ಗುತ್ತಿಗಾರು : ಸುವರ್ಣ ಸಹಕಾರ ಮಾರ್ಟ್ ನಲ್ಲಿ ವಿಶೇಷ ಬಹುಮಾನ ಗೆಲ್ಲುವ ಅವಕಾಶ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಸಹಕಾರ ಮಾರ್ಟ್ ನಲ್ಲಿ ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಮತ್ತು ಲಕ್ಕಿ ಡ್ರಾದ ಮೂಲಕ ವಿಶೇಷ ಬಹುಮಾನ ಗೆಲ್ಲುವ ಅವಕಾಶವಿದೆ.500 ಮೇಲ್ಪಟ್ಟ ಖರೀದಿಗೆ ಕೂಪನ್ ನೀಡುತ್ತಿದ್ದು, ಡ್ರಾ ವಿಜೇತರಿಗೆ ಪ್ರಥಮ ಬಹುಮಾನ ಮಿಕ್ಸಿ ಗ್ರೈಂಡರ್, ದ್ವಿತೀಯ ಥರ್ಮಲ್ ರೈಸ್ ಕುಕ್ಕರ್ ಪಾಟ್,...

ಪಂಜ : ನವರಾತ್ರಿ ಅಂಗವಾಗಿ ಭಜನಾ ಕಾರ್ಯಕ್ರಮ

ನವರಾತ್ರಿ ಉತ್ಸವದ ಪ್ರಯುಕ್ತ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಎರಡನೇ ದಿನವಾದ ಇಂದು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ (ರಿ) ನಾಗತೀರ್ಥ ಇದರ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಭಕ್ತರಿಗೆ ದೇವಾಲಯದ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಯಿತು.
Ad Widget

ಸುಳ್ಯ: ಸ್ವರ್ಣಶ್ರೀ ಪೈನಾನ್ಸ್ ಶುಭಾರಂಭ

ಅಶ್ವಥ್ ಬಿಳಿಮಲೆ ಮತ್ತು ಕರುಣಾಕರ ಕುದ್ಪಾಜೆ ಮಾಲಕತ್ವದ ಸ್ವರ್ಣಶ್ರೀ ಪೈನಾನ್ಸ್ ಅ. 8 ರಂದು ಶುಭಾರಂಭಗೊಂಡಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಪೈನಾನ್ಸ್ ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗಣೇಶ್ ಉಕ್ರಾಜೆ, ನಿವೃತ್ತ ಸರ್ವೆ ಸುಪರ್ ವೈಸರ್ ರಘುನಾಥನ್ ಆರ್, ನಿವೃತ್ತ ಜಯಂತ್ ಡಿ.ಎಸ್, ಪುಟ್ಟಪ್ಪ ಎನ್.ವಿ,...

ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ನಿಂತಿಕಲ್ಲು: ಲಕ್ಕೀ ಡ್ರಾ ಸ್ಕೀಮ್ ಆರಂಭ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯು ವಿನೂತನ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಇದೀಗ 3ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು 'ಲಕ್ಕೀ ಡ್ರಾ' ಎಂಬ ಹೊಸ ಸ್ಕೀಮ್ ಆರಂಭಿಸುತ್ತಿದೆ. ಈ ಯೋಜನೆಯು ಅ.29ರಿಂದ ಪ್ರಾರಂಭಗೊಳ್ಳಲಿದ್ದು, ಬಂಪರ್ ಬಹುಮಾನವಾಗಿ ಹೀರೋ ಎಚ್.ಎಫ್...

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ – ಶೇಕಡಾ 8.5 ಡಿವಿಡೆಂಡ್ ಘೋಷಣೆ

*ಶೇಕಡಾ 8.5 ಡಿವಿಡೆಂಡ್ ಘೋಷಣೆ* ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020 - 21 ನೇ ಸಾಲಿನ ವಾರ್ಷಿಕ ಮಹಾಸಭೆಯು ಅ.08ರಂದು ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರಿನ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪುರವರು ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿದರು. ಸಂಘದ ಸಿಬ್ಬಂದಿ ಉಮೇಶ್  ಕಾರ್ಯಸೂಚಿ ಮಂಡಿಸಿದರು. ಸಂಘದ...

ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವಗಳು

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ 18 ಪೇಟೆ ದೇವಸ್ಥಾನಗಳಿಗೊಳಪಟ್ಟ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ 'ಶ್ರೀ ನವರಾತ್ರಿ ಮಹೋತ್ಸವಗಳು' ಅ.07ನೇ ಗುರುವಾರದಂದು ಪ್ರಾರಂಭಗೊಂಡಿದ್ದು ಬೆಳಿಗ್ಗೆ ದೀಪೋಜ್ವಲನ ನೆರವೇರಿತು. ಅ.08ರಂದು ಮಧ್ಯಾಹ್ನ ದೇವಸ್ಥಾನದ ಉಭಯ ದೇವರಿಗೆ ಮಹಾಪೂಜೆ ನಡೆಯಿತು. ಬಳಿಕ ಭೂರಿಭೋಜನ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ...

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020 - 21 ನೇ ಸಾಲಿನ ವಾರ್ಷಿಕ ಮಹಾಸಭೆಯು ಅ.08ರಂದು ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರಿನ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪುರವರು ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿದರು. ಸಂಘದ ಪ್ರಥಮ ದರ್ಜೆ ಕ್ಲರ್ಕ್ ಉಮೇಶ್ ಕಾರ್ಯಸೂಚಿ ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ...

ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸುತ್ತಿರುವ ಶ್ರೀರಾಮ ರಂಗತ್ತಮಲೆ

ಪ್ರತಿ ವರ್ಷವು ಕೂಡ ತನ್ನ ಹುಟ್ಟುಹಬ್ಬವನ್ನು ಶ್ರೀರಾಮ ರಂಗತ್ತಮಲೆ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಹೋಟೆಲ್ ವಿಶ್ವಾಸ್ ನಲ್ಲಿ ಉದ್ಯೋಗಿಯಾಗಿರುವ ಇವರು 23ನೇ ಹುಟ್ಟುಹಬ್ಬವನ್ನು ಸಿಬ್ಬಂದಿಗಳಿಗೆ ಡ್ರೆಸ್ ಕೊಡುವುದರ ಜತೆಗೆ ಬಂದ ಎಲ್ಲಾ ಗ್ರಾಹಕರಿಗೆ ಸಿಹಿ ತಿಂಡಿ ಹುಟ್ಟುಹಬ್ಬ ಆಚರಿಸಿಕೊಂಡರು.

ರಂಗಮನೆಯಲ್ಲಿ ನಾಗೇಶ್ ರೈ ಗೆ ನುಡಿನಮನ

ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಕಲಾಪೋಷಕ ಎನ್.ನಾಗೇಶ್ ರೈ ಯವರಿಗೆ ಆತ್ಮೀಯರಿಂದ ನುಡಿನಮನ ಕಾರ್ಯಕ್ರಮ ನಡೆಯಿತು.ಸಾಹಿತಿ ಚಿಂತಕ ಡಾ. ಪ್ರಭಾಕರ ಶಿಶಿಲರವರು ದೀಪ ಪ್ರಜ್ವಲಿಸಿ ನುಡಿನಮನಕ್ಕೆ ಚಾಲನೆ ನೀಡಿ" ಬಹಳಷ್ಟು ಜನರ ಹೃದಯ ಗೆದ್ದ ನಾಗೇಶ್ ರೈ ಓರ್ವ ಸಹೃದಯಿ,ಸಾಂಸ್ಕೃತಿಕವಾಗಿ ಮತ್ತು  ಡಿಟಿಪಿ ಟೈಪಿಂಗ್ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ,ತುಳು...

ಗುತ್ತಿಗಾರು : ಹಿರಿಯ ಪ್ರಾಥಮಿಕ ಶಾಲೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ – ಹೆಚ್ಚುವರಿ ತರಗತಿ ಕೋಣೆ ನಿರ್ಮಾಣಕ್ಕೆ ಬೇಡಿಕೆ

ಗುತ್ತಿಗಾರು ಸ.ಮಾ.ಹಿರಿಯ ಪ್ರಾಥಮಿಕ ಶಾಲೆಗೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅ.7 ರಂದು ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸಂಸದರನ್ನು ಶಾಲಾ ವತಿಯಿಂದ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಶಾಲಾ ಪ್ರಭಾರ ಮುಖ್ಯಶಿಕ್ಷಕ ದಯಾನಂದ ಮುತ್ಲಾಜೆ ಸಂಸದರನ್ನು ಸನ್ಮಾನಿಸಿ, ಹೆಚ್ಚುವರಿ ಕೊಠಡಿ ಬೇಡಿಕೆಯ ಬಗ್ಗೆ ಮನವಿ ಸಲ್ಲಿಸಿದರು. ಮನವಿಗೆ...
Loading posts...

All posts loaded

No more posts

error: Content is protected !!