ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರ ಅಧ್ಯಕ್ಷತೆಯಲ್ಲಿ ನಗರ ಪಂಚಾಯತ್ ಸಭಾಂಗಣದಲ್ಲಿ ನ.೫ರಂದು ನಡೆಯಿತು.ವಸತಿ ಸಂಬoಧಿಸಿದ ಹಂಚಿಕೆ ಮಾಡಲಾದ ತಾತ್ಕಲಿಕ ಪಟ್ಟಿಯ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.ನಗರ ಪಂಚಾಯತ್‌ಗಳಲ್ಲಿ ಸೀಮಿತ ಅನುದಾನ ಇರುವಾಗ ಇಲ್ಲಿನ ಅನುದಾನವನ್ನು ನಗರದ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಬಳಸಬೇಕು. ಮತ್ತಿತರ ಕೆಲಸಗಳಿಗೆ ಎಂಎಲ್‌ಎ,...

ಅಜ್ಜಾವರ: ಬೆಳದಿಂಗಳ ಹರಟೆ ಕಾರ್ಯಕ್ರಮ

ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ, ಪ್ರತಾಪ ಯುವಕ ಮಂಡಲ(ರಿ)ಅಜ್ಜಾವರ ವತಿಯಿಂದ ಬೆಳದಿಂಗಳ ಹರಟೆ ಅನ್ನುವ ವಿನೂತನವಾದ ಕಾರ್ಯಕ್ರಮದಲ್ಲಿ ರಸಪ್ರಶ್ನೆ,ಹಾಡು,ನಾಲಿಗೆ ಸುರುಳಿ,ಹರಟೆ ಯೊಂದಿಗೆ, ದೇಹ ಮನಸ್ಸಿಗೆ ಮುದ ನೀಡುವ ಕೆರೆದಂಡೆ ಆಟ ಹಾಗೂ ಮಧುರವಾದ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸುಂದರ ಕ್ಷಣಗಳ ಕಾರ್ಯಕ್ರಮ ಸೂರ್ಯ ನಿಲಯ ಕಲ್ತಡ್ಕದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ...
Ad Widget

ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

ದುಗಲಡ್ಕದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸ್ಥಳ ಗುರುತಿಸಿದ ಬಗ್ಗೆ ಒಂದು ವಾರದಲ್ಲಿ ವರದಿ ನೀಡುವಂತೆ ಸೂಚನೆ. ಬಡ ರೈತರ ಜಾಗ ಗುರುತಿಸುವಾಗ ಅರಣ್ಯದ ಆಕ್ಷೇಪಣೆ ಕುರಿತು ಗಮನ ಸೆಳೆದೆ ತಹಶೀಲ್ದಾರ್. ಗುಳಿಕಾನ ಸಂತ್ರಸ್ತರ ನಿವೇಶನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಸುಳ್ಯ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಗಿರೀಶ್ ನಂದನ್ ಅವರ ಅಧ್ಯಕ್ಷತೆಯಲ್ಲಿ...

ಸುಳ್ಯ KSRTC ಬಸ್ಸುತಂಗುದಾಣಕ್ಕೆ ಧಿಡೀರ್ ಭೇಟಿ ನೀಡಿದ ಶಾಸಕರುಸುಳ್ಯದಿಂದ ವಿವಿದ ಕಡೆಗಳಿಗೆ ತೆರಳುವ ಬಸ್ಸುಗಳು ಸರಿಯಾದ ಸಮಯದಲ್ಲಿ ಸಂಚರಿಸದೆ ಇರುವ ಬಗ್ಗೆ ಪದೆ ಪದೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ದಿಢೀರ್ ಭೇಟಿಮಾಡಿದ ಶಾಸಕರಾದ ಭಾಗೀರಥಿ ಮುರುಳ್ಯ ಅಧಿಕಾರಿಗಳನ್ನು ತರಟೆಗೆ ತೆಗೆದುಕೊಂಡು ಸರಿಯಾಗಿ ಸಮಯಕ್ಕೆ ಬಸ್ಸು ಕಲ್ಪಿಸಿ ಸಾರ್ವಜನಿಕರಿಗೆ ಬಸ್ಸು ಲಭ್ಯವಾಗುವಂತೆ ವ್ಯವಸ್ಥೆ ಮಾಡುವಂತೆ ತಿಳಿಸಿದರು, ಒಂದು ವಾರದಲ್ಲೇ ಬಸ್ಸು ವ್ಯವಸ್ಥೆ ಸರಿಯಾಗೆ ಇದ್ದಲ್ಲಿ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು, ಸ್ಥಳದಲ್ಲಿಯೇ ಸುಮಾರು ವಿದ್ಯಾರ್ಥಿಗಳು, ಮಹಿಳೆಯರು, ಶಾಸಕರ ಜೊತೆ ಸಮಸ್ಯೆಯನ್ನು ಹೇಳಿಕೊಂಡರು ಇದಕ್ಕೆ ಸ್ಪಂದಿಸಿದ ಶಾಸಕರು ಶೀಘ್ರವಾಗಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎನ್ ಎ, ರಾಮಚಂದ್ರ, ಎಸ್,ಎನ್, ಮನ್ಮಥ,ರಂಜನ್, ಪ್ರಸಾದ್ ಕಾಟೂರು ಉಪಸ್ಥಿತರಿದ್ದರು.

ಕೃಷಿಕರಿಗೆ ಗುಡ್ ನ್ಯೂಸ್ , ಬೆಳೆ ವಿಮೆ ಪಾವತಿಸಿದ ರೈತರಿಗೆ ಪಾವತಿ ಪ್ರಕ್ರಿಯೆ ಆರಂಭ.

ಸುಳ್ಯ : ಅತೀವವಾದ ಮಳೆಯಿಂದ ಕೊಳೆರೋಗ ಹಾಗೂ ಹಳದಿರೋಗ ಸಹಿತ ರೈತರು ಕಂಗಾಲಾಗಿದ್ದು ಈ ಸಂದರ್ಭದಲ್ಲಿ ರೈತರಿಗೆ ಅನುಕೂಲಕರವಾಗುವಂತೆ ಕೇಂದ್ರ ಸರಕಾರ ವಿಮೆ ಯೋಜನೆಯನ್ನು ಜಾರಿಗೆ ತಂದು ಚುನಾವಣೆ ಬಂದ ಹಿನ್ನೆಲೆಯಲ್ಲಿ ಒಂದಿಷ್ಟು ಗೊಂದಲಗಳು ಹಾಗೂ ರೈತರ ಆಕ್ರೋಶದ ಬಳಿಕ ಅಡಿಕೆ ಮತ್ತು ಇತರೆ ಬೆಳೆಗಳಿಗೆ ವಿಮೆಯನ್ನು ಜಾರಿಗೊಳಿಸಿತ್ತು. ಇದೀಗ ರೈತರ ಖಾತೆಗಳಿಗೆ ಪ್ರೀಮಿಯಂ ಕಟ್ಟಿದ...

ಜೇಸಿಐ ವಿದ್ಯಾರ್ಥಿ ವೇತನಕ್ಕೆ ಬೆಳ್ಳಾರೆ ಕೆ.ಪಿ. ಎಸ್ ನ ನಾಲ್ವರು ವಿದ್ಯಾರ್ಥಿಗಳು ಆಯ್ಕೆ

9 ರಿಂದ 12ನೇ ತರಗತಿಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಜೇಸಿಐ ವತಿಯಿಂದ ನೀಡುವ ವಿದ್ಯಾರ್ಥಿ ವೇತನಕ್ಕೆ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ನಾಲ್ಕು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಬೆಳ್ಳಾರೆ ಜೇಸಿಐ ಘಟಕದ ವತಿಯಿಂದ ಕೆಪಿಎಸ್ ನಲ್ಲಿ ನಡೆದ ಪೋಷಕರ ಸಭೆಯಲ್ಲಿ ಅಭಿನಂದಿಸಲಾಯಿತು. ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ, ಸದಸ್ಯ...

ಗ್ರಾಮ ಕಾಂಗ್ರೆಸ್ ಮಾಜಿ ಅಧ್ಯಕ್ಷರು ನಿವೃತ್ತ ಮುಖ್ಯ ಶಿಕ್ಷಕ ಪದ್ಮನಾಭ ಪಡ್ಡಂಬೈಲು ನಿಧನಕ್ಕೆ ಧನಂಜಯ ಅಡ್ಪಂಗಾಯ ಸಂತಾಪ

ಸುಳ್ಯ : ಇಂದು ನಿಧನರಾದ ಅಜ್ಜಾವರ ಗ್ರಾಮ ಕಾಂಗ್ರೆಸ್ ಅಧ್ಯಕ್ಷರಾಗಿ 15 ವರ್ಷಗಳ ಕಾಲ ಪಕ್ಷಕ್ಕೆ ಸೇವೆ ಸಲ್ಲಿಸಿದ ಪದ್ಮನಾಭ ಪಡ್ಡoಬೈಲು ಅವರು 42 ವರ್ಷಗಳ ಕಾಲ ಅಧ್ಯಾಪಕರಾಗಿ , ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಕಾಂಗ್ರೆಸ್ ಪಕ್ಷದ ಅಜ್ಜಾವರ ಗ್ರಾಮ ಸಮಿತಿ ಅಧ್ಯಕ್ಷರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ ಅವರ ಧರ್ಮಪತ್ನಿ ದಿ....

ನಿವೃತ್ತ ಮುಖ್ಯ ಶಿಕ್ಷಕ ಪದ್ಮನಾಭ ಪಡ್ಡಂಬೈಲು ನಿಧನ.

ಸುಳ್ಯ : ಅಜ್ಜಾವರ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಪದ್ಮನಾಭ ಮಾಸ್ತರ್ ಇಂದು ನಿಧನರಾಗಿದ್ದಾರೆ . ವಯೋ ಸಹಜ ಮರಣವಾಗಿದ್ದು ಇವರು ಪುತ್ರರಾದ ಸುಬ್ರಹ್ಮಣ್ಯ ಪಡ್ಡಂಬೈಲು , ಅರುಣ ಕುಮಾರ್ ಪುತ್ರಿಯರಾದ ಪುಷ್ಪ , ಸುಮಲತಾ , ಸ್ವರ್ಣಲತಾ , ಸ್ನೇಹಲತಾ ಹಾಗೂ ಅಪಾರ ವಿದ್ಯಾರ್ಥಿ ವೃಂದ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ನ.06 ರಂದು ದೇವಚಳ್ಳ ಗ್ರಾ. ಪಂ. ವ್ಯಾಪ್ತಿಯ ಅಂಗಡಿ ಕೋಣೆಗಳ ಏಲಂ

ದೇವಚಳ್ಳ ಗ್ರಾ. ಪಂ. ನ ಅಧೀನವಿರುವ ಎಲಿಮಲೆ, ಮಾವಿನಕಟ್ಟೆ, ಕಂದ್ರಪ್ಪಾಡಿ ಬಸ್ಸು ತಂಗುದಾಣದ ಬಳಿ ಇರುವ ಅಂಗಡಿ ಕಟ್ಟಡವನ್ನು ದಿನಾಂಕ 06/11/2024 ಬುಧವಾರ ಪೂ. ಗಂ. 10.00ಕ್ಕೆ ಗ್ರಾ. ಪಂ. ಸಭಾಂಗಣದಲ್ಲಿ ಮುಂದಿನ 3 ವರ್ಷದ ಅವಧಿಗೆ ಬಹಿರಂಗ ಏಲಂ ಮಾಡಲಾಗುವುದು. ಆಸಕ್ತರು ಭಾಗವಹಿಸುವುದಾಗಿದೆ. ಏಲಂ ಶರ್ತಗಳನ್ನು ಕಛೇರಿ ಸಮಯದಲ್ಲಿ ತಿಳಿಯಬಹುದು ಎಂದು ಪಂಚಾಯತ್ ಪ್ರಕಟಣೆಯಲ್ಲಿ...

ರಾಜ್ಯದಲ್ಲಿ ರೈತರ ಜಮೀನಿನ ಪಹಣಿಯಲ್ಲಿ ವಕ್ಪ್ ಹೆಸರು ಜೋಡಣೆ ವಿರುದ್ದ ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ.

ನಾಯಿ ಬೀಲವನ್ನು ಅಲ್ಲಾಡಿಸಬೇಕು ಹೊರತು ಬೀಲ ನಾಯಿಯನ್ನು ಅಲ್ಲಾಡಿಸಬಾರದು - ಸುಬೋದ್ ಶೆಟ್ಟಿ ಮೇನಾಲ. ರಾಜ್ಯ ಸಿದ್ದರಾಮಯ್ಯ ಸರಕಾರ ರೈತ ಹಾಗೂ ಹಿಂದು ವಿರೋಧಿ ಧೋರಣೆ ಮಾಡುತ್ತಿದೆ - ವೆಂಕಟ್ ವಳಲಂಬೆ . ಭಾಗ್ಯಗಳಿಗಾಗಿ ಮೊದಲು ಎಸ್ಸಿ ,ಎಸ್ಟಿ ಹಣ ಬಳಕೆ ಇದೀಗ ರೈತರ ಜಮೀನು ಸರಕಾರಿ ಜಮೀನು ಮೇಲೆ ಕಣ್ಣು - ಭಾಗೀರಥಿ ಮುರುಳ್ಯ....
Loading posts...

All posts loaded

No more posts

error: Content is protected !!