ತೊಡಿಕಾನದಲ್ಲಿ ಎರ್ಟೆಲ್ 4 ಜಿ ನೆಟ್ವರ್ಕ್ ಸೇವೆ ಒದಗಿಸುವಂತೆ ಗ್ರಾಮಸ್ಥರಿಂದ ಮನವಿ

ತೊಡಿಕಾನ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದು ಬಿಎಸ್ಎನ್ಎಲ್ ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿ ಯಂತಾಗಿದೆ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ಇರುವುದರಿಂದ ನೆಟ್ವರ್ಕ್ ಸಮಸ್ಯೆ ಯಿಂದ ಅನೇಕ ವಿದ್ಯಾರ್ಥಿಗಳು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ತೊಡಿಕಾನದಲ್ಲಿ ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವಿದ್ದು ಪ್ರತಿದಿನ ನೂರಾರು ಭಕ್ತಾದಿಗಳು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಹಾಗೂ ಊರವರಿಗೆ ಕೂಡ ನೆಟ್ವರ್ಕ್ ಸಮಸ್ಯೆಯನ್ನುಂಟುಮಾಡಿದೆ....

ಮುರಿದು ಬೀಳುವ ಆತಂಕದಲ್ಲಿ ಕಂದ್ರಪ್ಪಾಡಿ ಅಂಚೆ ಕಚೇರಿ – ಬೇರೆಡೆ ಸ್ಥಳಾಂತರಕ್ಕೆ ಊರವರ ವಿರೋಧ

ಸೋರುತ್ತಿರುವ ಛಾವಣಿ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಅಂಚೆ ಕಚೇರಿಯ ಮೇಲ್ಚಾವಣಿ ತೀರ ಶಿಥಿಲಗೊಂಡು ಮುರಿದು ಬೀಳುವ ಹಂತ ತಲುಪಿದೆ. ಕಛೇರಿಯ ಸಿಬ್ಬಂದಿಗಳು ಭಯದಿಂದ ಕೆಲಸ ಕಾರ್ಯ ನಿರ್ಹಹಿಸುವಂತಾಗಿದೆ. ಸಿಬ್ಬಂದಿಗಳು ಕಛೇರಿಯ ವರಾಂಡದಲ್ಲಿ ಕೆಲಸ ಮಾಡುವ ಸ್ಥಿತಿ ಬಂದಿದೆ. ಈ ಇಲಾಖೆ ಇದನ್ನು ದುರಸ್ತಿ ಮಾಡುವ ಬದಲು ಸ್ಥಳಾಂತರ ನಡೆಸುವ ಹುನ್ನಾರ ನಡೆಸುತ್ತಿದೆ.ಇಲಾಖಾ ಆದೇಶದಂತೆ ರಾಜೀವಗಾಂಧಿ ಸೇವಾಕೇಂದ್ರಮಾವಿನಕಟ್ಟೆ...
Ad Widget

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(29.08.2020 ಶನಿವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 190 ಕಾಳುಮೆಣಸುಕಾಳುಮೆಣಸು 250 - 325 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಮೂಡಂಬೈಲು ಶಾಸ್ತ್ರಿಗಳಿಗೆ ವನಜ ರಂಗಮನೆ ಪ್ರಶಸ್ತಿ ಪ್ರದಾನ

ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ,'ರಂಗಮನೆ ಅಮ್ಮ' ಶ್ರೀಮತಿ ವನಜಾಕ್ಷಿ ಜಯರಾಮ ಇವರ ಸ್ಮರಣಾರ್ಥ ನೀಡುವ ವನಜ ರಂಗಮನೆ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರಿಗೆ ಬೆಳ್ತಂಗಡಿ ತಾಲೂಕು ಪಡಂಗಡಿಯ ಅವರ ಸ್ವಗೃಹದಲ್ಲಿ ಪ್ರದಾನ ಮಾಡಲಾಯಿತು.ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಮಾತನಾಡಿ " ಚರಿತ್ರೆ ಮತ್ತು ಚಾರಿತ್ರ್ಯ ಎರಡನ್ನೂ...

ಕನಕಮಜಲು ರೋಜ್ ಗಾರ್ ದಿನಾಚರಣೆ

ಕನಕಮಜಲು ಗ್ರಾಮ ಪಂಚಾಯತಿಯಲ್ಲಿ ಸಭಾಭವನದಲ್ಲಿ ರೋಜ್ ಗಾರ್ ದಿನಾಚರಣೆಯನ್ನು ಆಚರಿಸಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಪಟ್ಟ ಮಾಹಿತಿಯನ್ನು ಸುಳ್ಯ ತಾಲೂಕು ಐಇಸಿ ಸಂಯೋಜಕರಾದ ನಮಿತಾ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರೋಜಿನಿ ಬಿ ಹಾಗೂ ಕಾರ್ಯದರ್ಶಿ ಉಪಸ್ಥಿತರಿದ್ದರು. ಹೊಸ ಉದ್ಯೋಗ ಚೀಟಿ ನೊಂದಣಿ ಕಾಮಗಾರಿ ಹಾಗೂ ಕೂಲಿ ಬೇಡಿಕೆಯನ್ನು...

ಶಾಸಕ ಎಸ್ ಅಂಗಾರ ಹಾಗೂ ಚಾಲಕನಿಗೂ ಕೊರೊನಾ ಪಾಸಿಟಿವ್

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿಗೆ ತೆರಳಿದ್ದ ಶಾಸಕರು ಇಂದು ಸುಳ್ಯಕ್ಕೆ ಆಗಮಿಸಿದ ಸಂದರ್ಭ ತಲೆ ನೋವು ಕಾಣಿಸಿಕೊಂಡಿತ್ತು. ಇದರಿಂದ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದರು. ವರದಿಯಲ್ಲಿ ಪಾಸಿಟಿವ್ ‌ಬಂದಿದ್ದು, ಇದೀಗ ಅವರು ತಮ್ಮ ಮನೆಯಲ್ಲಿ ಹೋಮ್ ಕ್ವಾರಂಟ್ ನ್ ಗೆ ಒಳಗಾಗಿದ್ದಾರೆ...

ಅಪರಿಮಿತ ಅವಕಾಶಗಳ ಕೈಬೀಸಿ ಕರೆಯುತಿದೆ ಗ್ಲೋರಿಯಾ ಕಾಲೇಜು ಪುತ್ತೂರು

    ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶ ಬಂದಿತೆಂದರೆ ಖುಷಿಯ ಜೊತೆಗೆ ಮನದಲ್ಲಿ ಗೊಂದಲವೂ ಮನೆಮಾಡುತ್ತದೆ. ತಮ್ಮ ಮುಂದಿನ ಶೈಕ್ಷಣಿಕ ಬದುಕಿನ ಆಯ್ಕೆಯ ಬಗೆಗಿನ ಗೊಂದಲ, ಭಯ ಹಾಗೂ ಸೂಕ್ತ ಮಾರ್ಗದರ್ಶನದ ಕೊರತೆ ಕಾಡುವುದು ಸಾಮಾನ್ಯ. ಪಿ.ಯು.ಸಿ.ಯಲ್ಲಿ ಸೈನ್ಸ್, ಆರ್ಟ್ಸ್, ಕಾಮರ್ಸ್ ಕಲಿತ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಬಿ.ಕಾಂ, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್ಸಿ, ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣದ ಆಯ್ಕೆಯಲ್ಲದೆ ಮತ್ತೇನೂ...

ಸುಬ್ರಹ್ಮಣ್ಯ : ಕುಸುಮ ಸಾರಂಗದ ವತಿಯಿಂದ ನಡೆದ ಆನ್ಲೈನ್ ಸ್ಪರ್ಧೆಯ ಫಲಿತಾಂಶ ಪ್ರಕಟ

ಕುಕ್ಕೆ ಶ್ರೀ ಸುಬ್ರಹ್ಮಣ್ಮೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ ರಂಗ ಘಟಕ ಕುಸುಮ ಸಾರಂಗವೂ ಆಸಕ್ತ ಪ್ರತಿಭೆಗಳಿಗಾಗಿ ಏಕಪಾತ್ರಾಭಿನಯ, ಕವನ ವಾಚನ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 500ಕ್ಕಿಂತಲೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೇ, ನೆರೆಯ ರಾಜ್ಯಗಳಾದ ಕೇರಳ ಹಾಗೂ ಮುಂಬೈಯಿಯ ಪ್ರತಿಭೆಗಳು ಕೂಡ ಭಾಗವಹಿಸಿದ್ದರು. ಈ ಮೊದಲು ತಿಳಿಸಿದಂತೆ 'ಪ್ರಥಮ ಸುತ್ತಿನಲ್ಲಿ...

ಅರಂತೋಡಿನಲ್ಲಿ ವಿಚಿತ್ರ ಕೊರೊನಾ ಲಾಕ್ ಡೌನ್ – ವರ್ತಕರ ಅಳಲು – ಪಿಡಿಓ ಸ್ಪಷ್ಟನೆ

ಗ್ರಾಮಮಟ್ಟದಲ್ಲಿ ಕೋವಿಡ್ ಸೀಲ್ ಡೌನ್ ಲಾಕ್ಡೌನ್ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವವರು ಗ್ರಾಮ ಪಂಚಾಯಿತಿ ನವರು ಇಲ್ಲಿ ಪಿ.ಡಿ.ಒ.ಗಳು ಆದೇಶಗಳನ್ನು ಅನುಷ್ಠಾನ ಮತ್ತು ಉಸ್ತುವಾರಿ ಮಾಡುವವರು ಆದರೆ ಇವರೂ ಸ್ವತಂತ್ರರಲ್ಲ. ಸ್ವಯಂ ವಿವೇಚನೆಗೆ ಇವರಿಗೂ ಅವಕಾಶವಿಲ್ಲ. ಇವರನ್ನು ಕೇಳುವವರು ಹಲವು ಮಂದಿ ಇದ್ದಾರೆ. ಒಟ್ಟಿನಲ್ಲಿ ಕೋವಿಡ್ ಮಾರಿ ದೇಶದಾದ್ಯಂತ ಸಮಸ್ಯೆಗಳೊಂದಿಗೆ ವಿಚಿತ್ರಗಳನ್ನು ಗೊಂದಲಗಳನ್ನು ಸಂದೇಹಗಳನ್ನು ಉಂಟುಮಾಡಿರುವುದು ಎಲ್ಲರಿಗೂ ತಿಳಿದ...

ಕಡಬ : ಉಚಿತ ಅಯುಷ್ಮಾನ್ ಕಾರ್ಡ್ ಅಭಿಯಾನಕ್ಕೆ ಚಾಲನೆ

ಭಾರತೀಯ ಜನತಾ ಪಾರ್ಟಿ, ಯುವಮೋರ್ಚಾ ಸುಳ್ಯ ಮಂಡಲ ಇದರ ವತಿಯಿಂದ ಕಡಬದಲ್ಲಿ ನಡೆಯುತ್ತಿರುವ ಉಚಿತ ಅಯುಷ್ಮಾನ್ ಕಾರ್ಡ್ ಅಭಿಯಾನದ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಮಂಡಲ ಅಧ್ಯಕ್ಷರು ಹರೀಶ್ ಕಂಜಿಪಿಲಿ ನೆರವೇರಿಸಿದರು. ಸಭಾಧ್ಯಕ್ಷತೆಯನು ಯುವ ಮೋರ್ಚಾದ ಮಂಡಲ ಅಧ್ಯಕ್ಷ ಶ್ರೀ ಕೃಷ್ಣ ಭಟ್ ಹೊಸಮಠ ವಹಿಸಿದ್ದರು.ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ದಕ್ಷಿಣ ಕನ್ನಡದ ಜಿಲಾಧ್ಯಕ್ಷ ಗುರುದತ್...
Loading posts...

All posts loaded

No more posts

error: Content is protected !!