- Monday
- April 27th, 2026
ಸುಳ್ಯ: ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ವತಿಯಿಂದ ಕೆವಿಜಿ ಸುಳ್ಯ ಹಬ್ಬ ಹಾಗೂ ಸಾಧನಾಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಮುಂಭಾಗದಲ್ಲಿ ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಇದರ ಗೌರವ ಅಧ್ಯಕ್ಷರಾದ ಕೆ ವಿ ಚಿದಾನಂದರವರ ಅಧ್ಯಕ್ಷತೆಯಲ್ಲಿ ಜರುಗಿತು ಕಾರ್ಯಕ್ರಮದ ಉದ್ಘಾಟನೆಯನ್ನು...
ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ಪದ್ಮನಾಭ ಹರ್ಲಡ್ಕರವರು ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಕೊಡುಗೆ ನೀಡಿದ್ದಾರೆ. ಇಂದು (ದ.26) ನವ್ಯ ಸುಳ್ಯದ ಭವ್ಯ ಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನವಾಗಿದ್ದು, ಇಂದು ಇಡೀ ದಿನ ಪ್ರಯಾಣಿಕರನ್ನು ಉಚಿತವಾಗಿ ನಗರದೊಳಗಡೆ ಅವರು ಕರೆದೊಯ್ಯುತ್ತಿದ್ದಾರೆ.
ಸುಳ್ಯದಲ್ಲಿ ಡಿ.28 ರಿಂದ 30 ರವರೆಗೆ ಸಿದ್ದ ಸಮಾಧಿ ಯೋಗ ಶಿಬಿರದ ಬಗ್ಗೆ ಉಚಿತ ಮಾಹಿತಿ ನೀಡುವ ಕಾರ್ಯಕ್ರಮ ಬೆಳಿಗ್ಗೆ ಗಂಟೆ 6:00 ರಿಂದ ಮತ್ತು ಸಂಜೆ ಗಂಟೆ 6:00 ರವರೆಗೆ ಕಾವೇರಿ ರೆಸಿಡೆನ್ಸಿ ಹಾಲ್ ಕೆ.ಇ.ಬಿ. ಹತ್ತಿರ ಕುರುಂಜಿಭಾಗ್ ನಲ್ಲಿ ನಡೆಯಲಿದೆಈ ಶಿಬಿರದಲ್ಲಿ ಪಂಚಕೋಶಗಳನ್ನು ಶುದ್ದಿಗೊಳಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ...
ಕುಂಬರ್ಚೋಡು ಸಮೀಪ ದನವೊಂದು ಬಿದ್ದು ಬೆನ್ನಿನ ಮೂಳೆಗೆ ಪೆಟ್ಟಾಗಿದ್ದು ನರಳಾಡುತ್ತಿತ್ತು. ಈ ಬಗ್ಗೆ ಸ್ಥಳೀಯರು ಪಶು ಇಲಾಖೆಗೆ ತಿಳಿಸಿದ ಮೇರೆಗೆ ಡಾ. ನಾಗರಾಜ್ ನೇತೃತದ ತಂಡ ಅಂಬ್ಯುಲೆನ್ಸ್ ಜೊತೆಗೆ ಆಗಮಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿ ಸಮೀಪದ ಮನೆಯಲ್ಲಿ ಆರೈಕೆ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಈ ದನದ ವಾರಿಸುದಾರರು ಯಾರಾದರೂ ಇದ್ದಲ್ಲಿ 9449948100 ಈ ದೂರವಾಣಿ ಸಂಖ್ಯೆಗೆ...
ಬೇಡಿಕೆ ಈಡೇರಿಕೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಡಿ. 30ರಂದು ಕೊಡಗು ಸಂಪಾಜೆ ನಾಡ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದರು.ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆ ಜಾಗ ನೀಡದೆ ಸತಾಯಿಸುತ್ತಿದೆ. ಆದ್ದರಿಂದ ಡಿ. 30 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಬಗ್ಗೆ ಘೊಷಿಸಿದ್ದರು. ಇದು ತಿಳಿದ ಕೂಡಲೇ ಡಿ 19 ರಂದು ಮಡಿಕೇರಿ...
ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿವಂಗತ ಡಾ. ಕುರುಂಜಿ ವೆಂಕಟರಮಣ ಗೌಡರ 96ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ ಪುಷ್ಪ ನಮನ ಕಾರ್ಯಕ್ರಮವು ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ 26ರಂದು ನಡೆಯಿತು.ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಲೀಲಾದರ್ ಡಿ. ವಿ. ಯವರು ಕುರುಂಜಿ ವೆಂಕಟರಮಣ...
ಸುಳ್ಯ ಪ್ರೆಸ್ ಕ್ಲಬ್ ನೇತೃತ್ವದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಾಗೂ ಗಾಂಧಿ ಚಿಂತನ ವೇದಿಕೆ ಸುಳ್ಯ ಸಹಯೋಗದಲ್ಲಿ ನವ್ಯ ಸುಳ್ಯದ ಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ ದಿನಾಚರಣೆ ಪ್ರಯುಕ್ತ 15 ನೇ ವರ್ಷದ ಭವ್ಯ ಸುಳ್ಯ ಸಂಕಲ್ಪ ದಿನಾಚರಣೆ ಡಿ.26ರಂದು ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಡಾ.ಕುರುಂಜಿಯವರ ಪುತ್ಥಳಿಯ ಬಳಿ...
ಇಂದು ಬೆಳಿಗ್ಗೆ ಸುಳ್ಯದ ಕುರುಂಜಿಭಾಗ್ ನ ಕೆ.ವಿ.ಜಿ ಸರ್ಕಲ್ ನಲ್ಲಿ ಉದ್ಘಾಟನೆಗೊಂಡ ಮಯೂರಿ ಟಾಪ್ ಹೌಸ್ ರೆಸ್ಟೋಗೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ರವರು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಲಕ ವಿಜಯ್ ಕುಮಾರ್ ಮಯೂರಿ ಮತ್ತು ಶ್ರೀಮತಿ ರೂಪ ವಿಜಯ್ಕುಮಾರ್ ಹಾಗೂ ಅವರ ಪುತ್ರ ತುಷಾರ್ ಗೌಡ ರವರು ದರ್ಮದರ್ಷಿಗಳನ್ನು...
ಸುಳ್ಯದ ಕುರುಂಜಿಭಾಗ್ ನ ಕೆ.ವಿ.ಜಿ ಸರ್ಕಲ್ ನಲ್ಲಿ ಕಳೆದ 21 ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿಕೊಂಡು ಬರುತ್ತಿರುವ ವಿಜಯ್ ಕುಮಾರ್ ಮಯೂರಿ ಮತ್ತು ಶ್ರೀಮತಿ ರೂಪವಿಜಯ್ ಕುಮಾರ್ ರವರ ಮಾಲಕತ್ವದ ಮಯೂರಿ ರೆಸ್ಟೋರೆಂಟ್ ರವರ ನೂತನ ಮಯೂರಿ ಟೋಪ್ ಹೌಸ್ ರೆಸ್ಟೋ ಡಿ.ಎಂ.ಕಾಂಪ್ಲೆಕ್ಸ್ ರೂಫ್ ಗಾರ್ಡನ್ ನಲ್ಲಿ ಡಿ.25ರಂದು ಶುಭಾರಂಭಗೊಂಡಿದೆ. ಸುಳ್ಯವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ...
Loading posts...
All posts loaded
No more posts
