ವಿಟ್ಲದಲ್ಲಿ ಕೊರಗಜ್ಜನಿಗೆ ಅವಮಾನ ಪ್ರಕರಣ- ಬೆಳ್ಳಾರೆ ವಿಹಿಂಪ ವತಿಯಿಂದ ಖಂಡನೆ, ಕುಂಡಡ್ಕ ಹಾಗೂ ಕೊಲ್ಯ ಕೊರಗಜ್ಜ ದೈವಸ್ಥಾನದಲ್ಲಿ ಪ್ರಾರ್ಥನೆ

ವಿಟ್ಲದ ಸಾಲೆತ್ತೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕೊರಗಜ್ಜ ದೈವದ ಅವಮಾನವಾಗಿದ್ದು, ಈ ಹಿನ್ನೆಲೆಯಲ್ಲಿ ವಿಹಿಂಪ ಬಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆಯ ವತಿಯಿಂದ ವ್ಯಾಪಕ ಖಂಡನೆ ವ್ಯಕ್ತಪಡಿಸಲಾಯಿತು. ಕೃತ್ಯವನ್ನು ಖಂಡಿಸಿ ಪೆರುವಾಜೆಯ ಕುಂಡಡ್ಕ ಹಾಗೂ ಕೊಲ್ಯ ಕೊರಗಜ್ಜ ದೈವಸ್ಥಾನಗಳಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಮುಖ್ಯಸ್ಥರು ಹಾಗೂ ಬೆಳ್ಳಾರೆ ವಿಹಿಂಪ ಪ್ರಮುಖರು,...

ಇನ್ ಸ್ಪೈರ್ ಅವಾರ್ಡ್ : ಎಣ್ಮೂರು ಪ್ರೌಢ ಶಾಲೆಯ ಐದು ವಿದ್ಯಾರ್ಥಿಗಳು ಆಯ್ಕೆ

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಲ್ಪಡುತ್ತಿರುವ ಇನ್ ಸ್ಪೈರ್ ಅವಾರ್ಡಿಗೆ ಸರ್ಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿನ ಐದು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.ಮುರುಳ್ಯ ಗ್ರಾಮದ ನೂಜಾಡಿ ನಿವಾಸಿಗಳಾದ ವೆಂಕಪ್ಪ ಗೌಡ ಮತ್ತು ಶ್ರೀಮತಿ ಕಮಲ ದಂಪತಿಗಳ ಪುತ್ರ ಪವನ್ ಕುಮಾರ್ (10ನೇತರಗತಿ), ಅಲೆಕ್ಕಾಡಿ ಪೂದೆಯ ಶಿವರಾಮ ಮತ್ತು ಶ್ರೀಮತಿ ಜಯಲಕ್ಷ್ಮೀ ದಂಪತಿಗಳ ಪುತ್ರ ಗಗನ್.ಪಿ.(8ನೇ...
Ad Widget

ಸಹಕಾರಿ ಯೂನಿಯನ್ ನೂತನ ಕಾರ್ಯದರ್ಶಿಯಾಗಿ ವಾಸುದೇವ ನಾಯಕ್

ಸುಳ್ಯ ತಾಲೂಕು ಸಹಕಾರಿ ಯೂನಿಯನ್ ನಿ. ಇದರ ಗೌರವ ಕಾರ್ಯದರ್ಶಿ ವೆಂಕಟ್ರಮಣ ಮುಳ್ಯ ಇವರಿಗೆ ಬೀಳ್ಕೊಡುಗೆ ಹಾಗೂ ನೂತನ ಕಾರ್ಯದರ್ಶಿ ವಾಸುದೇವ ನಾಯಕ್ ಇವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಸುಳ್ಯ ಸಿ ಎ ಬ್ಯಾಂಕ್ ನ ಎ.ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿಸಲಾಯಿತು. ವೆಂಕಟ್ರಮಣ ಮುಳ್ಯ ಇವರು ಕಳೆದ 18 ವರ್ಷಗಳಿಂದ ಸುಳ್ಯ ತಾಲ್ಲೂಕು ಸಹಕಾರ ಯೂನಿಯನ್...

ಜ.10: ನಿಂತಿಕಲ್ಲು ಸಾನಿಧ್ಯ ಸಂಕೀರ್ಣದಲ್ಲಿ ಶ್ರೀ ಕಾಳಿಕಾಂಬಾ ಅಲ್ಯೂಮಿನಿಯಂ ವರ್ಕ್ಸ್ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ

ನಿಂತಿಕಲ್ಲು ಸಮೀಪದ ಎಣ್ಮೂರಿನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಕಾಳಿಕಾಂಬಾ ಫ್ಲೈವುಡ್ & ಹಾರ್ಡ್ ವೇರ್ ಅಲ್ಯೂಮಿನಿಯಂ ವರ್ಕ್ಸ್ ಸಂಸ್ಥೆಯು ನಿಂತಿಕಲ್ಲಿನ ಸಾನಿಧ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜ.10ರಂದು ಶುಭಾರಂಭಗೊಳ್ಳಲಿದೆ. ಬೆಳಗ್ಗೆ 9.00 ಗಂಟೆಗೆ ಸರಿಯಾಗಿ ಸಂಸ್ಥೆಯು ಶುಭಾರಂಭಗೊಳ್ಳಲಿದೆ. ಸಂಸ್ಥೆಯಲ್ಲಿ ಫ್ಲೈವುಡ್, ಸನ್ ಮೇಕ್ ಡೋರ್, ಬಿಜಾಗ್ರ, ಡೋರ್ ಲಾಕ್ಸ್, ಬೀಡಿಂಗ್, ಫೆವಿಕಾಲ್, ಟಚ್ ವುಡ್ ಹಾಗೂ ಇನ್ನಿತರ ಹಾರ್ಡ್...

ಕೇಶದಾನ ಮಾಡುವ ಮೂಲಕ ಸಂತೃಪ್ತಿ ಕಂಡ ಮಹೇಶ್ ಪೇರಾಲು

ಕ್ಯಾನ್ಸರ್ ರೋಗಿಗಳಿಗೆ ತಾನು ಎರಡು ವರ್ಷಗಳಿಂದ ಪ್ರೀತಿಯಿಂದ ಬೆಳೆಸಿದ ತಲೆಕೂದಲನ್ನು ದಾನ ಮಾಡುವ ಮೂಲಕ ಮಂಡೆಕೋಲು ಗ್ರಾಮದ ಮಹೇಶ್ ಪೇರಾಲು ನೋವಿನಲ್ಲಿರುವ ಕ್ಯಾನ್ಸರ್ ಪೀಡಿತರಿಗೆ ಚೈತನ್ಯ ತುಂಬಿದ್ದಾರೆ. ಪುತ್ತೂರಿನ ಮುಳಿಯ ಫೌಂಡೇಷನ್ ಮುಖಾಂತರ ಸ್ವ ಇಚ್ಛೆಯಿಂದ ಕೇಶದಾನ ಮಾಡಿದ್ದಾರೆ. ಜ.7ರಂದು ಕೇಶದಾನ ಮಾಡಿರುವ ಇವರಿಗೆ ಮುಳಿಯ ಫೌಂಡೇಶನ್ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಇವರು...

ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ – ಹೂ ವ್ಯಾಪಾರಿಯ ಪುತ್ರಿ ದೀಕ್ಷಾ ಎಲಿಮಲೆ ಸಾಧನೆ

ಹೂ ವ್ಯಾಪಾರಿಯ ಪುತ್ರಿ ದೀಕ್ಷಾ ಎಲಿಮಲೆ ಇವರು ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ್ದಾಳೆ. ಭುನಮನಸನದಲ್ಲಿ 1ಗಂಟೆ 10 ಸೆಂಕೆಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾಳೆ. ಕಳೆದ 8 ತಿಂಗಳಿಂದ ಯೋಗಾಭ್ಯಾಸವನ್ನು ಆನ್ಲೈನ್ ಮೂಲಕ ನಿರಂತರ ಯೋಗ ಕೇಂದ್ರ ಸುಳ್ಯ ಇದರ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರ...

ದೇವ : ಕ್ರೀಡೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ

ಗೆಳೆಯರ ಬಳಗ ದೇವ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲ ದೇವ ಇವುಗಳ ಜಂಟಿ ಆಶ್ರಯದಲ್ಲಿ ಕ್ರೀಡೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ ಜ. 2 ರಂದು ದೇವ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಭೂಸೇನಾ ಯೋಧ ವಿನಯಕುಮಾರ್ ಹಿರಿಯಡ್ಕ ಉದ್ಘಾಟಿಸಿದರು. ಪುರುಷರಿಗೆ, ಮಹಿಳೆಯರಿಗೆ,ಸಾರ್ವಜನಿಕ ಮಕ್ಕಳಿಗೆ, ಶಾಲಾಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ ಆಟೋಟ ಸ್ಪರ್ಧಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದ...

ಪೆರಾಜೆಯ ವ್ಯಕ್ತಿ ಆನೆ ದಾಳಿಗೆ ಬಲಿ

ಕೊಡಗಿನ ಮದೆ ಗ್ರಾಮದ ಬೆಟ್ಟತ್ತೂರು ಭಾಗದಲ್ಲಿ ತೋಟದ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತರನ್ನು ಪೆರಾಜೆಯ ಶಿವಪ್ರಸಾದ್ ಎಂದು ಗುರುತಿಸಲಾಗಿದೆ.

ಅತಿಥಿ ಉಪನ್ಯಾಸಕರ ಮುಷ್ಕರದಿಂದ ವಿದ್ಯಾರ್ಥಿಗಳಿಗಾಗಿರುವ ಸಮಸ್ಯೆ ಸರಿಪಡಿಸಲು ಸಚಿವರಿಗೆ ಮನವಿ

ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ತರಗತಿ ನಡೆಯದ ಕಾರಣ ತೊಂದರೆಯಾಗುತ್ತಿದೆ ಹಾಗೂ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ, ತರಗತಿಗಳು ಯಥಾವತ್ತಾಗಿ ನಡೆಯಬೇಕೆಂದು ಒತ್ತಾಯಿಸಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತಹಶೀಲ್ದಾರ್ ಅನಿತಾಲಕ್ಷ್ಮೀ ಹಾಗೂ ಸಚಿವರುಗಳಾದ ಎಸ್.ಅಂಗಾರ ಮತ್ತು ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಅರಂಬೂರು: ವಾತ್ಸಲ್ಯ ಕಿಟ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಂಜಿಕಾರು ತಿಮ್ಮಪ್ಪ ಎಂಬವರ ಮಗ ನಿಕ್ಷಿತ್ ರಿಗೆ ಮಂಜೂರಾದ ಮೂಲಭೂತ ಸೌಲಭ್ಯ ವಾತ್ಸಲ್ಯ ಕಿಟ್ ಅನ್ನು ಅರಂಬೂರು ಒಕ್ಕೂಟ ಉಪಾಧ್ಯಕ್ಷರಾದ ವಿಶ್ವನಾಥ್ ವಿತರಿಸಿದರು. ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ ಪ್ರತಿ ತಿಂಗಳು ಧರ್ಮಸ್ಥಳದಿಂದ 1000/- ಸಹಾಯಧನವನ್ನು ನೀಡಲಾಗುತ್ತಿದೆ. ಈ ಸಂದರ್ಭ ಸಂಪಾಜೆ ವಲಯ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ,...
Loading posts...

All posts loaded

No more posts

error: Content is protected !!