ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಫೆ.15 ಹಾಗೂ 16ರಂದು “ಮಹಾ ಶಿವರಾತ್ರಿ ಉತ್ಸವ” ಹಾಗೂ “ಅಹೋರಾತ್ರಿ ಭಜನಾ ಸೇವೆ”

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಫೆ.15 ಆದಿತ್ಯವಾರ ಹಾಗೂ ಫೆ.16 ಸೋಮವಾರದಂದು “ಮಹಾ ಶಿವರಾತ್ರಿ ಉತ್ಸವ” ಹಾಗೂ “ಆಹೋರಾತ್ರಿ ಭಜನಾ ಸೇವೆ, ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ, ಶ್ರೀ ರಂಗಪೂಜೆ, ನಾಲ್ಕು ಯಾಮಗಳಲ್ಲಿ ಶಿವ ಕಲ್ಪೋಕ್ತ ಪೂಜೆ” ನಡೆಯಲಿದ್ದು, ಫೆ.15 ರಂದು ಬೆಳಿಗ್ಗೆ 6:00 ಗಂಟೆಗೆ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನಾ...

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವೈ.ಎಸ್ ಹರಗಿ ಅಧಿಕಾರ ಸ್ವೀಕಾರ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಯಮನೂರಪ್ಪ ಸಿದ್ಧಪ್ಪ ಹರಗಿ(ವೈ.ಎಸ್ ಹರಗಿ) ರವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಮೂಲತಃ ಮೈಸೂರು ಜಿಲ್ಲೆಯವರಾದ ಇವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರು ಸುಳ್ಯಕ್ಕೆ ವರ್ಗಾವಣೆಗೊಂಡಿದ್ದಾರೆ.
Ad Widget

ಬೆಳ್ಳಾರೆಯಲ್ಲಿ ಬೃಹತ್ ಹಿಂದೂ ಸಂಗಮ ; ವೈಭವದ ಶೋಭಾಯಾತ್ರೆ

ಬೆಳ್ಳಾರೆ ಮಂಡಲದ ಬೆಳ್ಳಾರೆ ಪೆರುವಾಜೆ, ಕೊಡಿಯಾಲ ಗ್ರಾಮದವತಿಯಿಂದ ಹಿಂದೂ ಸಮಾಜದ ಏಕತೆ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಹಾಗೂ ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸುವ ಉದ್ದೇಶದಿಂದ ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆಯು ಫೆ.1 ರಂದು ಬೆಳ್ಳಾರೆಯ ಮಾಸ್ತಿಕಟ್ಟೆಯಿಂದ ನಡೆಯಿತು.ಶೋಭಾಯಾತ್ರೆಯ ಬಳಿಕ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಸಭಾ ಕಾರ್ಯಕ್ರಮ ಜರುಗಿತು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:02-02- 2026 ಸೋಮವಾರ*01,🐏ಮೇಷ ರಾಶಿ🐏*🌻,ಪ್ರಮುಖ ಕಾರ್ಯಕ್ರಮಗಳು ಮುಂದೂಡಲ್ಪಡುತ್ತವೆ. ಕಠಿಣ ಪರಿಶ್ರಮದಿಂದ ನೀವು ದೂರ ಪ್ರಯಾಣ ಮಾಡಬೇಕಾಗುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಮಿತ್ರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗುತ್ತದೆ,ಪರಿಹಾರ:-ಶ್ರೀ ಗುರುವಿನ ಆಂಜನೇಯನ ದರ್ಶನ ಮಾಡಿ,*02,🐂ವೃಷಭ ರಾಶಿ🐂*🌻,ಪ್ರಯಾಣದಲ್ಲಿ ರಸ್ತೆ ಅಡಚಣೆ ಉಂಟಾಗುತ್ತವೆ. ಕೈಗೊಂಡ ಕೆಲಸಗಳಲ್ಲಿ ಆತುರ ಒಳ್ಳೆಯದಲ್ಲ. ಪ್ರತಿಸ್ಪರ್ಧಿಗಳಿಂದ ಹಣಕಾಸಿನ ಒತ್ತಡ...

“ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸುವ ಯುವಶಕ್ತಿ ಆಧಾರಿತ ಬಜೆಟ್” : ಕ್ಯಾಪ್ಟನ್ ಬ್ರಿಜೇಶ್ ಚೌಟ

ನವದೆಹಲಿ : “ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್, ಭಾರತದ ಅಭಿವೃದ್ಧಿ ಪಥದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿದ್ದು, ಇದು ಜನರ ನಿರೀಕ್ಷೆ ಹಾಗೂ ಸಾಮೂಹಿಕ ಸಹಭಾಗಿತ್ವದೊಂದಿಗೆ ಸಿದ್ಧಗೊಂಡ 'ಯುವ ಶಕ್ತಿ' ಆಧಾರಿತ ದೂರದೃಷ್ಟಿಯ ಬಜೆಟ್” ಎಂಬುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಣ್ಣಿಸಿದ್ದಾರೆ. ...

ಪಂಜದ ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೇವರಿಗೆ ರಂಗಪೂಜೆ

ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಜ.31 ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಸಂಜೆ ಪಂಜ ಶಿವಳ್ಳಿ ವಲಯದ ಮಹಿಳಾ ಸದಸ್ಯರಿಂದ ಭಜನಾ ಸಂಕೀರ್ತನೆ, ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡ ಪಲ್ಲೋಡಿ ರವರಿಂದ ಕುಣಿತ ಭಜನೆ, ರಾತ್ರಿ ಶ್ರೀ...

ಕುಲ್ಕುಂದ – ಬಿಸಿಲೆ ಗಡಿ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸುಬ್ರಹ್ಮಣ್ಯ ಫೆಬ್ರವರಿ 01 : ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇಶದಾದ್ಯಂತ ವಿವಿಧ ಭಾಗಗಳಿಂದ ಸಾವಿರಾರು ಜನರು ದಿನಂಪ್ರತಿ ಆಗಮಿಸುತ್ತಿದ್ದಾರೆ‌. ಅದರೊಂದಿಗೆ ರಸ್ತೆಗಳ ಇಕ್ಕೆಲೆಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ವಿವಿಧ ವಾಹನಗಳಲ್ಲಿ ಬರತಕ್ಕಂತಹ ಪ್ರಯಾಣಿಕರು ಎಲ್ಲಿಂದರಲ್ಲಿ ಕಸ, ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ತಟ್ಟೆಗಳನ್ನು ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಹಾಕಿ ಪರಿಸರವನ್ನ ಮಲಿನ ಮಾಡುವಂತದ್ದು ಸರ್ವೇಸಾಮಾನ್ಯವಾಗಿದೆ. ಹಾಗೆಯೇ...

“ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ಕಲೆ, ಸಾಹಿತ್ಯದ ಮೂಲ ಧ್ಯೇಯ” – ಡಾ. ಲಕ್ಷ್ಮೀಶ ತೋಳ್ಪಾಡಿ ; “ಡಾ. ಕೇನಾಜೆ ಸಂವೇದನಾಶೀಲ ಬರಹಗಾರ” : ಅತಿಥಿಗಳ ಅಭಿಮತ  ; ಡಾ. ಸುಂದರ ಕೇನಾಜೆ ಅವರ “ಮಾತಿಲ್ಲದ ಮಾತು” ಕೃತಿ ಬಿಡುಗಡೆ ಹಾಗೂ ಅವರ ಪುಸ್ತಕಗಳ ಪ್ರದರ್ಶನ

ಸುಳ್ಯ : “ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ಕಲೆ ಮತ್ತು ಸಾಹಿತ್ಯದ ಮೂಲ ಧ್ಯೇಯ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದಿದ್ದರೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯವಿಲ್ಲ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಸುಳ್ಯ ಪ್ರೆಸ್ ಕ್ಲಬ್, ಕಾರ್ಯನಿರತ...

ಕವನ : ಪ್ರಕೃತಿಯ ಜೊತೆಗೆ ಬದುಕುವುದೇ ಸಂಸ್ಕೃತಿ… ✍️ಉಲ್ಲಾಸ್ ಕಜ್ಜೋಡಿ

ನಮ್ಮೊಳಗಿನ ಜೀವಕ್ಕೆ ಜೀವಾಳ ಪ್ರಕೃತಿ, ನಮ್ಮೆದೆಯ ಶ್ವಾಸಕ್ಕೆ ಅದು ಉಸಿರ ನೀಡಿ ತೋರುವುದು ಪ್ರೀತಿ, ನಾವುಗಳು ಮಾತ್ರ ಅದರೊಂದಿಗೆ ಸದಾ ಮೆರೆಯುವೆವು ವಿಕೃತಿ...ಕಸ-ಕಡ್ಡಿ-ಪ್ಲಾಸ್ಟಿಕ್ಕುಗಳ ಎಲ್ಲೆಡೆ ಸುರಿಯುವೆವು ಇಲ್ಲದೇ ಯಾವುದೇ ಭವಿಷ್ಯದ ಭೀತಿ, ಮರ-ಗಿಡಗಳ ಎಗ್ಗಿಲ್ಲದೇ ಕಡಿಯುವೆವು ಪ್ರಕೃತಿಯ ಮೇಲೆಯೂ ತೋರದೇ ಪ್ರೀತಿ...ಪ್ರೀತಿ ನೀಡುವವರಿಗೆ ಗೌರವವ ತೋರುವುದು ನಮ್ಮ ನಿಜವಾದ ಸಂಸ್ಕೃತಿ, ಆದರೂ ನಾವ್ಯಾಕೆ ಪ್ರಕೃತಿಯ ಮೇಲೆ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ: 01-02-2026 ಭಾನುವಾರ 📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 01,🐏ಮೇಷ ರಾಶಿ🐏📖,ದೂರದ ಪ್ರದೇಶದಲ್ಲಿರುವ ಆತ್ಮೀಯ ಸ್ನೇಹಿತರಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು,ಪರಿಹಾರ:- ಕುಲ ದೇವರ ಸ್ಮರಣೆ ಮಾಡಿ,02,🐂ವೃಷಭ ರಾಶಿ🐂📖,ಮಿತ್ರರ...
Loading posts...

All posts loaded

No more posts

error: Content is protected !!