ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ತಾಲೂಕು ಕಚೇರಿಯಲ್ಲಿ ಸಾಂಕೇತಿಕ ಪ್ರತಿಭಟನೆ

ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ಸಮಿತಿಯ ಅಧ್ಯಕ್ಷ ಬಿಎಂ ಭಟ್ ರವರ ನೇತೃತ್ವದಲ್ಲಿ ಸುಳ್ಯ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ಇಂದು ತಾಲೂಕು ಕಚೇರಿ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮೈಕ್ರೋ ಫೈನಾನ್ಸ್ ಗಳು ನೀಡಿರುವ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಯಿತು.ಕೊರೋಣ ಮಹಾಮಾರಿ ದೇಶದೆಲ್ಲೆಡೆ ವ್ಯಾಪಕವಾಗಿ...

ಅಡ್ಕಾರ್ ಅಗ್ನಿಶಾಮಕ ವಾಹನ ಪಲ್ಟಿ

ಅಡ್ಕಾರ್ ಅಗ್ನಿಶಾಮಕ ವಾಹನ ಪಲ್ಟಿಅಡ್ಕಾರ್ ಬಳಿ ಅಗ್ನಿಶಾಮಕ ವಾಹನ ಪಲ್ಟಿಯಾದ ಘಟನೆ ಇಂದು ನಡೆದಿದೆ.ವಾಹನ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿದೆ. ಈ ವೇಳೆ ವಿದ್ಯುತ್ ಲೈನ್ ಪವರ್ ಆಫ್ ಇದ್ದುದರಿಂದ ಸಂಭಾವ್ಯ ಆಪಾಯ ತಪ್ಪಿದೆ.
Ad Widget

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(04.07.2020 ಶನಿವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 262ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ವಾಕಿಂಗ್ ವೇಳೆ ಹೃದಯಾಘಾತ ಸುಬ್ರಹ್ಮಣ್ಯ ಶಾಸ್ತ್ರಿ ವಿಧಿವಶ

ನಿವೃತ್ತ ಯೋಧ , ಗುತ್ತಿಗಾರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಗುತ್ತಿಗಾರು ನಿವಾಸಿ ಸುಬ್ರಹ್ಮಣ್ಯ ಶಾಸ್ತ್ರಿಯವರು ಇಂದು ಮುಂಜಾನೆ ವಾಕಿಂಗ್ ಹೋಗುತ್ತಿದ್ದಾಗ ಹೃದಯಾಘಾತದಿಂದ ನಿಧನರಾದ ಘಟನೆ ವರದಿಯಾಗಿದೆ . ಅವರಿಗೆ ಸುಮಾರು 74 ವರ್ಷ ವಯಸ್ಸಾಗಿತ್ತು . ಶಾಸ್ತ್ರಿಯವರು ಪ್ರತಿದಿನ ಬೆಳಿಗ್ಗೆ 4.30 ಕ್ಕೆ ವಾಕಿಂಗ್ ಹೊರಡುತ್ತಿದ್ದರು . ವಳಲಂಬೆ...

ಸುಳ್ಯ ಸರ್ಕಾರಿ ಆಸ್ಪತ್ರೆಯ ಐಸಿಯು ಘಟಕಕ್ಕೆ ಕೊರೋನಾ ಮಹಾಮಾರಿ ಕಾಲು ಇಟ್ಟಿತೇ? – ನಿನ್ನೆ ಪ್ರಥಮ ಬಲಿ

ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ , ಹೃದಯಾಘಾತದಿಂದ ಮೃತಪಟ್ಟ ಸುಳ್ಯದ ಕೆರೆಮೂಲೆ ನಿವಾಸಿ ರೋಟರಿ ಶಾಲೆ ಸುಂದರಿಯವರ ಕೊರೋನ ಪರೀಕ್ಷೆಯ ವರದಿ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ . ಅವರು ವಾರದ ಹಿಂದೆ ಅಸೌಖ್ಯಕ್ಕೊಳಗಾಗಿ ಸುಳ್ಯದ ಸರಕಾರಿ ಆಸ್ಪತ್ರೆಯ ಐಸಿಯು ಘಟಕದಲ್ಲಿ ದಾಖಲಾಗಿದ್ದರು ಎಂದು ಹೇಳಲಾಗುತ್ತಿದೆ.. ಅದೇ ಸಮಯದಲ್ಲಿ ಆ ವಾರ್ಡಿನಲ್ಲಿ ಸೋಣಂಗೇರಿಯ ವೃದ್ಧರೊಬ್ಬರು ಕೂಡ...

ಜಟ್ಟಿಪಳ್ಳದ ಯುವಕನಿಗೆ ದುಬೈನಲ್ಲಿ ಹತ್ತು ಲಕ್ಷ ರೂಪಾಯಿಗಳ ಲಾಟರಿ

ಸುಳ್ಯದ ಯುವಕನಿಗೆ ದುಬೈ ಮೂಲದ ಆನ್ ಲೈನ್ ಬಿಗ್ ಟಿಕೆಟ್ ಲಾಟರಿ ಮೂಲಕ 50,000 ದಿರಾಮ್ಸ್ ಅಂದರೆ ಸುಮಾರು 10 ಲಕ್ಷ ರೂಪಾಯಿ ಬಹುಮಾನ ಬಂದಿದೆ . ಸುಳ್ಯದ ಜಟ್ಟಿಪಳ್ಳದ ಮಹಮ್ಮದ್ ರಫೀಕ್ ಎಂಬವರಿಗೆ ಈ ಲಾಟರಿ ಬಂದಿದೆ ಎಂದು ತಿಳಿದುಬಂದಿದೆ. ಕಳೆದ ಹಲವು ವರ್ಷಗಳಿಂದ ಯುವಕ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ . ಈ ಹಿಂದೆ ಸುಳ್ಯದ...

ಸುಂದರಿ ಕೆರೆಮೂಲೆ ನಿಧನ

ಸುಳ್ಯ ಕಸಬಾ ಕೆರೆಮೂಲೆ ನಿವಾಸಿ ದಿ. ಸುಕುಮಾರ ಬಂಗೇರರವರ ಪತ್ನಿ ಸುಂದರಿಯ(62 ) ಹೃದಯಾಘಾತದಿಂದ ಇಂದು ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಕೆಲದಿನದ ಹಿಂದೆ ಎದೆನೋವು ಕಾಣಿಸಿಕೊಂಡ ಇವರನ್ನು ಸುಳ್ಯದ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಪರೀಕ್ಷೆ ವೇಳೆ ನ್ಯುಮೋನಿಯಾ ಇರುವುದು ಗೊತ್ತಾಗಿ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಅವರು ಹೃದಯಾಘಾತದಿಂದ ನಿಧನರಾದರು. ಸುಂದರಿಯವರು ರೋಟರಿ...

ಕಡಬ,ನೆಲ್ಯಾಡಿ, ಸುಬ್ರಹ್ಮಣ್ಯದಲ್ಲಿ ಜುಲೈ 4,7,9 ರಂದು ಕರೆಂಟಿಲ್ಲ

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತವು ಪ್ರಕಟಣೆ ಹೊರಡಿಸಿದ್ದು , 33.ಕೆ.ವಿ ಪುತ್ತೂರು - ಕಡಬ ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಜುಲೈ 04 ಶನಿವಾರ , ಜುಲೈ 07 ಮಂಗಳವಾರ ಹಾಗೂ ಜುಲೈ 09 ಗುರುವಾರ ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು .ಆದುದರಿಂದ 33/11 ಕೆ.ವಿ. ಕಡಬ...

ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಠಿಕ ಆಹಾರ ವಿತರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ ವತಿಯಿಂದ 9 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿ , ಬಾಣಂತಿಯರಿಗೆ ಪೌಷ್ಠಿಕ ಆಹಾರ ( ಅಕ್ಕಿ , ಹಾಲು ಹುಡಿ, ಸಕ್ಕರೆ , ಹೆಸರು , ಮೊಟ್ಟೆ , ಬೆಲ್ಲ , ನೆಲಕಡಲೆ ಇತ್ಯಾದಿ ) ವನ್ನು ಪಂಜ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾಯಿತು ....

ಜುಲೈ 31ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧ

ನವದೆಹಲಿ : ವಿಮಾನಯಾನ ನಿಯಂತ್ರಕ ಡಿಜಿಸಿಎ ಶುಕ್ರವಾರ ದೇಶದಲ್ಲಿ ನಿಗದಿತ ಅಂತರರಾಷ್ಟ್ರೀಯ ಪ್ರಯಾಣಿಕರ ಹಾರಾಟವನ್ನು ಜುಲೈ 31 ರವರೆಗೆ ವಿಸ್ತರಿಸುವುದಾಗಿ ತಿಳಿಸಿದೆ . ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 23 ರಂದು ಭಾರತದಲ್ಲಿ ಪರಿಶಿಷ್ಟ ಅಂತಾರಾಷ್ಟ್ರೀಯ ಪ್ರಯಾಣಿಕರ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 2020 ರ ಜುಲೈ 15 ರವರೆಗೆ ನಿಗದಿತ ಅಂತರರಾಷ್ಟ್ರೀಯ ಪ್ರಯಾಣಿಕರ ಹಾರಾಟವನ್ನು ಸ್ಥಗಿತಗೊಳಿಸಲಾಗುವುದು ಎಂದು...
Loading posts...

All posts loaded

No more posts

error: Content is protected !!