- Tuesday
- August 11th, 2026
ಕಲ್ಮಡ್ಕ ಗ್ರಾಮ ಪಂಚಾಯತ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಪಂಚಶ್ರೀ ಯುವಕ ಮಂಡಲ(ರಿ) ಪಂಬೆತ್ತಾಡಿ ಇದರ ಸಹಯೋಗದೊಂದಿಗೆ ಆ.19 ರಂದು ಕರಿಕ್ಕಳ ದಿಂದ ಪಂಬೆತ್ತಾಡಿಯ ವರೆಗೆ ರಸ್ತೆ ಬದಿಯ ಕಳೆಗಳನ್ನು ತೆಗೆದು ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಮಹೇಶ್...
ನವಚೇತನ ಯುವಕಮಂಡಲ(ರಿ) ಬೊಳುಬೈಲು ಜಾಲ್ಸೂರು ಸುಳ್ಯ ಇದರ ವತಿಯಿಂದ 28ನೇ ವರುಷದ ಶ್ರೀಕೃಷ್ಣ ಜನ್ಮಾಷ್ಣಮಿಯು ಆ.18ರಂದು ಬೊಳುಬೈಲು ನವಚೇತನ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವರಾಮ ಗೌಡ ನಡುಬೆಟ್ಟು ನೆರವೇರಿಸಿದರು, ಅಧ್ಯಕ್ಷತೆಯನ್ನು ಯುವಕಮಂಡಲದ ಅಧ್ಯಕ್ಷ ಶಶಿಪ್ರಸಾದ್ ಕಾಟೂರು ವಹಿಸಿದ್ದರು. ಪುರುಷರಿಗೆ, ಮಹಿಳೆಯರಿಗೆ, ಮತ್ತು ಮಕ್ಕಳ ವಿವಿದ ಆಟೋಟ ಸ್ವರ್ಧೆಗಳು ನಡೆಯಿತು. 5ವರುಷದ ಕೆಳಗಿನ ಮಕ್ಕಳಿಗೆ ಶ್ರೀಕೃಷ್ಣ...
ಜಲಶ್ರೀ ಪ್ರತಿಷ್ಠಾನ ಕಡ್ಲಾರು, ಕಿರಣರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು, ಕಲಾಮಾಯೆ ಏನೆಕಲ್ ಇವುಗಳ ವತಿಯಿಂದ ಆ.21 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ಅಮೃತ ಸಾಹಿತ್ಯೋತ್ಸವ ನಡೆಯಲಿದ್ದು, ಸಾಹಿತ್ಯೋತ್ಸವದ ಅಧ್ಯಕ್ಷತೆಯನ್ನು ನಿವೃತ್ತ ಸಿ.ಡಿ.ಪಿ.ಓ ನೀರಬಿದಿರೆ ನಾರಾಯಣ ಅವರು ವಹಿಸಿಕೊಳ್ಳಲಿದ್ದು, ನಿವೃತ್ತ ಪ್ರಾಂಶುಪಾಲರಾದ ಬಾಬು ಗೌಡ ಅಚ್ರಪ್ಪಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆನ್ಲೈನ್ ನಲ್ಲಿ ಈ ಹಿಂದೆ ನಡೆದ...
https://youtu.be/Vx6M8CMS-ro ಅಜ್ಜಾವರ ಗ್ರಾಮದ ಮೇನಾಲದಲ್ಲಿ ದರ್ಗಾ ಸಮೀಪವಿರುವ ವಿವಾದಿತ ಜಾಗದಲ್ಲಿ ಮೇನಾಲದ ಕೃಷ್ಣಾಷ್ಟಮಿ ಸಮಿತಿಯವರು ವಾಹನ ಪಾರ್ಕಿಂಗ್ ಗಾಗಿ ಜೆಸಿಬಿಯಲ್ಲಿ ನೆಲ ಸಮತಟ್ಟು ಮಾಡಿದ ವಿಚಾರವಾಗಿ ದರ್ಗಾದವರ ಆಕ್ಷೇಪಕ್ಕೆ ಕಾರಣವಾಗಿ ವಿವಾದ ಕೇಂದ್ರವಾಗಿದ್ದು, ಪೋಲೀಸರು ಹಾಗೂ ಕಂದಾಯ ಇಲಾಖೆಯರು ಸ್ಥಳಕ್ಕೆ ಆಗಮಿಸಿ ಈ ಜಾಗದ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಲು ಸೂಚನೆ ನೀಡಿರುವ...
ಕೊಡಗು ಜಿಲ್ಲೆ ಕೊಯಿನಾಡು ಮತ್ತು ಸಂಪಾಜೆ ಭಾಗದಲ್ಲಿ ಮಳೆಹಾನಿಯಿಂದ ತೊಂದರೆಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು. ಕೊಯಿನಾಡು ಕಿಂಡಿ ಅಣೆಕಟ್ಟು ಮತ್ತು ಸರಕಾರಿ ಶಾಲೆಯ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಕಿಂಡಿ ಅಣೆಕಟ್ಟುನ್ನು ತೆರವುಗೊಳಿಸಬೇಕು. ನಮಗೆ ಹೊಸ ಮನೆಗೆ ಬೇರೆ ಕಡೆ ಬದಲಿ ವ್ಯವಸ್ಥೆಯನ್ನು ಮಾಡಿ ಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು....
ಮಿಶೋ ಆ್ಯಪ್ ಮೂಲಕ ಬಹಳಷ್ಟು ಜನ ವಿವಿಧ ಉಡುಪು, ಗೃಹೋಪಯೋಗಿ ವಸ್ತುಗಳನ್ನು , ಸೌಂದರ್ಯ ವರ್ಧಕ, ಪಾದರಕ್ಷೆ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ನೀವು ಮಾಡಿರಬಹುದು. ನೀವು ಸಂತುಷ್ಟ ಗ್ರಾಹಕರೋ ಇಲ್ಲವೋ ಅದು ಅವರವರ ಭಾವಕ್ಕೆ ಬಿಟ್ಟಿದ್ದು . ಆದರೆ ಇಲ್ಲಿ ಇದನ್ನೇ ಬಂಡವಾಳವಾಗಿಸಿ ಖದೀಮರ ತಂಡವೊಂದು ಸದ್ದಿಲ್ಲದೆ ವಂಚನಾ ಜಾಲ ವ್ಯಾಪಿಸಿದೆ. ಹೌದು...
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಆ.29 ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಸುಳ್ಯ ಮೊಸರು ಕುಡಿಕೆ ಉತ್ಸವದ ಸ್ಟಿಕ್ಕರ್ ನ್ನು ಆ.17 ರಂದು ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ರವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಹರೀಶ್...
ಇನ್ನರ್ ವ್ಹಿಲ್ ಕ್ಲಬ್ ಸುಳ್ಯ, ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರೋಟರಿ ಸಮುದಾಯ ಭವನದಲ್ಲಿ ಆ.18ರಂದು ಆಯೋಜಿಸಿದ್ದ 6ರಿಂದ 10ವರ್ಷ ವಯೋಮಾನದ ರಾಧಾ -ಕೃಷ್ಣ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಸುಳ್ಯ ದ ಸ್ನಿಗ್ಧ ಮೋಂಟಡ್ಕ ಈಕೆ ಸುಪ್ರೀತ್ ಮೋಂಟಡ್ಕ ಹಾಗೂ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರ ಪುತ್ರಿ...
ಬೆಳ್ಳಾರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸಭೆಯು ಆ.18 ರಂದು ನಡೆಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಅಭಿವೃದ್ಧಿ ಬಗ್ಗೆ ಮತ್ತು ಮಹಾಸಭೆ ನಡೆಸುವ ಬಗ್ಗೆ ಚರ್ಚೆ ಹಾಗೂ ಸೆ.20 ರಂದು ಸಂಘದ ಮಹಾಸಭೆ ನಡೆಸುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಅಬ್ದುಲ್...
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ಯ ಅಮೃತಮಹೋತ್ಸವ ಆಚರಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಧನಂಜಯ ಕುಮಾರ್ ಎರ್ಮೆಟ್ಟಿ ಹಾಗೂ ಸದಸ್ಯರು, ಪಂಚಾಯತ್ ಸಿಬ್ಬಂಧಿಗಳು ಊರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಉಮೇಶ್ ದೊಡ್ಡತೋಟ ರವರನ್ನು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.
Loading posts...
All posts loaded
No more posts
