- Tuesday
- August 11th, 2026
ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಆ.03 ರಂದು ಕೊಲ್ಲಮೊಗ್ರಕ್ಕೆ ಭೇಟಿ ನೀಡಿ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಬೆಂಡೋಡಿ ಸೇತುವೆ ಹಾಗೂ ಕೃಷಿ ಹಾನಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಳೆಹಾನಿಗೊಳಗಾದ ಗಿರೀಶ್ ಹಾಗೂ ಚಂದ್ರಶೇಖರ ಅವರಿಗೆ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ.ಕೆ.ವಿ, ಪುತ್ತೂರು ಎ.ಸಿ ಗಿರೀಶ್ ನಂದನ್, ಜಿಲ್ಲಾ ಪಂಚಾಯತ್...
ಬೇಕಾಗಿದ್ದಾರೆ : ಸುಳ್ಯದ ಆಸುಪಾಸಿನವರಾಗಿದ್ದು ಪತ್ರಿಕೆಯಲ್ಲಿ ಕೆಲಸ ಮಾಡಲು ಆಸಕ್ತ ಅಭ್ಯರ್ಥಿಗಳು ಬೇಕಾಗಿದ್ದಾರೆ. ತಮ್ಮ ಬಯೋಡೇಟಾ ವನ್ನು 9449387044 ನಂಬರ್ ಗೆ ಕಳುಹಿಸಿಕೊಡಿ.
ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಸರಕಾರದ ಯೋಜನೆಯಂತೆ ಗ್ರಾಮೀಣ ಮಕ್ಕಳ ಭೌತಿಕ ಸಾಮರ್ಥ್ಯ ಹೆಚ್ಚಿಸುವ ಚದುರಂಗ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಚೆಸ್ ಸ್ಪರ್ಧೆಯನ್ನು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮಂಡೆಕೋಲಿನಲ್ಲಿ ನಡೆಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಗ್ರಾಮ...
ಹರಿಹರ ಪಲ್ಲತ್ತಡ್ಕದಲ್ಲಿ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಘಟನಾ ಸ್ಥಳಗಳಿಗೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಆ.03 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹರಿಹರ ಪಲ್ಲತ್ತಡ್ಕ ಗ್ರಾಮದ ಹರಿಹರ ಪೇಟೆಯಲ್ಲಿ ಭಾರೀ ಹಾನಿ ಸಂಭವಿಸಿದ್ದು, ಹಾನಿಗೊಳಗಾದ ಸ್ಥಳ ಹಾಗೂ ಅಂಗಡಿಗಳ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ.ಕೆ.ವಿ, ಪುತ್ತೂರು ಎ.ಸಿ ಗಿರೀಶ್...
ಆ.3ರಂದು ಮುಂಜಾನೆ ಸುರಿದ ಮಳೆಗೆ ಮರ್ಕಂಜ ಗ್ರಾಮದ ಹೊಸೋಳಿಕೆ ಮೋಹನ್ ನಾಯ್ಕ್ ಎಂಬವರ ಮನೆಯ ಕೊಟ್ಟಿಗೆ ಬಿದ್ದು ಸಂಪೂರ್ಣ ಹಾನಿಗೊಂಡಿದೆ ಎಂದು ತಿಳಿದುಬಂದಿದೆ.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಇಂದು ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆಯ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ದಯಾನಂದ ಕೊರತ್ತೋಡಿ, ಕಾರ್ಯದರ್ಶಿ ಯಾಗಿ ದಯಾನಂದ ಕೇರ್ಪಳ, ಖಜಾಂಜಿಯಾಗಿ ದಯಾನಂದ ಕಲ್ನಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸತೀಶ್ ಹೊದ್ದೆಟ್ಟಿ, ಜತೆ ಕಾರ್ಯದರ್ಶಿ ಪ್ರಜ್ಞಾ ಎಸ್. ನಾರಾಯಣ್, ನಿರ್ದೇಶಕರಾಗಿ...
ಭಾರೀ ಮಳೆಯಿಂದಾಗಿ ಕೊಲ್ಲಮೊಗ್ರು ದೋಲನ ಮನೆ ಲಲಿತಾ ಎಂಬುವವರ ಮನೆ ಕುಸಿತಗೊಂಡಿದ್ದು, ಆ.02 ರಂದು ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜನಪ್ರತಿನಿಧಿಗಳು, ಮುಖಂಡರು ಜೊತೆಗಿದ್ದರು. ಬಳಿಕ ಅಲ್ಲಿಯೇ ಸಮೀಪದ ದೋಲನ ಮನೆ ಎಂಬಲ್ಲಿ ಹೊಳೆ ಕೊರೆತಕ್ಕೆ ಸಿಲುಕಿ ಅಪಾರ ಹಾನಿಯಾಗಿದ್ದ ಕೃಷಿ ಭೂಮಿಯನ್ನು ವೀಕ್ಷಿಸಿ ಪರಿಹಾರದ ಭರವಸೆ ನೀಡಿದರು. ಕಂದಾಯ ನಿರೀಕ್ಷಕ...
ಮಾವಿನಕಟ್ಟೆ ಕಂದ್ರಪ್ಪಾಡಿ ರಸ್ತೆಯಲ್ಲಿ ಅಚ್ರಪ್ಪಾಡಿ ಬಳಿ ಬರೆ ಕುಸಿತಗೊಂಡಿದೆ. ಬರೆ ಕುಸಿತದಿಂದ ವಿದ್ಯುತ್ ಕಂಬ ಧರೆಗುಳಿದಿದ್ದು ಸಂಚಾರ ಸ್ಥಗಿತಗೊಂಡಿದೆ.
ಉಪ್ಪುಕಳ ಬಾಳುಗೋಡು ಗ್ರಾಮದ ಬಸವನಗುಡಿಯಿಂದ ಉಪ್ಪುಕಳ ಸಂಪರ್ಕಿಸುವ ಸಿದ್ದನಗುಡ್ಡೆ ಕುಸಿದಿದೆ. ಕೊತ್ನಡ್ಕ ಉಪ್ಪುಕಳದ ನಿವಾಸಿಗಳು ರಸ್ತೆಯಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.
Loading posts...
All posts loaded
No more posts
