ಕುಕ್ಕೆ ಸುಬ್ರಹ್ಮಣ್ಯ : ನಟ ರಾಕಿಂಗ್ ಸ್ಟಾರ್ ಯಶ್ ಭೇಟಿ

ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ರವರು ಎ.10 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.ಶೀಘ್ರ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಕೆ.ಜಿ.ಎಫ್-2 ಚಿತ್ರತಂಡದ ಜೊತೆಯಲ್ಲಿ ಯಶ್ ಕ್ಷೇತ್ರಕ್ಕೆ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಚಿತ್ರತಂಡಕ್ಕೆ ಸ್ವಾಗತಿಸಿದರು. ನಂತರ ಯಶ್ ಹಾಗೂ ಸಂಗಡಿಗರು ಕ್ಷೇತ್ರದಲ್ಲಿ...

ಕವಿ ಆರೋಕ್ಯಸ್ವಾಮಿಯಿಂದ ಯುವ ಕವಯಿತ್ರಿ ಅನನ್ಯ ಸುಬ್ರಹ್ಮಣ್ಯ ಭೇಟಿ

ಕವನ, ಗೀತೆರಚನೆ, ಸಂಭಾಷಣೆಗಾರರಾದ ಎಸ್ ಅರೋಕ್ಯಸ್ವಾಮಿಯವರನ್ನು ಸುಬ್ರಹ್ಮಣ್ಯದ ಯುವ ಕವಯಿತ್ರಿ ಅನನ್ಯ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಬರೆದಿರುವ ಪುಸ್ತಕ ಓ ನನ್ನ ಗೆಳತಿ ಎರಡು ಹೃದಯಗಳ ಸಮ್ಮಿಲನ ‌ಪುಸ್ತಕವನ್ನು ನೀಡಿ ಗೌರವಿಸಿದ್ದಾರೆ.ಈ ಸಂದರ್ಭದಲ್ಲಿ ಇವರ ಸಾಹಿತ್ಯ ಬಳಗದವರು ಉಪಸ್ಥಿತರಿದ್ದರು.
Ad Widget

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಳ್ಯ ತಾಲೂಕು ಘಟಕಾಧ್ಯಕ್ಷರಾಗಿ ಸದಾಶಿವ ಪೂಜಾರಿ ಬೆಳ್ಳಾರೆ ನೇಮಕ

ಪ್ರಾದೇಶಿಕ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ "ಶೀಲ ಮತ್ತು ಶಿಸ್ತಿ"ನ ತಳಹದಿಯಲ್ಲಿ ಹುಟ್ಟಿಕೊಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸುಳ್ಯ ತಾಲೂಕು ಘಟಕವು ಸ್ಥಾಪನೆಯಾಗಿದ್ದು ಇದರ ಅಧ್ಯಕ್ಷರಾಗಿ ಬೆಳ್ಳಾರೆ ಹೋಬಳಿಯ ಜನಪ್ರಿಯ ಸಮಾಜಸೇವಕರಾದ ಸದಾಶಿವ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ. ಇವರನ್ನು ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಮಾನ್ಯ ಸುಬ್ರಹ್ಮಣ್ಯ ಭಟ್ ಬೆಳ್ತಂಗಡಿರವರ ಸೂಚನೆಯಂತೆ ಕರ್ನಾಟಕ ರಾಷ್ಟ್ರ ಸಮಿತಿ...

ಕಳಂಜ ಗ್ರಾಮದ ಪಂಜಿಗಾರು – ಮಣಿಮಜಲು ಸಂಪರ್ಕ ರಸ್ತೆಯ ಸೇತುವೆಯ ಗುದ್ದಲಿ ಪೂಜೆ

ಕಳಂಜ ಗ್ರಾಮದ ಪಂಜಿಗಾರು - ಮಣಿಮಜಲು ಸಂಪರ್ಕ ರಸ್ತೆಯ ಸೇತುವೆಯ ಗುದ್ದಲಿ ಪೂಜೆಯು ಏ.09ರಂದು ನಡೆಯಿತು. ಸಚಿವ ಎಸ್.ಅಂಗಾರರವರು ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಕಳಂಜ ಗ್ರಾಮ ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಪ್ರೇಮಲತಾ ಮಣಿಮಜಲು, ವಿಧಾನಪರಿಷತ್ ಮಾಜಿ ಸದಸ್ಯರಾದ ಅಣ್ಣಾ ವಿನಯಚಂದ್ರ, ಪ್ರಮುಖರಾದ ಹರೀಶ್ ಕಂಜಿಪಿಲಿ, ಶ್ರೀನಾಥ್ ರೈ...

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಧನಂಜಯ ಅಡ್ಪಂಗಾಯ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ 40 ಉಪಾಧ್ಯಕ್ಷರು ಮತ್ತು 109 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ ಎಂದು ಎಐಸಿಸಿ ಜನರಲ್ ಸೆಕ್ರೆಟರಿಕೆ.ಸಿ.ವೇಣುಗೋಪಾಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌ ಸುಳ್ಯದಿಂದ ಧನಂಜಯ ಅಡ್ಪಂಗಾಯ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.ಧನಂಜಯ ಅಡ್ಪಂಗಾಯ ರವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ,...

ಕಳಂಜ ಗ್ರಾಮದ ಪಾಂಡಿಪಾಲ್- ತಂಟೆಪ್ಪಾಡಿ- ಕಿಲಂಗೋಡಿ ರಸ್ತೆಯ 50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಕಳಂಜ ಗ್ರಾಮದ ಪಾಂಡಿಪಾಲ್- ತಂಟೆಪ್ಪಾಡಿ- ಕೀಲಂಗೋಡಿ ರಸ್ತೆಯ 50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮವು ಏ.09ರಂದು ನಡೆಯಿತು. ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರು ಹಿರಿಯರಾದ ಅಣ್ಣಾ ವಿನಯಚಂದ್ರ, ಪ್ರಮುಖರಾದ ಹರೀಶ್ ಕಂಜಿಪಿಲಿ,...

ಏಪ್ರಿಲ್ 22 ರಿಂದ 26 ರವರೆಗೆ ಕುಕ್ಕುಜಡ್ಕ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಬಲ್ಲಾಳರು ಆರಾಧನೆ ಮಾಡಿಕೊಂಡು ಬರುತ್ತಿದ್ದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಕ್ಕುಜಡ್ಕದ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಸುಮಾರು 1 ವರೆ ಕೋಟಿಗೂ ಮಿಕ್ಕಿದ ಖರ್ಚಿನಲ್ಲಿ ಸಂಪೂರ್ಣ ಕೆಲಸ ಕಾರ್ಯ ನಡೆದು ಏ. 22 ರಿಂದ ಪ್ರಾರಂಭವಾಗಿ ಏ. 26 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿದೆ ಬ್ರಹ್ಮಕಲಶೋತ್ಸವ...

ಕಲ್ಲುಗುಂಡಿ : ಅಪಘಾತದಲ್ಲಿ ಭೀಮಗುಳಿ ಕುಟುಂಬದ ನಾಲ್ವರು ದುರ್ಮರಣ ಪ್ರಕರಣ – ಏಳು ವರ್ಷದ ಬಳಿಕ ಟಿಪ್ಪರ್ ಚಾಲಕ ಮತ್ತು ಮಾಲಕನಿಗೆ ಎರಡು ವರ್ಷ ಜೈಲು ಶಿಕ್ಷೆ

ಕಲ್ಲುಗುಂಡಿ ಸಮೀಪದ ಕಡೆಪಾಲ ಎಂಬಲ್ಲಿ ಏಳು ವರ್ಷಗಳ ಹಿಂದೆ ನಡೆದ ಕಾರು ಮತ್ತು ಟಿಪ್ಪರ್ ಅಪಘಾತ ಪ್ರಕರಣದಲ್ಲಿ ಪಂಜ ಭೀಮಗುಳಿ ಕುಟುಂಬದ ಒಂದೇ ಮನೆಯ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ಟಿಪ್ಪರ್ ಚಾಲಕ ಹಾಗೂ ಮಾಲಕರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ತೀರ್ಪು...

ಆರೋಗ್ಯವನ್ನು ನಿಸರ್ಗ ಮೂಲವಾಗಿಸಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತಿದೆ ಡಾ. ಚೂಂತಾರು ಅವರು ಬರೆದ “ಸ್ವಾದ” ಆಹಾರ ಸಂಹಿತೆ

ಇತ್ತೀಚೆಗೆ ಪ್ರಕಟವಾಗಿರುವ ಡಾ. ಮುರಳೀಮೋಹನ ಚೂಂತಾರು ಅವರ 'ಸ್ವಾದ - ಆಹಾರಸಂಹಿತೆ' ಎಂಬ ಕೃತಿಯು ಸಾವಿರಾರು ವರ್ಷಗಳಿಂದಲೂ ಭಾರತೀಯರ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬಂದ ನಿಸರ್ಗಮೂಲ ಪದ್ಧತಿಯಾದ ಶಾಕಾಹಾರ, ಮಿತಾಹಾರ, ಪಥ್ಯ, ಉಪವಾಸ ಮುಂತಾದ ಆಯುರ್ವೇದ ಸಿದ್ಧಾಂತಗಳನ್ನು ಮೆಲುದನಿಯಿಂದ ಮಂಡಿಸುತ್ತ, ಜೊತೆಗೆ ನಿರೋಗಿಯಾಗಿರಲು ಅಗತ್ಯವಾದ ಆಹಾರಕ್ರಮವನ್ನು ವಿವರಿಸುತ್ತ, ಕಾಲಕ್ಕೆ ತಕ್ಕಂತೆ ಆಧುನಿಕ ವೈದ್ಯವಿಜ್ಞಾನದ ಸಂತುಲಿತ ಅಳವಡಿಕೆಯಿಂದ ಹೇಗೆ...

ಸಂಚಾರಿ ಬದುಕು

ಸಂಚಾರಿ ಈ ಬದುಕು ಸಾಗುತಿದೆ ಎಲ್ಲಿಯೂ ನಿಲ್ಲದೇ,ಏಕಾಂಗಿ ಈ ಬದುಕು ನಿಂತಿದೆ ಸುತ್ತಲೂ ಯಾರಿಲ್ಲದೇ…ಗೆಲ್ಲುವ ಛಲ ತುಂಬಿದ ಬದುಕು ಸಾಗುತಿದೆ ಸೋತರೂ ಕುಗ್ಗದೇ, ಕಣ್ಣೆದುರು ಸೋಲಿದ್ದರೂ ಜಗ್ಗದೇ…ಮೌನಿ ಈ ಬದುಕು ಸಾಗುತಿದೆ ಚುಚ್ಚು ಮಾತುಗಳ ಕೇಳಿಯೂ ಕೇಳದಂತೆ, ಅಣಕಿಸುವವರ ನೋಡಿಯೂ ನೋಡದಂತೆ…ಕನಸು ಕಾಣುವ ಬದುಕು ಸಾಗುತಿದೆ ಕನಸು ನನಸಾಗಿಸಲು, ಬದುಕ ಗುರಿ ಮುಟ್ಟಿಸಲು…ಸೋಲೇ ತುಂಬಿದ ಬದುಕು...
Loading posts...

All posts loaded

No more posts

error: Content is protected !!