ಕೊಲ್ಲಮೊಗ್ರ : ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಬಾಲಸುಬ್ರಹ್ಮಣ್ಯ ಭಟ್ ಅವಿರೋಧ ಆಯ್ಕೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ನಲ್ಲಿ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಾಲಸುಬ್ರಹ್ಮಣ್ಯ ಎನ್.ಜಿ. ಕೊಳಗೆ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮಯ್ಯ ಕೆ. ಕೊಂದಾಳ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಪದ್ಮಯ್ಯ ಕೆ.ಕೊಂದಾಳ ಹಿಂಪಡೆದ ಹಿನ್ನೆಲೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಾಲಸುಬ್ರಹ್ಮಣ್ಯ ಭಟ್ ಎನ್.ಜಿ....

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ರಥಗಳಿಗೆ ಗೂಟ ಮುಹೂರ್ತ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಕಾರ್ಯಕ್ರಮ ನ.27 ರಿಂದ ಆರಂಭವಾಗಲಿದ್ದು ಅದರ ಪೂರ್ವಭಾವಿಯಾಗಿ ರಥ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ಇಂದು ರಥಗಳ ಗೂಟ ಮುಹೂರ್ತ ಜರಗಿತು. ಈ ಸಂದರ್ಭ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕಛೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾ‌ರ್, ಇತರೇ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Ad Widget

ಹರಿಹರ ಪಳ್ಳತ್ತಡ್ಕ : ತೆರವಾಗಿದ್ದ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ಪೃಥ್ವಿಚಂದ್ರ ಮುಂಡಾಜೆ ಅವಿರೋಧ ಆಯ್ಕೆ

ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ದಿವಾಕರ ಮುಂಡಾಜೆ ರವರ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿ ನ.12 ರಂದು ಪೃಥ್ವಿಚಂದ್ರ ಮುಂಡಾಜೆ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಕ್ಷಿತ್ ಕಜೆಗದ್ದೆ ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಕ್ಷಿತ್ ಕಜೆಗದ್ದೆ ರವರು ಈ ಹಿಂದಿನ ಮಾತುಕತೆಯಂತೆ ನಾಮಪತ್ರ ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದ್ದು,...

ಪ್ರತಿಭಟನಾ ಕಾರರ ಒತ್ತಡಕ್ಕೆ ಮಣಿದು ಎಸಿ ಆಗಮನ , ಮನವಿ ಸ್ವೀಕಾರ ರಸ್ತೆ ತಡೆ ಹಿಂತೆಗೆತ

ಗುಂಡ್ಯ: ಗುಂಡ್ಯದಲ್ಲಿ ನಡೆಯುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಪುತ್ತೂರು ಎಸಿ ಆಗಮಿಸಿದ ಬಳಿಕ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿ ಈ ಪ್ರತಿಭಟನೆಯ ಮಾಹಿತಿಯನ್ನು ಸರಕಾರಕ್ಕೆ ಇಂದು ಸಂಜೆಯ ಒಳಗೆ ತಲುಪಿಸಿ ಮಾಧ್ಯಮದ ಮೂಲಕ ಪ್ರತಿಭಟನಾ ನಿರತರಿಗೆ ತಿಳಿಸುವುದು ಮತ್ತು ನಮಗೂ ಸರಕಾರದ ನಾನಾ ಕೆಲಸಗಳು ಇರುವ ಹಿನ್ನಲೆಯಲ್ಲಿ ತಡವಾಯಿತು ಅದಿಕ್ಕಾಗಿ ಪ್ರತಿಭಟನಾ...

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಮನವಿ ಸ್ವೀಕಾರಕ್ಕೆ ಎಸಿ ವಿಳಂಬ ಹಿನ್ನಲೆ , ರಸ್ತೆ ತಡೆ. ಪೊಲೀಸರಿಂದ ಮನವೋಲಿಕೆಗೆ ಯತ್ನ ?

ಸುಳ್ಯ : ಗುಂಡ್ಯದಲ್ಲಿ ನಡೆಯುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಪುತ್ತೂರು ಎಸಿ ಆಗಮಿಸುವುದಾಗಿ ಪೋಲಿಸ್ ಇಲಾಖೆ ತಿಳಿಸಿದ್ದು ಇದೀಗ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ನೇತೃತ್ವದಲ್ಲಿ ಪ್ರತಿಭಟನಾ ಹೋರಾಟಗಾರರು ಇದೀಗ ರಸ್ತೆ ತಡೆ ಆರಂಬಿಸಿದ್ದು ರಸ್ತೆ ಸಂಪೂರ್ಣ ಮುಚ್ಚ ಗಡೆಯಾಗಿದೆ.

ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಮನವಿ ಸ್ವೀಕಾರಕ್ಕೆ ಎಸಿ ವಿಳಂಬ ಹಿನ್ನಲೆ , ರಸ್ತೆ ತಡೆ ಹೆಚ್ಚಿದ ಒತ್ತಡ

ಸುಳ್ಯ : ಗುಂಡ್ಯದಲ್ಲಿ ನಡೆಯುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಪುತ್ತೂರು ಎಸಿ ಆಗಮಿಸುವುದಾಗಿ ಪೋಲಿಸ್ ಇಲಾಖೆ ತಿಳಿಸಿದ್ದು ಇದೀಗ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ರಸ್ತೆ ತಡೆಗೆ ಮುಂದಡಿಯಿಡಲು ಒತ್ತಡ ಹೆಚ್ಚುತ್ತಿದ್ದು ಇದೀಗ ರಸ್ತೆಗೆ ಇಳಿಯಲಿದ್ದು ಇದೀಗ ಶಾಸಕರ ಸಮ್ಮುಖದಲ್ಲಿ ಹೈ ಡ್ರಾಮವೇ ನಡೆಯಲಿದೆ.

ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪೂರ್ವಾಹ್ನದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಅಪರಾಹ್ನ ಸಭಾ ಕಾರ್ಯಕ್ರಮ ಏರ್ಪಡಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಹೊಂಬೆಳಕು ಬಳಗ (ರಿ.) ನಾಲ್ಕೂರ್ ವತಿಯಿಂದ 'ಸ್ವಚ್ಛ ಪರಿಸರ ' ವಿಷಯವಾಗಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ಚಿತ್ರ ಬರೆಯುವ ಸ್ಪರ್ಧೆ,...

ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಜರಗುವ ಬೃಹತ್ ಪ್ರತಿಭಟನಾ ಸಭೆಗೆ ಕ್ಷಣಗಣನೆ –  ಶಾಸಕರು ನಾಯಕರ ಆಗಮನ – ಬೃಹತ್ ಸಂಖ್ಯೆಯಲ್ಲಿ ಸೇರುತ್ತಿರುವ ಕೃಷಿಕರು

ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ವತಿಯಿಂದ ಜರಗುವ ಬೃಹತ್ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನ ಸಭೆಯು ಗಂಡ್ಯದಲ್ಲಿ ಜರುಗಲಿದ್ದು ಈ ಪ್ರತಿಭಟನಾ ಸಭೆಗೆ ಶಾಸಕರಾದ ಕು.ಭಾಗೀರಥಿ ಮುರುಳ್ಯ , ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸೇರಿದಂತೆ ನಾನಾ ಪಕ್ಷಗಳ ಪ್ರಮುಖ ನಾಯಕರು, ಧಾರ್ಮಿಕ ನಾಯಕರು,ಪಕ್ಷಗಳ ಕಾರ್ಯಕರ್ತರು ಆಗಮಿಸಿದ್ದು ಕಾರ್ಯಕ್ರಮದಲ್ಲಿ ಸಾವಿರಾರು ಜನತೆ...

ಕಾಮಗಾರಿ ಸಂಪೂರ್ಣಗೊಂಡರೂ ಉದ್ಘಾಟನೆ ಭಾಗ್ಯ ಕಾಣದ ಸುಬ್ರಹ್ಮಣ್ಯ ಠಾಣೆ

ಬಹುದಿನಗಳ ಬೇಡಿಕೆಯಾಗಿದ್ದ ಕುಕ್ಕೆ ಸುಬ್ರಹ್ಮಣ್ಯದ ನೂತನ ಪೋಲಿಸ್ ಠಾಣೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ, ಇನ್ನು ಉದ್ಘಾಟನೆ ಕಾಣದೇ ಪೋಲಿಸರು ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡದಲ್ಲಿಯೇ ಕಾಲ ಕಳೆಯಬೇಕಾಗಿದೆ. ಈ ಹಿಂದೆ ಶಾಸಕರು , ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟನೆಗೆ ದಿನ ನಿಗದಿಯಾದರೂ ಮತ್ತೆ ಮತ್ತೆ ಬದಲಾವಣೆ ಆಗುತ್ತಿದ್ದು, ಸುಬ್ರಹ್ಮಣ್ಯ ಚಂಪಾಷಷ್ಠಿಗೆ ಮೊದಲಾದರೂ ನೂತನ ಕಟ್ಟಡ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ವಾರ್ಷಿಕ ಮೇಳ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಭಾರತ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ಸಹಯೋಗದೊಂದಿಗೆ ದಿನಾಂಕ 8 ಮತ್ತು 9 ನವಂಬರ್ 2024 ರಂದು ಎರಡು ದಿನದ ವಾರ್ಷಿಕ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾಲೇಜಿನ ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಅರವಿಂದ ಅಯ್ಯಪ್ಪ ಸುತ ಗುಂಡಿ ಅವರು ವಹಿಸಿದರು....
Loading posts...

All posts loaded

No more posts

error: Content is protected !!