ಐವರ್ನಾಡಿನ ಮಿಥುನ ಅಶ್ವಥ್ ಜಬಳೆಯವರಿಗೆ “ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ

ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ಆಚರಿಸಲಾಯಿತು. ಕನ್ನಡಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ ಗೋವಿಂದರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ, ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಸುಂದರ್ ರಾಜ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಬಿ.ಎನ್ ಜಗದೀಶ್, ಅಂಬೇಡ್ಕ‌ರ್...

ಅರಂತೋಡು : ಸಂಹಿತ ಆಯುರ್ವೇದ ಕ್ಲಿನಿಕ್ ಶುಭಾರಂಭ

ಅರಂತೋಡಿನಲ್ಲಿ ನಿವೃತ್ತ ಶಿಕ್ಷಕರಾದ ಚಿದಾನಂದ ಅಡ್ತಲೆ ಹಾಗೂ ಸರಸ್ವತಿ ಅಡ್ತಲೆಯವರ ಸುಪುತ್ರ ಡಾ। ನಿತಿನ್ ಅಡ್ತಲೆಯವರ ಸಂಹಿತ ಆಯುರ್ವೇದ ಕ್ಲಿನಿಕ್ ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಕಟ್ಟಡದ ಮಾಲಕರಾದ ನಿವೃತ್ತ ಶಿಕ್ಷಕಿ ಗಿರಿಜಾ ಜತ್ತಪ್ಪ ಗೌಡ ಅಳಿಕೆ ದೀಪ ಬೆಳಗಿಸಿ ಉದ್ಘಾಟಿಸಿದರು.‌ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧ‌ರ್ ಕುರುಂಜಿ ಶುಭ ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ...
Ad Widget

ನವೀನ್ ಚಾತುಬಾಯಿಯವರಿಗೆ ನಿಟ್ಟೆ ವಿಶ್ವವಿದ್ಯಾಲಯದಿಂದ ಸಾಧಕ ಕೃಷಿಕ ಪುರಸ್ಕಾರ

ಸುಳ್ಯದ ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ನವೀನ್ ಚಾತುಬಾಯಿಯವರಿಗೆ ನಿಟ್ಟೆ ವಿಶ್ವವಿದ್ಯಾಲಯದ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಿಂದ 2024ನೇ ವರ್ಷದ "ಗುಡ್ ಅಕ್ವಾಟಿಕ್ ಸ್ಟೀವರ್ಡ್ ಶಿಪ್ ಪ್ರಾಕ್ಟೀಸ್" ಪುರಸ್ಕಾರ ನೀಡಿ ಗೌರವಿಸಲಾಗಿದೆ.ನ. 25ರಂದು ಮಂಗಳೂರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಅನಿರ್ವನ್ ಚಕ್ರವರ್ತಿ ಮತ್ತು ಪ್ರೊ.ಡಾ. ಅಖಿಲಾರವರು ಕಾಲೇಜಿನ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹಾರಥೋತ್ಸವ ಸಂಪನ್ನ – ಸಹಸ್ರಾರು ಮಂದಿ ರಥೋತ್ಸವದಲ್ಲಿ ಭಾಗಿ

ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖ ಚಂಪಾಷಷ್ಠಿಯ ಮಹಾರಥೋತ್ಸವ ಇಂದು(ಡಿ.07) ನೆರವೇರಿತು. ಬ್ರಹ್ಮರಥದಲ್ಲಿ ಸುಬ್ರಹ್ಮಣ್ಯ ದೇವರು ಆಸೀನರಾಗಿ ರಥೋತ್ಸವವು ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಭಕ್ತರು ದೇವರ ಮಹಾರಥವನ್ನು ಎಳೆದರು. ಬ್ರಹ್ಮರಥವು ರಾಜಗಾಂಭೀರ್ಯದಿಂದ ಅತ್ಯಂತ ಸಲೀಸಾಗಿ, ಆಕರ್ಷಕವಾಗಿ ರಥಬೀದಿಯಲ್ಲಿ ಮುನ್ನಡೆಯಿತು. ವರ್ಷದಲ್ಲಿ ಒಂದು ಬಾರಿ...

ಸುಳ್ಯ: ಶಿವಕುಮಾರ್ ಹೊಸಗದ್ದೆ ನಿಧನ

ಸುಳ್ಯ ದ ಬೀರಮಂಗಲ ದಲ್ಲಿ ವಾಸವಾಗಿದ್ದ ಶಿವಕುಮಾರ್ ಹೊಸಗದ್ದೆ ಯವರನ್ನು ಅನಾರೋಗ್ಯದಿಂದ ಡಿ.06 ರಂದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆ ಗೆ ದಾಖಲಿಸಿದರೂ ರಾತ್ರಿ ವೇಳೆಗೆ ತೀವ್ರ ಅಸ್ವಸ್ಥ ಗೊಂಡು ಕೊನೆ ಉಸಿರೆಳೆದಿರುತ್ತಾರೆ. 37 ವರ್ಷ ವಯಸಾಗಿದ್ದು ಮೃತರು ತಾಯಿ, ಪತ್ನಿ, ಸಹೋದರಿ ಮತ್ತು ಬಂದು ಮಿತ್ರರನ್ನು...

ಕ್ಯಾಂಪ್ಕೊ ಸಂಸ್ಥೆಯ “ಸಾಂತ್ವನ” ಯೋಜನೆಯಡಿಯಲ್ಲಿ ಶಸ್ತ್ರಚಿಕಿತ್ಸೆಗೆ ಸಹಾಯಧನ ಹಸ್ತಾಂತರ

ಕ್ಯಾಂಪ್ಕೊ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಸುಳ್ಯ ಶಾಖೆಯ ಸಕ್ರೀಯ ಸದಸ್ಯ ರಝಾಕ್ ಯಂ ಎ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ರೂಪಾಯಿ 3 ಲಕ್ಷ ಮೊತ್ತದ ಸಹಾಯಧನದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಡಿ. 07 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆ ಪುತ್ತೂರು ಇದರ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್...

ಡಾ. ಕೆ.ವಿ.ಚಿದಾನಂದರಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆ – ಡಿ.25 ರಂದು ಸುಳ್ಯಕ್ಕೆ ಬ್ರಹ್ಮರಥ ಆಗಮನ

ಸುಳ್ಯ ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾಗಿರುವ ಡಾ. ಕೆ.ವಿ. ಚಿದಾನಂದ ಹಾಗೂ ಮನೆಯವರು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥವನ್ನು ಕೊಡುಗೆಯಾಗಿ ನೀಡಲಿದ್ದು, ಬ್ರಹ್ಮರಥ ಸುಳ್ಯಕ್ಕೆ ಆಗಮಿಸುವ ಹಾಗೂ ಸಮರ್ಪಣೆ ಸಿದ್ಧತೆಯ ಕುರಿತು ಭಕ್ತಾಧಿಗಳ ಸಭೆಯು ಸುಳ್ಯದ ಚೆನ್ನಕೇಶವ ದೇವಸ್ಥಾನ ಸಭಾಂಗಣದಲ್ಲಿ ಡಿ.6ರಂದು ನಡೆಯಿತು. ಕೋಟೇಶ್ವರದ ಕುಂಭಾಶಿಯಲ್ಲಿ ರಥಶಿಲ್ಪಿ ರಾಜಗೋಪಾಲಾಚಾರ್ಯರ ಉಸ್ತುವಾರಿಯಲ್ಲಿ ಬ್ರಹ್ಮರಥ...

ದೊಡ್ಡೇರಿ ಶಾಲಾ ವಿದ್ಯಾರ್ಥಿಗಳಿಂದ ವಂದೇ ಭಾರತ್ ನಲ್ಲಿ ಶೈಕ್ಷಣಿಕ ಪ್ರವಾಸ

ದೊಡ್ಡೇರಿ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಂದ ವಂದೇ ಭಾರತ್ ನಲ್ಲಿ ಡಿ.06 ರಂದು ಶಾಲಾ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಯಿತು. ಮಂಗಳೂರಿನಿಂದ ಕೇರಳದ ಕಣ್ಣೂರಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಶಾಲೆಯ ಪೋಷಕರು ಮತ್ತು ಮಕ್ಕಳೊಡನೆ ಒಂದು ದಿನದ ಪ್ರವಾಸ ಹಮ್ಮಿಕೊಳ್ಳಲಾಯಿತು. ಕಣ್ಣೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿ, ಸಾಯಂಕಾಲ ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ...

ದೀನದಯಾಳ್ ಸಹಕಾರ ಸಂಘ ಹಾಗೂ ನೂತನ ಕಛೇರಿ ಉದ್ಘಾಟನೆ.

ಸಹಕಾರ ಸಂಸ್ಕೃತಿಯಿಂದಾಗಿ ಬ್ಯಾಂಕಿಂಗ್‌ ಕ್ಷೇತ್ರ ಅಭಿವೃದ್ಧಿ ಗೊಂಡಿದೆ - ಕ್ಯಾಪ್ಟನ್ ಬೃಜೇಶ್. ದೀನದಯಾಳು ಸಹಕಾರ ಸಂಘದ ಮೂಲಕ ಬಡವರ ದೀನದಲಿತರ ಅಭಿವೃದ್ಧಿಯಾಗಲಿ - ಮುರುಳ್ಯ. ಸುಳ್ಯದ ರಥಬೀದಿಯಲ್ಲಿರುವ ಟಿ.ಎ.ಪಿ.ಸಿ.ಎಂ.ಎಸ್‌. ಕಟ್ಟಡದಲ್ಲಿ ಮಾಜಿ ಸಚಿವ ಎಸ್.ಅಂಗಾರ ನೇತೃತ್ವದ ಪಂಡಿತ್ ದೀನದಯಾಳ್ ಸಹಕಾರ ಸಂಘ ಶುಭಾರಂಭಗೊಂಡಿತು. ಬೆಳಿಗ್ಗೆ 11.22 ರ ಕುಂಭಲಗ್ನದಲ್ಲಿ ಸಹಕಾರ ಸಂಘವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ...

ಕಲ್ಚೆರ್ಪೆ ರಸ್ತೆ ಬದಿ ನಿಲ್ಲಿಸಿದ ಲಾರಿಯ ಚಕ್ರ ಕದ್ದೊಯ್ದ ಕಳ್ಳರು- ಪೋಲಿಸ್ ದೂರು

ಪೆರಾಜೆ ಕಲ್ಚೆರ್ಪೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಯ ಚಕ್ರವನ್ನು ಬಿಚ್ಚಿ ಕಳ್ಳತನ ಮಾಡಿರುವ ಘಟನೆ ಡಿ.3 ರಂದು ವರದಿಯಾಗಿದೆ. ಕೇರಳದ ನೋಂದಣಿ ಸಂಖ್ಯೆ ಹೊಂದಿರುವ ಲಾರಿಯಾಗಿದ್ದು ಕುಂಬಳಚೇರಿಯಲ್ಲಿ ಮರದ ವ್ಯಾಪಾರಕ್ಕೆಂದು ಬಂದವರ ಲಾರಿ ಇದಾಗಿದ್ದು ಕಲ್ಚೆರ್ಪೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು ರಾತ್ರಿ ಸಮಯದಲ್ಲಿ ಯಾರೋ ಕಿಡಿಗೇಡಿ ಕಳ್ಳರು ಹೊಂಚು ಹಾಕಿ ಲಾರಿಯ ಹಿಂಬದಿಯ 2 ಚಕ್ರವನ್ನು...
Loading posts...

All posts loaded

No more posts

error: Content is protected !!