ಗ್ರಾಮ ಕಾಂಗ್ರೆಸ್ ಮಾಜಿ ಅಧ್ಯಕ್ಷರು ನಿವೃತ್ತ ಮುಖ್ಯ ಶಿಕ್ಷಕ ಪದ್ಮನಾಭ ಪಡ್ಡಂಬೈಲು ನಿಧನಕ್ಕೆ ಧನಂಜಯ ಅಡ್ಪಂಗಾಯ ಸಂತಾಪ

ಸುಳ್ಯ : ಇಂದು ನಿಧನರಾದ ಅಜ್ಜಾವರ ಗ್ರಾಮ ಕಾಂಗ್ರೆಸ್ ಅಧ್ಯಕ್ಷರಾಗಿ 15 ವರ್ಷಗಳ ಕಾಲ ಪಕ್ಷಕ್ಕೆ ಸೇವೆ ಸಲ್ಲಿಸಿದ ಪದ್ಮನಾಭ ಪಡ್ಡoಬೈಲು ಅವರು 42 ವರ್ಷಗಳ ಕಾಲ ಅಧ್ಯಾಪಕರಾಗಿ , ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಕಾಂಗ್ರೆಸ್ ಪಕ್ಷದ ಅಜ್ಜಾವರ ಗ್ರಾಮ ಸಮಿತಿ ಅಧ್ಯಕ್ಷರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ ಅವರ ಧರ್ಮಪತ್ನಿ ದಿ....

ನಿವೃತ್ತ ಮುಖ್ಯ ಶಿಕ್ಷಕ ಪದ್ಮನಾಭ ಪಡ್ಡಂಬೈಲು ನಿಧನ.

ಸುಳ್ಯ : ಅಜ್ಜಾವರ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಪದ್ಮನಾಭ ಮಾಸ್ತರ್ ಇಂದು ನಿಧನರಾಗಿದ್ದಾರೆ . ವಯೋ ಸಹಜ ಮರಣವಾಗಿದ್ದು ಇವರು ಪುತ್ರರಾದ ಸುಬ್ರಹ್ಮಣ್ಯ ಪಡ್ಡಂಬೈಲು , ಅರುಣ ಕುಮಾರ್ ಪುತ್ರಿಯರಾದ ಪುಷ್ಪ , ಸುಮಲತಾ , ಸ್ವರ್ಣಲತಾ , ಸ್ನೇಹಲತಾ ಹಾಗೂ ಅಪಾರ ವಿದ್ಯಾರ್ಥಿ ವೃಂದ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
Ad Widget

ನ.06 ರಂದು ದೇವಚಳ್ಳ ಗ್ರಾ. ಪಂ. ವ್ಯಾಪ್ತಿಯ ಅಂಗಡಿ ಕೋಣೆಗಳ ಏಲಂ

ದೇವಚಳ್ಳ ಗ್ರಾ. ಪಂ. ನ ಅಧೀನವಿರುವ ಎಲಿಮಲೆ, ಮಾವಿನಕಟ್ಟೆ, ಕಂದ್ರಪ್ಪಾಡಿ ಬಸ್ಸು ತಂಗುದಾಣದ ಬಳಿ ಇರುವ ಅಂಗಡಿ ಕಟ್ಟಡವನ್ನು ದಿನಾಂಕ 06/11/2024 ಬುಧವಾರ ಪೂ. ಗಂ. 10.00ಕ್ಕೆ ಗ್ರಾ. ಪಂ. ಸಭಾಂಗಣದಲ್ಲಿ ಮುಂದಿನ 3 ವರ್ಷದ ಅವಧಿಗೆ ಬಹಿರಂಗ ಏಲಂ ಮಾಡಲಾಗುವುದು. ಆಸಕ್ತರು ಭಾಗವಹಿಸುವುದಾಗಿದೆ. ಏಲಂ ಶರ್ತಗಳನ್ನು ಕಛೇರಿ ಸಮಯದಲ್ಲಿ ತಿಳಿಯಬಹುದು ಎಂದು ಪಂಚಾಯತ್ ಪ್ರಕಟಣೆಯಲ್ಲಿ...

ರಾಜ್ಯದಲ್ಲಿ ರೈತರ ಜಮೀನಿನ ಪಹಣಿಯಲ್ಲಿ ವಕ್ಪ್ ಹೆಸರು ಜೋಡಣೆ ವಿರುದ್ದ ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ.

ನಾಯಿ ಬೀಲವನ್ನು ಅಲ್ಲಾಡಿಸಬೇಕು ಹೊರತು ಬೀಲ ನಾಯಿಯನ್ನು ಅಲ್ಲಾಡಿಸಬಾರದು - ಸುಬೋದ್ ಶೆಟ್ಟಿ ಮೇನಾಲ. ರಾಜ್ಯ ಸಿದ್ದರಾಮಯ್ಯ ಸರಕಾರ ರೈತ ಹಾಗೂ ಹಿಂದು ವಿರೋಧಿ ಧೋರಣೆ ಮಾಡುತ್ತಿದೆ - ವೆಂಕಟ್ ವಳಲಂಬೆ . ಭಾಗ್ಯಗಳಿಗಾಗಿ ಮೊದಲು ಎಸ್ಸಿ ,ಎಸ್ಟಿ ಹಣ ಬಳಕೆ ಇದೀಗ ರೈತರ ಜಮೀನು ಸರಕಾರಿ ಜಮೀನು ಮೇಲೆ ಕಣ್ಣು - ಭಾಗೀರಥಿ ಮುರುಳ್ಯ....

ಅಯೋಧ್ಯೆ ಕರಸೆವೇಯಲ್ಲಿ ಹುತಾತ್ಮರ ನೆನಪಿಗಾಗಿ ರಕ್ತ ದಾನ ಶಿಬಿರ.

ಅಯೋದ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ನಡೆದ ಕರಸೆವೇಯಲ್ಲಿ ಹುತಾತ್ಮರಾದವರನ್ನ ಸ್ಮರಿಸುವ ಸಲುವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ದ ನೇತೃತ್ವದಲ್ಲಿ ರಕ್ತದಾನ ಶಿಬಿರ ಕೆ ವಿ ಜಿ ರಕ್ತ ನಿಧಿಯಲ್ಲಿ ಅಕ್ಟೊಬರ್ 4 ರಂದು ನಡೆಯಿತು ಈ ಸಂದರ್ಭದಲ್ಲಿ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ್ ಪೈಕ, ಪೆಥಲಾಜಿ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯವತಿ ಆಳ್ವಾ, ರಕ್ತನಿಧಿ...

ಐವರ್ನಾಡು ; ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನ.4 ರಂದು ಚಾಲನೆ ನೀಡಲಾಯಿತು. ದೇವರಕಾನ ವಾರ್ಡಿನ ಕಲ್ಲೋಣಿ-ಕುಳ್ಳಂಪ್ಪಾಡಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯು ಕುಳ್ಳಂಪ್ಪಾಡಿ ಎಂಬಲ್ಲಿ ನಡೆಯಿತು. ಒಟ್ಟು 41,91,000.00 ಮೊತ್ತದ ಮಳೆಹಾನಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ನರೇಗಾ ಯೋಜನೆಯ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯಿತು. ಈ ಗುದ್ದಲಿ ಪೂಜೆ...

ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ, ಪ್ರತಾಪ ಯುವಕ ಮಂಡಲ(ರಿ)ಅಜ್ಜಾವರವತಿಯಿಂದ-ಬೆಳದಿಂಗಳ ಹರಟೆ ಕಾರ್ಯಕ್ರಮ

ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ ಪ್ರತಾಪ ಯುವಕ ಮಂಡಲ(ರಿ)ಅಜ್ಜಾವರ ವತಿಯಿಂದ ಬೆಳದಿಂಗಳ ಹರಟೆ ಅನ್ನುವ ವಿನೂತನವಾದ ಕಾರ್ಯಕ್ರಮದಲ್ಲಿ ರಸಪ್ರಶ್ನೆ,ಹಾಡು,ನಾಲಿಗೆ ಸುರುಳಿ,ಹರಟೆ ಯೊಂದಿಗೆ, ದೇಹ ಮನಸ್ಸಿಗೆ ಮುದ ನೀಡುವ ಕೆರೆದಂಡೆ ಆಟ ಹಾಗೂ ಮಧುರವಾದ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸುಂದರ ಕ್ಷಣಗಳ ಕಾರ್ಯಕ್ರಮ ಸೂರ್ಯ ನಿಲಯ ಕಲ್ತಡ್ಕದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ...

ಶ್ರೀರಾಂ ಪೇಟೆ – ಕಾರ್ ಮತ್ತು ಬೈಕ್ ಅಪಘಾತ

ಮುಖ್ಯ ರಸ್ತೆ ಯ ಶ್ರೀರಾಂ ಪೇಟೆ ಯಲ್ಲಿ ಇದೀಗ ಬಸ್ ನಿಲ್ದಾಣ ದಿಂದ ಕೆಳಗಿನ ಪೇಟೆ ಕಡೆಗೆ ಬರುತ್ತಿದ್ದ ಬೈಕ್ ಗೆ(,kka21S0412) ಹಿಂಭಾಗದಿಂದ ಬರುತ್ತಿದ್ದ ಕಾರ್ (KL14R7561) ಡಿಕ್ಕಿ ಹೊಡೆದಿದೆ ಪರಿಣಾಮ ಬೈಕ್ ಸವಾರರು ನೆಲಕ್ಕೆ ಬಿದ್ದಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೈಕ್ ಚಾಲಕ ಗೃಹರಕ್ಷಕ ದಳದ ಸಿಬ್ಬಂದಿ ವಿಶ್ವನಾಥ ಎಂದು ತಿಳಿದು ಬಂದಿದೆ.

ಐನೆಕಿದು : ನವಗ್ರಾಮ ದಲ್ಲಿ ಲಯನ್ಸ್ ಕ್ಲಬ್ ವತಿಯಿಂದ “ಲಯನ್ ತುಡರ್” ದೀಪಾವಳಿ ಆಚರಣೆ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ನ.01 ರಂದು ಐನೆಕಿದು ನವಗ್ರಾಮ ದಲ್ಲಿ “ಲಯನ್ ತುಡರ್” ದೀಪಾವಳಿ ಆಚರಣೆ ನಡೆಯಿತು.ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಲ| ರಾಜೇಶ್.ಎನ್.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಝೋನ್ 2ರ ಅಧ್ಯಕ್ಷರಾದ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಹಾಗೂ ಕಾರ್ಯಕ್ರಮದ ಪ್ರಾಯೋಜಕರಾದ...

ಮೂಲ ಸಂಪ್ರದಾಯ ಆಚರಣೆ ಉಳಿಸಲು ಗೌಡ ಮಹಿಳಾ ಘಟಕದಿಂದ ಬಲೀಂದ್ರ ಅಲಂಕಾರ ಸ್ಪರ್ಧೆ .

ಸುಳ್ಯ ಗೌಡ ಮಹಿಳಾ ಘಟಕದ ವತಿಯಿಂದಲೂ ತಾಲೂಕು ಮಟ್ಟದ ಬಲಿಯೇಂದ್ರ ಅಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ ಸುಳ್ಯ, ದೀಪಾವಳಿ ಹಬ್ಬ ಆಚರಣೆ ತುಳುನಾಡಿನಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲ್ಪಡುತ್ತ ಬಂದಿದೆ. ಹಿಂದಿನ ಸಂಪ್ರದಾಯದಂತೆ ದೀಪಾವಳಿ ಹಬ್ಬವನ್ನು ಇಂದಿಗೂ ಗ್ರಾಮೀಣ ಭಾಗದಲ್ಲಿ ಆಚರಿಸಲಾಗುತ್ತದೆ. ಗೋಪೂಜೆ, ಬಲಿಯೇಂದ್ರ ಪೂಜೆ ಮೊದಲಾದವು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಪ್ರಕೃತಿ ಆರಾಧನೆಗೆ...
Loading posts...

All posts loaded

No more posts

error: Content is protected !!