- Sunday
- August 16th, 2026
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಹಾಗೂ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಇದರ ಸಹಯೋಗದೊಂದಿಗೆ 29.10. 2024 ರಂದು ನಡೆಯಲಿರುವ 9ನೇ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಆಯುರ್ವೇದ ಸಪ್ತಾಹ ಕಾರ್ಯಕ್ರಮವನ್ನು ದಿನಾಂಕ 21-10-24 ರಿಂದ 29.10.2024 ರ ತನಕ ಹಮ್ಮಿಕೊಂಡಿದ್ದು ಮೊದಲನೆಯ ದಿನವಾದ ದಿನಾಂಕ 21.10.2024ರಂದು ಚೊಕ್ಕಾಡಿ...
ಸುಳ್ಯ ರೈತ ಉತ್ಪಾದಕ ಕಂಪನಿ ವತಿಯಿಂದ ಮಹಾರಾಷ್ಟ್ರದ ಜೈನ್ ಇರೀಗೇಷನ್ ಸಿಸ್ಟಮ್ ಲೀ ಜಲಗಾoವ್ ಗೆ 4 ದಿನದ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿದೆ. 34 ಜನರ ತಂಡ ಸುಳ್ಯ ದಿಂದ ಹೊರಟಿದ್ದು ನಾಳೆ ಗೋವಾ ದಿಂದ ವಿಮಾಣದ ಮೂಲಕ ತೆರಳಲಿದ್ದಾರೆ.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಎನ್.ಐ.ಐ.ಟಿ ಮಂಗಳೂರು ವತಿಯಿಂದ "ಉದ್ಯೋಗ ಮೇಳ 2024" ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭವು ಅಕ್ಟೋಬರ್ 22 ಮಂಗಳವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಎನ್.ಐ.ಐ.ಟಿ.ಯ ಐ.ಎಫ್.ಬಿ.ಐ ನ ವೃತ್ತಿ ಸಲಹೆಗಾರರಾದ ಶ್ರೀನಿಧಿ ಹಾಗೂ ರಮ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ವಹಿಸಿದ್ದು...
ದ ಕ ಜಿಲ್ಲಾ ಸಾಹಿತ್ಯ ಪರಿಷತ್,ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ,ಸುಳ್ಯ ಹೋಬಳಿ ಘಟಕಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸದ ಸವಿ ನೆನಪಿಗಾಗಿ ಕರ್ನಾಟಕದ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ತಾಲೂಕಿನ 105 ವಿದ್ಯಾ ಸಂಸ್ಥೆಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಅಜ್ಜಾವರ ಮತ್ತು ಮಂಡೆಕೋಲು ಗ್ರಾಮಗಳ ಹತ್ತು ಶಾಲೆಗಳಿಗೆ ಪ್ರಾಯೋಜಕರ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಅಜಿಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಳ್ಯ ತಾಲೂಕು, ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರೇರಣಾ...
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ,ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಸುಳ್ಯ, ಸ. ಮಾ. ಹಿ. ಪ್ರಾ.ಶಾಲೆ ಸುಳ್ಯಮತ್ತು ಸ. ಮಾ. ಹಿ. ಪ್ರಾ.ಶಾಲೆ ಜಟ್ಟಿಪಳ್ಳ ಇದರ ಜಂಟಿ ಆಶ್ರಯದಲ್ಲಿ ಸ. ಮಾ. ಹಿ. ಪ್ರಾ.ಶಾಲೆ ಸುಳ್ಯ ಇದರ ಹಿರಿಯ ವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು...
ಕರ್ನಾಟಕ ಸರಕಾರದ ಸಚಿವರುಗಳ ಸಹಿತ ಅಧಿಕಾರಿಗಳ ದಂಡು ಆಗಮನ. ಸಾಂಸ್ಕೃತಿಕ ಹಾಗೂ ಆಚರಣೆಗಳ ಅನಾವರಣ , ಬೃಹತ್ ಕಾಲ್ನಾಡಿಗೆ ಜಾಥಾ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ತಮ್ಮ ನೆಲೆ ಕಂಡುಕೊಂಡಿರುವ ಸುಮಾರು 10 ಸಾವಿರ ತಮಿಳು ಭಾಂದವರ ಸಮ್ಮಿಲನ ಸ್ವರ್ಣ ಮಹೋತ್ಸವ ಅದ್ದೂರಿ ಕಾರ್ಯಕ್ರಮ ನವಂಬರ್ 10 ರಂದು ಸುಳ್ಯದ...
ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುದುರೆಮಜಲು ಕುಶಾಲಪ್ಪ ಗೌಡರ ಪುತ್ರಿ ರೇಣುಕಾರವರ ವಿವಾಹ ನಿಶ್ಚಿತಾರ್ಥ ವು ಸುಳ್ಯ ಪಂಬೆತ್ತಾಡಿ ಗ್ರಾಮದ ಶೆಟ್ಟಿಗದ್ದೆ ಹುಕ್ರಪ್ಪ ಗೌಡರ ಪುತ್ರ ಚೇತನ್ ಕುಮಾರ್ ರವರೊಂದು ಒ.20ರಂದು ವಧುವಿನ ಮನೆಯಲ್ಲಿ ನಡೆಯಿತು
ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ ಕರ್ಲಪ್ಪಾಡಿ, ಸತ್ಯವತಿ ಬಸವನಪಾದೆ, ದಿವ್ಯಾ ಪಡ್ಡಂಬೈಲು, ಸರೋಜಿನಿ ಕರಿಯಮೂಲೆ, ರತ್ನಾವತಿ ಹನಿಯಡ್ಕ ತಮ್ಮ ಮತವನ್ನು ಚಲಾಯಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ, ಅಜ್ಜಾವರ ಶಕ್ತಿ ಕೇಂದ್ರ ಪ್ರಮುಖರಾದ ರಾಜೇಶ್ ಮೇನಾಲ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ, ಮಾಜಿ ತಾಲೂಕು...
ಅನಾರೋಗ್ಯಕ್ಕೆ ತುತ್ತಾಗಿರುವ ಎಣ್ಮೂರು ನಿವಾಸಿ ಲೀಲಾವತಿ ಯವರಿಗೆ ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ಪುತ್ತೂರು ಇದರ ವತಿಯಿಂದ ಧನ ಸಹಾಯ ಮಾಡಲಾಯಿತು. ಪತಿಯನ್ನು ಕಳೆದುಕೊಂಡಿರುವ ಇವರು ಪತಿಯನ್ನು ಕಳೆದುಕೊಂಡಿದ್ದು, ಇದೀಗ ಇವರು ಎರಡು ಕಿಡ್ನಿ ಸಮಸ್ಯೆಯಿಂದ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ. ಇಬ್ಬರು ಹೆಣ್ಣಮಕ್ಕಳ ಜವಾಬ್ದಾರಿಯನ್ನು ಕೂಲಿ ನಾಲಿ ಮಾಡಿ ಸಾಕುತ್ತಿದ್ದ ಈ ಬಡ ಕುಟುಂಬ...
Loading posts...
All posts loaded
No more posts
