ಪರಿವಾರಕಾನ ಬಸ್ಸು ನಿಲ್ದಾಣದ ಅವ್ಯವಸ್ಥೆ ಬಗ್ಗೆ ಅಮರಸುದ್ದಿ ವರದಿ ಬೆನ್ನಲ್ಲೇ ಸ್ವಚ್ಚಗೊಳಿಸಿದ ನಗರಾಡಳಿತ

ಪರಿವಾರಕಾನದಲ್ಲಿನ ಬಸ್ಸು ನಿಲ್ದಾಣಕ್ಕೆ ದಾರಿ ಹುಡುಕಿ ಕೊಡುವಿರಾ ಅಧಿಕಾರಿ, ಜನಪ್ರತಿನಿಧಿಗಳೆ ? ಎಂಬ ತಲೆ ಬರಹದೊಂದಿಗೆ ಅಮರ ಸುದ್ದಿ ವೆಬ್ ಸೈಟ್ ನಲ್ಲಿ ವರದಿಯನ್ನು ಪ್ರಕಟಿಸಿದ್ದು ಬಳಿಕ ಎಚ್ಚೆತ್ತುಕೊಂಡ ನಗರಾಡಳಿತ ಬಸ್ ನಿಲ್ದಾಣದ ಸುತ್ತಲಿನ ಪೊದೆ ಕಡಿದು ಸ್ವಚ್ಛಗೊಳಿಸಲಾಗಿದ್ದು ಇದು ಅಮರ ಸುದ್ದಿ ವರದಿಯ ಫಲಶ್ರುತಿಯಾಗಿದೆ.

ಡಿ.1: ಮಂಡೆಕೋಲಿನಲ್ಲಿ ಅರೆಭಾಷೆ ಗಡಿನಾಡ ಉತ್ಸವ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಡೆಕೋಲು ಗ್ರಾಮದ ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವವು ಡಿ.1ರಂದು ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಸಭಾಭವನದಲ್ಲಿ ನಡೆಯಲಿದೆ ಎಂದು ನ.23ರಂದು ಪ್ರತಿಕಾಗೋಷ್ಠಿ ನಡೆಸಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ...
Ad Widget

ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮ

ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇಂದು ಅರಂತೋಡಿನಲ್ಲಿ ನಡೆಯುತ್ತಿದೆ. ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕ ನರೇಂದ್ರ ರೈ ದೇರ್ಲ ಉದ್ಘಾಟಿಸಿ ಮಾತನಾಡುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ಸುಳ್ಯದ ಛಾಪು ಅನನ್ಯವಾದದ್ದು. ಕನ್ನಡ ಸಾಹಿತ್ಯ ಜಗತ್ತನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸ ನಮ್ಮ ವಿದ್ಯಾರ್ಥಿಗಳ ಗುರುತರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶ್ರೀಮತಿ...

ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ವತಿಯಿಂದ ದಿl ಜಿ.ಎಲ್ ಆಚಾರ್ಯ ಜನ್ಮ ಶತಾಬ್ದಿ ಹಾಗೂ ದೀಪಾವಳಿ ಆಚರಣೆಗೆ ಚಿನ್ನದ ನೆಕ್ಲೆಸ್ ಡ್ರಾ ಕಾರ್ಯಕ್ರಮ

ಪ್ರತಿಷ್ಟಿತ ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ವತಿಯಿಂದ ದಿl ಜಿ ಎಲ್ ಆಚಾರ್ಯ ಜನ್ಮ ಶತಾಬ್ದಿ ಹಾಗೂ ದೀಪಾವಳಿ ಪ್ರಯುಕ್ತ ವಿಶೇಷ ಕೊಡುಗೆ(glowing100) ಬಂಪರ್ ಬಹುಮಾನ ಚಿನ್ನದ ನೆಕ್ಲೆಸ್ ಡ್ರಾ ಕಾರ್ಯಕ್ರಮವು ಪುತ್ತೂರಿನ ಸಂಸ್ಥೆಯ ಮಳಿಗೆಯಲ್ಲಿ ನ 21 ರಂದು ನಡೆಯಿತು. ಡ್ರಾ ವನ್ನು ಯುಮುನ ಬೋರ್ ವೆಲ್ ನ ಮಾಲಕಿ ಶ್ರೀಮತಿ ದಿವ್ಯ ಕೆ...

ಕರ್ನಾಟಕ ಉಪಚುನಾವಣೆ 3ಕ್ಕೆ 3 ಸ್ಥಾನಗಳನ್ನು ಗೆಲ್ಲುವುದರ ಮೂಲಕ ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡಿದ ಗೆಲುವಾಗಿದೆ : ವೆಂಕಪ್ಪ ಗೌಡ

ಕರ್ನಾಟಕದಲ್ಲಿ 3 ಕ್ಕೆ 3 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿಯ ಕೆಟ್ಟ ಟೀಕೆಯ ರಾಜಕಾರಣಿಗಳಿಗೆ ರಾಜ್ಯದ ಜನ ಉತ್ತರ ಕೊಟ್ಟಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂತೋಷ ತಂದು ಕೊಟ್ಟಿದೆ,ಈ ಗೆಲುವು ರಾಜ್ಯದ ಜನತೆಯ ಅಭಿವೃದ್ದಿಗೆ ನೀಡಿದ ಗೆಲುವು ಆಗಿದೆ. ಈ ಗೆಲುವು ಆಧಾರ ರಹಿತ ಟೀಕೆ ಟಿಪ್ಪಣಿಗಳಿ ಗೆ ಉತ್ತರ ನೀಡಿದ ಗೆಲುವು ಆಗಿದೆ,ಈ ಗೆಲುವು ರಾಜಕಿಯ...

ವಿದ್ಯಾರ್ಥಿಗಳಿಗೆ ಅಪರಾಧ , ಮಾದಕ ವಸ್ತು ಸಂಚಾರಿ ನಿಯಮ , ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಕ್ರಮ.

ಸುಳ್ಯ: ಸುಳ್ಯ ಪೋಲಿಸ್ ಠಾಣಾ ಅಧಿಕಾರಿಗಳಾದ ಸಂತೋಷ್ ನೇತೃತ್ವದಲ್ಲಿ ನ 23 ರಂದು ಕಾನೂನು ಅರಿವುಗಳ ಬಗ್ಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ನಡೆಯಿತು. ಸುಳ್ಯದ ನೆಹರು ಮೆಮೊರಿಯಲ್ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ, ಮಾದಕ ವಸ್ತುಗಳ ಬಳಕೆ, ಸಂಚಾರ ನಿಯಮಗಳು ಮತ್ತು POCSO ಕಾಯ್ದೆಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಲಾಯಿತು ಈ ಸಂದರ್ಭದಲ್ಲಿ ಕಾಲೇಜು...

ಪ.ಜಾತಿಯವರ ಜಾಗ ಅತಿಕ್ರಮಣದ ಆರೋಪ : ನ.30ರಂದು ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ

ಪಂಬೆತ್ತಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರರಿಗೆ ಸೇರಿದ ಜಮೀನನ್ನು ಮೋನಪ್ಪ ಗೌಡ ಮತ್ತು ಇತರರು ಅಕ್ರಮವಾಗಿ ಮಂಜೂರುಗೊಳಿಸಿರುವುದನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನ.30ರಂದು ಸುಳ್ಯ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಹೇಳಿದರು.ನ.22ರಂದು ಸುಳ್ಯ...

ಅಪಾಯ ಆಹ್ವಾನಿಸುತ್ತಿರುವ ಅರಂತೋಡು ಎಲಿಮಲೆ ರಸ್ತೆ – ನಿರ್ವಹಣೆಯೇ ಮಾಡದಿರುವ ಬಗ್ಗೆ ಜನತೆ ಆಕ್ರೋಶ – ಪ್ರತಿಭಟನೆಗೆ ಸಿದ್ಧತೆ

ಕಳೆದ ವಿಧಾನ ಸಭಾ ಚುನಾವಣೆ ವೇಳೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಡ್ತಲೆ ಭಾಗದ ಜನತೆ ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನಿಸಿದ ಬಳಿಕ ಆಡಳಿತ ,ಸುಮಾರು ಮೂರು ಕೋಟಿ ವೆಚ್ಚದಲ್ಲಿ ಅರಂತೋಡಿನ ವೈ. ಎಂ. ಕೆ. ಕ್ರಾಸ್ ನಿಂದ ಪಿಂಡಿಮನೆವರೆಗೆ 3.3 ಕಿ ಮೀ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಮಾಡಿದೆ. ಪಿಂಡಿಮನೆಯಿಂದ ಕೊಜಂಬೆವರೆಗೆ ಒಂದು ಕೋಟಿ ವೆಚ್ಚದಲ್ಲಿ ಮರುಡಾಮರಿಕರಣ...

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ಸ್ಮೃತಿ ದಿನಾಚರಣೆ

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನ.22ರಂದು ಶಾಲಾ ಸಂಸ್ಥಾಪಕ ದಿವಂಗತ ಶ್ರೀ ನೆಟ್ಟಾರು ವೆಂಕಟಸುಬ್ಬರಾವ್ ರವರ ಸ್ಮೃತಿ ದಿನಾಚರಣೆಯನ್ನು ಆಚರಿಸಲಾಯಿತು. ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಧರ್ಮದರ್ಶಿಗಳಾದ ಶ್ರೀ ಪರಮೇಶ್ವರಯ್ಯ ಕಾಂಚೋಡು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಬಾಲ್ಯದಲ್ಲಿ ವೆಂಕಟಸುಬ್ಬರಾವ್ ಅವರೊಂದಿಗಿನ ಒಡನಾಟ ಹಾಗೂ ಶಾಲೆಯ ಸ್ಥಾಪನೆಯ ಬಗ್ಗೆ ಅವರಿಗಿದ್ದ ಬದ್ಧತೆಯನ್ನು ತಿಳಿಸಿದರು. ಶಾಲೆಯ ವಿದ್ಯಾರ್ಥಿಗಳಲ್ಲಿ ಅವರಿಗಿದ್ದ ಮಮತೆ...

ವೀಕ್ಷಕ ವಿವರಣೆಗಾರ ನಿರಂತ್ ದೇವಶ್ಯ ಇವರಿಗೆ ಜಿಲ್ಲಾ ಕಲಾ ರತ್ನ ಪ್ರಶಸ್ತಿ

ಕ್ರೀಡಾಕ್ಷೇತ್ರದ ಎಲ್ಲಾ ಕ್ರೀಡೆಗಳ ವೀಕ್ಷಕ ವಿವರಣೆಯನ್ನು ನೀಡುತ್ತಿರುವ ಗುತ್ತಿಗಾರಿನ ನಿರಂತ್ ದೇವಶ್ಯ ಇವರಿಗೆ ಮ್ಯಾಕ್ಸ್ ಲೈಫ್ ಮತ್ತು ಆಕ್ಸಿಸ್‌ ಬ್ಯಾಂಕ್ ನೀಡುವ ಜಿಲ್ಲಾ ಕಲಾ ರತ್ನ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.  ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ, ದಕ್ಷಿಣಕನ್ನಡ ಜಿಲ್ಲಾ  "ಕಲಾ ರತ್ನ" ಪ್ರಶಸ್ತಿಯನ್ನು ಮಂಗಳೂರಿನ ಅತ್ತಾವರದಲ್ಲಿರುವ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನ ಕೇಂದ್ರ ಕಛೇರಿಯಲ್ಲಿ...
Loading posts...

All posts loaded

No more posts

error: Content is protected !!