ಪುತ್ತೂರಿನಲ್ಲಿ ಭೀಕರ ಅಪಘಾತ – ಕಾರು ಪಲ್ಟಿಯಾಗಿ ಸುಳ್ಯ ಮೂವರು ದಾರುಣ ಮೃತ್ಯು

ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಪರ್ಲಡ್ಕ ಜಂಕ್ಷನ್ ನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಪರಿಣಾಮವಾಗಿ ಸುಳ್ಯದ ಜಟ್ಟಿಪಳ್ಳದ ಮೂವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ನಿವೃತ್ತ ಅಂಚೆ ಪಾಲಕ ಸುಳ್ಯ ಜಟ್ಟಿಪಳ್ಳದ ಅಣ್ಣು ನಾಯ್ಕ, ಅವರ ಮಗ ಚಿದಾನಂದ ನಾಯ್ಕ ಮತ್ತು ಸಂಬಂಧಿ ರಮೇಶ್ ನಾಯ್ಕ ಮೃತಪಟ್ಟವರೆಂದು ತಿಳಿದುಬಂದಿದೆ. ಈಗ ಮೃತದೇಹಗಳನ್ನು ಪುತ್ತೂರು ಸರಕಾರಿ...

ಅಪ್ರಾಪ್ತೆಯ ಅತ್ಯಾಚಾರ ದೂರು ದಾಖಲು , ಯುವಕ ಪೋಲೀಸ್ ವಶಕ್ಕೆ.

ಅಜ್ಜಾವರ ಅಪ್ರಾಪ್ತ ಯುವತಿಯನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೋಲೀಸರು ಯುವಕನೊಬ್ಬನನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ. ಯುವತಿ ಗರ್ಭಿಣಿ ಯಾಗಿದ್ದು ಮನೆಯವರಿಗೆ ವಿಷಯ ಗೊತ್ತಾಗಿ ಅವರು ಪೋಲೀಸ್ ದೂರು ನೀಡಿದ್ದ ಹಿನ್ನಲೆಯಲ್ಲಿ ಡಿ.೨೬ ರಂದು ಯುವತಿಯ ಹೇಳಿಕೆ ಪಡೆದ ಪೋಲೀಸರು ಪ್ರಕರಣ ಸಂಬಂಧ ಯುವತಿ ಮನೆಯ ಬಳಿಯ ಯುವಕನೊಬ್ಬನನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.
Ad Widget

ಸುಳ್ಯಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಭೇಟಿ. ಅಧಿಕಾರಿಗಳ ಜೊತೆಗೆ ಚರ್ಚೆ

ಸುಳ್ಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಸುಳ್ಯಕ್ಕೆ ಭೇಟಿ ನೀಡಿದರು. ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಹಾಗೂ ಸುರಕ್ಷತೆಯ ಉದ್ದೇಶದಿಂದ ಪೊಲೀಸ್ ಇಲಾಖೆ, ತುರ್ತು ಸಹಾಯವಾಣಿ ಸೇರಿದಂತೆ ವಿವಿಧ ಇಲಾಖೆಗಳ ಸಹಾಯವಾಣಿಗಳನ್ನು ದೊಡ್ಡದಾಗಿ ಕಡ್ಡಾಯವಾಗಿ ಅಳವಡಿಸಬೇಕು. ಹಾಗೂ ಸಲಹಾ...

“ದೃಷ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2025 ಇಸವಿಯ ಕ್ಯಾಲೆoಡರ್ ಬಿಡುಗಡೆ “

ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರಿಂದ ಹೊಸ ವರ್ಷ 2025ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ಸುಳ್ಯ ಜಯನಗರ ಸರಕಾರಿ ಶಾಲೆ ಇರುವ "ದೃಷ್ಟಿ ಚಾರಿಟೇಬಲ್ ಟ್ರಸ್ಟ್ " ಬಸ್ಸು ತಂಗುದಾಣ ಬಳಿ ಡಿ 26 ರಂದು ನೆರವೇರಿತು,ಕಾರ್ಯಕ್ರಮವನ್ನು ಸುಳ್ಯ ನ. ಪಂ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ನೀರಬಿದಿರೆ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ...

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ವಿಶ್ವ ಹೃದಯ ಸಮ್ಮೇಳನಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಉಪಹಾರ ವ್ಯವಸ್ಥೆ

ಸುಬ್ರಹ್ಮಣ್ಯ : ರಿಷಿ ಸಂಸ್ಕೃತಿ ವಿದ್ಯಾ ಕೇಂದ್ರ(ರಿ.) ಸಿದ್ದ ಸಮಾಧಿ ಯೋಗ ಇವರ ವತಿಯಿಂದ ಡಿಸೆಂಬರ್ 27, 28 ಹಾಗೂ 29 ಮೂರು ದಿನಗಳ ಕಾಲ ಸುಬ್ರಹ್ಮಣ್ಯದಲ್ಲಿ ವಿಶ್ವ ಹೃದಯ ಸಮ್ಮೇಳನ ಜರಗಲಿರುವುದು. ಈ ಸಮ್ಮೇಳನಕ್ಕೆ ಮಂಗಳವಾರ ಮಂಗಳೂರಿನಿಂದ ಪಾದಯಾತ್ರೆ ಆರಂಭಗೊಂಡು ಡಿ.26 ರಂದು ಬೆಳಿಗ್ಗೆ ಏನಕಲ್ಲಿಗೆ ತಲುಪಿದ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ...

ಸುಬ್ರಹ್ಮಣ್ಯ : ವಿಜಯ್ ದಿವಸ್ ಹಾಗೂ ಸನ್ಮಾನ ಕಾರ್ಯಕ್ರಮ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಡಿ.26 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿಜಯ್ ದಿವಸ್ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.ಲ| ಸತೀಶ್ ಕೂಜುಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಮಹೇಶ್ ಕೊಪ್ಪತ್ತಡ್ಕ ಹಾಗೂ ಶ್ರೀಮತಿ ಅನಿತಾ ಮಹೇಶ್ ಕೊಪ್ಪತ್ತಡ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷರಾದ...

ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ವತಿಯಿಂದ ಕೆವಿಜಿ ಸುಳ್ಯ ಹಬ್ಬ ಆಚರಣೆ , ಸಾಧನಾಶ್ರೀ ಹಾಗೂ ಯುವ ಸಾಧಕ ಪ್ರಶಸ್ತಿ ಪ್ರಧಾನ .

ಸುಳ್ಯ: ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ವತಿಯಿಂದ ಕೆವಿಜಿ ಸುಳ್ಯ ಹಬ್ಬ ಹಾಗೂ ಸಾಧನಾಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಮುಂಭಾಗದಲ್ಲಿ ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಇದರ ಗೌರವ ಅಧ್ಯಕ್ಷರಾದ ಕೆ ವಿ ಚಿದಾನಂದರವರ ಅಧ್ಯಕ್ಷತೆಯಲ್ಲಿ ಜರುಗಿತು ಕಾರ್ಯಕ್ರಮದ ಉದ್ಘಾಟನೆಯನ್ನು...

ರಿಕ್ಷಾ ಚಾಲಕ ಪದ್ಮನಾಭ ಹರ್ಲಡ್ಕರ ಸೇವಾಕಾರ್ಯ. ಕುರುಂಜಿ ಜನ್ಮದಿನದ ಪ್ರಯುಕ್ತ ಪ್ರಯಾಣಿಕರಿಗೆ ಬಾಡಿಗೆ ಫ್ರೀ

ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ಪದ್ಮನಾಭ ಹರ್ಲಡ್ಕರವರು ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಕೊಡುಗೆ ನೀಡಿದ್ದಾರೆ. ಇಂದು (ದ.26) ನವ್ಯ ಸುಳ್ಯದ ಭವ್ಯ ಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನವಾಗಿದ್ದು, ಇಂದು ಇಡೀ ದಿನ ಪ್ರಯಾಣಿಕರನ್ನು ಉಚಿತವಾಗಿ ನಗರದೊಳಗಡೆ ಅವರು ಕರೆದೊಯ್ಯುತ್ತಿದ್ದಾರೆ.

ಸುಳ್ಯದಲ್ಲಿ ಸಿದ್ದ ಸಮಾಧಿ ಯೋಗ ಶಿಬಿರ ಆರಂಭ

ಸುಳ್ಯದಲ್ಲಿ ಡಿ.28 ರಿಂದ 30 ರವರೆಗೆ ಸಿದ್ದ ಸಮಾಧಿ ಯೋಗ ಶಿಬಿರದ ಬಗ್ಗೆ ಉಚಿತ ಮಾಹಿತಿ ನೀಡುವ ಕಾರ್ಯಕ್ರಮ ಬೆಳಿಗ್ಗೆ ಗಂಟೆ 6:00 ರಿಂದ ಮತ್ತು ಸಂಜೆ ಗಂಟೆ 6:00 ರವರೆಗೆ ಕಾವೇರಿ ರೆಸಿಡೆನ್ಸಿ ಹಾಲ್ ಕೆ.ಇ.ಬಿ. ಹತ್ತಿರ ಕುರುಂಜಿಭಾಗ್ ನಲ್ಲಿ ನಡೆಯಲಿದೆಈ ಶಿಬಿರದಲ್ಲಿ ಪಂಚಕೋಶಗಳನ್ನು ಶುದ್ದಿಗೊಳಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ...

ಬಿದ್ದು ಗಾಯಗೊಂಡ ದನಕ್ಕೆ ಡಾ. ನಾಗರಾಜ್ ನೇತೃತ್ವದ ತಂಡದಿಂದ ಚಿಕಿತ್ಸೆ

ಕುಂಬರ್ಚೋಡು ಸಮೀಪ ದನವೊಂದು ಬಿದ್ದು ಬೆನ್ನಿನ ಮೂಳೆಗೆ ಪೆಟ್ಟಾಗಿದ್ದು ನರಳಾಡುತ್ತಿತ್ತು. ಈ ಬಗ್ಗೆ ಸ್ಥಳೀಯರು ಪಶು ಇಲಾಖೆಗೆ ತಿಳಿಸಿದ ಮೇರೆಗೆ ಡಾ. ನಾಗರಾಜ್ ನೇತೃತದ ತಂಡ ಅಂಬ್ಯುಲೆನ್ಸ್ ಜೊತೆಗೆ ಆಗಮಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿ ಸಮೀಪದ ಮನೆಯಲ್ಲಿ ಆರೈಕೆ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಈ ದನದ ವಾರಿಸುದಾರರು ಯಾರಾದರೂ ಇದ್ದಲ್ಲಿ 9449948100 ಈ ದೂರವಾಣಿ ಸಂಖ್ಯೆಗೆ...
Loading posts...

All posts loaded

No more posts

error: Content is protected !!