ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 15 ನೇ ಶಾಖೆ ಕೊಕ್ಕಡದಲ್ಲಿ ಉದ್ಘಾಟನೆ.

ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 15 ನೇ ನೂತನ ಶಾಖೆಯು ಕೊಕ್ಕಡದಲ್ಲಿ ಶುಭಾರಂಭಗೊಂಡಿದೆ.ದ.ಕ. ಉಸ್ತುವಾರಿ ಸಚಿವ ಎಸ್.ಅಂಗಾರ ದೀಪ ಪ್ರಜ್ವಲನೆಗೊಳಿಸಿದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೂತನ ಶಾಖೆಯನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.ಕೊಕ್ಕಡ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪೂವಾಜೆ...

ಗಟ್ಟಿಗಾರು ಶಾಲೆ ಸಂಪರ್ಕಿಸುವ ರಸ್ತೆ ಕೆಸರುಮಯ: ಶೀಘ್ರ ದುರಸ್ತಿಗೆ ಊರವರ ಆಗ್ರಹ

ನೆಲ್ಲೂರು ಕೇಮ್ರಾಜೆ: ಇಲ್ಲಿನ ಜೀರ್ಮುಖಿ - ಬೊಮ್ಮಾರು ಸಂಪರ್ಕಿಸುವ ಗಟ್ಟಿಗಾರು ಶಾಲೆಯ ಹತ್ತಿರದ ರಸ್ತೆ ಮಳೆಯಿಂದಾಗಿ ಕೆಸರುಮಯವಾಗಿದ್ದು ಅಲ್ಲಿನ ಸಂಚಾರ ದುಸ್ತರವಾಗಿದೆ.ವಿದ್ಯಾಗಮಕ್ಕಾಗಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವಾಗಲೂ ಪೋಷಕರು ಕಷ್ಡಪಡುವಂತಾಗಿದೆ.ಕಳೆದ ಕೆಲ ದಿನಗಳ ಹಿಂದೆ ಮಂದ್ರಪ್ಪಾಡಿಯಲ್ಲಿನ ರಸ್ತೆಯೂ ಅದೇ ಸ್ಥಿತಿಯಲ್ಲಿತ್ತು. ಮಾಧ್ಯಮ ಗಳ ವರದಿಯ ಬಳಿಕ ಪಂಚಾಯತ್ ಅವರು ಎಚ್ಚೆತ್ತುಕೊಂಡು ಜಲ್ಲಿ ಹಾಕಿ ದುರಸ್ತಿ ಮಾಡಿ...
Ad Widget

ಕ್ರೀಡಾ ಭಾರತಿ ಘಟಕ ಸುಳ್ಯ ವತಿಯಿಂದ ಪ್ರಬಂಧ ಸ್ಪರ್ಧೆ

ಕ್ರೀಡಾ ಭಾರತಿ ಘಟಕ ಸುಳ್ಯ ತಾಲೂಕು ಇದರ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನ ಆಚರಣೆಯ ಸಲುವಾಗಿ ವಿವಿಧ ವಿಭಾಗದಲ್ಲಿ ಪ್ರಬಂಧ ಸ್ಪರ್ಧೆಯನ್ನು ನಡೆಸಲು ಉದ್ದೇಶಿಸಲಾಗಿದೆ.ಪ್ರಾಥಮಿಕ ವಿಭಾಗ-ನನ್ನ ನೆಚ್ಚಿನ ಒಲಿಂಪಿಕ್ಸ್ ಕ್ರೀಡಾಪಟು, ಪ್ರೌಢಶಾಲೆ ವಿಭಾಗ-ರಾಷ್ಟಿಯ ಕ್ರೀಡಾ ದಿನಾಚರಣೆ ಮಹತ್ವ , ಕಾಲೇಜು ವಿಭಾಗಕ್ಕೆ ( ಪಿ. ಯು. ಬಳಿಕದ ಎಲ್ಲಾ ವಿದ್ಯಾರ್ಥಿಗಳು) "ಕ್ರೀಡೆ ಮತ್ತು ಕ್ರೀಡಾ ಪಟುಗಳ...

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಜನ್ಮದಿನಾಚರಣೆ

ಬ್ಲಾಕ್ ಕಾಂಗ್ರೆಸ್ ಸಮಿತಿ ಸುಳ್ಯ ವತಿಯಿಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸು ಜನ್ಮದಿನಾಚರಣೆ ಇಂದು ಸುಳ್ಯದ ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪಿಸಿ ಜಯರಾಮ್ ರವರು ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿ ಭಾರತವನ್ನು ವೈಜ್ಞಾನಿಕ...

ಏನೆಕಲ್ಲು : ಕರ್ನಾಟಕ ಅರೆಬಾಸೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ವತಿಯಿಂದ ವಾದ್ಯ ಪರಿಕರಗಳ ವಿತರಣೆ

ಕರ್ನಾಟಕ ಅರೆಬಾಸೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ವಿಶೇಷ ಘಟಕ ಯೋಜನೆಯ ಅಡಿಯಲ್ಲಿ ಅಂದಾಜು 30000/- ಮೊತ್ತದ ವಾದ್ಯ ಪರಿಕರಗಳನ್ನು ಕಡಬ ತಾಲೂಕಿನ ಏನೆಕಲ್ ನಿವಾಸಿ ಪ್ರವೀಣ್ ಇವರಿಗೆ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಸದಸ್ಯರಾದ ಪುರುಷೋತ್ತಮ ಕರಂಗಲ್ಲು, ಕುಸುಮಾದರ ಎ.ಟಿ, ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ,ಪುರುಷೋತ್ತಮ ಕಿರ್ಲಾಯ ಇವರು...

ಹರಿಹರ ಪಲ್ಲತ್ತಡ್ಕ :- ಶಿವಹರಿ ಆಟೋರಿಕ್ಷಾ ಚಾಲಕರ ಸಂಘ ಅಸ್ತಿತ್ವಕ್ಕೆ

ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ, ಬಿ.ಎಂ.ಎಸ್ ಸಂಯೋಜಿತ ಶಿವಹರಿ ಆಟೋರಿಕ್ಷಾ ಚಾಲಕರ ಸಂಘ ಹರಿಹರ ಪಲ್ಲತ್ತಡ್ಕ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮ ಆ.20 ರಂದು ಬಿ.ಎಂ.ಎಸ್ ನ ಅದ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ಅವರ ಅಧ್ಯಕ್ಷತೆಯಲ್ಲಿ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಅದ್ಯಕ್ಷ ಜಯಂತ ಬಾಳುಗೋಡು ದೀಪ ಬೆಳಗಿಸಿ ಕಾರ್ಯಕ್ರಮ...

ಕುಕ್ಕೆ ಸುಬ್ರಹ್ಮಣ್ಯ ಮೂರನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿಗೆ ವೇಗ ನೀಡಲು ಸಚಿವರಿಗೆ ಒತ್ತಾಯ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಮಾಸ್ಟರ್ ಪ್ಲಾನ್ ಮೂರನೇ ಹಂತದ ಕಾಮಗಾರಿಗಳ ಬಗ್ಗೆ ರಾಜ್ಯದ ಮುಜರಾಯಿ ಸಚಿವೆ ಸನ್ಮಾನ್ಯ ಶ್ರೀಮತಿ ಶಶಿಕಲಾ ಜೊಲ್ಲೆ ಅವರಿಗೆ ಸುಳ್ಯ ಕ್ಷೇತ್ರದ ಶಾಸಕರು, ಮಾನ್ಯ ಸಚಿವರು ಆಗಿರುವ ಶ್ರೀ ಎಸ್ ಅಂಗಾರ ಅವರ ನೇತೃತ್ವದಲ್ಲಿ ವಿಕಾಸಸೌಧದ ಕಚೇರಿಗೆ ಭೇಟಿ ನೀಡಿ ವಿವರಗಳನ್ನು ನೀಡಲಾಯಿತು ಈ ಸಂದರ್ಭದಲ್ಲಿ ಈ ಯೋಜನೆಯ ಬಗ್ಗೆ...

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಶಿರಾಡಿ ಘಾಟಿ ವೀಕ್ಷಣೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಆ.17 ರಂದು ಶಿರಾಡಿ ಘಾಟಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ದೋಣಿಗಲ್ ಪ್ರದೇಶದಲ್ಲಿ ಕುಸಿತಗೊಂಡ ಶಿರಾಡಿ ಘಾಟಿ ರಸ್ತೆಯನ್ನು ವೀಕ್ಷಣೆ ನಡೆಸಿದ ಬಳಿಕ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರು ಶಿರಾಡಿ ಘಾಟಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಕುಸಿತ ಸಂಭವಿಸುತ್ತಿದೆ....

ಬೆಳ್ಳಾರೆ: ಹಿರಿಯ ಉದ್ಯಮಿ ಚಂದ್ರಶೇಖರ ಶೆಣೈ ನಿಧನ

ಬೆಳ್ಳಾರೆಯ ಕೆಳಗಿನ ಪೇಟೆಯ ಹಿರಿಯ ಉದ್ಯಮಿ, ಶ್ರೀ ಗುರುರಾಘವೇಂದ್ರ ಸ್ಟೋರ್ಸ್ ನ ಚಂದ್ರಶೇಖರ ಶೆಣೈ ಆ.19ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಚಿತ್ರ ಶೆಣೈ, ಪುತ್ರರಾದ ಚೇತನ್ ಶೆಣೈ, ಶ್ರೀ ಗುರುರಾಘವೇಂದ್ರ ಸ್ಟೋರ್ಸ್ ನಡೆಸುತ್ತಿರುವ ಜೇಸೀ ಬೆಳ್ಳಾರೆಯ ಪೂರ್ವಾಧ್ಯಕ್ಷ ಮಿಥುನ್ ಶೆಣೈ, ಓರ್ವ ಸಹೋದರ, ಮೂವರು ಸಹೋದರಿಯರು...

ಉತ್ತಮ ಸಾಧನೆ ಮಾಡಿದ ಬಡ ವಿದ್ಯಾರ್ಥಿನಿಗೆ ಬಂಟರ ಸಂಘದಿಂದ ಧನಸಹಾಯ

ಬೆಳ್ಳಾರೆ ಗ್ರಾಮದ ಚಾವಡಿಬಾಗಿಲು ಎಂಬಲ್ಲಿ ಜನತಾ ಕಾಲೋನಿಯಲ್ಲಿ ವಾಸಿಸುತ್ತಿರುವ ಯಶೋಧ ರೈ ಎಂಬವರ ಮಗಳು, ವಿದ್ಯಾಭೋದಿನಿ ಪ್ರೌಢಶಾಲೆ ಬಾಳಿಲ ಇಲ್ಲಿನ ವಿದ್ಯಾರ್ಥಿನಿ ಕು. ಚೈತನ್ಯ 2020-21 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 625 ರಲ್ಲಿ 580 ಅಂಕ ಗಳಿಸಿ ಉನ್ನತ ಶ್ರೇಣಿ ಹೊಂದಿದ್ದು, ತೀರಾ ಬಡವರಾಗಿ ರುವ ಇವರು ಅಂತ್ಯೋದಯ...
Loading posts...

All posts loaded

No more posts

error: Content is protected !!