ಅಯೋಧ್ಯೆ ಕರಸೆವೇಯಲ್ಲಿ ಹುತಾತ್ಮರ ನೆನಪಿಗಾಗಿ ರಕ್ತ ದಾನ ಶಿಬಿರ.

ಅಯೋದ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ನಡೆದ ಕರಸೆವೇಯಲ್ಲಿ ಹುತಾತ್ಮರಾದವರನ್ನ ಸ್ಮರಿಸುವ ಸಲುವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ದ ನೇತೃತ್ವದಲ್ಲಿ ರಕ್ತದಾನ ಶಿಬಿರ ಕೆ ವಿ ಜಿ ರಕ್ತ ನಿಧಿಯಲ್ಲಿ ಅಕ್ಟೊಬರ್ 4 ರಂದು ನಡೆಯಿತು ಈ ಸಂದರ್ಭದಲ್ಲಿ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ್ ಪೈಕ, ಪೆಥಲಾಜಿ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯವತಿ ಆಳ್ವಾ, ರಕ್ತನಿಧಿ...

ಐವರ್ನಾಡು ; ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನ.4 ರಂದು ಚಾಲನೆ ನೀಡಲಾಯಿತು. ದೇವರಕಾನ ವಾರ್ಡಿನ ಕಲ್ಲೋಣಿ-ಕುಳ್ಳಂಪ್ಪಾಡಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯು ಕುಳ್ಳಂಪ್ಪಾಡಿ ಎಂಬಲ್ಲಿ ನಡೆಯಿತು. ಒಟ್ಟು 41,91,000.00 ಮೊತ್ತದ ಮಳೆಹಾನಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ನರೇಗಾ ಯೋಜನೆಯ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯಿತು. ಈ ಗುದ್ದಲಿ ಪೂಜೆ...
Ad Widget

ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ, ಪ್ರತಾಪ ಯುವಕ ಮಂಡಲ(ರಿ)ಅಜ್ಜಾವರವತಿಯಿಂದ-ಬೆಳದಿಂಗಳ ಹರಟೆ ಕಾರ್ಯಕ್ರಮ

ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ ಪ್ರತಾಪ ಯುವಕ ಮಂಡಲ(ರಿ)ಅಜ್ಜಾವರ ವತಿಯಿಂದ ಬೆಳದಿಂಗಳ ಹರಟೆ ಅನ್ನುವ ವಿನೂತನವಾದ ಕಾರ್ಯಕ್ರಮದಲ್ಲಿ ರಸಪ್ರಶ್ನೆ,ಹಾಡು,ನಾಲಿಗೆ ಸುರುಳಿ,ಹರಟೆ ಯೊಂದಿಗೆ, ದೇಹ ಮನಸ್ಸಿಗೆ ಮುದ ನೀಡುವ ಕೆರೆದಂಡೆ ಆಟ ಹಾಗೂ ಮಧುರವಾದ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸುಂದರ ಕ್ಷಣಗಳ ಕಾರ್ಯಕ್ರಮ ಸೂರ್ಯ ನಿಲಯ ಕಲ್ತಡ್ಕದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ...

ಶ್ರೀರಾಂ ಪೇಟೆ – ಕಾರ್ ಮತ್ತು ಬೈಕ್ ಅಪಘಾತ

ಮುಖ್ಯ ರಸ್ತೆ ಯ ಶ್ರೀರಾಂ ಪೇಟೆ ಯಲ್ಲಿ ಇದೀಗ ಬಸ್ ನಿಲ್ದಾಣ ದಿಂದ ಕೆಳಗಿನ ಪೇಟೆ ಕಡೆಗೆ ಬರುತ್ತಿದ್ದ ಬೈಕ್ ಗೆ(,kka21S0412) ಹಿಂಭಾಗದಿಂದ ಬರುತ್ತಿದ್ದ ಕಾರ್ (KL14R7561) ಡಿಕ್ಕಿ ಹೊಡೆದಿದೆ ಪರಿಣಾಮ ಬೈಕ್ ಸವಾರರು ನೆಲಕ್ಕೆ ಬಿದ್ದಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೈಕ್ ಚಾಲಕ ಗೃಹರಕ್ಷಕ ದಳದ ಸಿಬ್ಬಂದಿ ವಿಶ್ವನಾಥ ಎಂದು ತಿಳಿದು ಬಂದಿದೆ.

ಐನೆಕಿದು : ನವಗ್ರಾಮ ದಲ್ಲಿ ಲಯನ್ಸ್ ಕ್ಲಬ್ ವತಿಯಿಂದ “ಲಯನ್ ತುಡರ್” ದೀಪಾವಳಿ ಆಚರಣೆ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ನ.01 ರಂದು ಐನೆಕಿದು ನವಗ್ರಾಮ ದಲ್ಲಿ “ಲಯನ್ ತುಡರ್” ದೀಪಾವಳಿ ಆಚರಣೆ ನಡೆಯಿತು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಲ| ರಾಜೇಶ್.ಎನ್.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಝೋನ್ 2ರ ಅಧ್ಯಕ್ಷರಾದ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ...

ಮೂಲ ಸಂಪ್ರದಾಯ ಆಚರಣೆ ಉಳಿಸಲು ಗೌಡ ಮಹಿಳಾ ಘಟಕದಿಂದ ಬಲೀಂದ್ರ ಅಲಂಕಾರ ಸ್ಪರ್ಧೆ .

ಸುಳ್ಯ ಗೌಡ ಮಹಿಳಾ ಘಟಕದ ವತಿಯಿಂದಲೂ ತಾಲೂಕು ಮಟ್ಟದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ ಸುಳ್ಯ, ದೀಪಾವಳಿ ಹಬ್ಬ ಆಚರಣೆ ತುಳುನಾಡಿನಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲ್ಪಡುತ್ತ ಬಂದಿದೆ. ಹಿಂದಿನ ಸಂಪ್ರದಾಯದಂತೆ ದೀಪಾವಳಿ ಹಬ್ಬವನ್ನು ಇಂದಿಗೂ ಗ್ರಾಮೀಣ ಭಾಗದಲ್ಲಿ ಆಚರಿಸಲಾಗುತ್ತದೆ. ಗೋಪೂಜೆ, ಬಲಿಯೇಂದ್ರ ಪೂಜೆ ಮೊದಲಾದವು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಪ್ರಕೃತಿ ಆರಾಧನೆಗೆ...

ಚೈತ್ರ ಯುವತಿ ಮಂಡಲ ಮತ್ತು ಪ್ರತಾಪ ಯುವಕ ಮಂಡಲ ಅಜ್ಜಾವರ ಗೋಪೂಜೆ ಕಾರ್ಯಕ್ರಮ.

ಸುಳ್ಯ:ಚೈತ್ರ ಯುವತಿ ಮಂಡಲ ಅಜ್ಜಾವರ ಮತ್ತು ಪ್ರತಾಪ ಯುವಕ ಮಂಡಲ ಅಜ್ಜಾವರ,ವಿಶ್ವಹಿಂದೂ ಪರಿಷತ್ ಭಜರಂಗದಳ ಶಿವಾಜಿ ಶಾಖೆ ಅಜ್ಜಾವರ ಇದರ ಸoಯುಕ್ತ ಆಶ್ರಯದಲ್ಲಿ ಗೋಧೂಳಿ ಲಗ್ನದಲ್ಲಿ 4ನೇ ವರ್ಷದ ದೀಪಾವಳಿ ಉತ್ಸವ ಮತ್ತು ಗೋಪೂಜೆ ಕಾರ್ಯಕ್ರಮವು ಶ್ರೀ ಮಹಮ್ಮಾಯಿ ದೇವಸ್ಥಾನ ಮಾವಿನಪಳ್ಳದಲ್ಲಿ ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್ ವಹಿಸಿದ್ದರು.ಸುಳ್ಯ ತಾಲೂಕು ಪಂಚಾಯತ್...

ಮಹಾಲಕ್ಷ್ಮಿ ಎಲೆಕ್ಟ್ರಿಕಲ್ಸ್ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮಿ ಪೂಜೆ, ದುರ್ಗಾ ಪೂಜೆ, ಆಯುಧ ಪೂಜೆ ಹಾಗೂ ಗಣ ಹೋಮ ಕಾರ್ಯಕ್ರಮ

ಸುಳ್ಯದ ರಥಬೀದಿಯಲ್ಲಿರುವ ಬೃಹತ್ ಎಲೆಕ್ಟ್ರಿಕಲ್ ಅಂಗಡಿ ಮಹಾಲಕ್ಷ್ಮಿ ಎಲೆಕ್ಟ್ರಿಕಲ್ಸ್ ಇಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅರ್ಚಕರಾದ ಗೋಪಾಲ ಭಟ್ ನೇತೃತ್ವದಲ್ಲಿ ಲಕ್ಷ್ಮಿ ಪೂಜೆ, ದುರ್ಗಾ ಪೂಜೆ, ಆಯುಧ ಪೂಜೆ ಹಾಗೂ ಗಣ ಹೋಮ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಸಂಜೀವ ನಾಯಕ್ ಹಾಗೂ ಇವರ ಪುತ್ರರಾದ ಸಂದೀಪ್ ನಾಯಕ್ ಮತ್ತು ಕುಟುಂಬಸ್ಥರು ಬಂಧು...

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗೋಕುಲ್ ದಾಸ್ ರಿಗೆ ಅದ್ದೂರಿ ಸ್ವಾಗತ , ಸನ್ಮಾನ ಸ್ವೀಕರಿಸಿ ಮೊದಲ ಮಾತು

ಸುಳ್ಯ: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಮಾಜದಲ್ಲಿ ನಾನಾ ಸ್ತರಗಳಲ್ಲಿ ವಿಶಿಷ್ಟ ಸಾಧನೆ ಗೈದವರನ್ನು ಗುರುತಿಸಿ ಜಿಲ್ಲಾ ಪ್ರಶಸ್ತಿ ನೀಡುತ್ತಿದ್ದು, ಈ ಭಾರಿ ವಿಶೇಷವಾಗಿ ಸಮಾಜ ಸೇವೆ ಎಂದು ಪರಿಗಣಿಸಿ ಗೌರವಾಧ್ಯಕ್ಷರಾದ ಕೆ ಗೋಕುಲ್ ದಾಸ್ ರವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ನವರು ಪ್ರಶಸ್ತಿ ಪ್ರಧಾನ ಮಾಡಿದರು . ಈ ಸಂಧರ್ಭದಲ್ಲಿ ಪ್ರಶಸ್ತಿ ದೊರೆಯಲು...

ಗೋಕುಲ್ ದಾಸ್ ಸುಳ್ಯ ಇವರಿಗೆ 2024-25ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

ಮಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುಳ್ಯದಲ್ಲಿ ಕಳೆದ 50 ವರ್ಷಗಳಿಂದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕ್ರೀಡಾ, ಕಲಾ ಕ್ಷೇತ್ರದಲ್ಲಿ ಅವಿರತ ಸೇವೆಯನ್ನು ಸಲ್ಲಿಸಿ ಸದಾ ಪಾದರಸದಂತೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಗೋಕುಲ್ ದಾಸ್ ಸುಳ್ಯ ಇವರು 2024-25ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು...
Loading posts...

All posts loaded

No more posts

error: Content is protected !!