ್ತೆಗಾಗಿ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ

ಸುಳ್ಯದ ಬಾಳೆಮಕ್ಕಿ ಬಳಿ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ನೆರಳಿಗಾಗಿ ನೆಟ್ಟಿದ್ದ 4 ಮರಗಳು ಬಲಿಯಾದ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಜೀಪು ಮತ್ತು ಟೆಂಪೊ ಚಾಲಕ ಮಾಲಕರ ಸಂಘದವರು ಇಂದು ಬೆಳಗ್ಗೆ ಕಲ್ಕುಡ ದೈವಸ್ಥಾನದಲ್ಲಿ ಕಿಡಿಗೇಡಿಗಳ ಪತ್ತೆಗಾಗಿ ಪ್ರಾರ್ಥಿಸಿಕೊಂಡರು.ದ್ವಾರಕಾ ಹೋಟೆಲ್ ಬಳಿ ರಾಜಶ್ರೀ ಕಾಂಪ್ಲೆಕ್ಸ್ ಎದುರುಗಡೆ ರಸ್ತೆ ಬದಿಯಲ್ಲಿ ನೆರಳಿಗಾಗಿ ಗಿಡಗಳನ್ನು ನೆಡಲಾಗಿತ್ತು. ಇದರಲ್ಲಿ ನಾಲ್ಕು ಮರಗಳನ್ನು...

ಬಿಜೆಪಿಯ ದೇವ ಬೂತ್ ಸಮಿತಿ ಅಧ್ಯಕ್ಷರಾಗಿ ಲಕ್ಷ್ಮೀಶ ಅಡ್ಡನಪಾರೆ – ಕಾರ್ಯದರ್ಶಿಯಾಗಿ ಮುಕುಂದ ಹಿರಿಯಡ್ಕ

ಭಾರತೀಯ ಜನತಾ ಪಾರ್ಟಿಯ ದೇವಚಳ್ಳ ಗ್ರಾಮದ ದೇವ ಬೂತ್ ನ ನೂತನ ಪದಾಧಿಕಾರಿಗಳ ಆಯ್ಕೆ ಆ.03 ರಂದು ನಡೆಯಿತು. ಅಧ್ಯಕ್ಷರಾಗಿ ಲಕ್ಷ್ಮೀಶ ಅಡ್ಡನಪಾರೆ, ಕಾರ್ಯದರ್ಶಿಯಾಗಿ ಮುಕುಂದ ಹಿರಿಯಡ್ಕ, ಬೂತ್ ಲೆವೆಲ್ ಏಜೆಂಟ್ ಗಳಾಗಿ ತೀರ್ಥೆಶ್ ಪಾರೆಪ್ಪಾಡಿ ಮತ್ತು ಶಿವಪ್ರಕಾಶ್ ಕಡಪಳ ಅಡ್ಡನಪಾರೆ, ಮಹಿಳಾ ಸದಸ್ಯರಾಗಿ ತಾರಾ ರವೀಂದ್ರ ಅಡ್ಡನಪಾರೆ, ಎಸ್.ಸಿ. ಘಟಕದಿಂದ ಬಾಬು ದೇವ ಕಾಲನಿ,...

ಕೊಯನಾಡಿನಲ್ಲಿ ಭೀಕರ ಅಪಘಾತ – ಬುಲ್ಲೆಟ್  ಸವಾರರು ಸ್ಥಳದಲ್ಲೇ ಸಾವು

ಸಂಪಾಜೆ ಸಮೀಪದ ಕೊಯನಾಡುನಲ್ಲಿ  ಬೈಕ್ ಅಪಘಾತ ದಿಂದ  ಬೈಕ್ ಸವಾರ‌ ಮತ್ತು ಹಿಂಬದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಇಬ್ಬರು ಮೈಸೂರು ಮೂಲದವರಾಗಿದ್ದಾರೆ.ದುರ್ಘಟನೆ ಭಾನುವಾರ ತಡರಾತ್ರಿ  ನಡೆದಿದೆ. ಇಂದು ಬೆಳಗ್ಗೆ ಅಪಘಾತ ನಡೆದಿರುವುದು  ಸ್ಥಳೀಯರ ಗಮನಕ್ಕೆ ಬಂದಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ರಾತ್ರಿ ವೇಗದಿಂದ ಬಂದ ಬೈಕ್ ರಸ್ತೆಯ  ಡಿವೈಡರ್...

ಗೂನಡ್ಕ : ತರಕಾರಿ ಸಾಗಾಟದ ಪಿಕಪ್ ಪಲ್ಟಿ – ಚಾಲಕನಿಗೆ ಗಂಭೀರ ಗಾಯ

ಸುಳ್ಯಕ್ಕೆ ತರಕಾರಿ ಹೇರಿಕೊಂಡು ಬರುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಗೂನಡ್ಕದಲ್ಲಿ ಪಲ್ಟಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ಹುಣುಸೂರು ಮೂಲದ ಪಿಕಪ್ ಚಾಲಕ ಮೋಹನ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ,ಅವರನ್ನು ಸಂಪಾಜೆಯ ಟರ್ಲಿ ಅಂಬ್ಯುಲೆನ್ಸ್ ಮೂಲಕ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ

ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದಲ್ಲಿ ಅಸ್ತಮಾ ಮತ್ತು ಇನ್ನಿತರ ಉಸಿರಾಟ ಸಂಬಂಧಿ ಖಾಯಿಲೆಗಳ ಉಚಿತ ತಪಾಸಣಾ ಶಿಬಿರ

ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದಲ್ಲಿ ಆಗಸ್ಟ್ 04 ಭಾನುವಾರದಂದು ಅಸ್ತಮಾ ಮತ್ತು ಇನ್ನಿತರ ಉಸಿರಾಟ ಸಂಬಂಧಿ ಖಾಯಿಲೆಗಳ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ತಜ್ಞ ವೈದ್ಯರಾದ ಡಾl ನರಸಿಂಹ ಶಾಸ್ತ್ರೀ ಮಂಗಳೂರು ಹಾಗೂ ಡಾ|ದೀಪಕ್ ಇವರು ಅಸ್ತಮಾ ಮತ್ತು ಇನ್ನಿತರ ಉಸಿರಾಟ ಸಂಬಂಧಿ ಖಾಯಿಲೆಗಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಿದರು. ಇದೇ ಸಂದರ್ಭದಲ್ಲಿ ಶ್ವಾಸಕೋಶದ ಪರೀಕ್ಷೆ...

ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಮತ್ತು ತರುಣ ಘಟಕದ ವತಿಯಿಂದ ಆಟಿ ಸಂಭ್ರಮ

ಸುಳ್ಯ ಗೌಡರ ಯುವ ಸೇವಾ ಸಂಘದ ಸಹಯೋಗದೊಂದಿಗೆ ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಘಟಕ ಮತ್ತು ತರುಣ ಘಟಕಗಳ ನೇತೃತ್ವದಲ್ಲಿ ಆಟಿಯ ಸಂಭ್ರಮ ಕಾರ್ಯಕ್ರಮ ಆ.೪ ರಂದು ಕೊಡಿಯಾಲಬೈಲಿನಲ್ಲಿರುವ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಿಗ್ಗೆ ನಿವೃತ್ತ ಅಧ್ಯಾಪಕರಾದ ಕುದ್ದಾಜೆ ಸೋಮಯ್ಯ ಗೌಡರು ಹಾಗೂ ಅವರ ಪತ್ನಿ ಶ್ರೀಮತಿ ಪದ್ಮಾವತಿ ಸೋಮಯ್ಯ...

ಸುಳ್ಯ : ಹಲವರಿಗೆ ಉಪಕಾರಿ ಕೆಲವರಿಗೆ ತೊಂದರೆಯಾಗಿದ್ದ ಮರಗಳು ಕಿಡಿಗೇಡಿಗಳ ಕೃತ್ಯಕ್ಕೆ ಬಲಿ – ಪೋಲೀಸರ ತನಿಖೆಯಿಂದಷ್ಟೇ ಸತ್ಯ ಬಯಲಾಗಬೇಕಿದೆ.

ಸುಳ್ಯದ ಬಾಳೆಮಕ್ಕಿ ಬಳಿ ಹಲವರಿಗೆ ನೆರಳು ನೀಡುತ್ತಿದ್ದ ಹಾಗೂ ಕೆಲವರಿಗೆ ಅಡ್ಡವಾಗಿದ್ದ ಮರಗಳು ಇಂದು ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾಗಿದ್ದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಳೆಮಕ್ಕಿಯ ರಾಜಶ್ರೀ ಕಾಂಪ್ಲೆಕ್ಸ್ ಎದುರುಗಡೆ ರಸ್ತೆ ಜೀಪು ಪಾರ್ಕಿಂಗ್ ನಲ್ಲಿ ನೆರಳಿಗಾಗಿ ನೆಟ್ಟಿದ್ದ ಗಿಡ ಚೆನ್ನಾಗಿ ಬೆಳೆದು ನೆರಳು ನೀಡುವ ಹಂತ ತಲುಪಿತ್ತು. ಇದರಲ್ಲಿ ನಾಲ್ಕು ಮರಗಳನ್ನು ಯಾರೋ ದುಷ್ಕರ್ಮಿಗಳು ಹೆಕ್ಸೊ...

*ಪ್ರಕೃತಿ ವಿಕೋಪದ ಮುನ್ಸೂಚನೆ ಪ್ರಾಣಿ ಪಕ್ಷಿಗಳಿಗೆ ಮೊದಲೇ ತಿಳಿದುಬರುತ್ತದೆ*

✍️ ಭಾಸ್ಕರ ಗೌಡ ಜೋಗಿಬೆಟ್ಟು ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನರ ಜೀವನ ಅತಂತ್ರವಾಗಿದೆ. ಹಲವು ಕಡೆಗಳಲ್ಲಿ ಭೂ ಕುಸಿತದಂತಹ ಪ್ರಕೃತಿ ವಿಕೋಪಗಳು ಆಗುತ್ತಿವೆ. ಮುಖ್ಯವಾಗಿ ಶಿರಾಡಿ ಘಾಟ್, ಶಿರೂರು , ವಯನಾಡು ಮುಂತಾದ ಕಡೆಗಳಲ್ಲಿ ಗಂಭೀರವಾದ ಸಮಸ್ಯೆಗಳಾಗಿವೆ. ಇಂತಹ ಪ್ರಕೃತಿ ವಿಕೋಪ ಆಗುವ ಮೊದಲೇ ಪ್ರಾಣಿ ಪಕ್ಷಿಗಳಿಗೆ ಮುನ್ಸೂಚನೆ ಇರುತ್ತದೆ ಎಂಬುವುದಕ್ಕೆ ಕೆಲವೊಂದು ಘಟನೆಗಳು ಪುಷ್ಠಿ...
Loading posts...

All posts loaded

No more posts

error: Content is protected !!