ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಸತ್ಯ ಮಾಡಿದ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್

ಸುಳ್ಯ ನ ಪಂ ಸದಸ್ಯ ರಿಯಾಜ್ ಕಟ್ಟೆಕಾರ್ ರವರು ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ಜನತೆಗೆ ನೀಡಿದ ಆಶ್ವಾಸನೆಯನ್ನು ತಮ್ಮ ಛಲದ ಮೂಲಕ ತೋರಿಸಿದ್ದಾರೆ. ಕಳೆದ ಅರವತ್ತು ವರ್ಷಗಳಿಂದ ಸುಳ್ಯದ ಬೂಡು ವಾರ್ಡಿನಲ್ಲಿ ಅಂಗಡಿಮಠ ಪರಿಸರದಲ್ಲಿ ಸುಮಾರು ಮೂರು ಮನೆಗಳು ರಸ್ತೆ ಸಂಪರ್ಕವಿಲ್ಲದೆ ಭಾರಿ ದೊಡ್ಡ ಜರಿಯ ಮೂಲಕ ತಮ್ಮ ಮನೆಗೆ ಸಂಪರ್ಕಿಸಲು ಸಂಕಷ್ಟ ಪಡುತ್ತಿದ್ದರು. ಇದರಲ್ಲಿ...

ಸುಳ್ಯ ತಾಲೂಕಿನಲ್ಲಿ ಇಂದು 5 ಪಾಸಿಟಿವ್- ಸುಳ್ಯದ ಬಾಳೆಮಕ್ಕಿಯ ಉದ್ಯಮವೊಂದು ಸೀಲ್ ಡೌನ್

ಸುಳ್ಯದ ತಾಲೂಕಿನಲ್ಲಿ ಇಂದು 5 ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಜಾಲ್ಸೂರು ಗ್ರಾಮದ ಒರ್ವ ವ್ಯಕ್ತಿ, ಸುಳ್ಯದ ಜೂನಿಯರ್ ಕಾಲೇಜು ಬಳಿ ಒರ್ವ, ಕಲ್ಲುಮುಟ್ಲು ವಿನ ಒರ್ವ,ಗುತ್ತಿಗಾರಿನ ಒರ್ವ, ಕಲ್ಮಡ್ಕ ದ ಒರ್ವನಿಗೆ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ ವ್ಯಾಪಾರ ಕೇಂದ್ರವೊಂದು ಇಂದು ಸೀಲ್ ಡೌನ್ ಆಗಿದೆ.
Ad Widget

ಬಡವರ ಮನೆ ನಿರ್ಮಾಣಕ್ಕೆ ಅನುದಾನ ಬಾರದೇ ಕೆಲಸ ಅರ್ಧದಲ್ಲಿದ್ದು ಜನ ಸಂಕಷ್ಟದಲ್ಲಿದ್ದಾರೆ – ಜಿ.ಕೆ. ಹಮೀದ್

ಕಳೆದ ಹಲವು ವರ್ಷಗಳಿಂದ ಮಂಜೂರಾತಿ ಆಗಿ ಕೆಲಸ ಮಾಡದೆ ಬಾಕಿಯಿದ್ದ ಮನೆಗಳಿಗೆ ಕೆಲವು ತಿಂಗಳ ಹಿಂದೆ ಲಾಕ್ ತೆರವುಗೊಳಿಸಿ ಆದೇಶ ಮಾಡಿದ್ದು ಈ ಸಂದರ್ಭ ತಾಲೂಕಿನ ಹಲವು ಕಡೆ 30 ಕ್ಕೂ ಹೆಚ್ಚು ಮನೆ ನಿರ್ಮಾಣ ಅಗಿದ್ದು ಸಂಪಾಜೆ ಗ್ರಾಮದಲ್ಲೂ 6 ಬಡವರು ಹೊಸದಾಗಿ ಮನೆ ನಿರ್ಮಾಣಕ್ಕೆ ಪಂಚಾಂಗ ಹಾಕಿ ತಿಂಗಳು ಕಳೆದರೂ ಹಣ ಬಿಡುಗಡೆ...

ಸೂರು ಇಲ್ಲದೇ ಸುತ್ತಾಡುತ್ತಿದ್ದ ವ್ಯಕ್ತಿಗೆ ನೆಲೆ ಕಲ್ಪಿಸಿದ ಬಜರಂಗದಳ

ಸುಳ್ಯ ಜಯನಗರ ನಿವಾಸಿ ಪದ್ಮನಾಭ ಎಂಬ ಬಡ ಕೂಲಿ ಕಾರ್ಮಿಕ ಇತ್ತೀಚಿನ ದಿನಗಳಲ್ಲಿ ಮನೆ ಇಲ್ಲದೆ ತೊಂದರೆಗೆ ಒಳಗಾಗಿದ್ದ. ಜಯನಗರ ಮತ್ತು ಹಳೆಗೇಟು ಬಸ್ ಸ್ಟಾಪ್ ನಲ್ಲಿ ಮಲಗಿ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ. ಇವನ ಸಂಕಷ್ಟವನ್ನು ಕಂಡು ಹಳೆಗೇಟು ಜಯನಗರ ಕುಡ್ಪಾಜೆ ಪರಿಸರದ ಭಜರಂಗದಳ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ತಮ್ಮದೇ ಖರ್ಚಿನಲ್ಲಿ ಶ್ರಮದಾನದ ಮೂಲಕ ಒಂದು ತಾತ್ಕಾಲಿಕ...

ಕೆಪಿಸಿಸಿ ಕಾನೂನು, ಮಾನವ ಹಕ್ಕು ಮತ್ತು ಆರ್.ಟಿ. ಐ. ಘಟಕದ ಅಧ್ಯಕ್ಷರಾಗಿ ಎ.ಎಸ್. ಪೊನ್ನಣ್ಣ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು,  ಮಾನವ ಹಕ್ಕು ಮತ್ತು ಆರ್.ಟಿ. ಐ. ಘಟಕದ ಅಧ್ಯಕ್ಷರಾಗಿ ಎ.ಎಸ್. ಪೊನ್ನಣ್ಣ ಅವರನ್ನು ಎಐಸಿಸಿ ವತಿಯಿಂದ ನೇಮಿಸಲಾಗಿದೆ. ಇದರಿಂದಾಗಿ ಕೊಡಗಿನ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದ ಪ್ರತಿಷ್ಠಿತ ಹುದ್ದೆಯೊಂದು ದಕ್ಕಿದಂತಾಗಿದೆ ಈ ಕುರಿತು ಆದೇಶ ಹೊರಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯರಾದ ಕೆ.ಸಿ. ವೇಣುಗೋಪಾಲ್ ಅವರು, ತಕ್ಷಣದಿಂದಲೇ...

ಬೆಳ್ಳಾರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮ

ಇಂದಿರಾ-ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮ ಬೆಳ್ಳಾರೆ ಗೌರಿಹೊಳೆ ಪ.ಜಾತಿ ಕಾಲೋನಿಯಲ್ಲಿ ನಡೆಯಿತು. ಉದ್ಘಾಟನೆಯನ್ನು ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ನೇರವೇರಿಸಿ ಜನತೆಯ ಮನೆಬಾಗಿಲಲ್ಲೆ ಈ ನೊಂದಣಿ ಕಾರ್ಯಕ್ರಮ ನಡೆಸಿ,ಇದಕ್ಕಾಗಿ ಅಲೆದಾಟವನ್ನು ನಡೆಸದೇ ಯೋಜನೆ ತಲುಪಿಸುವ ಉದ್ದೇಶ ನಮ್ಮದು. ಈ ಯೋಜನೆಯನ್ನು ಬೆಳ್ಳಾರೆ ತಾಲೂಕು ಪಂಚಾಯತ್...

ಬ್ಯಾಂಕ್ ಆಫ್ ಬರೋಡ ಸ್ಥಾಪನಾ ದಿನಾಚರಣೆ

ಬ್ಯಾಂಕ್ ಆಫ್ ಬರೋಡ 1908 ಜುಲೈ 20 ರಂದು ಗುಜರಾತ್ ನ ವಡೋದರ ದಲ್ಲಿ ಮಹಾರಾಜ್ ಸಯಾಜಿರಾವ್ ಗಾಯಕ್ ವಾಡ್ ನೇತೃತ್ವದಲ್ಲಿ ಪ್ರಾರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಥಾಪನಾ ದಿನಾಚರಣೆ ಸುಳ್ಯ ಬರೋಡ ಬ್ಯಾಂಕ್ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಖಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿಗಳಾದ ರಾಜಶೇಖರ ಎಂ.ಯು.,ಮಂಜು ಸಣ್ಣುಗೊಂಡ, ಕು.ಭಾಗ್ಯಶ್ರೀ ಕೆ.ಎಚ್., ಯಶೋಧ, ಸುಪ್ರೀತಾ...

ಎಲಿಮಲೆ-ಮರ್ಕಂಜ -ಅರಂತೋಡು ರಸ್ತೆ ಅಗಲೀಕರಿಸಿ ಡಾಮರೀಕರಣ ಮಾಡುವಂತೆ ಮರ್ಕಂಜ ಕಾಂಗ್ರೆಸ್ ಒತ್ತಾಯ

ಸುಬ್ರಹ್ಮಣ್ಯ ಕ್ಕೆ ಮತ್ತು ಮಡಿಕೇರಿ ಕಡೆ ಹೋಗುವ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಸುಮಾರು 15 ಕಿ ಮೀ ಅಂತರದ ಎಲಿಮಲೆ -ಮರ್ಕಂಜ -ಅರಂತೋಡು ರಸ್ತೆ ಪಿ ಡಬ್ಲ್ಯೂ ಡಿ ರಸ್ತೆ ಇದ್ದು ಅತ್ಯಂತ ಹತ್ತಿರದ ರಸ್ತೆಯಾಗಿರುತ್ತದೆ. ಇದರಿಂದ ಪ್ರಯಾಣಿಕರಿಗೆ , ಸಾರ್ವಜನಿಕರಿಗೆ ಸಂಚರಿಸಲು ಸುತ್ತಾಡಿ ಬರುವ ಅವಶ್ಯಕತೆ ಇರುವುದಿಲ್ಲ .ಈ ರಸ್ತೆಯ ಅಭಿವೃದ್ದಿ ಕಾಮಗಾರಿ ಆಗಲು...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(23.07.2020 ಗುರುವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 350ಹಳೆ ಅಡಿಕೆ 300 - 360ಡಬಲ್ ಚೋಲ್ 300 - 360 ಫಠೋರ 220 - 285ಉಳ್ಳಿಗಡ್ಡೆ 110 - 190ಕರಿಗೋಟು 110 - 175 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಪಂಜ ಸಿಂಡಿಕೇಟ್ ಮ್ಯಾನೇಜರ್ ರಿಂದ ರಿಕ್ಷಾ ಚಾಲಕರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ

ಪಂಜ ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಸದಸ್ಯರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕನ್ನು ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಅಶೋಕ್ ನಾಯಕ್ ಕೊಡುಗೆ ನೀಡಿದ್ದಾರೆ.
Loading posts...

All posts loaded

No more posts

error: Content is protected !!