ಕ್ಯಾಂಪ್ಕೋ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(27.08.2020 ಗುರುವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 190 ಕಾಳುಮೆಣಸುಕಾಳುಮೆಣಸು 250 - 325 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಬಾಳಿಲ ಪ್ರೌಢಶಾಲಾ ಶಿಕ್ಷಕ ದಿನೇಶ್ಚಂದ್ರ ಕಿಲಂಗೋಡಿ ನಿಧನ

ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಗೌರವ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸುತ್ತಿದ್ದ ದಿನೇಶ್ಚಂದ್ರ ಕಿಲಂಗೋಡಿ ಇಂದು ಬೆಳಗ್ಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
Ad Widget

ದೇವಚಳ್ಳ ಗ್ರಾ.ಪಂ. ಮಾಜಿ ಸದಸ್ಯ ಪುಷ್ಪಾಕರ ಮಾವಿನಕಟ್ಟೆ ವಿಧಿವಶ

ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಸ್ನೇಹಜೀವಿ ಪುಷ್ಪಾಕರ ಮಾವಿನಕಟ್ಟೆ ಅಲ್ಪ ಕಾಲದ ಅಸೌಖ್ಯದಿಂದ ಇಂದು(ಆ.26) ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಮೃತರು ತಂದೆ,ತಾಯಿ, ಪತ್ನಿ, ಪುತ್ರಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಅಟೋ ಚಾಲಕರಾಗಿ ಜನರೊಂದಿಗೆ ಸ್ನೇಹಜೀವಿಯಾಗಿದ್ದ ಇವರು ತಾ.ಪಂ.ಸದಸ್ಯೆ ಯಶೋಧ ಬಾಳೆಗುಡ್ಡೆ ಯವರ ಸಹೋದರ.

ಸವಣೂರು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷರಾಗಿ ಶ್ರೀಧರ ಇಡ್ಯಾಡಿ

ಹಿಂದೂ ಜಾಗರಣ ವೇದಿಕೆ ಸವಣೂರು, ಪುತ್ತೂರು ತಾಲೂಕು ಇದರ ನೂತನ ಘಟಕದ ರಚನೆ ಆ. 25 ರಂದು ನಡೆಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಗಿರಿಶಂಕರ್ ಸುಲಾಯ, ಅಧ್ಯಕ್ಷರಾಗಿ ಶ್ರೀಧರ ಇಡ್ಯಾಡಿ, ಉಪಾಧ್ಯಕ್ಷರಾಗಿ ಪ್ರಶಾಂತ್ ನೂಜಾಜೆ, ಕುಲದೀಪ್ ಅಮೈ , ಪ್ರಧಾನ ಕಾರ್ಯದರ್ಶಿಗಳಾಗಿ ನಿಶಾಂತ್ ಪರಣೆ, ಕಾರ್ಯದರ್ಶಿ ಗಳಾಗಿ ಮಹೇಶ್ ದೈಪಿಲ, ಲಿಖಿತ್ ,ದಯಾನಂದ ಪರಣೆ,...

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಗೆ ದೇಣಿಗೆ

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೂಮಿ ಖರೀದಿಸುವ ಪ್ರಯುಕ್ತವಾಗಿ 2 ಸೆಂಟ್ಸ್ ಜಾಗದ ಹಣದ ಮೊತ್ತ ಒಂದು ಲಕ್ಷದ ಅರುವತ್ತು ರೂಪಾಯಿ ಡಿಡಿಯನ್ನು ನಿವೃತ್ತ ಉಪವಲಯಾರಣ್ಯಧಿಕಾರಿ ಕಾಯರ್ ತಿಮ್ಮಪ್ ಗೌಡ ಆ.26 ರಂದು ಹಸ್ತಾಂತರಿಸಿದರು. ದಿವಂಗತ ಪುತ್ರ ಕೆ.ಟಿ.ಪ್ರಭವ ಸ್ಮರಣಾರ್ಥವಾಗಿ ಈ ಧನಸಹಾಯವನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ಸಮರ್ಪಿಸಿದರು. ಈ ಸಂದರ್ಭದಲ್ಲಿ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊಸ್ತಾರೋಗಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಹೊಸ್ತಾರೋಗಣೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಶ್ರೀ ದೇವರಿಗೆ ಮಹಾಭಿಷೇಕ ಹಾಗೂ ಕದಿರು ಪೂಜೆ ಕಾರ್ಯಗಳು ನೆರವೇರಿದವು. ಈ ದೇವತಾ ಕಾರ್ಯಗಳ ಬಳಿಕ ಭಕ್ತಾದಿಗಳಿಗೆ ಕದಿರು ವಿತರಣೆ ನಡೆದು, ಶ್ರೀ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಕುವೆಕೊಡಿ : ಬಂಟಮಲೆ ಪ್ರಗತಿಬಂಧು ಸಂಘ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ( ರಿ ) ಸುಳ್ಯ --ಗುತ್ತಿಗಾರು ಗ್ರಾಮದ ವಳಲಂಬೆ ಒಕ್ಕೂಟಕ್ಕೆ ನೂತನವಾಗಿ "ಬಂಟಮಲೆ '' ಹೆಸರಿನ ಸಂಘವು ಪುರಂದರ ಕುವೆಕೊಡಿಯವರ ದೀಪ ಬೆಳಗಿಸುವ ಅವರ ಮನೆಯಲ್ಲಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು.ಸಂಘದ ಅಧ್ಯಕ್ಷರಾಗಿ ದಿನೇಶ್ ಹೊಸೊಳಿಕೆ ಕಾರ್ಯದರ್ಶಿ ಸೋಮಪ್ಪ ಕುವೆಕೊಡಿ ಕೋಶಾಧಿಕಾರಿ ವಿನೋದ್ ಕುಮಾರ್ ಹಾಗೂ ಸದಸ್ಯರಾಗಿ ಪುರಂದರ...

ಆ.28 – ವನಜ ರಂಗಮನೆ ಪ್ರಶಸ್ತಿ -2020 ಪ್ರಧಾನ ಕಾರ್ಯಕ್ರಮ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ವತಿಯಿಂದ ಯಕ್ಷಗಾನದ ಹಿರಿಯ ಅರ್ಥದಾರಿ , ವಾಗ್ಮಿ, ವಿದ್ವಾಂಸ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಇವರಿಗೆ ವನಜ ರಂಗಮನೆ ಪ್ರಶಸ್ತಿ -2020 ಪ್ರಧಾನ ಸಮಾರಂಭ ಆ. 28 ಅಪರಾಹ್ನ 3.00 ಗಂಟೆಗೆ ಶಾಸ್ತ್ರಿಗಳ ಮನೆ , ಕನ್ನಡಿಕಟ್ಟೆ , ಪದಂಗಡಿ ಯಲ್ಲಿ ನಡೆಯಲಿದೆ. ಯಕ್ಷಗಾನ ಪೋಷಕರಾದ ಬಿ. ಭುಜಬಲಿ...

ಕ್ಯಾಂಪ್ಕೋ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(26.08.2020 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 190 ಕಾಳುಮೆಣಸುಕಾಳುಮೆಣಸು 250 - 325 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಎ.ವಿ.ತೀರ್ಥರಾಮ ಆಯ್ಕೆ

ಭಾರತೀಯ ಜನತಾ ಪಾರ್ಟಿಯ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಅಂಬೆಕಲ್ಲು ಎ.ವಿ.ತೀರ್ಥರಾಮ ರವರು ಆಯ್ಕೆಯಾಗಿದ್ದಾರೆ.
Loading posts...

All posts loaded

No more posts

error: Content is protected !!