ಕರ್ಲಪ್ಪಾಡಿ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಭೇಟಿ

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯ ದ.ಕ. ಜಿಲ್ಲಾ ಸಹಾಯಕ ಆಯುಕ್ತರಾದ ಗುರುಪ್ರಸಾದ್ ಮತ್ತು ಧಾರ್ಮಿಕ ದತ್ತಿ ಇಲಾಖೆ ದ.ಕ. ಜಿಲ್ಲಾ ಪರಿವೀಕ್ಷಕರು ಶ್ರೀಧರ್ ಎಸ್ ಪಿ ಯವರು ಭೇಟಿ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ ಹಾಗೂ ಸದಸ್ಯರು ಸಹಾಯಕ ಆಯುಕ್ತರನ್ನು ಬರಮಾಡಿಕೊಂಡರು. ದೇವಸ್ಥಾನದ...

ಕಳಂಜ: 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಏಕಾಹ ಭಜನೆ ಕಾರ್ಯಕ್ರಮ

ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್(ರಿ.) ಕಳಂಜ ಇದರ ವತಿಯಿಂದ 25ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಏಕಾಹ ಭಜನೆ ಕಾರ್ಯಕ್ರಮ ಜ.05 ಹಾಗೂ ಜ.06 ರಂದು ಜರುಗಿತು. ಜ.05 ಸಂಜೆ ಸೂರ್ಯಾಸ್ತದಿಂದ ಆರಂಭವಾದ ಏಕಾಹ ಭಜನೆ ಕಾರ್ಯಕ್ರಮವು ಜ.06 ಸಂಜೆ ಸೂರ್ಯಾಸ್ತದವರೆಗೆ ಜರುಗಿದ್ದು, ಕಾರ್ಯಕ್ರಮದಲ್ಲಿ ವಿವಿಧ ಭಜನಾ ತಂಡಗಳು ಭಾಗವಹಿಸಿದ್ದವು. ಜ.06ರಂದು...
Ad Widget

ಅಡ್ತಲೆ ರಸ್ತೆ ಗುದ್ದಲಿ ಪೂಜೆ ದಿನವೇ ಕಾಮಗಾರಿ ಆರಂಭಿಸಿ – ನಾಗರಿಕ ಹಿತರಕ್ಷಣಾ ವೇದಿಕೆ ಆಗ್ರಹ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸುಳ್ಯ ತಾಲೂಕಿನ ಅರಂತೋಡು- ಅಡ್ತಲೆ- ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕಳೆದ ಕೆಲ ತಿಂಗಳಿನಿಂದ ಮತದಾನ ಬಹಿಷ್ಕಾರ ನಿರ್ಧಾರ ಮಾಡಿ ಅಹವಾಲು ಸಲ್ಲಿಸುತ್ತಿದ್ದು, ಈ ಬೆನ್ನಲ್ಲೇ ಶಾಸಕ ಹಾಗೂ ಸಚಿವ ಎಸ್ .ಅಂಗಾರ ಕಾಮಗಾರಿ ಗುದ್ದಲಿ ಪೂಜೆಗೆ ದಿನ ನಿಗದಿ ಮಾಡಿದ್ದಾರೆ.ಆದರೆ ಇದಕ್ಕೆ ಸೆಡ್ಡು‌ ಹೊಡೆದಿರುವ...

ಜಾತ್ರೋತ್ಸವದಲ್ಲಿ ವ್ಯಾಪಾರಕ್ಕೆ ಧರ್ಮದ ನಿರ್ಬಂಧ – ಭರತ್ ಮುಂಡೋಡಿ ಖಂಡನೆ

ಸುಳ್ಯ ಚೆನ್ನಕೇಶವ ಜಾತ್ರೋತ್ಸವದಲ್ಲಿ ಸಂತೆ ವ್ಯಾಪಾರಕ್ಕೆ ಧರ್ಮದ ನಿರ್ಭಂದ ಅತ್ಯಂತ ಅಪಾಯಕಾರಿ ಬೆಳವಣಿಗೆ, ಈ ಹಿಂದಿನಿಂದಲೂ ಜಾತ್ರೆಯಲ್ಲಿ ಎಲ್ಲಾ ಧರ್ಮದವರು ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಆಗ ಯಾವತ್ತು ಗೊಂದಲ ಇರಲಿಲ್ಲ, ಆದರೆ ಈ ದೇವಸ್ಥಾನ ಆಡಳಿತ ಸಮಿತಿಯವರು ಹಿಂದೂ ಸಂಘಟನೆ ಒತ್ತಡಕ್ಕೆ ಮಣಿದು ಮತ್ತೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ , ಇದು “ಜಾತ್ರೋತ್ಸವ “ಆಗಬೇಕಿತ್ತು, ಧರ್ಮೋತ್ಸವ...

ಸುಬ್ರಹ್ಮಣ್ಯ : ಲವ್ ಜಿಹಾದ್ ಗೆ ಯತ್ನ ಆರೋಪ – ಮುಸ್ಲಿಂ ಯುವಕನಿಗೆ ಹಲ್ಲೆ – ದೂರು ; ಯುವತಿ ಮನೆಯಿಂದ ಪ್ರತಿ ದೂರು – ಫೋಕ್ಸೋ ಪ್ರಕರಣ ದಾಖಲು

ಜಾಲತಾಣವಾದ ಪರಿಚಯವಾದ ಹಿಂದೂ ಯುವತಿಯನ್ನು ಭೇಟಿಯಾಗಲು ಸುಬ್ರಹ್ಮಣ್ಯಕ್ಕೆ ಬಂದ ಮುಸ್ಲಿಂ ಯುವಕನಿಗೆ ಹಲ್ಲೆಗೈದ ಪ್ರಕರಣ ಬಗ್ಗೆ ಇತ್ತಂಡಗಳಿಂದ ದೂರು ದಾಖಲಾದ ಘಟನೆ ವರದಿಯಾಗಿದೆ. ಯುವಕ ಹಾಗೂ ಯುವತಿಯ ಪೋಷಕರು ಪ್ರತ್ಯೇಕ ದೂರು ನೀಡಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ವಿರುದ್ಧ ಯುವತಿಯ ಪೋಷಕರು ನೀಡಿದ ದೂರಿನನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ.ಹಲ್ಲೆಗೊಳಗಾದ...

ನೆಲ್ಲೂರು ಕೆಮ್ರಾಜೆ : ಮಾಸಾಶನ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡತೋಟ ವಲಯದ ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ಭಾಸ್ಕರ ಎಂಬುವವರು ವರ್ಷದ ಹಿಂದೆ ಅಪಘಾತಗೊಂಡು ಕಾಲು ಮುರಿತಕ್ಕೊಳಪಟ್ಚು, ಯಾವುದೇ ಕೆಲಸ ಮಾಡಲು ಸಾಧ್ಯವಾಗದಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಾಸಾಶನ ಮಂಜೂರಾಗಿದ್ದು, ಮಂಜೂರಾದ ಮಾಸಾಶನವನ್ನು ಜ.03 ರಂದು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು,...

ದೈವರಾಧನೆಯಲ್ಲಿ ಪ್ರಕೃತಿಯ ಆರಾಧನೆ

ಪ್ರಕೃತಿಯ ಮಡಿಲಲ್ಲಿ ದೈವ ದೇವರನ್ನು ಕಂಡವರು ತುಳುವರು. ಪ್ರಕೃತಿಗೂ ದೈವರಾಧನೆಗೂ ಅವಿನಾಭಾವ ಸಂಬಂಧವಿದೆ. ದೈವರಾಧನೆ ಎಂದರೆ ಪ್ರಕೃತಿಯ ಆರಾಧನೆ ಎಂಬುವುದು ಅಕ್ಷರಶಃ ಸತ್ಯ. ಹಿಂದಿನ ಕಾಲದಲ್ಲಿ ಯಾವುದೆ ರೀತಿಯ ಉತ್ತಮ ವಿದ್ಯಾಭ್ಯಾಸ ಇಲ್ಲದ , ವೇದ ಶಾಸ್ತ್ರ ತಿಳಿಯದ ತುಳುನಾಡಿನ ಮೂಲ ನಿವಾಸಿಗಳು ತಾವು ನಂಬಿರುವ ಶಕ್ತಿಗಳನ್ನು ಪ್ರಾಕೃತಿಕವಾಗಿ ಆವರಿಸಿಕೊಂಡಿರುವ ಬನದಲ್ಲಿ ಒಂದು ಕಲ್ಲು ಹಾಕಿ...

ಸುಳ್ಯದ ಐಆರ್‌ಸಿಎಂಡಿ ಸಂಸ್ಥೆಯಲ್ಲಿ ಅಬಾಕಸ್ ಮತ್ತು ವೇದಿಕ್ ಮ್ಯಾಥ್ಸ್ ಕೋರ್ಸು ಆರಂಭ

ಹಲವು ಪೋಷಕರಿಗೆ ಮಕ್ಕಳ ಭವಿಷ್ಯದ ಬಗ್ಗೆಯೇ ಚಿಂತೆಯಾಗಿ ಬಿಟ್ಟಿದೆ. ಮಗ ಅಥವಾ ಮಗಳು ಗಣಿತದಲ್ಲಿ ವೀಕ್ ಇದ್ದಾರೆ. ಹೀಗಾದರೆ ಮುಂದೆ ನಮ್ಮ ಮಕ್ಕಳು ಸೈನ್ಸ್ ಸಬ್ಜೆಕ್ಟ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? ಅವರ ಭವಿಷ್ಯ ಬಗ್ಗೆ ಗಂಭೀರವಾದ ಆಲೋಚನೆ ಪೋಷಕರಿಗೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಮಕ್ಕಳಿಗೆ ಸಿಹಿ ಸುದ್ದಿ ಲಭಿಸಿದೆ. ಅಂತಾರಾಷ್ಟ್ರೀಯ ಮತ್ತು...

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡಿನಲ್ಲಿ ವಾರ್ಷಿಕೋತ್ಸವ ಸಂಭ್ರಮ

ಡಿ.31ರಂದು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಸಂಭ್ರಮದಿಂದ ನಡೆಯಿತು ಕಾರ್ಯಕ್ರಮದಲ್ಲಿ ಪಿ ಬಿ ದಿವಾಕರ ರೈ ಅಧ್ಯಕ್ಷರು ಪೊಪ್ಯಲರ್ ಎಜ್ಯುಕೇಶನ್ ಸೊಸೈಟಿ ಇವರು ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದ ಉದ್ಘಾಟಿನೆಯನ್ನು ಕೆ ವಿ ಜಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಡಿ ವಿ ಲೀಲಾಧರ ದೀಪ ಪ್ರಜ್ವಾಲನ ಮಾಡುವ ಮೂಲಕ ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು...

ದಂಡಿನಮನೆ ಮತ್ತು ದೇರಪ್ಪಜ್ಜನಮನೆ ಕುಟುಂಬದ ಧರ್ಮದೈವಗಳ ನೇಮೋತ್ಸವ

ದಂಡಿನಮನೆ ಹಾಗೂ ದೇರಪ್ಪಜ್ಜನ ಮನೆ ಕುಟುಂಬದ ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಡಿ.31 ಮತ್ತು ಜ.1 ರಂದು ನೆರವೇರಿತು. ಜ. 1 ರಂದು ಗುರುಕಾರ್ನೂರು, ದೇವತೆ ಪಾಷಾಣ ಮೂರ್ತಿ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ, ಜ.1 ರಂದು ಧರ್ಮದೈವ ಶ್ರೀ ರುದ್ರಚಾಮುಂಡಿ ದೈವದ ನೇಮೋತ್ಸವ, ಗುಳಿಗ ದೈವ ಮತ್ತು ಅಂಗಾರ ದೈವದ...
Loading posts...

All posts loaded

No more posts

error: Content is protected !!